ಉಕ್ರೇನ್‌ ಜಿಡಿಪಿ ಮೌಲ್ಯಕ್ಕಿಂತ ಬಿಎಸ್‌ಇ ಹೂಡಿಕೆದಾರರಿಗೆ ಹೆಚ್ಚು ನಷ್ಟ

ಒಂಭತ್ತು ದಿನಗಳಲ್ಲಿ 13 ಲಕ್ಷ ಕೋಟಿ ರೂ. ಲಾಸ್‌ ; 3 ಸಾವಿರ ಪಾಯಿಂಟ್ಸ್‌ ಸೂಚ್ಯಂಕ ಇಳಿಕೆ

Team Udayavani, Mar 5, 2022, 6:20 AM IST

ಉಕ್ರೇನ್‌ ಜಿಡಿಪಿ ಮೌಲ್ಯಕ್ಕಿಂತ ಬಿಎಸ್‌ಇ ಹೂಡಿಕೆದಾರರಿಗೆ ಹೆಚ್ಚು ನಷ್ಟ

GDP BSE

ನವದೆಹಲಿ/ಮುಂಬೈ: ಒಂದು ಕೋಟಿಯೋ, ಎರಡು ಕೋಟಿಯೋ ಅಲ್ಲ! ಬರೋಬ್ಬರಿ 13 ಲಕ್ಷ ಕೋಟಿ ರೂ.!!

– ಇದು ಫೆ.24ರಂದು ಉಕ್ರೇನ್‌ ವಿರುದ್ಧ ರಷ್ಯಾ ಯುದ್ಧ ಸಾರಿದ ಬಳಿಕ ಬಾಂಬೆ ಷೇರು ಪೇಟೆ (ಬಿಎಸ್‌ಇ)ಯಲ್ಲಿ ಹೂಡಿಕೆದಾರಿರಿಗೆ ಉಂಟಾಗಿರುವ ಒಟ್ಟು ನಷ್ಟ. ಇದು ಉಕ್ರೇನ್‌ನ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಮೊತ್ತಕ್ಕಿಂತಲೂ ಹೆಚ್ಚು.

2021ರಲ್ಲಿ ಸ್ಟಾಟಿಸ್ಯಾ (Statista) ವೆಬ್‌ಸೈಟ್‌ ನಡೆಸಿದ್ದ ಅಧ್ಯಯನದ ಪ್ರಕಾರ ದಾಳಿಗೊಳಗಾಗಿರುವ ರಾಷ್ಟ್ರದ ಜಿಡಿಪಿಯ ಮೌಲ್ಯ 13.79 ಲಕ್ಷ ಕೋಟಿ ರೂ.. ರಷ್ಯಾ ದಾಳಿ ನಡೆಸಿದ ಮೊದಲ ದಿನ (ಫೆ.24)ರಂದು ಬಿಎಸ್‌ಇನಲ್ಲಿ ಹೂಡಿಕೆದಾರರಿಗೆ 13 ಲಕ್ಷ ಕೋಟಿ ರೂ. ಉಂಟಾಗಿತ್ತು. ಈ ಒಂಭತ್ತು ದಿನಗಳಲ್ಲಿ ಸೂಚ್ಯಂಕ 3 ಸಾವಿರ ಪಾಯಿಂಟ್ಸ್‌ ಇಳಿಕೆಯಾಗಿದೆ.

