ಕೋವಿಡ್‌ ಪತ್ರದ ಚಿಕ್ಕ ಕಾರ್ಡ್‌ಗೆ ಡಿಮ್ಯಾಂಡ್‌


Team Udayavani, Dec 9, 2021, 1:50 PM IST

covid news

ದಾವಣಗೆರೆ: ನಿಮ್ಮ ಕಿಸೆ ಇಲ್ಲವೇ ಬ್ಯಾಗ್‌ನಲ್ಲಿ ಎಟಿಎಂಕಾರ್ಡ್‌, ಆಧಾರ್‌ ಕಾರ್ಡ್‌, ಪ್ಯಾನ್‌ಕಾರ್ಡ್‌, ಓಟರ್‌ಕಾರ್ಡ್‌, ಐಡೆಂಟಿಟಿ ಕಾರ್ಡ್‌ ಸೇರಿದಂತೆ ಇನ್ನಿತರ ಅಗತ್ಯಕಾರ್ಡ್‌ಗಳಿದ್ದರೆ ಅವುಗಳ ಜತೆಗೆ ಇನ್ನು ಮುಂದೆ ಕೋವಿಡ್‌ಕಾರ್ಡನ್ನೂ ಇಟ್ಟುಕೊಳ್ಳಿ!ಹೌದು, ಈಗ ಎಲ್ಲ ಅತ್ಯವಶ್ಯಕ ಕಾರ್ಡ್‌ಗಳ(ಗುರುತಿನಚೀಟಿ) ಜತೆಗೆ ಕೋವಿಡ್‌ ಕಾರ್ಡ್‌ಗೂ (ಕೋವಿಡ್‌ಲಸಿಕೆ ಪ್ರಮಾಣಪತ್ರ) ಬೇಡಿಕೆ ಬಂದಿದೆ. ಇದು ಸಹಅತ್ಯವಶ್ಯಕ ದಾಖಲೆಗಳ ಸಾಲಿಗೆ ಈಗಷ್ಟೇ ಸೇರಿಕೊಳ್ಳುತ್ತಿದೆ.

ಈದಾಖಲೆಯೂ ಈಗ ಚಿಕ್ಕ ಕಾರ್ಡ್‌ ಸ್ವರೂಪ ಪಡೆದುಕೊಂಡುಎಲ್ಲರಿಗೂ ಹೆಚ್ಚು ಆಪ್ತವಾಗುತ್ತಿರುವುದು ವಿಶೇಷ.ದೇಶದ ನಾಗರಿಕರೆಲ್ಲರೂ ಕೊರೊನಾ ವೈರಸ್‌ನಿಂದರಕ್ಷಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕೋವಿಡ್‌ ಲಸಿಕೆಎರಡು ಡೋಸ್‌ ಪಡೆಯುವುದನ್ನು ಹಾಗೂ ಸಾರ್ವಜನಿಕವಲಯದಲ್ಲಿ ಹಲವು ವ್ಯವಹಾರ, ಪ್ರವೇಶಕ್ಕೆ ಕೋವಿಡ್‌ಲಸಿಕಾ ಪ್ರಮಾಣಪತ್ರ ಪ್ರದರ್ಶಿಸುವುದನ್ನು ಸರ್ಕಾರಕಡ್ಡಾಯಗೊಳಿಸಿದೆ.

ಹೀಗಾಗಿ ಜನರು ಈಗ ಕೋವಿಡ್‌ಲಸಿಕಾ ಪ್ರಮಾಣಪತ್ರವನ್ನು ಚಿಕ್ಕ ಕಾರ್ಡ್‌ ರೂಪದಲ್ಲಿಸುಲಭವಾಗಿ ಇಟ್ಟುಕೊಳ್ಳಲು ಮುಂದಾಗಿದ್ದರಿಂದಲಸಿಕಾಕರಣ ಪ್ರಮಾಣಪತ್ರದ ಚಿಕ್ಕ ಕಾರ್ಡ್‌ಗೆ ಭಾರೀಬೇಡಿಕೆ ಬಂದಿದೆ.ಪ್ರಸ್ತುತ ಅನೇಕರು ತಾವು ಕೋವಿಡ್‌ ಲಸಿಕೆ ಪಡೆದಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್‌ಮಾಡಿಕೊಂಡು ಕಾಗದದ ಮುದ್ರಣ ಪ್ರತಿ ಇಟ್ಟುಕೊಂಡುಓಡಾಡುತ್ತಿದ್ದಾರೆ. ಈ ಕಾಗದದ ಪ್ರತಿ ಜೇಬಲ್ಲಿ, ಬ್ಯಾಗಲ್ಲಿ ಮಡಚಿಇಟ್ಟುಕೊಂಡರೆ ಎರಡೂ¾ರು ದಿನಗಳಲ್ಲಿ ಹರಿದುಹೋಗುತ್ತದೆ.ನೀರು ಬಿದ್ದರಂತೂ ಹರಿದೇ ಹೋಗುತ್ತದೆ.

