ನೀರಿದ್ದರೂ ಬಳಸಿಕೊಳ್ಳಲಾಗದ ತ್ರಿಶಂಕು ಸ್ಥಿತಿ

10 ದಿನದಿಂದ ನೀರಿಗೆ ಕಾದು ಕುಳಿತ ಜನತೆ

Team Udayavani, Apr 17, 2022, 10:35 AM IST

6

ನವಲಗುಂದ: ಪಟ್ಟಣದಲ್ಲಿ ಕುಡಿಯುವ ನೀರು ಬರುತ್ತದೆಯೋ ಇಲ್ಲವೋ ಎಂದು ಜನರು ಚಾತಕ ಪಕ್ಷಿಯಂತೆ ಕಾದು ಕುಳಿತುಕೊಳ್ಳುವಂತ ಪರಿಸ್ಥಿತಿ ಉಂಟಾಗಿದೆ.

ಹತ್ತು ದಿನವಾದರೂ ಜವಳೇ ಪೇಟೆ, ಕುಂಬಾರ ಓಣಿ, ದೇಸಾಯಿ ಪೇಟೆ, ಸಿದ್ದಾಪುರ ಓಣಿ, ತೆಗ್ಗಿನಕೇರಿ ಓಣಿ, ಆನೆಗುಂದಿ ಪ್ಲಾಟ್‌, ನೀರಾವರಿ ಕಾಲೋನಿ, ಆರ್ಮಿ ಕಾಲೋನಿ, ಮುದಿಗೌಡರ ಪ್ಲಾಟ್‌ ಸೇರಿದಂತೆ ಹಲವಾರು ವಾರ್ಡ್‌ಗಳಲ್ಲಿ ನಲ್ಲಿಯ ನೀರು ಬರದೆ ಪುರಸಭೆಯವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸಮಸ್ಯೆಯ ಮೂಲ: ಪಟ್ಟಣದ ಹೃದಯ ಭಾಗದಲ್ಲಿರುವ ನೀಲಮ್ಮನ ಕೆರೆಯಲ್ಲಿ ನೀರಿಲ್ಲ. ಪಟ್ಟಣದ ಎರಡು ಶುದ್ಧೀಕರಣ ಘಟಕ ಇದ್ದರೂ ಅದರಲ್ಲಿಯೂ ನೀರು ಬರುತ್ತಿಲ್ಲ. ಇತ್ತೀಚೆಗೆ ಮಳೆ, ಗಾಳಿ, ಸಿಡಿಲಿನಿಂದ ಪಟ್ಟಣಕ್ಕೆ ನೀರು ಪೂರೈಸುವ ಚನ್ನಮ್ಮನ ಜಲಾಗಾರದ ವಿದ್ಯುತ್‌ ಪರಿವರ್ತಕ ಸುಟ್ಟುಹೋಗಿದ್ದರಿಂದ ಸಾರ್ವಜನಿಕರಿಗೆ ನೀರು ಬಂಗಾರವಾಗಿದೆ. 10 ದಿನಗಳಾದರೂ ಕೆಲವು ವಾರ್ಡ್‌ಗಳಿಗೆ ನೀರು ಪೂರೈಕೆಯಾಗದ್ದರಿಂದ ಐದು ಕಿಮೀ ದೂರದ ಚನ್ನಮ್ಮನ ಜಲಾಶಯಕ್ಕೇ ಹೋಗಿ ನೀರು ತರುವಂತಾಗಿದೆ. ಇನ್ನು ಹೊಸ ವಿದ್ಯುತ್‌ ಪರಿವರ್ತಕ ಅಳವಡಿಸುವವರೆಗೂ ನೀರಿನ ಸಮಸ್ಯೆ ಮಾತ್ರ ತಪ್ಪಿದ್ದಲ್ಲ.

ಇಚ್ಛಾಶಕ್ತಿ ಕೊರತೆ: ಪುರಸಭೆಯಲ್ಲಿ ಅನುದಾನಕ್ಕೇನೂ ಕಡಿಮೆ ಇಲ್ಲ. ನೀರು ಪೂರೈಸುವ ಚನ್ನಮ್ಮನ ಜಲಾಗಾರಕ್ಕೆ ಇನ್ನೂ ಒಂದು ವಿದ್ಯುತ್‌ ಪರಿವರ್ತಕ ಕಾಯ್ದಿರಿಸಿದ್ದರೆ ಈ ರೀತಿ ಅವಘಡ ಸಂಭವಿಸಿದಾಗ ತಕ್ಷಣ ಬದಲಾಯಿಸಿ ಪಟ್ಟಣದ ವಾರ್ಡ್‌ಗಳಿಗೆ ನೀರನ್ನು ಪೂರೈಸಬಹುದಾಗಿತ್ತು. ಆದರೆ ಜನಪ್ರತಿನಿಧಿಗಳು-ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಜನರು ನೀರಿಗಾಗಿ ಪರದಾಡುವಂತಾಗಿದೆ. ನೀರಿದ್ದರೂ ಸರಿಯಾಗಿ ಬಳಸಿಕೊಳ್ಳದಂತಾಗಿದೆ.