ಮೂರನೇ ದಿನವೂ ನಿರಾಶೆ:
ವಾರಾಂತ್ಯವಾಗಿರುವ ಶುಕ್ರವಾರ ಮತ್ತು ಸತತ ಮೂರನೇ ದಿನವೂ ಕೂಡ ಬಿಎಸ್‌ಇನಲ್ಲಿ ನಿರಾಶೆಯೇ ಆಗಿದೆ. ಸೂಚ್ಯಂಕ ಒಂದು ಹಂತದಲ್ಲಿ 1,200 ಪಾಯಿಂಟ್ಸ್‌ ಕುಸಿತಗೊಂಡು ದಿನಾಂತ್ಯಕ್ಕೆ ಚೇತರಿಸಿಕೊಂಡು 768.87ರಲ್ಲಿ ಮುಕ್ತಾಯವಾಯಿತು. ಹೀಗಾಗಿ, 53,887.72ರಲ್ಲಿ ಕೊನೆಗೊಂಡಿದೆ. ನಿಫ್ಟಿ ಸೂಚ್ಯಂಕ ಕೂಡ 252.70 ಪಾಯಿಂಟ್ಸ್‌ ಪತನಗೊಂಡು 16,245.35ರಲ್ಲಿ ಕೊನೆಗೊಂಡಿತು. ಈ ವಾರದಲ್ಲಿ ಬಿಎಸ್‌ಇ 1,524.71 ಪಾಯಿಂಟ್ಸ್‌ ಪತನಗೊಂಡರೆ, ನಿಫ್ಟಿ 413.05 ಪಾಯಿಂಟ್ಸ್‌ ಇಳಿಕೆಯಾಗಿದೆ. ಹಾಂಕಾಂಗ್‌, ಶಾಂಘೈ,ಟೋಕಿಯೋ ಸ್ಟಾಕ್‌ಎಕ್ಸ್‌ಚೇಂಜ್‌ ಸೇರಿದಂತೆ ಜಗತ್ತಿನ ಇತರ ಷೇರುಪೇಟೆಗಳಲ್ಲಿ ಋಣಾತ್ಮಕ ವಾತಾವರಣವೇ ಇತ್ತು.

76 ಪೈಸೆ ಕುಸಿತ:
ಅಮೆರಿಕದ ಡಾಲರ್‌ ಎದುರು ರೂಪಾಯಿ ಕೂಡ 76 ಪೈಸೆ ಕುಸಿತ ಕಂಡಿದೆ. ಹೀಗಾಗಿ, ವಹಿವಾಟು ಮುಕ್ತಾಯದಲ್ಲಿ 76.17 ರೂ.ಗಳಿಗೆ ಕೊನೆಗೊಂಡಿದೆ. ಹನ್ನೊಂದು ವಾರಗಳಿಗೆ ಕೊನೆಗೊಂಡಂತೆ ಇದು ಗರಿಷ್ಠ ಕುಸಿತ.

ಪ್ರತಿ ಲೀ. ಪೆಟ್ರೋಲ್‌, ಡೀಸೆಲ್‌ಗೆ 12 ರೂ.ಗೆ ಏರಿಕೆ?
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಾಗಿಲ್ಲ. ಆದರೆ, ಸದ್ಯದ ಆತಂಕಕಾರಿ ಸ್ಥಿತಿಯಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 120 ಡಾಲರ್‌ಗೆ ಏರಿಕೆಯಾಗಿದೆ. ದೇಶದಲ್ಲಿ ಸರ್ಕಾರಿ ತೈಲಕಂಪನಿಗಳಿಗೆ ಉಂಟಾಗುವ ನಷ್ಟ ಭರ್ತಿ ಮಾಡುವ ನಿಟ್ಟಿನಲ್ಲಿ ಮಾ.16ರ ಒಳಗೆ ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಮೇಲೆ 12.1 ರೂ. ಏರಿಕೆಯಾಗಬೇಕು. ಹೀಗಾದರೆ ಮಾತ್ರ ಅವುಗಳಿಗೆ ಲಾಭವಾಗಲಿದೆ. ಗರಿಷ್ಠವೆಂದರೆ ಪ್ರತಿ ಲೀಟರ್‌ ಪೆಟ್ರೋಲ್‌ ಡೀಸೆಲ್‌ಗೆ 15.1 ರೂ. ಪರಿಷ್ಕರಣೆಯಾಗಬೇಕು ಎಂದು ಐಸಿಐಸಿಐ ಸೆಕ್ಯುರಿಟೀಸ್‌ ತನ್ನ ಅಧ್ಯಯನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಶುಕ್ರವಾರ ಪ್ರತಿ ಬ್ಯಾರೆಲ್‌ ಬ್ರೆಂಟ್‌ ಕಚ್ಚಾ ತೈಲಕ್ಕೆ 111 ಅಮೆರಿಕನ್‌ ಡಾಲರ್‌ ಆಗಿದೆ. ಮಾ.3ರ ಮಾಹಿತಿ ಪ್ರಕಾರ ಕೇಂದ್ರ ಸರ್ಕಾರ ಪ್ರತಿ ಬ್ಯಾರೆಲ್‌ ಕಚ್ಚಾ ತೈಲಕ್ಕೆ 117.39 ಅಮೆರಿಕನ್‌ ಡಾಲರ್‌ ನೀಡಿ ಖರೀದಿ ಮಾಡುತ್ತಿದೆ.

