ಜಲಮೂಲಗಳ ಸಂರಕ್ಷಣೆ: ಪರಿಸರಸ್ನೇಹಿ, ಸುಸ್ಥಿರ ಮಾರ್ಗೋಪಾಯಗಳಿಗೆ ಇರಲಿ ಆದ್ಯತೆ


Team Udayavani, Mar 22, 2022, 11:40 AM IST

ಜಲಮೂಲಗಳ ಸಂರಕ್ಷಣೆ: ಪರಿಸರಸ್ನೇಹಿ, ಸುಸ್ಥಿರ ಮಾರ್ಗೋಪಾಯಗಳಿಗೆ ಇರಲಿ ಆದ್ಯತೆ

ನೀರಿನ ಮಹತ್ವ, ಮತ್ತದರ ಸಂರಕ್ಷಣೆಯತ್ತ ವಿಶ್ವದ ಜನರ ಗಮನ ಸೆಳೆಯುವ ಉದ್ದೇಶದಿಂದ ಪ್ರತೀ ವರ್ಷ ವಿಶ್ವ ಜಲ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅಂತರ್ಜಲ ವೃದ್ಧಿಯ ಆಶಯದೊಂದಿಗೆ ಈ ಬಾರಿಯ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತಿದೆ. ಭೂಮಿಯ ಮೇಲಣ ಸಕಲ ಜೀವರಾಶಿಯ ಪ್ರಾಣ ನೀರನ್ನೇ ಅವಲಂಬಿಸಿದೆ. ವರ್ಷಗಳುರುಳಿದಂತೆಯೇ ವಿಶ್ವದೆಲ್ಲೆಡೆ ನೀರಿನ ಅಭಾವ ಸಾರ್ವತ್ರಿಕವಾಗುತ್ತಿದೆ. ವಿವಿಧ ಕಾರಣಗಳಿಂದಾಗಿ ಅಂತರ್ಜಲ ಕಡಿಮೆಯಾಗುತ್ತಿದೆ. ಅಂತರ್ಜಲವನ್ನು ಹೆಚ್ಚಿಸದೇ ಹೋದಲ್ಲಿ ಇಡೀ ಭೂಮಿ ಬರಡಾಗಲಿದೆ. ಹೀಗಾಗಿ ಸಾಂಪ್ರದಾಯಿಕ ಜಲಮೂಲಗಳ ಸಂರಕ್ಷಣೆ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರದ ಯೋಚನಾಶೈಲಿ ಮತ್ತು ಆದ್ಯತೆ ಹಾಗೂ ಸಾರ್ವಜನಿಕರ ಹೊಣೆಗಾರಿಕೆಯ ಕುರಿತಂತೆ ಈ ಲೇಖನದಲ್ಲಿ ಬೆಳಕು ಚೆಲ್ಲಲಾಗಿದೆ.

ಜಾಗತಿಕ ತಾಪಮಾನ ಏರಿಕೆಯಿಂದ ಜಲಸಂಪ ನ್ಮೂಲದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಸುರಿಯುತ್ತಿರುವ ಮಳೆಯ ಪ್ರಮಾಣದಲ್ಲಿ ಗಣನೀ ಯವಾಗಿ ಏರುಪೇರಾಗುತ್ತಿದೆ. ಹಿಮನದಿಗಳು ಕರಗುವ ವೇಗ ಜಾಸ್ತಿಯಾಗಿದೆ. ಪ್ರಾಕೃತಿಕ ವಿಕೋಪಗಳು ಅಧಿಕ ವಾಗುತ್ತಿರುವುದನ್ನು ನಾವು ಕಾಣಬಹುದು. ಇವೆಲ್ಲದರ ಪರಿಣಾಮವಾಗಿ ನೀರಿನ ಮೂಲಗಳು ಕ್ಷೀಣಿಸುತ್ತಿದ್ದು ಜಗತ್ತಿಗೆ ಬಲುದೊಡ್ಡ ಸವಾಲಾಗಿ ಪರಿಣಮಿಸಿದೆ.