ಜಲಾಗಾರಕ್ಕೆ ಮುಗಿಬಿದ್ದ ಜನತೆ: ಸೋಮವಾರದವರೆಗೆ ನೀರು ಬರುವುದಿಲ್ಲವೆಂಬ ವಿಷಯ ತಿಳಿದ ಸಾರ್ವಜನಿಕರು ನೀರಿಗಾಗಿ ದ್ವಿಚಕ್ರವಾಹನ, ಟಾಟಾ ಏಸ್‌, ಟ್ರ್ಯಾಕ್ಟರ್‌, ಆಟೋ ರಿಕ್ಷಾಗಳೊಂದಿಗೆ ಚನ್ನಮ್ಮನ ಜಲಾಗಾರ ಬಳಿ ಜಮಾಯಿಸಿದ್ದರು.

ಜನಪರ ಕಾಳಜಿ ಇದೆಯೇ? ಚನ್ನಮ್ಮನ ಜಲಾಶಯದಿಂದ ಪಟ್ಟಣಕ್ಕೆ ನೀರು ಪೂರೈಸಲು ಅಗತ್ಯವಿರುವ ಅವಶ್ಯಕ ಉಪಕರಣಗಳ ಕೊರತೆಯಿಂದ ಇವತ್ತು ಸಾರ್ವಜನಿಕರಿಗೆ ಬರೆ ಬೀಳುತ್ತಿದೆ. ಜ್ವಲಂತ ಸಮಸ್ಯೆಯತ್ತ ಅದೆಷ್ಟು ಸಲ ಗಮನ ಸೆಳೆದರೂ ಆಡಳಿತ ವ್ಯವಸ್ಥೆ ಜಿಡ್ಡುಗಟ್ಟಿದೆ. ಅಧ್ಯಕ್ಷ-ಉಪಾಧ್ಯಕ್ಷರ ರಾಜೀನಾಮೆಯಿಂದ ಅಧಿಕಾರ ಅಧಿಕಾರಗಳ ಕೈಯಲ್ಲಿದೆ. ಸಂಬಂಧಪಟ್ಟ ಅಧಿ ಕಾರಿಗಳಿಗೆ ವಿಚಾರಿಸಿದರೆ ಟಿಸಿ ಸುಟ್ಟು ಹೋದರೆ ನಾವೇನು ಮಾಡಬೇಕೆಂಬ ಹಾರಿಕೆ ಉತ್ತರ ಕೇಳಿಬರುತ್ತಿದೆ. ಇನ್ನೂ ಜನಪ್ರತಿನಿ ಧಿಗಳು ಅಧ್ಯಕ್ಷ-ಉಪಾಧ್ಯಕ್ಷರ ರಾಜೀನಾಮೆಗಾಗಿ ಪ್ರತಿಭಟನೆ ಮಾಡಿದಂತೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೂ ಪ್ರತಿಭಟನೆ ಮಾಡುವಂತಾಗಲಿ ಎಂಬುದು ಪಟ್ಟಣದ ಜನರ ಅಭಿಪ್ರಾಯ.

ಪ್ರತಿ ಸಲ ಏನಾದರೊಂದು ನೆಪ ಹೇಳುತ್ತಾರೆ. ಬಳಕೆ ಮಾಡಲು ನೀಲಮ್ಮನ ಕೆರೆಯಲ್ಲೂ ನೀರಿಲ್ಲ. ಪರಿಸ್ಥಿತಿ ಹೀಗಿರುವಾಗ ನೀರು ಎಲ್ಲಿದೆಯೋ ಅಲ್ಲಿಗಾದರೂ ಹೋಗಿ ತರಬೇಕು. ಇನ್ನು ನಮ್ಮ ಪರಿಸ್ಥಿತಿ ಎಲ್ಲಿಗೆ ಬರುತ್ತದೆ ನೋಡೋಣ. –ಮಂಜು ಸುಬೇದಾರ, ಪಟ್ಟಣದ ನಿವಾಸಿ

ವಿದ್ಯುತ್‌ ಪರಿವರ್ತಕ ಹಾಳಾಗಿದೆ. ಸೋಮವಾರದವರೆಗೆ ನೀರು ಬರುವುದಿಲ್ಲ ಎಂದು ಹೇಳಿದ್ದಾರೆ. ಎರಡು ಡ್ರಮ್‌ ತುಂಬುಕೊಂಡು ಹೋಗಿ ಮನೆಯಲ್ಲಿಡಬೇಕಿದೆ. –ನಿಂಗನಗೌಡ ಪಾಟೀಲ, ಪಟ್ಟಣದ ನಿವಾಸಿ

ಮಳೆ, ಗಾಳಿ, ಸಿಡಿಲಿನಿಂದ ಚನ್ನಮ್ಮ ಜಲಾಗಾರದಲ್ಲಿರುವ ವಿದ್ಯುತ್‌ ಪರಿವರ್ತಕ ಸುಟ್ಟಿರುವುದರಿಂದ ನೀರು ಸರಬರಾಜಿಗೆ ತೊಂದರೆಯಾಗಿದೆ. ಪರಿವರ್ತಕ ಅಳವಡಿಸಲಾಗಿದೆ.  -ವೀರಣ್ಣ ಹಸಬಿ, ಪುರಸಭೆ ಮುಖ್ಯಾಧಿಕಾರಿ                       

  -ಪುಂಡಲೀಕ ಮುಧೋಳೆ

ಟಾಪ್ ನ್ಯೂಸ್

ಜೂನ್‌ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

ಜೂನ್‌ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

Amit Shah

NDAಗೆ ಈಗಾಗಲೇ 270 ಕ್ಷೇತ್ರಗಳಲ್ಲಿ ಜಯ ಸಿಕ್ಕಿದೆ: ಅಮಿತ್‌ ಶಾ

Prajwal ಬಂಧನಕ್ಕೆ ರೆಡ್‌ ಕಾರ್ನರ್‌ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ

Prajwal ಬಂಧನಕ್ಕೆ ರೆಡ್‌ ಕಾರ್ನರ್‌ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ

IMD

47.8 degrees; ಉತ್ತರ ಭಾರತದ ಹಲವೆಡೆ ಶಾಖದ ಅಲೆ ಅಲರ್ಟ್‌!

trai

TRAI ವ್ಯಾಪ್ತಿಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಎಕ್ಸ್‌?

1-wqeewqewq

UP ರ್‍ಯಾಲಿಯಲ್ಲಿ ಗಲಾಟೆ: ಮಾತಾಡದೆ ರಾಹುಲ್‌, ಅಖಿಲೇಶ್‌ ವಾಪಸ್‌!

Modi (2)

Interview; ಈಗ ಜಾಗತಿಕ ಗುಣಮಟ್ಟದ ಸಂಪುಟ ಟಿಪ್ಪಣಿ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqqewqeq

Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ

ರಾಜ್ಯ ಯಾವ ದಿಕ್ಕಿನತ್ತ ಸಾಗುತ್ತಿದೆ…: ಪ್ರದೀಪ ಶೆಟ್ಟರ

Hubli; ರಾಜ್ಯ ಯಾವ ದಿಕ್ಕಿನತ್ತ ಸಾಗುತ್ತಿದೆ…: ಪ್ರದೀಪ ಶೆಟ್ಟರ

Hubli ಘಟನೆಗಳಿಗೆ ಪೋಲಿಸ್ ಇಲಾಖೆಯ ಭ್ರಷ್ಟಾಚಾರವೇ ಕಾರಣ: ಅರವಿಂದ ಬೆಲ್ಲದ್

Hubli ಘಟನೆಗಳಿಗೆ ಪೊಲೀಸ್ ಇಲಾಖೆಯ ಭ್ರಷ್ಟಾಚಾರವೇ ಕಾರಣ: ಅರವಿಂದ ಬೆಲ್ಲದ್

abh

Hubli; ಫಿನಾಯಿಲ್ ಸೇವಿಸಿದ ಅಂಜಲಿ ಅಂಬಿಗೇರ ಸಹೋದರಿ

police crime

Hubli; ನೇಹಾ & ಅಂಜಲಿ ಹತ್ಯೆ ಪ್ರಕರಣ: ಡಿಸಿಪಿ ತಲೆದಂಡ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ಜೂನ್‌ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

ಜೂನ್‌ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

Amit Shah

NDAಗೆ ಈಗಾಗಲೇ 270 ಕ್ಷೇತ್ರಗಳಲ್ಲಿ ಜಯ ಸಿಕ್ಕಿದೆ: ಅಮಿತ್‌ ಶಾ

Prajwal ಬಂಧನಕ್ಕೆ ರೆಡ್‌ ಕಾರ್ನರ್‌ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ

Prajwal ಬಂಧನಕ್ಕೆ ರೆಡ್‌ ಕಾರ್ನರ್‌ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ

IMD

47.8 degrees; ಉತ್ತರ ಭಾರತದ ಹಲವೆಡೆ ಶಾಖದ ಅಲೆ ಅಲರ್ಟ್‌!

trai

TRAI ವ್ಯಾಪ್ತಿಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಎಕ್ಸ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.