ದೇವಾಲಯ ತೆರವು: ನಂಜನಗೂಡು ತಹಶೀಲ್ದಾರ್ ಮೋಹನ ಕುಮಾರಿ ವರ್ಗಾವಣೆ


Team Udayavani, Sep 27, 2021, 8:57 PM IST

Nanjanagudu news

 ನಂಜನಗೂಡು :ರಾಜ್ಯದಾದ್ಯಂತ  ಸುದ್ದಿಯಾಗಿ ಆಡಳಿತ ಹಾಗೂ ವಿರೋಧ ಪಕ್ಷಗಳ ಕಟು ಟೀಕೆಗೆ ಕಾರಣವಾಗಿದ್ದ  ನಂಜನಗೂಡು ತಾಲೂಕಿನ ಉಚ್ಚಗಣಿ ಮಹದೇವಮ್ಮ ದೇವಾಲಯದ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ತಹಶೀಲ್ದಾರ ಮೋಹನ ಕುಮಾರಿ ಅವರ ತಲೆ ದಂಡವಾಗಿದ್ದು, ಅವರನ್ನು  ಸೋಮವಾರ ವರ್ಗಾವಣೆ  ಮಾಡಲಾಗಿದೆ.

ಸರ್ವೊಚ್ಚ ನ್ಯಾಯಾಲಯದ ಆದೇಶದ ಜಾರಿಗಾಗಿ ಉಚ್ಚಗಣಿ ದೇವಾಲಯವನ್ನು ರಾತ್ರೋರಾತ್ರಿ ಧರೆಗುರುಳಿಸಿದ್ದೇ ದೊಡ್ಡ ಹಗರಣವಾಗಿ  ಅದರಿಂದಾಗಿ  ಆಡಳಿತ ಪಕ್ಷ ಬಿಜೆಪಿಯ ಬೇರುಗಳೇ ಈ ಪ್ರಕರಣದ ವಿರುದ್ಧ ತಿರುಗಿಬಿದ್ದಿದ್ದು ಅಲ್ಲದೆ ವಿರೋಧ ಪಕ್ಷ ಕಾಂಗ್ರೇಸ್ ನಾಯಕರು ಸಹ ಇದನ್ನು ಬಿಜೆಪಿ ವಿರುದ್ಧದ ಅಸ್ತ್ರವಾಗಿ  ಜುಳಿಪಿಸತೊಡಗಿದ್ದವು.

ಆರೋಪ  ಪ್ರತ್ಯಾರೋಪಗಳ ನಡುವೆಯೇ ತಹಶೀಲ್ದಾರ ತಲೆ ದಂಡ ಖಚಿತ ಎಂಬ ಸುದ್ದಿ  ದೇವಾಲಯ ತೆರವಾದ ಮಾರನೇ ದಿನದಿಂದಲೇ  ಹರಿದಾಡತೊಡಗಿತ್ತು.

ತಾಲೂಕಿನ ಕೆಲವು ದೇವಾಲಯಗಳು ತೆರವಿನ ಪಟ್ಟಿಯಲ್ಲಿದ್ದು, ಕಳೆದರೆಡು ತಿಂಗಳಿಂದ ಈ ಕುರಿತು ಅಧಿಕಾರಿಗಳು ಮಾತ್ತು ಸಂಬಂಧಪಟ್ಟ ಜನಪ್ರತಿನಿಧಿಗಳ ನಡುವೆ ಯಾವು ದೇವಾಲಯ ಎಂಬುದರ ಕುರಿತು ಚರ್ಚೆನಡೆದು  ಅಂತಿಮವಾಗಿ  ಉಚ್ಚಗಣೆ ದೇವಾಲಯವನ್ನೇ ಆಯ್ಕೆ ಮಾಡಿಕೊಂಡು  ರಾತ್ರಿಯಲ್ಲಿ ಸೆಪ್ಟಂಬರ್ 8 ಬುಧವಾರ  ಬೆಳಗಿನ ಜಾವ 3 ಗಂಟೆಗೆ ಕರ‍್ಯಾಚರಣೆ ನಡೆಸಿ ಜೆ ಸಿ ಬಿ ಸಹಾಯದಿಂದ  ದೇವಾಲಯವನ್ನು ಧರೆಗುರಿಳಿಸಲಾಗಿತ್ತು.