ಇಂದಿನ ಜಲಸಂಕಷ್ಟಕ್ಕೆ ಹಲವು ಕಾರಣಗಳಿವೆ. ಮುಖ್ಯವಾಗಿ ನೀರಿಗಾಗಿ ನಾವು ಸರಕಾರದ ಕೇಂದ್ರೀಕೃತ ವ್ಯವಸ್ಥೆಯನ್ನು ಅವಲಂಬಿಸಿರುವುದು. ಅರಣ್ಯ ನಾಶದಿಂದ ಭೂಸವಕಳಿ ಉಂಟಾಗಿ ಜಲ ಸಂರಕ್ಷಣೆಯ ಸಾಂಪ್ರದಾಯಿಕ ರಚನೆಗಳು ತಮ್ಮ ಮಹತ್ವವನ್ನು ಕಳೆದುಕೊಂಡವು. ಬೃಹತ್‌ ಅಣೆಕಟ್ಟುಗಳ ನಿರ್ಮಾಣ, ಬಜೆಟ್‌ನಲ್ಲಿ ಕುಡಿಯುವ ನೀರು ಮತ್ತು ನೀರಾವರಿಗಾಗಿ ಕೋಟ್ಯಂತರ ರೂ.ಗಳನ್ನು ಮೀಸಲಿಟ್ಟು ಯೋಜನೆಗಳನ್ನು ಘೋಷಿಸಿದಾಕ್ಷಣ ನೀರಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಲಭಿಸುತ್ತದೆ ಎಂದು ಆಡಳಿತ ವ್ಯವಸ್ಥೆ ತಿಳಿದಿರುವುದು ನೀರಿನ ಸಮಸ್ಯೆ ಬಿಗಡಾಯಿಸಲು ಬಲುಮುಖ್ಯ ಕಾರಣವಾಗಿದೆ. ಇವೆಲ್ಲದರ ಪರಿಣಾಮವಾಗಿ ನೀರಿನ ಸಮಸ್ಯೆಗೆ ಪರಿಸರ ಸ್ನೇಹಿ, ಸುಸ್ಥಿರ ಪರಿಹಾರಗಳ ಬಗ್ಗೆ ದೂರಗಾಮಿ ಯೋಜನೆಗಳನ್ನೇ ಮರೆತುಬಿಟ್ಟಿದ್ದೇವೆ. ಕೇವಲ ತಾತ್ಕಾಲಿಕ ಪರಿಹಾರಗಳನ್ನು ಮಾತ್ರ ಹುಡುಕುವ, ಯೋಚಿಸುವ ಮನೋಭಾವ ದೂರವಾಗಬೇಕು. ಪರಿಸರದ ಜತೆಜತೆಗೆ ನಾವು ಸಾಗುವಂತೆ ನೀರಿನ ಮೂಲಗಳನ್ನು ಉಳಿಸಿಕೊಳ್ಳಬೇಕು. ನೀರಿಲ್ಲದೇ ನಾವ್ಯಾರು ಇರಲು ಸಾಧ್ಯವೇ ಇಲ್ಲ ಎಂಬ ಕಟುಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು.

