100 ಮೀಟರ್ ಹರ್ಡಲ್ಸ್: ಸೈಪ್ರಸ್ ಕೂಟದಲ್ಲಿ ರಾಷ್ಟ್ರೀಯ ದಾಖಲೆ ಮುರಿದ ಜ್ಯೋತಿ ಯರ್ರಾಜಿ


Team Udayavani, May 11, 2022, 3:49 PM IST

1-sdfsd

ಹೊಸದಿಲ್ಲಿ:ಮಿತಿ ಮೀರಿದ ಗಾಳಿಯಿಂದಾಗಿ ರಾಷ್ಟ್ರೀಯ ದಾಖಲೆಯನ್ನು ಪರಿಗಣಿಸಲಾಗದ ಒಂದು ತಿಂಗಳ ನಂತರ, 100 ಮೀಟರ್ ಹರ್ಡಲರ್ ಜ್ಯೋತಿ ಯರ್ರಾಜಿ ಸೈಪ್ರಸ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 13.23 ಸೆಕೆಂಡ್‌ಗಳಲ್ಲಿ ಜಯಗಳಿಸಿ ದಾಖಲೆ ಬರೆದಿದ್ದಾರೆ.

22 ವರ್ಷದ ಆಂಧ್ರದ ಅಥ್ಲೀಟ್ ಜ್ಯೋತಿ ಯರ್ರಾಜಿ ಮಂಗಳವಾರ ಲಿಮಾಸೋಲ್‌ನಲ್ಲಿ ನಡೆದ ಸೈಪ್ರಸ್ ಇಂಟರ್ನ್ಯಾಷನಲ್  ಮೀಟ್‌ನಲ್ಲಿ ಚಿನ್ನ ಗೆದ್ದರು. ಈ ಹಿಂದಿನ 13.38 ಸೆಕೆಂಡುಗಳ ಹಳೆಯ ರಾಷ್ಟ್ರೀಯ ದಾಖಲೆಯು 2002 ರಿಂದ ಅನುರಾಧ ಬಿಸ್ವಾಲ್ ಹೆಸರಿನಲ್ಲಿತ್ತು. ಸೈಪ್ರಸ್ ಇಂಟರ್‌ನ್ಯಾಶನಲ್ ಮೀಟ್ ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಚಾಲೆಂಜರ್ ಡಿ ಈವೆಂಟ್ ಆಗಿದೆ.

ಭುವನೇಶ್ವರದಲ್ಲಿರುವ ರಿಲಯನ್ಸ್ ಫೌಂಡೇಶನ್ ಒಡಿಶಾ ಅಥ್ಲೆಟಿಕ್ಸ್ ಹೈ-ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ಜೋಸೆಫ್ ಹಿಲಿಯರ್ ಅವರ ಅಡಿಯಲ್ಲಿ ತರಬೇತಿ ಪಡೆಯುತ್ತಿರುವ ಜ್ಯೋತಿ, ಕಳೆದ ತಿಂಗಳು ಕೋಝಿಕ್ಕೋಡ್‌ನಲ್ಲಿ ನಡೆದ ಫೆಡರೇಶನ್ ಕಪ್‌ನಲ್ಲಿ 13.09 ಸೆಕೆಂಡ್‌ಗಳಲ್ಲಿ ಓಡಿದ್ದರು ಆದರೆ ಗಾಳಿಯ ವೇಗ +2.1 ಮೀ / ಸೆ ಆಗಿದ್ದರಿಂದ, ಅನುಮತಿಸುವ +2.0 ಮೀ / ಸೆ ಗಿಂತ ಹೆಚ್ಚು ಇದ್ದುದರಿಂದ ಅದನ್ನು ರಾಷ್ಟ್ರೀಯ ದಾಖಲೆಯಾಗಿ ಪರಿಗಣಿಸಿರಲಿಲ್ಲ.

2020 ರಲ್ಲಿ, ಕರ್ನಾಟಕದ ಮೂಡುಬಿದಿರೆಯಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜ್ಯೋತಿ 13.03 ಸೆಕೆಂಡುಗಳಲ್ಲಿ ಬಿಸ್ವಾಲ್ ಅವರ ರಾಷ್ಟ್ರೀಯ ದಾಖಲೆಯ ಸಮಯವನ್ನು ಮೀರಿದ್ದರು. ಆದರೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಏಜೆನ್ಸಿಯು ಆಕೆಯನ್ನು ಪರೀಕ್ಷಿಸದ ಕಾರಣ ಅದನ್ನು ರಾಷ್ಟ್ರೀಯ ದಾಖಲೆ ಎಂದು ಪರಿಗಣಿಸಲಾಗಿಲ್ಲ. ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದಿಂದ ಯಾವುದೇ ತಾಂತ್ರಿಕ ಪ್ರತಿನಿಧಿ ಅಲ್ಲಿ ಇರಲಿಲ್ಲ.

