ಯುವ ಮನಸ್ಸುಗಳಿಗೆ ಪ್ರೇಮಪಾಠ : ಮುಗಿಲ್ಪೇಟೆ
Team Udayavani, Nov 21, 2021, 8:37 AM IST
ಒಂದು ಸುಂದರವಾದ ಪ್ರೀತಿಯಲ್ಲಿ ಅಪನಂಬಿಕೆ ಮೂಡಲು, ಸಂಬಂಧಗಳು ಹಾಳಾಗಲು ಕೆಲವೊಮ್ಮೆ ಚಿಕ್ಕ ಸಂಗತಿಗಳೂ ಕಾರಣವಾಗಬಹುದು. ಇಂಥ ಚಿಕ್ಕ ಸಂಗತಿಗಳನ್ನು ಬದಿಗಿಟ್ಟು ಬದುಕು ಸಾಗಿಸಿದರೆ, ಅದು ಸುಂದರವಾಗಿರುತ್ತದೆ. ಇದೇ ವಿಷಯವನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಚಿತ್ರ “ಮುಗಿಲ್ಪೇಟೆ’.
ಅಲ್ಲಲ್ಲಿ ಕೇಳಿರುವ, ಕೆಲವೊಮ್ಮೆ ನಮ್ಮ ಜೀವನದಲ್ಲೂ ನಡೆಯಬಹುದಾದ ಇಂಥ ವಿಷಯವನ್ನು ಇಟ್ಟುಕೊಂಡು “ಮುಗಿಲ್ಪೇಟೆ’ ಸಿನಿಮಾದಲ್ಲಿ ಅದಕ್ಕೊಂದು ದೃಶ್ಯರೂಪ ಕೊಟ್ಟಿದ್ದಾರೆ ನಿರ್ದೇಶಕ ಭರತ್ ನಾವುಂದ. ಆದರೆ ಸರಳವಾದ ಕಥೆಯನ್ನು ಸುಂದರವಾಗಿ ಕಟ್ಟಿಕೊಡುವ ಇನ್ನಷ್ಟು ಸಾಧ್ಯತೆಗಳಿದ್ದರೂ, ನಿರ್ದೇಶಕರು ಅದನ್ನು ಪರಿಣಾಮಕಾರಿಯಾಗಿ ಚಿತ್ರದಲ್ಲಿ ಬಳಸಿಕೊಂಡಂತೆ ಕಾಣುವುದಿಲ್ಲ.
ಅನಗತ್ಯ ತಿರುವು, ಅನಪೇಕ್ಷಿತ ಪಾತ್ರಗಳು, ಸಸ್ಪೆನ್ಸ್ ಗೊತ್ತಾಗಲು ತೆಗೆದುಕೊಳ್ಳುವ ಸಮಯ ಇವೆಲ್ಲವೂ ಚಿತ್ರಕಥೆಯ ಸಾರಾಗ ಓಟಕ್ಕೆ ಅಲ್ಲಲ್ಲಿ ಬ್ರೇಕ್ ಹಾಕುವಂತಿದೆ. ಇನ್ನು ತಮ್ಮ ಹಿಂದಿನ ಎರಡು ಚಿತ್ರಗಳಿಗೆ ಹೋಲಿಸಿದರೆ, ನಾಯಕ ನಟ ಮನುರಂಜನ್ ಒಂದಷ್ಟು ಮಾಗಿದಂತೆ ಕಾಣುತ್ತದೆ. ನಾಯಕಿ ಖಯಾದು ಲೋಹರ್ ತಮ್ಮ ಅಂದ ಮತ್ತು ಅಭಿನಯ ಎರಡರಲ್ಲೂ ನೋಡುಗರಿಗೆ ಇಷ್ಟವಾಗುತ್ತಾರೆ. ಉಳಿದಂತೆ ತಾರಾ ಅನುರಾಧಾ, ಅವಿನಾಶ್, ರಂಗಾಯಣ ರಘು, ಸಾಧುಕೋಕಿಲ ಮತ್ತಿತರದ್ದು ಎಂದಿನಂತೆ ಸಹಜ ಅಭಿನಯ.
ತೆರೆಯ ಮೇಲೆ ಕಾಣುವ ಹಸಿರು, ಮಳೆ, ಮಂಜು ಎಲ್ಲವನ್ನು ಕಟ್ಟಿಕೊಡುವ ಛಾಯಾಗ್ರಹಣ ಮತ್ತು ಅದಕ್ಕೊಪ್ಪುವ ಹಾಡುಗಳು ಮತ್ತು ಹಿನ್ನೆಲೆ ಸಂಗೀತ “ಮುಗಿಲ್ಪೇಟೆ’ಯ ಸೌಂದರ್ಯಕ್ಕೆ ಪ್ಲಸ್ ಆಗಿದೆ. ಅತಿಯಾದ ನಿರೀಕ್ಷೆಗಳಿಲ್ಲದೆ, ಮಾಮೂಲಿ ಪ್ರೇಮಕಥೆಯನ್ನು ಹೊಸದಾಗಿ ಮತ್ತೂಮ್ಮೆ ನೋಡಿಬರಲು ಅಡ್ಡಿಯಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Sandalwood: ಶೈನ್ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್ ಮ್ಯಾರೀಡ್” ಟೈಟಲ್
MUST WATCH
ಹೊಸ ಸೇರ್ಪಡೆ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?