ವೆಸ್ಟ್‌ ಇಂಡೀಸ್‌ ವಿರುದ್ಧ ಆಸ್ಟ್ರೇಲಿಯ ವಿಜಯ

ವಾರ್ನರ್‌, ಮಿಚೆಲ್‌ ಮಾರ್ಷ್‌ ಬ್ಯಾಟಿಂಗ್‌ ಆರ್ಭಟಕ್ಕೆ ಸುಸ್ತಾದ ಕೆರಿಬಿಯನ್ನರು

Team Udayavani, Nov 6, 2021, 10:08 PM IST

ವೆಸ್ಟ್‌ ಇಂಡೀಸ್‌ ವಿರುದ್ಧ ಆಸ್ಟ್ರೇಲಿಯ ವಿಜಯ

ಅಬುಧಾಬಿ: ಹಾಲಿ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ಮತ್ತೊಂದು ಹೀನಾಯ ಸೋಲಿನೊಂದಿಗೆ ಟಿ20 ವಿಶ್ವಕಪ್‌ ಪಂದ್ಯಾವಳಿ ಅಭಿಯಾನವನ್ನು ಪೂರ್ತಿಗಳಿಸಿತು. ಶನಿವಾರದ ತನ್ನ ಅಂತಿಮ ಸೂಪರ್‌-12 ಪಂದ್ಯದಲ್ಲಿ ಅದು ಆಸ್ಟ್ರೇಲಿಯ ಕೈಯಲ್ಲಿ 8 ವಿಕೆಟ್‌ಗಳಿಂದ ಪರಾಭವಗೊಂಡಿತು. ಇದರಿಂದ ಕಾಂಗರೂ ಪಡೆ ತನ್ನ ಅಂಕವನ್ನು 8ಕ್ಕೆ, ರನ್‌ರೇಟನ್ನು +1.216ಕ್ಕೆ ಏರಿಸಿಕೊಂಡಿತು.

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ವೆಸ್ಟ್‌ ಇಂಡೀಸ್‌ 20 ಓವರ್‌ಗಳಲ್ಲಿ 7 ವಿಕೆಟಿಗೆ 157 ರನ್‌ ಗಳಿಸಿದರೆ, ಡೇವಿಡ್‌ ವಾರ್ನರ್‌-ಮಿಚೆಲ್‌ ಮಾರ್ಷ್‌ ಜೋಡಿಯ ಶತಕದ ಜತೆಯಾಟದಿಂದ ಆಸ್ಟ್ರೇಲಿಯ ಬಹಳ ಸುಲಭದಲ್ಲಿ ಗುರಿ ಬೆನ್ನಟ್ಟಿತು. 16.2 ಓವರ್‌ಗಳಲ್ಲಿ 2 ವಿಕೆಟಿಗೆ 161 ರನ್‌ ರಾಶಿ ಹಾಕಿತು.

ವಾರ್ನರ್‌ 20ನೇ ಅರ್ಧಶತಕ: ಎಡಗೈ ಓಪನರ್‌ ಡೇವಿಡ್‌ ವಾರ್ನರ್‌ ಅವರ 20ನೇ ಅರ್ಧಶತಕ ಆಸೀಸ್‌ ಸರದಿಯ ಆಕರ್ಷಣೆ ಆಗಿತ್ತು. ತೀವ್ರ ಬ್ಯಾಟಿಂಗ್‌ ಬರಗಾಲದಲ್ಲಿದ್ದ ವಾರ್ನರ್‌ ಅಜೇಯ 89 ರನ್‌ ಬಾರಿಸಿ ಮೆರೆದರು. 56 ಎಸೆತಗಳ ಈ ರಂಜನೀಯ ಇನಿಂಗ್ಸ್‌ನಲ್ಲಿ 9 ಫೋರ್‌, 4 ಸಿಕ್ಸರ್‌ ಒಳಗೊಂಡಿತ್ತು.

ಸ್ಕೋರ್‌ ಸಮನಾದಾಗ ಮಿಚೆಲ್‌ ಮಾರ್ಷ್‌ ಅವರನ್ನು ಕ್ರಿಸ್‌ ಗೇಲ್‌ ಬಲೆಗೆ ಬೀಳಿಸಿದರು. ಇದು ಗೇಲ್‌ ಅವರ ಕೊನೆಯ ವಿಕೆಟ್‌ ಆಗಿ ದಾಖಲಾಯಿತು. ಮಾರ್ಷ್‌ ಗಳಿಕೆ 32 ಎಸೆತಗಳಿಂದ 53 ರನ್‌. 5 ಬೌಂಡರಿ, 2 ಸಿಕ್ಸರ್‌ ಇದರಲ್ಲಿ ಒಳಗೊಂಡಿತ್ತು. ವಾರ್ನರ್‌-ಮಾರ್ಷ್‌ ದ್ವಿತೀಯ ವಿಕೆಟಿಗೆ 75 ಎಸೆತಗಳಿಂದ 124 ರನ್‌ ಪೇರಿಸಿದರು.

