ಪ್ರವಾಸೋದ್ಯಮ ಚಿವುಟುತ್ತಿರುವ ನೌಕರಶಾಹಿ

ಮದುವೆಯ ಮೊದಲಿನ ಚಿತ್ರೀಕರಣಕ್ಕೂ ಸರ್ಕಾರದ ನಿರ್ಬಂಧ

Team Udayavani, Apr 21, 2022, 9:44 AM IST

2

ಹೊನ್ನಾವರ: ನೆರೆಯ ಕೇರಳ, ಗೋವಾಗಳಲ್ಲಿ ಮಾತ್ರವಲ್ಲ ದಕ್ಷಿಣಕನ್ನಡದಲ್ಲೂ ಪ್ರವಾಸೋದ್ಯಮ ಅಪೂರ್ವ ಬೆಳವಣಿಗೆ ಕಂಡಿರುವಾಗ ಜಿಲ್ಲೆಯಲ್ಲಿ ಇತ್ತೀಚಿನ ವರ್ಷ ಚಿಗುರುತ್ತಿರುವ ಪ್ರವಾಸೋದ್ಯಮವನ್ನು ಚಿವುಟುವ ಕೆಲಸ ನೌಕರಶಾಹಿಯಿಂದ ನಡೆಯುತ್ತಿದೆ.

25 ಇಲಾಖೆಗಳ ಎನ್‌ಒಸಿ ನೆಪವೊಡ್ಡಲಾಗುತ್ತಿದೆ. ಜಲಸಾಹಸ ಕ್ರೀಡೆಯಲ್ಲಿ ಒಂದು ಅಪಘಾತ ನಡೆದರೆ ಆ ಕ್ರೀಡೆಯನ್ನೇ ನಿಷೇಧಿಸುವ ಕೆಲಸ ಕಾಳಿದಂಡೆಯಲ್ಲಿ ನಡೆದಿದೆ. ತಪ್ಪಿದ್ದರೆ ತಿದ್ದಿ, ದಂಡ ಹಾಕಿ, ನೂರಾರು ಜನರ ಜೀವನಾಧಾರ ಆಗುವ ಪ್ರವಾಸೋದ್ಯಮದ ಚಿಗುರನ್ನು ಚಿವುಟುವುದನ್ನು ನೋಡುತ್ತ ಕುಳಿತುಕೊಂಡಿರುವ ಜನಪ್ರತಿನಿಧಿಗಳು ಎಚ್ಚರಾಗಿ ಎಂದು ಹೇಳಬೇಕಾಗಿದೆ.

ಮೊಸಳೆ ಪಾರ್ಕ್‌ನಿಂದ ಒಂದು ಮೊಸಳೆ ನಗರಕ್ಕೆ ಬಂದರೆ ಪಾರ್ಕ್‌ನ ಅಗತ್ಯವನ್ನೇ ಪ್ರಶ್ನಿಸುವುದು ಸರಿಯಲ್ಲ. ಮುರ್ಡೇಶ್ವರದಲ್ಲಿ ಸ್ಕೂಬಾ ಡೈವಿಂಗ್‌ ನಡೆದಿದೆ. ಜಲಸಾಹಸ ಕ್ರೀಡೆಗಳು ಎಷ್ಟೇ ಸುರಕ್ಷಿತ ಕ್ರಮಕೈಗೊಂಡರೂ ಅಪಾಯದ ಸಾಧ್ಯತೆ ಇದ್ದೇ ಇರುತ್ತದೆ. ಇದು ಗೊತ್ತಿದ್ದೇ ಪ್ರವಾಸಿ ಯುವಕರು ಸಾಹಸಕ್ಕಿಳಿಯುತ್ತಾರೆ.

