ಕನ್ನಡಕ್ಕಾಗಿ ಪ್ರಾಣಕೊಡಲು ಸಿದ್ಧ: ಶಿವಣ್ಣ
Team Udayavani, Dec 20, 2021, 11:19 AM IST
ಬೆಂಗಳೂರು: ಕನ್ನಡ ಭಾಷೆಗಾಗಿ ನಾನು ಪ್ರಾಣಕೊಡಲು ಸಿದ್ಧ. ನಮ್ಮ ಭಾಷೆಗಾಗಿ ನನ್ನ ಪ್ರಾಣ ಹೋದರೂ ನಂಗೆ ಬೇಸರವಿಲ್ಲ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟ ವಿಚಾರದ ಕುರಿತು ಸಿನಿಮಾ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಶಿವಣ್ಣ, ನಮ್ಮ ಬಾವುಟ ಸುಡುವುದು ಎಷ್ಟು ಸರಿ. ಕರ್ನಾಟಕದಲ್ಲಿ ನಾವು ಎಲ್ಲರಿಗೂ ಬೆಲೆ ಕೊಡುತ್ತೇವೆ. ನಾವು ಯಾವರಾಜ್ಯದಲ್ಲಿ ಇದ್ದೆವೊ ಅಲ್ಲಿನ ಭಾಷೆಗೆ ಗೌರವ ಕೊಡಬೇಕು. ನಾವು ಶಾಂತವಾಗಿದ್ದೇವೆ ಎಂದರೆನಮಗೆ ಏನೂ ಪವರ್ ಇಲ್ಲ ಅಂದು ಕೊಳ್ಳಬೇಡಿ. ಮನುಷ್ಯನಿಗೆ ಕೋಪ ಬಂದರೆ ತಡೆದುಕೊಳ್ಳಲು ಆಗಲ್ಲ. ಬೇರೆ ಭಾಷೆಯ ಸಿನಿಮಾಗಳನ್ನು ನೋಡುತ್ತೇವೆ, ಎಂದರೆ ನಾವು ಆ ಭಾಷೆಗೆ ಕೊಡುತ್ತಿರುವ ಮರ್ಯಾದೆ ಅದು. ಅದೇ ರೀತಿ ಬೇರೆ ಭಾಷೆಯವರುಕೂಡ ನಮ್ಮ ಭಾಷೆಗೆ ಮರ್ಯಾದೆ ಕೊಡಬೇಕು ಎಂದು ಖಡಕ್ಕಾಗಿ ಹೇಳಿದರು.
ರಾಜ್ಯಸರ್ಕಾರ ಕನ್ನಡ ಧ್ವಜ ಸುಟ್ಟ ಬಗ್ಗೆ ಕ್ರಮವಹಿಸಬೇಕು. ನಮ್ಮ ನೆಲ ಜಲದ ವಿಚಾರದಲ್ಲಿರಾಜಕೀಯ, ಮತ ಬಿಟ್ಟು ಎಲ್ಲರೂ ಒಂದಾಗಬೇಕು. ರಾಜ್ಯದ, ಭಾಷೆಯ ವಿಚಾರ ಬಂದಾಗ ಇಡೀ ಚಿತ್ರರಂಗ ಹೋರಾಟ ಮಾಡಲು ಸಿದ್ಧ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