ಮಾಧ್ಯಮದ ಬಗೆ ಸಕಾರಾತ್ಮಕ ಚಿಂತನೆಯಿರಲಿ
Team Udayavani, Jan 23, 2022, 2:47 PM IST
ಬೀದರ: ಯುವಕರು ಮಾಧ್ಯಮದ ಬಗ್ಗೆ ಸಕಾರಾತ್ಮಕವಾಗಿ ಚಿಂತನೆ ಮಾಡಬೇಕು. ಪ್ರಸಾರ ಮಾಡುವವರು ಏನೇ ಮಾಡಲಿ, ಅದನ್ನು ಪಕ್ಕಕ್ಕಿಟ್ಟು ಯುವಕರು ಆತ್ಮವಿಶ್ವಾಸ ಮತ್ತು ಆತ್ಮಬಲದಿಂದ ಯೋಚಿಸಿ ದನಾತ್ಮಕ ಚಿಂತನೆಯೊಂದಿಗೆ ಮುನ್ನಡೆಯಬೇಕೆಂದು ಕೆಪಿ ನ್ಯೂಜ್ ವಾಚಕಿ ಅಶ್ವಿನಿರೆಡ್ಡಿ ಹೇಳಿದರು.
ನಗರದ ಕರ್ನಾಟಕ ಕಾಲೇಜಿನಲ್ಲಿ ಆಯೋಜಿಸಿದ್ದ ಯುವಕರ ಮೇಲೆ ಮಾಧ್ಯಮದ ಪ್ರಭಾವ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಮಾಧ್ಯಮ ಕ್ಷೇತ್ರ ಇಂದು ಸಾಕಷ್ಟು ಬೆಳೆದು ನಿಂತಿದೆ. ದೇಶ-ವಿದೇಶಗಳ ಸುದ್ದಿ ಕ್ಷಣ ಮಾತ್ರದಲ್ಲಿ ಅಂಗೈಯಲ್ಲಿ ನೋಡುತ್ತಿದ್ದೇವೆ. ಮಾಧ್ಯಮದ ಮುಂದೆ ಜಗತ್ತು ಕಿರಿದಾಗಿದೆ. ಆದ್ದರಿಂದ ಪ್ರತಿಯೊಂದು ವಿಷಯದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ವಿಷಯಗಳಿರುತ್ತವೆ. ಋಣಾತ್ಮಕ ವಿಷಯಗಳನ್ನು ಬಿಟ್ಟು, ಧನಾತ್ಮಕ ವಿಚಾರಗಳನ್ನು ಮಾತ್ರ ಯುವಕರು ತೆಗೆದುಕೊಂಡು ದೇಶದ ಏಳ್ಗೆಗೆ ಸಹಕರಿಸಬೇಕೆಂದರು.
ಕಾಲೇಜಿನ ಹಿಂದಿ ವಿಭಾಗದ ಮುಖಸ್ಥೆ ಗೀತಾ ಪೋಸ್ತೆ ಮಾತನಾಡಿ, ವಿದ್ಯಾರ್ಥಿಗಳ ಏಳ್ಗೆಗೆ ಸಹಕಾರಿಯಾಗುವ ಹಲವಾರು ವಿಚಾರ ಸಂಕಿರಣಗಳನ್ನು ವಿಭಾಗದಿಂದ ಆಯೋಜನೆ ಮಾಡಲಾಗುತ್ತಿದೆ ಎಂದರು.
ಸುದ್ದಿ ಸಮಯ ವರದಿಗಾರ ಮಹಾರುದ್ರ ಡಾಕುಳಗೆ, ಕೆಪಿ ನ್ಯೂಜ್ ಛಾಯಾಗ್ರಾಹಕ ಕೃಷ್ಣ ಎಸ್.ಕೆ., ವರದಿಗಾರ ಖುಸ್ರೋ ಅಹ್ಮದ್, ಶಿರಾಜೊದ್ದೀನ್, ಲಕ್ಷ್ಮೀ ಕುಂಬಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಸ್ಟೇಟ್ಸ್ ಮ್ಯಾನ್ ಅಲ್ಲ, ಸೇಲ್ಸ್ಮ್ಯಾನ್: ಬಿ.ಕೆ ಹರಿಪ್ರಸಾದ್
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