ಸಂಬಳ ನೀಡದೆ ಬಂಧಿಯಾಗಿದ್ದ 39 ಕಾರ್ಮಿಕರ ರಕ್ಷಣೆ
Team Udayavani, Nov 27, 2021, 10:45 PM IST
ಮುಂಬಯಿ : ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ಬಂಧಿಸಿಡಲಾಗಿದ್ದ 39 ಕಾರ್ಮಿಕರನ್ನು ರಕ್ಷಿಸಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ. ಈ ಎಲ್ಲ ಕಾರ್ಮಿಕರು ಮಧ್ಯಪ್ರದೇಶದ ರಾಜ್ಗರ್ ಮೂಲದವರು ಎನ್ನಲಾಗಿದೆ.
39 ಕಾರ್ಮಿಕರನ್ನು ರಾಜ್ಗರ್ನ ಕಂಟ್ರ್ಯಾಕ್ಟರ್ ಒಬ್ಬ ಕರೆದುಕೊಂಡು ಬಂದು ಕೊಲ್ಲಾಪುರಲ್ಲಿ ಕೆಲಸಕ್ಕೆ ಸೇರಿಸಿದ್ದ. ಇಲ್ಲಿ 25 ದಿನಗಳ ಕೆಲಸ ಮಾಡಿದ ಅನಂತರ ಕಾರ್ಮಿಕರು ಸಂಬಳವನ್ನು ಕೇಳಿದ್ದಾರೆ. ಆದರೆ ಸಂಬಳ ಕೊಡದೆ, ಪೀಡಿಸಿ ಅವರನ್ನು ಇಲ್ಲೇ ಬಂಧಿಸಿಟ್ಟುಕೊಳ್ಳಲಾಗಿತ್ತು.
ಈ ವಿಚಾರ ಮಧ್ಯಪ್ರದೇಶದ ಶಾಸಕರೊಬ್ಬರಿಗೆ ತಿಳಿದುಬಂದಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಧ್ಯಪ್ರದೇಶದಿಂದ ಪೊಲೀಸರ ವಿಶೇಷ ತಂಡವೊಂದು ಬಂದಿದ್ದು, ಮಹಾ ಪೊಲೀಸರ ಸಹಾಯದೊಂದಿಗೆ ಕಾರ್ಮಿಕರನ್ನು ರಕ್ಷಿಸಲಾಗಿದೆ.
ಇದನ್ನೂ ಓದಿ : ರೇಪ್ & ಮರ್ಡರ್ : ಕೊಳೆತ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