ಪದೇ ಪದೇಪ್ರಮಾಣಪತ್ರ ಮುದ್ರಿಸಿಕೊಟ್ಟುಕೊಳ್ಳಬೇಕಾಗುತ್ತದೆ. ಈಸಮಸ್ಯೆಗೆ ಪರಿಹಾರವೆಂಬಂತೆ ಅನೇಕ ಸೈಬರ್‌ ಸೆಂಟರ್‌ಗಳು, ಸಾಮಾನ್ಯ ಸೇವಾ ಕೇಂದ್ರದವರು ಕೋವಿಡ್‌ ಲಸಿಕಾಪ್ರಮಾಣಪತ್ರಗಳನ್ನು ಚಿಕ್ಕ ಕಾರ್ಡ್‌ಗಳನ್ನಾಗಿ ಮಾಡಿಕೊಡುವಹೊಸ ಉದ್ಯೋಗ ಹುಡುಕಿಕೊಂಡಿದ್ದು ಅವರ ವ್ಯಾಪಾರಕ್ಕೆಹೊಸ ಉತ್ತೇಜನ ಸಿಕ್ಕಂತಾಗಿದೆ.ಕಾರ್ಡ್‌ ಹೇಗೆ ಮಾಡುತ್ತಾರೆ?: ಸಾಮಾನ್ಯವಾಗಿ ಮತದಾರರಚೀಟಿ, ಆಧಾರ್‌ ಚೀಟಿಗಳನ್ನು ಸಣ್ಣ ಕಾರ್ಡ್‌ ರೀತಿಯಲ್ಲಿಮಾಡಿಕೊಳ್ಳಲು ಸಾರ್ವಜನಿಕರಿಗೆ ಅನುಕೂಲವಾಗುವಂತೆಆಯಾ ಅಧಿಕೃತ ಸಂಸ್ಥೆ, ಇಲಾಖೆಗಳಿಂದಲೇ ಚಿಕ್ಕದಾದಮಾಹಿತಿ ಪತ್ರವನ್ನೂ ನೀಡಿವೆ. ಅದನ್ನು ಕತ್ತರಿಸಿ ಇಲ್ಲವೇಇನ್ನೊಮ್ಮೆ ಮುದ್ರಿಸಿಕೊಂಡು ಲ್ಯಾಮಿನೇಶನ್‌ ಅಥವಾಪ್ಲಾಸ್ಟಿಕ್‌ ಕಾರ್ಡ್‌ಗಳನ್ನಾಗಿ ಮಾಡಿಕೊಂಡು ಇಟ್ಟುಕೊಳ್ಳಲು ಅನುಕೂಲವಾಗಿದೆ.