ಕೆರೆ ,ಕಟ್ಟೆ ಕೊನೆಗೆ ರಸ್ತೆ ಯಾವದಕ್ಕೂ ತೊಂದರೆಯಾಗದ ಬಾಗಲಕೋಟೆ ಬಿಳಗಿರಿ ರಂಗನ ಬೆಟ್ಟದ ರಸ್ತೆಗೆ ಕೂಗಳತೆಯಲ್ಲಿದ್ದ  ಈ ದೇವಾಲಯವನ್ನು ತೆರವುಗೊಳಿಸುವ ಪಟ್ಟಿಗೆ  2007 ರಲ್ಲಿ ಹೇಗೆ ಏಕೆ ಸೇರಿಸಲಾಯಿತು  ಹಾಗೂ ಗ್ರಾಮಸ್ಥರೊಂದಿಗೆ ಸಮಾಲೋಚನೆ ಸಹ ನಡೆಸದೇ   ಕೊನೆಗೇ ಸುಳಿವೂ ಸಹ ನೀಡದೆ ಪ್ರಾಚೀನ ಶಿಲಾ ಶಾಸನಗಳನ್ನೊಳಗೊಂಡ ದೇವಾಲಯವನ್ನು   ರಾತ್ರೋರಾತ್ರಿ ಧರೆ ಗುರುಳಿಸಿದ ವೈಖರಿಗೆ ಆಡಳಿತ ಹಾಗೂ ವಿರೋಧ ಪಕ್ಷಮಾತ್ರವಲ್ಲದೆ  ಹಿಂದು ಸಮಾಜದ ಸಂಘಸಂಸ್ಥೆಗಳ ಕಣ್ಣು ಕೆಂಪಾಗುವಂತೆ ಮಾಡಿತ್ತು.

ಇದನ್ನೂ ಓದಿ:ತಾಳಿಕೋಟೆ ಬಳಿ ಡೋಣಿ ಸೇತುವೆ ಕುಸಿತ : ಸಂಚಾರ ಬಂದ್, ಪ್ರಯಾಣಿಕರ ಪರದಾಟ

ಈ ದೇವಾಲಯದ ತೆರವಿನ  ತಿರ್ಮಾನ  ಕೇವಲ ತಹಶೀಲ್ದಾರದ್ದು ಮಾತ್ರವೇ? ಇದರಲ್ಲಿ ಬೇರೆಯವರ  ಒಪ್ಪಿಗೆ ಇರಲೇ ಇಲ್ಲವೆ ಎಂಬ ಜಿಜ್ಞಾಸೆ  ತಹಶೀಲ್ದಾರ ತಲೆದಂಡದೊಂದಿಗೆ ತಾಲೂಕಿನಲ್ಲಿ ಆರಂಭವಾಗಿದ್ದು ಮುಂದೇನು ಎಂಬುದನ್ನು ಕಾದು ನೋಡಬೇಕಿದೆ .

ಸರ್ಕಾರ 27 – 7 -21  ಸೋಮವಾರವೇ ನಂಜನಗೂಡು ತಹಶೀಲ್ದಾರರನ್ನು ಬೆಂಗಳೂರಿನ  ಐ. ಎಂ ಏ ವಂಚನೆ ಪ್ರಕರಣ ಸಕ್ಷಮ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು,  ಸೋಮವಾರ ಸಂಜೆಯೇ ಇಲ್ಲಿನ ಗ್ರೇಡ್ 2 ತಹಶೀಲ್ದಾರ ಭೈರಯ್ಯ ಅವರು  ನಂಜನಗೂಡು ತಹಶೀಲ್ದಾರ ಆಗಿ ಅಧಿಕಾರ ಸ್ವಿಕಾರ ಮಾಡುವದರೊಂದಿಗೆ   227 ದಿನಗಳ ಮೋಹನ ಕುಮಾರಿ ಅವರ ಇಲ್ಲಿನ ಅಧಿಕಾರ  ತಲೆ ದಂಡದ ರೂಪದಲ್ಲಿ ಕೊನೆಗೊಂಡಂತಾಗಿದೆ.

 

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.