ಡಿಸೆಂಬರ್: ಮುಂಬಯಿಗೆ ರೈಲಿನಲ್ಲಿ 63 ಲಕ್ಷ ಪ್ರಯಾಣಿಕರ ಆಗಮನ
Team Udayavani, Jan 8, 2022, 11:07 AM IST
ಮುಂಬಯಿ: ಕೊರೊನಾ ನಿರ್ಬಂಧಗಳ ಸಡಿಲಿಕೆಯಿಂದಾಗಿ ಮುಂಬಯಿ ಮಹಾನಗರಕ್ಕೆ ಮೇಲ್ ಮತ್ತು ಎಕ್ಪ್ರಸ್ ಮೂಲಕ ಆಗಮನ ಮತ್ತು ನಿರ್ಗಮಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, 2021ರ ಡಿಸೆಂಬರ್ನಲ್ಲಿ ಮುಂಬಯಿ ಮಹಾನಗರಕ್ಕೆ 63 ಲಕ್ಷ ಪ್ರಯಾಣಿಕರು ಎಕ್ಸ್ಪ್ರೆಸ್ ರೈಲುಗಳ ಮೂಲಕ ಆಗಮಿಸಿದ್ದಾರೆ. ಮುಂಬಯಿಗೆ ಆಗಮಿಸುವ ಒಟ್ಟು ಪ್ರಯಾಣಿಕರ ಪೈಕಿ ಮಧ್ಯ ಮಾರ್ಗದಲ್ಲಿ 42 ಲಕ್ಷ ಎಂದು ಮಧ್ಯ ರೈಲ್ವೇ ತಿಳಿಸಿದೆ.
ಇದರ ಪರಿಣಾಮ ಮುಂಬಯಿ ಸಹಿತ ಇತರ ಮಹಾನಗರ ಪ್ರದೇಶಗಳಲ್ಲಿ ಈ ಪ್ರಯಾಣಿಕರ ಕೊರೊನಾ ತಪಾಸಣೆ ನಡೆಸುವುದು ಆಡಳಿತಕ್ಕೆ ಸವಾಲಾಗಿದೆ. ಈ ಸಂಖ್ಯೆ ಇನ್ನೂ ಹೆಚ್ಚಿದ್ದು, ಮಹಾನಗರ ಪಾಲಿಕೆ ಕೊರೊನಾ ಪರೀಕ್ಷೆಗೆ ಹೆಚ್ಚಿನ ಒತ್ತು ನೀಡಲು ಆರಂಭಿಸಿದೆ.
ಕೊರೊನಾ ಎರಡನೇ ಅಲೆ ಕಡಿಮೆ ಯಾಗುತ್ತಿದ್ದಂತೆಯೇ ರಾಜ್ಯ ಸರಕಾರ ಹಲವು ನಿರ್ಬಂಧಗಳನ್ನು ಸಡಿಲಿಸಿತ್ತು. ನಿರ್ಬಂಧಗಳು ಸಡಿಲಗೊಂಡಂತೆ ನವೆಂಬರ್ ಮತ್ತು ಡಿಸೆಂಬರ್ನಲ್ಲಿ ವಲಸಿಗರ ಸಂಖ್ಯೆ ಹೆಚ್ಚಾಯಿತು. ಮಧ್ಯ ರೈಲ್ವೇ ಪ್ರಕಾರ 2021ರ ಡಿಸೆಂಬರ್ನಲ್ಲಿ 39 ಲಕ್ಷ ಪ್ರಯಾಣಿಕರು ಮುಂಬಯಿ ನಿಂದ ಊರುಗಳಿಗೆ ತೆರಳಿದ್ದರೆ, 42 ಲಕ್ಷ ಪ್ರಯಾಣಿಕರು ಮುಂಬಯಿ ಮಹಾ ನಗರಕ್ಕೆ ಮರಳಿದ್ದಾರೆ.
ರಾಜ್ಯದ ಮೂಲೆ ಮೂಲೆಗಳಿಂದ ಉತ್ತರ ಭಾರತಕ್ಕೆ ತೆರಳುವ ಹಾಗೂ ಅಲ್ಲಿಂದ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಪಶ್ಚಿಮ ರೈಲ್ವೇ ಪ್ರಕಾರ ಕಳೆದ ತಿಂಗಳಲ್ಲಿ 20,89,632 ಮಂದಿ ಪ್ರಯಾಣಿಕರು ಮೇಲ್ ಮತ್ತು ಎಕ್ಸ್ಪ್ರೆಸ್ ಮೂಲಕ ಮುಂಬಯಿಯಿಂದ ಹೊರಗೆ ಪ್ರಯಾಣಿಸಿದ್ದಾರೆ. 21,83,373 ಪ್ರಯಾಣಿಕರು ಮುಂಬಯಿಗೆ ಮರಳಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೊರೊನಾ ತಪಾಸಣೆಗೆ ಒತ್ತು:
ಮಧ್ಯ ರೈಲ್ವೇಯ ಸಿಎಸ್ಎಂಟಿ, ಎಲ್ಟಿಟಿ, ದಾದರ್, ಪನ್ವೇಲ್ ನಿಲ್ದಾಣಗಳಲ್ಲಿ ಮತ್ತು ಪಶ್ಚಿಮ ರೈಲ್ವೇಯ ಮುಂಬಯಿ ಸೆಂಟ್ರಲ್, ಬಾಂದ್ರಾ ಟರ್ಮಿನಸ್, ವಸಾಯಿಯಲ್ಲಿ ಇಳಿಯುವ ಪ್ರಯಾಣಿಕರ ಕೊರೊನಾ ಪರೀಕ್ಷೆಗೆ ಅವರನ್ನು ಸರತಿ ಸಾಲಿನಲ್ಲಿ ನಿಲ್ಲಿಸಲಾಗುತ್ತಿದೆ. ಮುಂಬಯಿಯ ಏಳು ನಿಲ್ದಾಣಗಳ ವ್ಯಾಪ್ತಿಯಲ್ಲಿ ಮನಪಾ ವತಿಯಿಂದ ಮೇಲ್ ಮತ್ತು ಎಕ್ಸ್ಪ್ರೆಸ್ ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಮೊದಲ ಬಾರಿಗೆ ಪ್ರಯಾಣಿಸುವವರ ಪರೀಕ್ಷೆಗೆ ಒತ್ತು ನೀಡಲಾಗುತ್ತಿದೆ. ಆನಂತರ ಮಹಾರಾಷ್ಟ್ರದಿಂದ ಬರುವ ರೈಲುಗಳ ಪ್ರಯಾಣಿಕರನ್ನು ಪರೀಕ್ಷಿಸಲಾಗುತ್ತಿದೆ ಎಂದು ಮುಂಬಯಿ ಮನಪಾ ಹೆಚ್ಚುವರಿ ಆಯುಕ್ತ ಸುರೇಶ್ ಕಾಕಾನಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
MUST WATCH
ಹೊಸ ಸೇರ್ಪಡೆ
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