ನಾನು ಸತ್ತರೆ ಮಣ್ಣಿಗೆ ಬರಬೇಡ ಎಂದು ಅಣ್ಣನಿಗೆ ಹೇಳಿದ್ದೇನೆ :ಸಂಸದ ಜಿಗಜಿಣಗಿ
Team Udayavani, Dec 6, 2021, 6:45 PM IST
ವಿಜಯಪುರ : ನನ್ನ ಅಣ್ಣ ಸಿದ್ಧರಾಮಪ್ಪನಿಗೂ ನನಗೂ ಕಳೆದ 25 ವರ್ಷಗಳ ಹಿಂದೆಯೇ ಸಂಬಂಧ ಕಡಿದಿದಿದೆ. ನನ್ನ ಸಹೋದರಿಯ ಅಂತ್ಯ ಸಂಸ್ಕಾರಕ್ಕೆ ಹೋಗಲು ನಿರಾಕರಿಸಿದ ಆತನಿಗೆ ನಾನು ಸತ್ತರೆ ನೀನು ನನ್ನ ಮಣ್ಣಿಗೆ ಬರಬೇಡ, ನೀನು ಸತ್ತರೆ ನಾನು ನಿನ್ನ ಮಣ್ಣಿಗೆ ಬರುವುದಿಲ್ಲ ಎಂದು ಅಂದೇ ಹೇಳಿ, ಸಂಬಂಧ ಕಡಿತ ಮಾಡಿಕೊಂಡಿದ್ದೇನೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ತಮ್ಮ ಸಹೋದರನ ವಿರುದ್ಧ ಹರಿಹಾಯ್ದರು.
ತಮ್ಮ ಅಣ್ಣ ಸಿದ್ಧರಾಮಪ್ಪ ಅವರು ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಅದರಲ್ಲೂ ಪಕ್ಷೇತರನ ಪರ ಪ್ರಚಾರ ಮಾಡುವಾಗ ಸಂಸದನಾಗಿರುವ ತನ್ನ ತಮ್ಮನ ವಿರುದ್ಧ ಮಾತನಾಡಿದ್ದರು. ಅಲ್ಲದೇ ನನ್ನ ಜೀವಿತಾವಧಿಯಲ್ಲಿ ಎಂದೂ ಬಿಜೆಪಿ ಪಕ್ಷಕ್ಕೆ ಮತ ಹಾಕಿಲ್ಲ ಎಂದಿದ್ದರು.
ಇದಕ್ಕೆ ಸೋಮವಾರ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ಗೊತ್ತಿಲ್ಲದ ಅವನೊಂದಿಗೆ ಎಂಥ ಮಾತು. ಅವನು ಎನೇನೋ ಮಾತನಾಡುತ್ತಾನೆ. ಆದರೆ ಅವನ ಸೇವೆ ಮಾಡುವ ಅವನದೇ ಮೊಮ್ಮಗ ಗ್ರಾ.ಪಂ. ಸದಸ್ಯನಾಗಿದ್ದು, ಬಿಜೆಪಿ ಪರವಾಗಿ ಮತ ಹಾಕುತ್ತಾನೆ. ಹೀಗಾಗಿ ಅವನ ಮಾತಿಗೆ ಎಷ್ಟು ಬೆಲೆ ಇದೆ ಎಂಬುದನ್ನು ನೀವೇ ತಿಳಿಯಬೇಕು. ಸಂಬಂಧ ಕಡಿದುಕೊಂಡಿರುವ ಅಣ್ಣ ಸಿದ್ಧರಾಮಪ್ಪನ ಕುರಿತು ಮಾತನಾಡುವುದು ಸರಿಯಲ್ಲ ಎಂದು ಹರಿಹಾಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
ರಾಜ್ಯ ದಿವಾಳಿ ಮಾಡಿ ಚೊಂಬು ತೋರಿಸುತ್ತಿದ್ದಾರೆ: ಬಸವರಾಜ ಬೊಮ್ಮಾಯಿ
Shiv sena ಪಕ್ಷದ ಗೀತೆಯಿಂದ ‘ಹಿಂದೂ’, ‘ಜೈ ಭವಾನಿ’ ಪದ ಕೈಬಿಡಲ್ಲ: ಉದ್ಧವ್
Protest; ಕೇಜ್ರಿವಾಲ್ ಸಕ್ಕರೆ ಮಟ್ಟ 300 ದಾಟಿದೆ.. ; ಆಮ್ ಆದ್ಮಿ ಪಕ್ಷ ಆಕ್ರೋಶ