ದಾಂಡೇಲಿ ಘಟನೆ ನಂತರ ಶರಾವತಿಯಲ್ಲಿ ನಡೆಯುವ ಮದುವೆಯ ಮೊದಲಿನ ಚಿತ್ರೀಕರಣಕ್ಕೂ ನಿರ್ಬಂಧ ವಿಧಿಸಲಾಗಿದೆ. ನೆರೆ ಬಂದ ಕಾಲದಲ್ಲೂ ಯಾರ ಜೀವಕ್ಕೂ ಅಪಾಯ ಮಾಡದ ಶರಾವತಿ ಈಗ ಪ್ರಶಾಂತವಾಗಿ ಹರಿಯುತ್ತಿರುವಾಗ ಅಪಾಯ ಮಾಡುವುದು ಸಾಧ್ಯವೇ? ಏಕಾಏಕಿ ಪ್ರಿ ವೆಡ್ಡಿಂಗ್‌ ಶೂಟಿಂಗ್‌ನ್ನು ನಿಲ್ಲಿಸಿದ ಕಾರಣ ಉತ್ತಮ ವ್ಯವಹಾರ ನಡೆಸುತ್ತಿದ್ದ ಲಾಡ್ಜ್ಗಳು, ಬೋಟ್‌ ಮಾಲಕರು ತೊಂದರೆಗೊಳಗಾಗಿದ್ದಾರೆ.

ಪ್ರವಾಸೋದ್ಯಮ ಇಲಾಖೆಯೇ ನಡೆಸುವ ಬ್ಲೂ ಫ್ಲ್ಯಾಗ್ ಕಿರೀಟ ಹೊತ್ತ ಇಕೋಬೀಚ್‌ ಬಳಿಯ ಕಡಲ ತೀರವೇ ಸುರಕ್ಷತಾ ನಿಯಮ ಪಾಲಿಸದಿರುವಾಗ ಖಾಸಗಿಯವರಿಗೆ ಅಧಿಕಾರಿಗಳು ಅತಿನಿರ್ಬಂಧ ಹೇರುವುದು ಸರಿಯಲ್ಲ. ಏಪ್ರಿಲ್‌, ಮೇ ತಿಂಗಳಲ್ಲಿ ಹೆದ್ದಾರಿ ಮೇಲೆ ಸಂಚಾರ ಎರಡು ಪಟ್ಟು ಹೆಚ್ಚುತ್ತದೆ. ಅಪಘಾತಗಳೂ ಹೆಚ್ಚುತ್ತವೆ. ಅಂದ ಮಾತ್ರಕ್ಕೆ ಹೆದ್ದಾರಿಯನ್ನೇ ಬಂದ್‌ ಮಾಡಲು ಸಾಧ್ಯವಿಲ್ಲ.

ಹಾಗೆಯೇ ಸಾಹಸ ಜಲಕ್ರೀಡೆ ನಡೆಯುವ ಸ್ಥಳಗಳಲ್ಲಿ ಮುರ್ಡೇಶ್ವರ, ಧಾರೇಶ್ವರ, ಗೋಕರ್ಣ, ಕಾರವಾರ ಮೊದಲಾದ ಕಡಲತಡಿಗಳಲ್ಲಿ ನದಿ ಒಳನಾಡುಗಳಲ್ಲಿ ಪ್ರವಾಸಿಗರು ಬಹುಸಂಖ್ಯೆಯಲ್ಲಿ ಓಡಾಡುವುದರಿಂದ ಅವರ ಸುರಕ್ಷತೆಗೆ ಕಾವಲುಗಾರರನ್ನು ಪ್ರವಾಸೋದ್ಯಮ ಇಲಾಖೆ ನೇಮಿಸಬೇಕೇ ವಿನಃ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಪ್ರವಾಸೋದ್ಯಮವನ್ನು ಚಿವುಟಿ ಹಾಕುವುದು ಸರಿಯಲ್ಲ. ಎಲ್ಲೂ ಇಲ್ಲದ ನಿರ್ಬಂಧಗಳನ್ನು ಜಿಲ್ಲೆಯಲ್ಲಿ ಹೇರಿದರೆ ಯಾರೂ ಪ್ರವಾಸಕ್ಕೆ ಬರಲಾರರು. ಇಲಾಖೆಗಳು ಗಮನಿಸಲಿ.

-ಜೀಯು

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.