ಆದರೆ ಕೋವಿಡ್‌ ಲಸಿಕಾಪ್ರಮಾಣಪತ್ರದಲ್ಲಿ ಗುರುತಿನ ಕಾರ್ಡ್‌ ಮಾದರಿಯಲ್ಲಿವಿವರ ನೀಡುವ ಅವಕಾಶವನ್ನು ಕೇಂದ್ರ ಆರೋಗ್ಯ ಇಲಾಖೆಮಾಡಿಕೊಟ್ಟಿಲ್ಲ. ಇಡೀ ಪ್ರಮಾಣಪತ್ರವನ್ನು ಲ್ಯಾಮಿನೇಶನ್‌ಮಾಡಿದರೆ ಅದೊಂದು ದೊಡ್ಡ ಎ*4 ಅಳತೆಯ ಕಾರ್ಡ್‌ಆಗುತ್ತದೆ. ಅದನ್ನು ಎಲ್ಲೆಂದರಲ್ಲಿ ಸುಲಭವಾಗಿ ಇಟ್ಟುಕೊಂಡುಓಡಾಡಲು ಆಗದು. ಈ ಸಮಸ್ಯೆಗೆ ಪರಿಹಾರವಾಗಿಸೈಬರ್‌, ಸಾಮಾನ್ಯ ಸೇವಾ ಕೇಂದ್ರದವರು ಕೋವಿಡ್‌ಪ್ರಮಾಣಪತ್ರದಲ್ಲಿರುವ ಎಲ್ಲ ಮಾಹಿತಿ ನಕಲು ಮಾಡಿಟ್ಟುಚಿಕ್ಕ ಕಾರ್ಡ್‌ ಗಾತ್ರದಲ್ಲಿ ಕೋವಿಡ್‌ ಲಸಿಕಾ ಪ್ರಮಾಣಪತ್ರಮಾಡಿಕೊಡಲು ಮುಂದಾಗಿದ್ದು ಈ ಕಾರ್ಡ್‌ಗಳು ಹೆಚ್ಚುಜನರನ್ನು ಸೆಳೆಯುತ್ತಿವೆ.

ಚಿಕ್ಕ ಕಾರ್ಡ್‌ ದೊಡ್ಡ ಲಾಭ: ಸೈಬರ್‌, ಸಾಮಾನ್ಯ ಸೇವಾಕೇಂದ್ರದವರು ಮಾಡಿಕೊಡುವ ಈ ಚಿಕ್ಕ ಗಾತ್ರದ ಕೋವಿಡ್‌ಕಾರ್ಡ್‌ ಅನ್ನು ಕೋವಿಡ್‌ ಲಸಿಕಾ ಪ್ರಮಾಣಪತ್ರದ ದೊಡ್ಡಪತ್ರದ ಬದಲಾಗಿ ಅಗತ್ಯವಿರುವಲ್ಲಿ ಬಳಸಬಹುದಾಗಿದೆ.ಇದರಲ್ಲಿ ಕೋವಿಡ್‌ ಪ್ರಮಾಣ ಪತ್ರದಲ್ಲಿರುವಂತೆ ಎಲ್ಲ ಮಾಹಿತಿಅಂದರೆ ಹೆಸರು, ಜನ್ಮದಿನಾಂಕ, ಲಸಿಕೆ ಯಾವುದು, ಯಾವಾಗಹಾಕಿಸಿಕೊಂಡಿದ್ದಾರೆ ಎಂಬ ವಿವರವನ್ನು ಯಥಾವತ್ತಾಗಿಮುದ್ರಿಸುವ ಜತೆಗೆ ಕೋವಿಡ್‌ ಪ್ರಮಾಣ ಪತ್ರದಲ್ಲಿರುವಕ್ಯೂಆರ್‌ ಕೋಡ್‌ ಕಡ್ಡಾಯವಾಗಿ ಮುದ್ರಿಸಲೇಬೇಕಾಗಿದೆ.ಯಾವುದೇ ಸ್ಥಳದಲ್ಲಿ ಈ ಕಾರ್ಡ್‌ ತೋರಿಸಿದಾಗ ಅವರುಸಂಶಯ ಬಂದರೆ ಕ್ಯೂಆರ್‌ ಕೋಡ್‌ ಸ್ಕಾÂನ್‌ ಮಾಡಿಪ್ರಮಾಣಪತ್ರವನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.ಒಟ್ಟಾರೆ ಹತ್ತು ಹಲವು ಅವಶ್ಯಕ ದಾಖಲೆಗಳ ಕಾರ್ಡ್‌ಗಳಸಾಲಿಗೆ ಈಗ ಕೋವಿಡ್‌ ಕಾರ್ಡ್‌ ಸಹ ಸೇರಿದೆ. ಹಾಗಾಗಿ ಈಕಾರ್ಡ್‌ ಮಾಡಿಸಲು ಎಲ್ಲೆಡೆ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ

ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.