ಜೀವಜಲಕ್ಕೆ ಹೆಬ್ಬಾರರ ಕೊಡುಗೆ :ಅತ್ತ ಕೆರೆಗಳ ಅಭಿವೃದ್ದಿ,ಇತ್ತ ಕಳ್ಳರ ಪತ್ತೆಗೂ ಹೈಟೆಕ್ CCTV
Team Udayavani, Jan 10, 2022, 6:55 PM IST
ಶಿರಸಿ : ಜೀವ ಜಲದ ಸಂರಕ್ಷಣೆ, ಗೋವಿನ ಮೇಲೆ ಪ್ರೇಮ ಇಟ್ಟು ಕೆಲಸ ಮಾಡುತ್ತಿರುವ ಶಿರಸಿ ಜೀವ ಜಲಕಾರ್ಯಪಡೆ ಈಗ ಇನ್ನೊಂದು ವಿಶಿಷ್ಟ ಕಾಯಕಕ್ಕೆ ಮುಂದಾಗಿದೆ. ನಗರದ ಆರ್ ಟಿಓ ಕಚೇರಿ ಸಮೀಪ ಇರುವ ಪ್ರಾಚೀನ ಕೆರೆಗಳಲ್ಲಿ ಒಂದಾದ ಬಶೆಟ್ಟಿ ಕೆರೆ ಅಭಿವೃದ್ದಿ ಹಾಗೂ ನಗರದ ಚಿಪಗಿ ಬಳಿ ಅಳವಡಿಸಲಾದ ಅತ್ಯಾಧುನಿಕ ಸಿಸಿಟಿವಿ.. ಇದರ ಅಳವಡಿಕೆಯಿಂದ ಚೋರರಿಗೂ ಬಿಸಿತುಪ್ಪವಾಗಿ ಪರಿಣಮಿಸಿದೆ.
ಬಶೆಟ್ಟಿಕೆರೆಯ ದಂಡೆಯ ಸ್ವಚ್ಛವನ್ನು ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರರು ಮಾಡಿಸುತ್ತಿದ್ದು, ನೀರು ಕಡಿಮೆ ಆದ ಬಳಿಕ ಅದರ ಹೂಳೆತ್ತಲೂ ಚಿಂತಿಸಿದ್ದಾರೆ.
ಇತ್ತ ಜಿಲ್ಲೆಯಲ್ಲಿಯೇ ಮೊದಲ ಬಾರಿ ಹೆಬ್ಬಾರ್ ಅವರ ಕೊಡುಗೆಯಿಂದ ಪೊಲೀಸ್ ಇಲಾಖೆಯಿಂದ ಹೊಸ ಪ್ರಯೋಗ ಅಕೋಮೆಟಿಕ್ ನಂಬರ್ ಪ್ಲೇಟ್ ರೆಕಾರ್ಡಿಂಗ್ ಕ್ಯಾಮರಾ ಅಳವಡಿಸಿದೆ. ನಗರದ ಚಿಪಗಿ ನಾಕಾ ಬಳಿ ಎರಡುವರೆ ಲಕ್ಷ ರೂ. ಮೌಲ್ಯದ ಅಕೋಮೆಟಿಕ್ ನಂಬರ್ ಪ್ಲೇಟ್ ರೆಕಾರ್ಡಿಂಗ್ ಕ್ಯಾಮರಾವನ್ನು ಅಳವಡಿಕೆ ಮಾಡಲಾಗಿದೆ.
ಕ್ಯಾಮರಾದ ವಿಶೇಷತೆಗಳು
ಈ ಕ್ಯಾಮರಾವು ಯಾವುದೇ ವಾಹನ ಸುಮಾರು 80 ಕಿ.ಮಿ ವೇಗದಲ್ಲಿ ಹೋದರೂ ಸಹ ಸ್ವಯಂ ಚಾಲಿತವಾಗಿ ನಂಬರ್ ಪ್ಲೇಟ್ ಗುರುತಿಸುವಿಕೆಯನ್ನು ಮಾಡಿ, ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತದೆ. ವಾಹನ ಚಾಲಕನ ಛಾಯಾಚಿತ್ರ ಸಹ ಸಂಗ್ರಹಿಸುವ ವಿಶಿಷ್ಟ ಚಾಕಚಕ್ಯತೆ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು