ತಂದೆ ನೆನಪಿಗಾಗಿ ದೇವಾಲಯ ನಿರ್ಮಾಣ


Team Udayavani, Jun 20, 2022, 3:53 PM IST

14

ಯಲಬುರ್ಗಾ: ತಂದೆ-ತಾಯಿ ಪ್ರತಿಯೊಬ್ಬರ ಬಾಳಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಆಧುನಿಕ, ಯಾಂತ್ರಿಕ ಯುಗದಲ್ಲಿ ತಂದೆ-ತಾಯಿ ಹಿರಿಯರ ಮೇಲಿನ ಗೌರವ ಕಡಿಮೆಯಾಗುತ್ತಿದೆ. ಅಲ್ಲದೇ ಸಂಬಂಧಗಳ ಬೆಲೆ ಅರಿಯದೇ ಪೋಷಕರನ್ನು ವೃದ್ಧಾಶ್ರಮದಲ್ಲಿ ಬಿಡುತ್ತಿದ್ದಾರೆ. ಆದರೆ ತಾಲೂಕಿನ ಸಾಲಭಾವಿ ಗ್ರಾಮದಲ್ಲಿ ಈ ಮಾತುಗಳಿಗೆ ವಿರುದ್ಧವಾದ ಸನ್ನಿವೇಶವೊಂದು ಸೃಷ್ಟಿಯಾಗಿದೆ. ಐವರು ಪುತ್ರರು ತಮ್ಮ ತಂದೆ ನಿಧನರಾದ ಮೇಲೆ ಅವರ ನೆನಪಿಗಾಗಿ ದೇವಾಲಯ ಕಟ್ಟಿಸಿದ್ದು, ತಂದೆಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ.

ತಾಲೂಕಿನ ಸಾಲಭಾವಿ ಗ್ರಾಮದ ಮಾಲಿಪಾಟೀಲ ಕುಟುಂಬದ ಸಹೋದರರಾದ ದುರಗನಗೌಡ, ಶಂಕರಗೌಡ, ಶರಣಗೌಡ, ಶಿವನಗೌಡ, ಗ್ಯಾನನಗೌಡ ತಮ್ಮ ತಂದೆ ದಿ. ಹನುಮಗೌಡ ಪಾಟೀಲ ಅವರ ಮೂರ್ತಿ ಪ್ರತಿಷ್ಠಾಪಿಸಿ ನಿತ್ಯ ಪೂಜೆ ಮಾಡುತ್ತಿದ್ದಾರೆ. ಸಾಲಭಾವಿ ಗ್ರಾಮದ ಐತಿಹಾಸಿಕ ಶ್ರೀದುರ್ಗಾದೇವಿ ಪೂಜಾರಿಯಾಗಿದ್ದ ಹನುಮಗೌಡ ಅವರು ಬದುಕಿನುದ್ದಕ್ಕೂ ಇತರರಿಗೆ ಒಳಿತನ್ನೇ ಬಯಸಿದ್ದಾರೆ. ಅವರ ಒಳ್ಳೆಯತನದಿಂದಲೇ ನಮ್ಮ ಕುಟುಂಬಕ್ಕೆ ದೇವರು ಒಳೆಯದನ್ನು ಮಾಡುತ್ತಿದ್ದಾನೆ. ಹಾಗಾಗಿ ನಮ್ಮ ತಂದೆ ನಮಗೆ ಸದಾ ಸ್ಮರಣೀಯರು. ಅವರ ನೆನಪು ನಮ್ಮನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಹಾಗಾಗೀ ಮೂರ್ತಿ ಪ್ರತಿಷ್ಠಾಪಿಸಲು ನಿರ್ಧರಿದೇವು ಎನ್ನುತ್ತಾರೆ ಸಹೋದರರು. ಕೇವಲ ಮೂರ್ತಿ ಪ್ರತಿಷ್ಠಾಪನೆ ಅಷ್ಟೇ ಅಲ್ಲದೇ ದೇವಸ್ಥಾನವನ್ನು ಸಹ ನಿರ್ಮಾಣ ಮಾಡಿದ್ದಾರೆ.

12 ಲಕ್ಷ ರೂ ಖರ್ಚು: ಬಾಗಲಕೋಟೆ ಜಿಲ್ಲೆಯ ಕಲಾದಗಿ ಎಂಬಲ್ಲಿ ಮೂರ್ತಿ ತಯಾರು ಮಾಡಿದ್ದಾರೆ. ಮೂರ್ತಿ ಪ್ರತಿಷ್ಠಾಪಿಸಿದ ಪಾಟೀಲ ಕುಟುಂಬದವರ ಪಿತೃ ಪ್ರೇಮ ಇತರರಿಗೂ ಮಾದರಿಯಾಗಿದೆ.

ಧಾರ್ಮಿಕ ಕಾರ್ಯ: ದಿ. ಹನುಮಗೌಡ ಮಾಲಿಪಾಟೀಲ ಅವರು ಧಾರ್ಮಿಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದರು. ಗ್ರಾಮದ ದುರ್ಗಾದೇವಿಯ ಪ್ರಧಾನ ಅರ್ಚಕರಾಗಿದ್ದರು. ಪ್ರತಿವರ್ಷ ನಡೆಯುವ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದರು. ಜಾತ್ರೆಯ ಸಂದರ್ಭದಲ್ಲಿ ಇವರು ಐದು ದಿನಗಳ ಕಾಲ ಉಪವಾಸ ಮಾಡುತ್ತಿದ್ದರು. ಇವರ ದೈವಭಕ್ತಿಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆ ಭಾಗದಲ್ಲಿ ಯಾವುದೇ ಜಗಳಗಳಿದ್ದರೂ ಅವುಗಳನ್ನು ಯಾರಿಗೂ ಅನ್ಯಾಯವಾಗದಂತೆ ಇತ್ಯರ್ಥ ಮಾಡುತ್ತಿದ್ದರು.

ದಿ. ಹನುಮಗೌಡ ಮಾಲಿಪಾಟೀಲ ಅವರು ಪಾದರಕ್ಷೆ ಧರಿಸುತ್ತಿರಲಿಲ್ಲ, ಬರಿಗಾಲಿನಲ್ಲಿಯೇ ಪ್ರವಾಸ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಇವರು ಬಸ್‌, ಕಾರುಗಳಲ್ಲಿ ಪ್ರವಾಸ ಮಾಡುತ್ತಿರಲಿಲ್ಲ, ಬೈಕ್‌ನಲ್ಲಿಯೇ ಪ್ರಯಾಣ ಮಾಡುತ್ತಿದ್ದರು. ಒಮ್ಮೆ ಜಿಪಂ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಇವರು ಬೆಂಗಳೂರು, ಧಾರವಾಡ, ಮೈಸೂರು, ಮಸ್ಕಿ ವರೆಗೂ ಬೈಕ್‌ನಲ್ಲೇ ಹೋಗುತ್ತಿದ್ದರು ಇದೊಂದು ಇವರ ಜೀವನದಲ್ಲಿ ವೈಶಿಷ್ಟತೆಯಾಗಿದೆ.

ದಿ. ಹನುಮಗೌಡ ಮಾಲಿಪಾಟೀಲ ಅವರು ಜನರ ಪ್ರೀತಿಗಳಿಸಿದ್ದರು. ದೈವಶಕ್ತಿಯನ್ನು ಸಹ ಹೊಂದಿದ್ದರು. ಸದಾ ಜನಪರ ಕಾರ್ಯಗಳನ್ನು ಮಾಡುತ್ತಿದ್ದರು. ಅವರ ಅಗಲಿಕೆ ಬಹಳ ನೋವನ್ನುಂಟು ಮಾಡಿತ್ತು. ಬಾಲ್ಯದಿಂದಲೂ ಅವರ ಗೆಳೆತನವನ್ನು ಹೊಂದಿದ್ದೇನೆ. ಅವರು ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದರು. ನಿಜವಾಗಲೂ ದೇವಮಾನವರು ಆಗಿದ್ದಾರೆ. –ಶರಣಪ್ಪ ಉಪ್ಪಾರ, ದಿ. ಹನುಮಗೌಡ ಅವರು ಗೆಳೆಯ ವಜ್ರಬಂಡಿ

ಸಾಲಭಾವಿ ಗ್ರಾಮದ ದಿ. ಹನುಮಗೌಡ ಮಾಲಿಪಾಟೀಲ ಅವರು ದೇವರ ಪೂಜೆ ಮಾಡಿಕೊಂಡು ಜನರಿಗೆ ಸದಾ ಒಳ್ಳೆಯದನ್ನು ಬಯಸಿಸುತ್ತಿದ್ದವರು. ಅವರ ನೆನಪು ಸದಾ ಸ್ಮರಣೀಯವಾಗಿರಲಿ ಎಂದು ಮೂರ್ತಿ ಸ್ಥಾಪಿಸಿ ಪೂಜೆ ಮಾಡುವ ಕಾರ್ಯ ಶ್ಲಾಘನೀಯ. ಎಲ್ಲ ಸಮುದಾಯದ ಜನರ ಪ್ರೀತಿಗೆ ಪಾತ್ರರಾಗಿದ್ದರು. –ಬಾಲಚಂದ್ರ ಸಾಲಭಾವಿ, ಗುತ್ತಿಗೆದಾರರು, ಲಿಂಗನಬಂಡಿ

ಇಂದಿನ ಆಧುನಿಕ ಯುಗದಲ್ಲಿ ಗುರು-ಹಿರಿಯರನ್ನು ಗೌರವಿಸುವುದರ ಜೊತೆಗೆ ತಂದೆ-ತಾಯಿಯನ್ನು ಸ್ಮರಿಸಬೇಕು ಎಂಬ ಸಂದೇಶವನ್ನು ಸಾಲಭಾವಿಯ ಮಾಲಿಪಾಟೀಲ ಕುಟುಂಬ ಸಾರಿದೆ. ತಂದೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಪಿತೃ ಭಕ್ತಿ ಮೆರೆಯುತ್ತಿದ್ದಾರೆ. ಇತರರಿಗೂ ಮಾದರಿಯಾಗಿದ್ದಾರೆ. ದಿ. ಹನುಮಗೌಡ ಅವರು ಸದಾ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. –ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ, ಶ್ರೀಧರ ಮುರಡಿ ಹಿರೇಮಠ ಯಲಬುರ್ಗಾ

-ಮಲ್ಲಪ್ಪ ಮಾಟರಂಗಿ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.