ನದಿಯಲ್ಲಿ ಈಜಲು ಹೋದ ಬಿಎಸ್ಸಿ ವಿದ್ಯಾರ್ಥಿ ಸಾವು
Team Udayavani, Apr 21, 2022, 2:22 PM IST
ಭಾಲ್ಕಿ: ಮಾಂಜ್ರಾ ನದಿಯಲ್ಲಿ ಸಹಪಾಠಿಗಳ ಜತೆಗೆ ಈಜಲು ಹೋಗಿದ್ದ ವೇಳೆ ನೀರು ಪಾಲಾಗಿದ್ದ ವಿದ್ಯಾರ್ಥಿಯ ಶವ ಬುಧವಾರ ಪತ್ತೆಯಾಗಿದೆ.
ಈ ಘಟನೆ ತಳವಾಡ(ಎಂ)ನಲ್ಲಿ ನಡೆದಿದ್ದು, ಪರಮೇಶ್ವರ ಗೋವಿಂದ(20) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಭಾಲ್ಕಿಯ ಚನ್ನಬಸವೇಶ್ವರ ಕಾಲೇಜಿನಲ್ಲಿ ಬಿಎಸ್ಸಿ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಈತ, ತನ್ನ ಐದಾರೂ ಸ್ನೇಹತರ ಜತೆಗೆ ಗ್ರಾಮದಲ್ಲಿನ ಕೆರೆಗೆ ಕಳೆದ ಸೋಮವಾರ ಮಧ್ಯಾಹ್ನ 1ಗಂಟೆಗೆ ಈಜಾಡಲು ಹೋಗಿದ್ದರು. ಸುಮಾರು ಹೊತ್ತು ಎಲ್ಲರೂ ಸೇರಿ ನೀರಿನಲ್ಲಿ ಈಜಿದ್ದಾರೆ. ಆದರೆ, ಕೊನೆಗೆ ಪರಮೇಶ್ವರ ನೀರಿನಲ್ಲಿ ಸಿಲುಕಿದ್ದಾನೆ. ಜತೆಗಿದ್ದ ಸ್ನೇಹಿತರು ಈತನನ್ನು ರಕ್ಷಿಸಲು ಮುಂದಾಗಿದ್ದಾರೆ. ಅಷ್ಟು ಹೊತ್ತಿಗಾಗಲೇ ಪರಮೇಶ್ವರ ಮಾಂಜ್ರಾ ನದಿ ನೀರಿನ ಸೆಳೆತಕ್ಕೆ ಸಿಲುಕಿ ನೀರು ಪಾಲಾಗಿದ್ದ ಎನ್ನಲಾಗಿದೆ.
ಶವದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಬುಧವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ಭಾಲ್ಕಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