ಮದಗಜಗಳ ಕಾದಾಟ ಒಂದರ ಸಾವಿನಲ್ಲಿ ಅಂತ್ಯ
elephant, died,
Team Udayavani, Oct 8, 2021, 6:48 PM IST
ಗುಂಡ್ಲುಪೇಟೆ: ಎರಡು ಕಾಡಾನೆಗಳ ಕಾದಾಟದಲ್ಲಿ ಒಂದು ಆನೆ ಸಾವನ್ನಪ್ಪಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗ ಎನ್. ಬೇಗೂರು ವಲಯದ ಕಳಸೂರು ಗಸ್ತಿನಲ್ಲಿ ಶುಕ್ರವಾರ ನಡೆದಿದೆ.
40 ವರ್ಷದ ಗಂಡು ಆನೆ ಮೃತಪಟ್ಟಿದ್ದು, ಎರಡು ದಂತಗಳು ಸುರಕ್ಷಿತವಾಗಿದ್ದು, ಒಂದು ದಂತ 1.9 ಹಾಗೂ ಮತ್ತೊಂದು 1.7 ಮೀಟರ್ ಇದೆ. ಎರಡು ದಂತಗಳನ್ನು ಸುರಕ್ಷತೆಯ ದೃಷ್ಟಿಯಿಂದ ಮೈಸೂರಿನ ಶ್ರೀ ಗಂಧದ ಕೊಠಡಿಗೆ ಸಾಗಾಣಿಕೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಮೃತ ಕಾಡಾನೆಯನ್ನು ಪಶು ವೈದ್ಯಾಧಿಕಾರಿ ಡಾ. ವಾಸೀಂ ಮಿರ್ಜಾ ಮರಣೋತ್ತರ ಶವ ಪರೀಕ್ಷೆ ನಡೆಸಿದ ನಂತರ ದೇಹವನ್ನು ಹೂಳಲಾಯಿತು.
ಸ್ಥಳದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್, ವಲಯ ಅರಣ್ಯಾಧಿಕಾರಿ ಸಚಿನ ಸೇರಿದಂತೆ ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿಗಳು ಹಾಜರಿದ್ದರು.