ಜಾಗೃತಿಯ ಮೊದಲ ಹಂತ
ನೀರಿನ ಬಳಕೆ ಮತ್ತು ಉಳಿಕೆ ಬಗ್ಗೆ ಜಾಗೃತಿ ಮನೆಯಿಂದಲೇ ಪ್ರಾರಂಭವಾಗಬೇಕು. ಮನೆಯ ಪ್ರತಿಯೊಂದು ಕೆಲಸದಲ್ಲೂ ಮಕ್ಕಳಿಗೆ ನೀರಿನ ಪಾಠ ಹೇಳಿಕೊಡಬೇಕು. ನೀರಿನ ಮಿತ ಬಳಕೆಯಲ್ಲಿ ಹಿರಿಯರ ಆಚರಣೆ ಕಿರಿಯರಿಗೆ ಅನುಸರಣೀಯವಾಗಿರಬೇಕು. ಸಾಧ್ಯವಾದಲ್ಲೆಲ್ಲ ನೀರಿನ ಕಡಿಮೆ ಬಳಕೆ, ಮರುಬಳಕೆಗೆ ಸದಾ ವಿಶೇಷ ಗಮನ ನೀಡಬೇಕು. “ನಾವು ಬಳಸುವ ಹನಿ ಹನಿ ನೀರು ಪ್ರಕೃತಿಯ ನಿರಂತರ ದುಡಿಮೆಯ ಬೆವರು’ ಎಂಬ ಸತ್ಯದ ಅರಿವನ್ನು ಮಕ್ಕಳಿಗೆ ಮನೆಯಲ್ಲಿ ತಿಳಿ ಹೇಳಬೇಕು. ಮುಂದೆ ಮಕ್ಕಳು ದೊಡ್ಡವರಾಗಿ ಅದನ್ನು ಆಚರಣೆಗೆ ತರಬಲ್ಲರು. ಜಲ ಸಂರಕ್ಷಣೆ, ಜಲಮೂಲಗಳ ರಕ್ಷಣೆ, ನೀರಿನ ಮಿತ ಬಳಕೆಯ ಕುರಿತು ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ರಸಪ್ರಶ್ನೆ, ಚಿತ್ರಕಲೆ, ಜಲಜಾಗೃತಿ ಜಾಥಾ, ಅಧ್ಯಯನ ಪ್ರವಾಸ, ಕೆರೆ ವೀಕ್ಷಣೆ ಮೊದಲಾದ ಅಭಿಯಾನಗಳ ಮೂಲಕ ಮಕ್ಕಳಲ್ಲಿ ಜಲ ಸಂರಕ್ಷಣೆಯ ಅರಿವು ಸದಾ ಇರುವಂತೆ ಮಾಡಬೇಕು.

ನೀರಿನ ಮೂಲಗಳು ಉಳಿಯಲಿ
ಸಾರ್ವಜನಿಕ ಸಹಭಾಗಿತ್ವದಲ್ಲಿ ಜಲಸಂಪ ನ್ಮೂಲವನ್ನು ಪುನರುಜ್ಜೀವನಗೊಳಿಸಿದ ಸಾಕಷ್ಟು ಉದಾಹರಣೆಗಳು ಕರಾವಳಿ ಜಿಲ್ಲೆಗಳು ಮಾತ್ರವಲ್ಲದೆ ರಾಜ್ಯದ ಹಲವು ಭಾಗಗಳಲ್ಲಿ ಇವೆ. ಹಾಲಿ ಇರುವ ಕೆರೆಗಳ ಪುನರುಜ್ಜಿವನ, ಕಲ್ಯಾಣಿಗಳ ಸ್ವಚ್ಛತೆ, ಜಲ ಮೂಲಗಳಾದ ಬಾವಿ, ಕೆರೆ, ಮದಗದ ಹೂಳೆತ್ತುವಿಕೆ, ಜಲ ಮರುಪೂರಣ, ಹಳ್ಳ, ತೊರೆಗಳಿಗೆ ತಾತ್ಕಾಲಿಕ ಕಟ್ಟಗಳ ನಿರ್ಮಾಣ… ಹೀಗೆ ನಾನಾ ವಿಧದ ಕಾರ್ಯ ಗಳು ಸರಕಾರದ ವಿವಿಧ ಇಲಾಖೆಗಳು, ಸಾರ್ವಜನಿಕ ಸಂಘ, ಸಂಸ್ಥೆಗಳ ಸಹಭಾಗಿತ್ವದಿಂದ ನಡೆದಿವೆ. ಈ ಎಲ್ಲ ಕಾಮಗಾರಿಗಳಿಂದಾಗಿ ಸ್ಥಳೀಯ ಪರಿಸರದ ನೀರಿನ ಅಭಾವವನ್ನು ನೀಗಿದ್ದೇ ಅಲ್ಲದೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗಿದೆ.