ಟಾಪ್ ನ್ಯೂಸ್

ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ. ವರ್ಗಾವಣೆ

ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ. ವರ್ಗಾವಣೆ

fraud-2

Fraud Case ನಕಲಿ ಆ್ಯಪ್‌ ಬಳಸಿ ಲ. ರೂ. ವಂಚನೆ

Udupi: ಸಾಲ ಮರುಪಾವತಿಸದೆ ಕಾರು ಮಾರಾಟ; ಬ್ಯಾಂಕ್‌ಗೆ ವಂಚನೆ

Udupi: ಸಾಲ ಮರುಪಾವತಿಸದೆ ಕಾರು ಮಾರಾಟ; ಬ್ಯಾಂಕ್‌ಗೆ ವಂಚನೆ

Uppinangady ಮರದಿಂದ ಬಿದ್ದು ಗಾಯಗೊಂಡ ವ್ಯಕ್ತಿ ಸಾವು

Uppinangady ಮರದಿಂದ ಬಿದ್ದು ಗಾಯಗೊಂಡ ವ್ಯಕ್ತಿ ಸಾವು

Udupi ಪೆಟ್ರೋಲ್‌ ಹಾಕದ ಕಾರಣಕ್ಕೆ ಹಲ್ಲೆ

Udupi ಪೆಟ್ರೋಲ್‌ ಹಾಕದ ಕಾರಣಕ್ಕೆ ಹಲ್ಲೆ

ಶಂಕರನಾರಾಯಣ ಸ. ವ್ಯವಸಾಯಿಕ ಸಂಘದ ಪ್ರಭಾರ ಸಿಇಒ ಹೃದಯಾಘಾತದಿಂದ ಸಾವು

ಶಂಕರನಾರಾಯಣ ಸ. ವ್ಯವಸಾಯಿಕ ಸಂಘದ ಪ್ರಭಾರ ಸಿಇಒ ಹೃದಯಾಘಾತದಿಂದ ಸಾವು

Surathkal ಶಬರಿಮಲೆ ಯಾತ್ರೆ ಸಂದರ್ಭ ಹೃದಯಾಘಾತದಿಂದ ಸಾವು

Surathkal ಶಬರಿಮಲೆ ಯಾತ್ರೆ ಸಂದರ್ಭ ಹೃದಯಾಘಾತದಿಂದ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tennis

ಇಟಾಲಿಯನ್‌ ಓಪನ್‌ ಟೆನಿಸ್‌ : ಜರ್ರಿ-ಜ್ವೆರೇವ್‌ ನಡುವೆ ಫೈನಲ್‌

1-IPL

CSK ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಆರ್ ಸಿಬಿ; ಪ್ರಶಂಸೆಗಳ ಸುರಿಮಳೆ

badminton

ಥಾಯ್ಲೆಂಡ್‌ ಓಪನ್‌ : ಪ್ರಶಸ್ತಿ ಸುತ್ತಿಗೆ ಚಿರಾಗ್‌-ಸಾತ್ವಿಕ್‌

1-sadasds

IPL ಚೆನ್ನೈ ಗೆ ಗೆಲ್ಲಲು 219 ರನ್ ಗಳ ಗುರಿ ಮುಂದಿಟ್ಟ ಆರ್ ಸಿಬಿ

1-wewqewq

RCB vs CSK ರೋಚಕ ಪಂದ್ಯಕ್ಕೆ ಮಳೆ ಅಡ್ಡಿ: ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

vimana

Tiruchirappalli; ಬೆಂಗಳೂರಿಗೆ ಬರುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ. ವರ್ಗಾವಣೆ

ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ. ವರ್ಗಾವಣೆ

arrested

NEET ಅಕ್ರಮ ಆರೋಪ:ದಿಲ್ಲಿಯಲ್ಲಿ 4 ಮಂದಿ ಬಂಧನ

fraud-2

Fraud Case ನಕಲಿ ಆ್ಯಪ್‌ ಬಳಸಿ ಲ. ರೂ. ವಂಚನೆ

Udupi: ಸಾಲ ಮರುಪಾವತಿಸದೆ ಕಾರು ಮಾರಾಟ; ಬ್ಯಾಂಕ್‌ಗೆ ವಂಚನೆ

Udupi: ಸಾಲ ಮರುಪಾವತಿಸದೆ ಕಾರು ಮಾರಾಟ; ಬ್ಯಾಂಕ್‌ಗೆ ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.