ಶಾಸಕ ಕಾಮತ್ ಭೂಮಿಪೂಜೆ
ಕೇಂದ್ರ ಮೈದಾನ ಜಲಸಂಗ್ರಹಾಗಾರ ನಿರ್ಮಾಣ
Team Udayavani, Apr 17, 2022, 12:51 PM IST
ಸ್ಟೇಟ್ಬ್ಯಾಂಕ್: ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರತಿ ಮನೆಗೂ ನೀರು ಒದಗಿಸುವ ಜಲಸಿರಿ ಯೋಜನೆಯ ಭಾಗವಾಗಿ ಕೇಂದ್ರ ಮೈದಾನದ ಬಳಿ 5.75 ಕೋಟಿ ರೂ. ವೆಚ್ಚದ ಜಲಸಂಗ್ರಹಾಗಾರ ನಿರ್ಮಾಣಕ್ಕೆ ಶಾಸಕ ವೇದವ್ಯಾಸ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಬಳಿಕ ಅವರು ಮಾತನಾಡಿ, ಪಾಲಿಕೆಯ ಕೋರ್ಟ್ ವಾರ್ಡ್, ಪೋರ್ಟ್ ವಾರ್ಡ್, ಕಂಟೋನ್ಮೆಂಟ್ ವಾರ್ಡ್ ಹಾಗೂ ಮಿಲಾಗ್ರಿಸ್ ವಾರ್ಡಿನ ಮನೆಗಳಿಗೆ ನೀರು ಸರಬರಾಜು ಮಾಡಲು 25 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ಜಲಸಂಗ್ರಹಾಗಾರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 5.75 ಕೋಟಿ ರೂ. ವೆಚ್ಚದಲ್ಲಿ ಜಲಸಂಗ್ರಹಾಗಾರ ನಿರ್ಮಿಸಲಾಗುತ್ತಿದ್ದು, ಈ ಭಾಗದ ಎಲ್ಲ ಮನೆಗಳಿಗೂ ಇಲ್ಲಿಂದ ಕುಡಿಯುವ ನೀರು ಪೂರೈಸಲಾಗುತ್ತದೆ ಎಂದರು.
ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಮನಪಾ ಸದಸ್ಯ ಕಿಶೋರ್ ಕೊಟ್ಟಾರಿ, ಪ್ರಮುಖರಾದ ಅನಿಲ್, ವಸಂತ್ ಜೆ. ಪೂಜಾರಿ, ನಿತಿನ್ ಕಾಮತ್, ರಾಜೇಂದ್ರ, ಅಮರ್ ಪಾಂಡೇಶ್ವರ, ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.