ಭ್ರಷ್ಟಾಚಾರದ ವಿಚಾರವಾಗಿ ಬಿಜೆಪಿ ಸುಮ್ಮನಿರುವುದು ಅಪರಾಧ: ಎಂ. ಬಿ.ಪಾಟೀಲ್
Team Udayavani, May 10, 2022, 2:35 PM IST
ಬೆಂಗಳೂರು: 13, 14 , 15 ಉದಯಪುರದಲ್ಲಿ ಚಿಂತನ ಶಿಬಿರ ನಡೆಯಲಿದ್ದು, ಅಲ್ಲಿಸುರ್ಜೇವಾಲರನ್ನು ಭೇಟಿ ಮಾಡುತ್ತೇನೆ. ನನ್ನ ಆಕ್ಷನ್ ಪ್ಲಾನ್ ಅವರಿಗೆ ಹೇಳುತ್ತೇನೆ ನಂತರ ಎಲ್ಲಾ ಜಿಲ್ಲೆಗೆ ಭೇಟಿ ಕೊಡುತ್ತೇನೆ. ಜಿಲ್ಲೆಗಳಿಗೆ ಭೇಟಿ ನೀಡಿದ ಬಳಿಕ ರೂಪುರೇಷೆ ಸಿದ್ದಮಾಡುತ್ತೇವೆ ಎಂದು ಮಾಜಿ ಸಚಿವ ಎಂ. ಬಿ.ಪಾಟೀಲ್ ಹೇಳಿದ್ದಾರೆ.
ಕಾಂಗ್ರೆಸ್ ಭ್ರಷ್ಟಾಚಾರ ಮಾಡಿಲ್ಲವೇ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿ, ನಾವು ಮಾಡಿದರೆ ಆರೋಪ ಮಾಡಬಹುದಿತ್ತು. ಆಗ ಇವರು ಸುಮ್ಮನಿದ್ದಿದ್ದು ಯಾಕೆ? ಸುಮ್ಮನಿರುವುದು ಅಪರಾಧವಲ್ಲವೇ? ಮೂರು ವರ್ಷ ಆಯ್ತು ತನಿಖೆ ಮಾಡಬಹುದಿತ್ತಲ್ಲಾ? ಯಾಕೆ ಯಾವ ತನಿಖೆ ಮಾಡಲಿಲ್ಲ. ಎಲ್ಲದರಲ್ಲೂ ಭ್ರಷ್ಟಾಚಾರದ ಆರೋಪ ಬರುತ್ತಿಲ್ಲವೇ? ಬಿ.ಸಿ.ಪಾಟೀಲ್ ಆಪರೇಷನ್ ಗೆ ಹೋದವರಲ್ಲವೇ? ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.
ಪಿಎಸ್ಐ ನೇಮಕಾತಿ ಹಗರಣದಲ್ಲಿ ಅಶ್ವತ್ಥ್ ನಾರಾಯಣ್ ಮೇಲೆ ಆರೋಪ ವಿಚಾರದ ಕುರಿತು ಮಾತಮಾಡಿ, ನಾವು ಯಾವುದನ್ನು ಬಿಟ್ಟಿಲ್ಲ. ಅಶ್ವತ್ಥ್ ನಾರಾಯಣ್ ಮೊದಲು ರಾಜೀನಾಮೆ ಕೊಡಬೇಕು. ಸಚಿವರಾಗಿರುವುದರಿಂದ ತನಿಖೆ ಮಾಡಲ್ಲ. ಸಬ್ ಇನ್ಸ್ ಪೆಕ್ಟರ್ ತನಿಖೆ ಮಾಡೋಕೆ ಸಾಧ್ಯವೇ? ಹಾಗಾಗಿ ಅಶ್ವತ್ಥ್ ನಾರಾಯಣ್ ರಾಜೀನಾಮೆ ನೀಡಬೇಕು ಎಂದರು.
ಭ್ರಷ್ಟಾಚಾರ ಮಾಡಿದವರನ್ನು ಹೊರಗೆ ಹಾಕುತ್ತಾರೆ. ಧ್ವನಿ ಎತ್ತಿದವರಿಗೆ ನೊಟೀಸ್ ಕೊಡುತ್ತಾರೆ. ಪಿಎಸ್ ಐ ನೇಮಕಾತಿಯಲ್ಲಿ ಅಶ್ವತ್ಥ್ ನಾರಾಯಣ್ ಸಹೋದರನ ಹೆಸರಿದೆ. ಅವರಿಗೆ ಯಾಕೆ ನೊಟೀಸ್ ಕೊಟ್ಟಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ:ಉಡುಪಿ: ಕೊರಗ ಸಮುದಾಯದ ಫಲಾನುಭವಿಗೆ ಬಿಜೆಪಿ ನಿರ್ಮಿಸಿದ “ದೀನ್ ದಯಾಳ್ ನಿವಾಸ” ಹಸ್ತಾಂತರ
ಅಶ್ವತ್ಥ್ ನಾರಾಯಣ್ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಮಗಳು, ನನ್ನಮಗ ಸ್ನೇಹಿತರು. ಹಾಗಾಗಿ ಭೇಟಿ ಮಾಡುವುದು ಸ್ವಾಭಾವಿಕ. ಅವರನ್ನು ನಾನು ಭೇಟಿ ಮಾಡಲ್ಲ ಅಂತ ಏನೂ ಇಲ್ಲ. ಅವರನ್ನು ನಾನು ಭೇಟಿ ಮಾಡಿಲ್ಲ. ಭೇಟಿ ಮಾಡಬಾರದು ಅಂತ ಏನೂ ಇಲ್ಲ. ನಾನು ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದೇನೆ. ಅವರು ಮತ್ತೊಂದು ಪಕ್ಷದ ಸೀನಿಯರ್ ಲೀಡರ್ ಇದ್ದಾರೆ. ಎಂಜಿನಿಯರಿಂಗ್ ಪ್ರೋಗ್ರಾಂ ಇತ್ತು. ಅಲ್ಲಿಗೆ ನನ್ನನ್ನು ಆಹ್ವಾನಿಸಿದ್ದರು. ನಾನು ಹೋಗಲಿಲ್ಲ. ಅಶ್ವತ್ಥ ನಾರಾಯಣ್ ಭೇಟಿ ನಿನ್ನೆ ಆಗಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
MUST WATCH
ಹೊಸ ಸೇರ್ಪಡೆ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