 

ಟಾಪ್ ನ್ಯೂಸ್

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

Revant Reddy

TG; ತೆಲಂಗಾಣದ ಸಂಕ್ಷಿಪ್ತ ರೂಪ ಇನ್ನು ಮುಂದೆ ‘ಟಿಎಸ್‌’ ಅಲ್ಲ!

Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್‌ ವ್ಯವಹಾರ ಪರಿಶೀಲನೆ

Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್‌ ವ್ಯವಹಾರ ಪರಿಶೀಲನೆ

1-wq-eeqeqwe

Kyrgyzstan:ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ; ಪಾಕಿಸ್ಥಾನದ 3 ವಿದ್ಯಾರ್ಥಿಗಳ ಕೊಲೆ?

BCCI

T20 ವಿಶ್ವಕಪ್‌: ಮೇ 25ರಂದು ಭಾರತದ ಬಹುತೇಕ ಆಟಗಾರರ ಮೊದಲ ತಂಡ ನ್ಯೂಯಾರ್ಕ್‌ಗೆ

1-wewewqe

Swimwear ಫ್ಯಾಶನ್‌ ಶೋ: ಮೊದಲ ಬಾರಿಗೆ ಸೌದಿಯಿಂದ ಅನುಮತಿ!

1-wqewewq

IPL ವಿಚಿತ್ರ; ಎಲ್ಲ ಪಂದ್ಯ ಮುಗಿದ ಬಳಿಕ ನಾಯಕ ಪಾಂಡ್ಯಗೆ ಒಂದು ಪಂದ್ಯ ನಿಷೇಧ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Share Market Business: ಷೇರು ವಹಿವಾಟು-ದಕ್ಷಿಣ ಭಾರತ ಮಹಿಳೆಯರೇ  ಮುಂಚೂಣಿಯಲ್ಲಿದ್ದಾರೆ!

Share Market Business: ಷೇರು ವಹಿವಾಟು-ದಕ್ಷಿಣ ಭಾರತ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ!

Stock Market- 4ನೇ ಹಂತದ ಮತದಾನ: ಬಾಂಬೆ ಷೇರುಪೇಟೆ ಸೂಚ್ಯಂಕ 750 ಅಂಕ ಕುಸಿತ

Stock Market- 4ನೇ ಹಂತದ ಮತದಾನ: ಬಾಂಬೆ ಷೇರುಪೇಟೆ ಸೂಚ್ಯಂಕ 750 ಅಂಕ ಕುಸಿತ

sensex

Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್‌

Air India: ಪೈಲಟ್‌ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್‌ ಇಂಡಿಯಾ ವಿಮಾನ ಸಂಚಾರ ರದ್ದು

Air India: ಪೈಲಟ್‌ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್‌ ಇಂಡಿಯಾ ವಿಮಾನ ಸಂಚಾರ ರದ್ದು

Rekha Jhunjhunwala lost Rs 800 crore in a single day!

Share Market; ರೇಖಾ ಜುಂಜುನ್‌ವಾಲಾಗೆ ಒಂದೇ ದಿನ 800 ಕೋಟಿ ರೂ. ನಷ್ಟ!

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

Revant Reddy

TG; ತೆಲಂಗಾಣದ ಸಂಕ್ಷಿಪ್ತ ರೂಪ ಇನ್ನು ಮುಂದೆ ‘ಟಿಎಸ್‌’ ಅಲ್ಲ!

Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್‌ ವ್ಯವಹಾರ ಪರಿಶೀಲನೆ

Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್‌ ವ್ಯವಹಾರ ಪರಿಶೀಲನೆ

1-wq-eeqeqwe

Kyrgyzstan:ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ; ಪಾಕಿಸ್ಥಾನದ 3 ವಿದ್ಯಾರ್ಥಿಗಳ ಕೊಲೆ?

BCCI

T20 ವಿಶ್ವಕಪ್‌: ಮೇ 25ರಂದು ಭಾರತದ ಬಹುತೇಕ ಆಟಗಾರರ ಮೊದಲ ತಂಡ ನ್ಯೂಯಾರ್ಕ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.