ಕಾಂಗ್ರೆಸ್ ಅಭ್ಯರ್ಥಿಗೆ ತಂದೆ ಕೂಡಿಟ್ಟ ಹಣ ದೇಣಿಗೆ
Team Udayavani, Dec 8, 2021, 1:08 PM IST
ಚಿಕ್ಕಮಗಳೂರು: ಕಾಂಗ್ರೆಸ್ ಜಿಲ್ಲಾ ವಕ್ತಾರಹಿರೇಮಗಳೂರು ಪುಟ್ಟಸ್ವಾಮಿ ಅವರ ತಂದೆಕೂಡಿಟ್ಟ 6000 ರೂ. ಹಣವನ್ನು ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರಿಗೆ ನೀಡಿ ಚುನಾವಣೆಯಲ್ಲಿ ಗೆದ್ದು ಬರಲಿ ಎಂದು ಶುಭಹಾರೈಸಿದರು.
ಗಾಯತ್ರಿ ಶಾಂತೇಗೌಡ ಅವರು ಹಿರೇಮಗಳೂರು ಮಾರ್ಗವಾಗಿ ತೆರಳುತ್ತಿದ್ದಸಂದರ್ಭದಲ್ಲಿ ಪುಟ್ಟಸ್ವಾಮಿ ಅವರ ಮನೆಗೆಭೇಟಿ ನೀಡಿದರು. ಗಾಯತ್ರಿ ಶಾಂತೇಗೌಡಅವರನ್ನು ಸನ್ಮಾನಿಸಿ ತಂದೆ ಕೂಡಿಟ್ಟ ಬಿಡಿಕಾಸನ್ನುನೀಡಿದರು.ನನ್ನ ತಂದೆ ನಿಧನದ ಸಂದರ್ಭದಲ್ಲಿ ಬಿಟ್ಟುಹೋಗಿದ್ದ ಪಾಕೆಟ್ ಇದ್ದ ಬಿಡಿಕಾಸನ್ನು ಅಭ್ಯರ್ಥಿಕೈಗಿಟ್ಟು ನಮ್ಮಪ್ಪ ಸದಾ ಈ ಪಾಕೆಟ್ ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದರು.
ಖರ್ಚಿಗಾಗಿ ಪಾಕೆಟ್ನಲ್ಲಿಹಣವಿಟ್ಟುಕೊಳ್ಳುತ್ತಿದ್ದರು. ಅವರು ನಮ್ಮನ್ನುಅಗಲಿದಾಗ ಅವರ ಪಾಕೆಟ್ನಲ್ಲಿ ಸ್ವಲ್ಪ ಹಣವಿತ್ತು.ಅದನ್ನು ಒಳ್ಳೆಯ ಕಾರ್ಯಕ್ಕೆ ಬಳಸಬೇಕು ಎಂದುಜೋಪಾನವಾಗಿ ಇಟ್ಟುಕೊಂಡಿದ್ದೆ ಎಂದರು.ಈ ಚುನಾವಣೆಯಲ್ಲಿ ಸ್ಪ ರ್ಧಿಸಿರುವ ನೀವುಗೆದ್ದು ಬರುವುದೂ ಒಂದು ಒಳ್ಳೆ ಕಾರ್ಯಎಂದು ಕೊಂಡಿದ್ದೇನೆ.
ನೀವು ಗೆದ್ದು ಬರಬೇಕು.ಕೇಂದ್ರ ಮತ್ತು ರಾಜ್ಯದಲ್ಲಿ ಅಧಿ ಕಾರದಲ್ಲಿರುವಬಿಜೆಪಿ ಸರ್ಕಾರದ ಸಂವಿಧಾನ ವಿರೋಧಿ,ಜನವಿರೋ ಧಿ, ದಲಿತ ವಿರೋ ಧಿ, ಮೀಸಲಾತಿವಿರೋ ಧಿ, ರೈತವಿರೋ ಧಿ ನೀತಿಯಿಂದ ಜನರುಬೇಸತ್ತು ಹೋಗಿದ್ದಾರೆ. ಈ ಚುನಾವಣೆಯಲ್ಲಿಬಿಜೆಪಿ ಗೆಲ್ಲಬಾರದು ಎಂಬ ಕಾರಣಕ್ಕೆ ಅಪ್ಪನಪಾಕೆಟ್ನಲ್ಲಿರುವ ಹಣವನ್ನು ಜನಮುಖೀಕಾರ್ಯಗಳಿಗೆ ಒತ್ತು ನೀಡುವ ಗಾಯತ್ರಿಶಾಂತೇಗೌಡ ಗೆಲ್ಲಬೇಕು ಎಂದು ನೀಡಿದ್ದೇನೆಎಂದು ತಿಳಿಸಿದರು.
ನಗರ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದಅಧ್ಯಕ್ಷ ಎಚ್.ಎಸ್. ಜಗದೀಶ್, ಆಶ್ರಯ ಸಮಿತಿಮಾಜಿ ಸದಸ್ಯ ಚಂದ್ರಪ್ಪ, ಮುಖಂಡ ರೋಹಿತ್ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