ಇದನ್ನೂ ಓದಿ:ಬಾಂಬ್ ಸ್ಫೋಟ ನಡೆಯಲಿದೆ…ಟಿವಿ ಚಾನೆಲ್ ಗೆ ಇ-ಮೇಲ್ ಕಳುಹಿಸಿದ್ದ ವ್ಯಕ್ತಿಯ ಬಂಧನ

ಆಧರಿಸಿ ನಿಂತ ಪೊಲಾರ್ಡ್‌: ನಾಯಕ ಕೈರನ್‌ ಪೊಲಾರ್ಡ್‌ ಕೊನೆಯ ಹಂತದಲ್ಲಿ ಬಿರುಸಿನ ಆಟವಾಡಿದ್ದರಿಂದ ವೆಸ್ಟ್‌ ಇಂಡೀಸ್‌ ನೂರೈವತ್ತರ ಗಡಿ ದಾಟಿತು. ಪೊಲಾರ್ಡ್‌ 31 ಎಸೆತಗಳಿಂದ 44 ರನ್‌ ಬಾರಿಸಿದರು (4 ಬೌಂಡರಿ, 1 ಸಿಕ್ಸರ್‌).

ಆರಂಭಕಾರ ಎವಿನ್‌ ಲೆವಿಸ್‌ (29) ಮತ್ತು ಕ್ರಿಸ್‌ ಗೇಲ್‌ (15) ಬಿರುಸಿನ ಆರಂಭ ಒದಗಿಸಿದರೂ 35 ರನ್‌ ಅಂತರದಲ್ಲಿ ಪೂರನ್‌ (4) ಸೇರಿದಂತೆ 3 ವಿಕೆಟ್‌ ಉರುಳಿದ್ದರಿಂದ ವಿಂಡೀಸ್‌ ಒತ್ತಡಕ್ಕೆ ಸಿಲುಕಿತು. ಅಂತಿಮ ಟಿ20 ಇನಿಂಗ್ಸ್‌ನಲ್ಲಿ ಗೇಲ್‌ ಹೊಡೆದದ್ದು 15 ರನ್‌. 9 ಎಸೆತ ಎದುರಿಸಿದ ಅವರು 2 ಸಿಕ್ಸರ್‌ ಎತ್ತಿ ರಂಜಿಸಿದರು. ಹೆಟ್‌ಮೈರ್‌ 27, ರಸೆಲ್‌ 7 ಎಸೆತಗಳಿಂದ ಅಜೇಯ 18 ರನ್‌ ಮಾಡಿದರು. ವಿದಾಯದ ಇನಿಂಗ್ಸ್‌ನಲ್ಲಿ ಡ್ವೇನ್‌ ಬ್ರಾವೊ 10 ರನ್‌ ಹೊಡೆದರು. ಆದರೆ ವಿಕೆಟ್‌ ಉರುಳಿಸುವಲ್ಲಿ ವಿಫ‌ಲರಾದರು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌ 20 ಓವರ್‌, 157/7 (ಪೊಲಾರ್ಡ್‌ 44, ಲೆವಿಸ್‌ 29, ಹೆಟ್‌ಮೈರ್‌ 27, ಹೇಝಲ್‌ವುಡ್‌ 39ಕ್ಕೆ 4). ಆಸ್ಟ್ರೇಲಿಯ 20 ಓವರ್‌, 16.2 ಓವರ್‌ಗಳಲ್ಲಿ 161/2 (ವಾರ್ನರ್‌ 89, ಮಾರ್ಷ್‌ 53, ಗೇಲ್‌ 7ಕ್ಕೆ 1).

ಟಾಪ್ ನ್ಯೂಸ್

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

kharge

LS Polls: ಮತದಾರರಿಂದ ಪ್ರೋತ್ಸಾಹದಾಯಕ ಮತದಾನ… ಕಾಂಗ್ರೆಸ್ ನತ್ತ ಜನರ ಒಲವು: ಖರ್ಗೆ

11

Hubballi: ಒಂದೇ ಕುಟುಂಬದ 96 ಸದಸ್ಯರಿಂದ ಮತದಾನ

Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ

Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌

Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqqwewq

Must win ಡೆಲ್ಲಿ ಪ್ಲೇ ಆಫ್ ಆಸೆ ಜೀವಂತ: ರಾಜಸ್ಥಾನ್‌ ರಾಯಲ್ಸ್‌ ಸವಾಲು

CSK (2)

CSK; ಬಸ್‌ ಕಂಡಕ್ಟರ್‌ಗಳಿಗೆ ಚೆನ್ನೈ ಕಿಂಗ್ಸ್‌ನಿಂದ 8 ಸಾವಿರ ಅಗತ್ಯ ಗಿಫ್ಟ್ !

1-sss

Central government ಒಪ್ಪಿದರೆ ಪಾಕ್‌ಗೆ ಭಾರತ ಕ್ರಿಕೆಟ್‌ ತಂಡ: ರಾಜೀವ್‌ ಶುಕ್ಲ

1-wewqewqe

T20 ಸರಣಿ; ಬಾಂಗ್ಲಾ ಎದುರು ಭಾರತ ವನಿತೆಯರಿಗೆ 56 ರನ್‌ ಗೆಲುವು: 4-0 ಮುನ್ನಡೆ

PCB

Pakistan ಟಿ20 ವಿಶ್ವಕಪ್‌ ಗೆದ್ದರೆ ಪ್ರತಿ ಆಟಗಾರರಿಗೆ 1 ಲಕ್ಷ ಡಾಲರ್‌ ಬಹುಮಾನ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

kharge

LS Polls: ಮತದಾರರಿಂದ ಪ್ರೋತ್ಸಾಹದಾಯಕ ಮತದಾನ… ಕಾಂಗ್ರೆಸ್ ನತ್ತ ಜನರ ಒಲವು: ಖರ್ಗೆ

11

Hubballi: ಒಂದೇ ಕುಟುಂಬದ 96 ಸದಸ್ಯರಿಂದ ಮತದಾನ

Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ

Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.