ಸೇವಾ ಕಾರ್ಯ ನಿರತರು, ಗ್ರಾಮ ವಿಕಾಸದ ಕಾರ್ಯಕರ್ತರು, ಸಂಘ-ಸಂಸ್ಥೆಗಳು, ದೇವಸ್ಥಾನ, ಭಜನ ಮಂದಿರಗಳ ಕಾರ್ಯಕರ್ತರು, ಕಾಲೇಜು ಗಳ ಎನ್‌ಸಿಸಿ, ಎನ್‌ಎಸ್‌ಎಸ್‌ ಘಟಕದ ವಿದ್ಯಾರ್ಥಿ ಗಳು, ಯುವಕ-ಯುವತಿ ಮಂಡಲದ ಸದಸ್ಯರು ಸಕ್ರಿ ಯವಾಗಿ ಜಲಸಂರಕ್ಷಣೆಯ ಇಂತಹ ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಮ್ಮಲ್ಲಿರುವ ನೀರಿನ ಮೂಲಗಳನ್ನು ಸಂರಕ್ಷಿಸುವ ಜತೆಗೆ ಅದನ್ನು ಉಳಿಸಿಕೊಂಡು ಹೋಗಲು ಸಾಧ್ಯವಿದೆ. ಒಮ್ಮೆ ಪುನರುಜ್ಜೀವನಗೊಳಿಸಿದ ಕೆರೆ, ಮದಗ, ಕಲ್ಯಾಣಿ, ತೊರೆ ಇತ್ಯಾದಿಗಳ ಸಮರ್ಪಕ ನಿರ್ವಹಣೆಯೂ ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಮರೆಯಬಾರದು.

ನಮ್ಮ ಗ್ರಾಮದ, ಊರಿನ, ಕೇರಿಯಲ್ಲಿರುವ ಜಲಮೂಲಗಳ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಬೇಕು. ಸಣ್ಣ ಮತ್ತು ದೊಡ್ಡ ಜಲ ಮೂಲಗಳು ಎಷ್ಟಿವೆ?, ಅವುಗಳಲ್ಲಿ ಯಾವುದು, ಯಾವ ಸ್ಥಿತಿಯಲ್ಲಿದೆ. ಸರಕಾರದಿಂದ ಪುನಶ್ಚೇತನಗೊಂಡಿರುವ ಕೆರೆಗಳು ಮತ್ತು ಪುನಶ್ಚೇತನವಾಗಬೇಕಾದ ನೀರಿನ ಮೂಲಗಳನ್ನು ಪತ್ತೆ ಮಾಡಬೇಕು. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನೀರು ಪೂರೈಕೆ ವ್ಯವಸ್ಥೆಯಲ್ಲಿನ ಸೋರಿಕೆಯನ್ನು ತಡೆಗಟ್ಟಲು ಅಗತ್ಯ ಕ್ರಮಕೈಗೊಳ್ಳಬೇಕು. ಮನೆಯ ಅಂಗಳ, ಶಾಲೆಯ ಜಗಲಿ ಸ್ವಚ್ಛತೆ, ಕಾರು, ಬೈಕ್‌ ಇತ್ಯಾದಿ ತೊಳೆಯಲು ಕುಡಿಯುವ ನೀರಿನ ಬಳಕೆಯನ್ನು ಕಡಿಮೆ ಮಾಡಬೇಕು. ಸಾರ್ವಜನಿಕ ಜಲಮೂಲಗಳಾದ ನದಿ-ಕೆರೆಗಳನ್ನು ಮಲಿನಗೊಳಿಸದಿರುವ ಪ್ರಜ್ಞೆಯನ್ನು ಜನರಲ್ಲಿ ಬೆಳೆಸುವುದು ಮತ್ತು ಮಲಿನವಾಗದಂತೆ ತಡೆಯುವ ಸಂಕಲ್ಪವನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕು. ಪಾತ್ರೆ, ಬಟ್ಟೆಬರೆಗಳನ್ನು, ತೊಳೆಯು ವಾಗ ನೀರಿನ ಬಳಕೆಯ ಮೇಲೆ ನಿಗಾ ವಹಿಸಬೇಕು. ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ ಸ್ನಾನ ಮಾಡುವಾಗ ನೀರಿನ ಮಿತ ಬಳಕೆಯತ್ತ ಗಮನಹರಿಸಬೇಕು ಮತ್ತು ಈ ನೀರಿನ ಮರು ಬಳಕೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ಮನೆಯ ಸುತ್ತಲಿನ ಕೈತೋಟ, ಗಿಡ, ಮರಗಳಿಗೆ ಮರುಬಳಕೆಯ ನೀರು ಸಿಗುವ ವ್ಯವಸ್ಥೆ ರೂಪಿಸಬೇಕು.

