ಹೂಡಿಕೆಗೆ ಇಂಧನ ಕಂಪನಿಗಳಿಗೆ ಆಹ್ವಾನ
Team Udayavani, May 15, 2022, 1:35 PM IST
ಬೀದರ: ನವೀಕರಿಸಬಹುದಾದ ಇಂಧನ ಬಳಕೆ, ಉತ್ಪಾದನೆಗೆ ಭಾರತ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಹೂಡಿಕೆಗೂ ಉತ್ತಮ ಅವಕಾಶ ಕಲ್ಪಿಸಿದೆ. ಜಗತ್ತಿಗೆ ನೀಡುತ್ತಿರುವ ಅವಕಾಶ ಬಳಸಿಕೊಳ್ಳಲು ಅಭಿವೃದ್ಧಿಶೀಲ ರಾಷ್ಟ್ರಗಳ ನವೀಕರಿಸಬಹುದಾದ ಇಂಧನ ಕಂಪನಿಗಳು ಹೂಡಿಕೆಗಾಗಿ ಭಾರತಕ್ಕೆ ಬರುವಂತೆ ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಆಹ್ವಾನಿಸಿದ್ದಾರೆ.
ಜರ್ಮನಿ ಪ್ರವಾಸದಲ್ಲಿರುವ ಖೂಬಾ ಶುಕ್ರವಾರ ಮ್ಯೂನಿಕ್ನಲ್ಲಿ ಇಂಟರ್ ಸೋಲಾರ್ ಯುರೋಪ್- 2022 ಕಾರ್ಯಕ್ರಮದಲ್ಲಿ “ಭಾರತದ ಸೌರಶಕ್ತಿ ಮಾರುಕಟ್ಟೆ’ ಕುರಿತು ಪ್ರಮುಖ ಭಾಷಣ ಮಾಡಿರುವ ಅವರು, ಭಾರತದಲ್ಲಿ ಸದ್ಯ 196.98 ಬಿಲಿಯನ್ ಡಾಲರ್ ಮೌಲ್ಯದ ಯೋಜನೆಗಳು ನಡೆಯುತ್ತಿವೆ. ಹೆಚ್ಚಿನ ದಕ್ಷತೆಯ ಸೋಲಾರ್ ಪಿವಿ ಮಾಡ್ನೂಲ್ಗಳ ದೇಶಿಯ ಉತ್ಪಾದನೆ ಹೆಚ್ಚಿಸಲು ಭಾರತ ಬದ್ಧವಿದೆ. ಇದಕ್ಕೆ ಬಜೆಟ್ನಲ್ಲಿ 24 ಸಾವಿರ ಕೋಟಿ ರೂ. ವೆಚ್ಚ ಇಡಲಾಗಿದೆ. ಹಸಿರು ಹೈಡ್ರೋಜನ್ ಆರ್ಥಿಕತೆ ಉತ್ತೇಜಿಸಲು 25,425 ಕೋಟಿ ರೂ. ವೆಚ್ಚ ಮಾಡಲಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮಹತÒಕಾಂಕ್ಷಿಯ ಸಿಒಪಿ-26ರ ಪಂಚಾಮೃತ ಗುರಿಗಳ ಪ್ರಕಾರ ಭಾರತ 2070ರ ವೇಳೆಗೆ ನಿವ್ವಳ ಶೂನ್ಯ ಸಾ ಧಿಸಲು ಮತ್ತು 2030ರ ವೇಳೆ 500 ಗಿಗಾವ್ಯಾಟ್ ಪಳೆಯುಳಿಕೆ ರಹಿತ ಸ್ಥಾಪಿಸಲು ಸಿದ್ಧವಾಗಿದೆ. ಕಳೆದ 7 ವರ್ಷಗಳಲ್ಲಿ ಭಾರತದ ನವೀಕರಿಸಬಹುದಾದ ಇಂಧನ ವಲಯ ಗಮನಾರ್ಹ ಬೆಳವಣಿಗೆ ಕಂಡಿದೆ ಎಂದು ವಿವಿಧ ರಾಷ್ಟ್ರಗಳ ಮುಖ್ಯಸ್ಥರ ಗಮನ ಸೆಳೆದರು.
ಗ್ಲೋಬಲ್ ಸೋಲಾರ್ ಕೌನ್ಸಿಲ್, ಯುರೋಪಿಯನ್ ಸೋಲಾರ್ ಅಸೋಸಿಯೇಶನ್, ಜರ್ಮನ್ ಸೋಲಾರ್ ಅಸೋಸಿಯೇಶನ್ ಮತ್ತು ಯುರೋಪಿಯನ್ ಸೋಲಾರ್ ಮ್ಯಾನುಫ್ಯಾಕ್ಚರರ್ ಅಸೋಸಿಯೇಷನ್ ಜತೆ ಸಚಿವ ಖೂಬಾ ಅವರು ಸಭೆ ನಡೆಸಿ ತಂತ್ರಜ್ಞಾನ ವರ್ಗಾವಣೆ ಸಾಧ್ಯತೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಸಚಿವರು ಆರ್ಥಿಕ ವ್ಯವಹಾರ ಮತ್ತು ಹವಾಮಾನ ಕ್ರಿಯೆಗಾಗಿ ದ್ವಿಪಕ್ಷೀಯ ಇಂಧನ ಸಹಕಾರ ಸಚಿವಾಲಯದ ಮುಖ್ಯಸ್ಥರೊಂದಿಗೆ ಇಂಡೋ-ಜರ್ಮನ್ ಗ್ರೀನ್ ಹೈಡ್ರೋಜನ್ ಟಾಸ್ಕ್ ಫೋರ್ಸ್ ಮತ್ತು ಭಾರತದಲ್ಲಿ ಹೂಡಿಕೆ ಕುರಿತು ಚರ್ಚಿಸಿದರು. ಶನಿವಾರ ಅಗ್ರಿ-ಪಿವಿ ಸೈಟ್ ಮತ್ತು ಸೌರಚಾಲಿತ ಚಾರ್ಜಿಂಗ್ ಸ್ಟೇಷನ್ಗಳಿಗೆ ಭೇಟಿ ಕೊಟ್ಟು ವರ್ಚುವಲ್ ಬ್ಯಾಟರಿ ಪವರ್ ಪ್ಲಾಂಟ್ನ ಪ್ರಸಂಟೇಷನ್ನಲ್ಲಿ ಭಾಗವಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
MUST WATCH
ಹೊಸ ಸೇರ್ಪಡೆ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್