ಸಾರ್ವಜನಿಕರ ಪಾತ್ರ
ಜಲ ಸಂರಕ್ಷಣೆ, ಜಲಮೂಲಗಳ ರಕ್ಷಣೆಯ ನಿಟ್ಟಿ ನಲ್ಲಿ ಸಾರ್ವಜನಿಕರ ಪಾತ್ರ ಅತೀ ಮಹತ್ವದ್ದಾಗಿದೆ. ಇಂಗುಗುಂಡಿ ರಚನೆ, ಛಾವಣಿ ನೀರಿನ ಸಂಗ್ರಹ, ತೆರೆದ ಮತ್ತು ಕೊಳವೆಬಾವಿಗಳಿಗೆ ಜಲಮರುಪೂರಣ ಮಾಡುವುದು, ಮನೆ, ಶಾಲೆ, ದೇವಸ್ಥಾನಗಳಲ್ಲಿ ಮಳೆನೀರು ಕೊಯ್ಲಿನ ಮಾದರಿ ತಯಾರು ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಹಾಳಾದ ತೆರೆದ ಬಾವಿ ಮತ್ತು ಕೊಳವೆ ಬಾವಿಗಳ ದುರಸ್ತಿ ಮಾಡಿಸಿ, ಜಲ ಮರುಪೂರಣ ಮಾಡಿ, ಅವುಗಳು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುವಂತೆ ಮಾಡುವುದು, ಊರಿನ ಜಲಮೂಲಗಳ ಅಧ್ಯಯನ ನಡೆಸಿ ಸಾಮೂಹಿಕ ಪ್ರಯತ್ನಗಳ ಮೂಲಕ ಕೆರೆ-ಕಟ್ಟೆ, ಕಲ್ಯಾಣಿಗಳನ್ನು ಸಂರಕ್ಷಿಸುವ ಕೆಲಸ ಸಾರ್ವಜನಿಕರಿಂದಾಗಬೇಕು.
ಕೃಷಿ ಮತ್ತು ದೈನಂದಿನ ಜೀವನದಲ್ಲಿ ಕಡಿಮೆ ರಾಸಾಯನಿಕಗಳ ಬಳಕೆ, ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಲಭ್ಯವಿರುವ ನೀರಿನ ಸದುಪಯೋಗ, ಲಭ್ಯವಿರುವ ಜಾಗಗಳಲ್ಲಿ ಗಿಡಗಳನ್ನು ನೆಟ್ಟು ಅರಣ್ಯ ಬೆಳೆಸಬೇಕು. ಮಳೆ ನೀರು ನದಿ ಅಥವಾ ಸಮುದ್ರಕ್ಕೆ ಸೇರುವುದನ್ನು ಪೂರ್ಣ ಪ್ರಮಾಣದಲ್ಲಿ ತಡೆಯಲು ಸಾಧ್ಯವಾಗದಿದ್ದರೂ ಅಲ್ಲಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿ, ನೀರನ್ನು ಭೂಮಿಗೆ ಇಂಗಿಸುವ ಮೂಲಕ ಅಂತರ್ಜಲದ ಮಟ್ಟ ಹೆಚ್ಚಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ನೀರಿನ ಉಳಿಕೆ, ನೀರಿನ ಗಳಿಕೆ ಎರಡೂ ಆಗಬೇಕು. ನೀರು ಉಳಿದರೇ ನಾವು ಉಳಿಯುತ್ತೇವೆ, ನಮ್ಮ ಪೀಳಿಗೆಯೂ ಉಳಿಯುತ್ತದೆ.

– ಪ್ರೊ| ಕೆ. ನಾರಾಯಣ ಶೆಣೈ, ಮಣಿಪಾಲ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.