ನಂಬರ್‌ ಪ್ಲೇಟ್‌ ನಿಯಮಕ್ಕೆ ಕಿಮ್ಮತ್ತಿಲ್ಲ

ಸಿಎಸ್‌ ಆದೇಶ ಮಾಡಿದರೂ ಜಾರಿ ಆಗಿಲ್ಲ; ನಂಬರ್‌ ಪ್ಲೇಟ್‌ ಮೇಲೆ "ಅರ್ಹತೆ' ಆಡಂಬೋಲ

Team Udayavani, Jun 24, 2022, 9:39 AM IST

1

ಹುಬ್ಬಳ್ಳಿ: ನಿಯಮಗಳ ಪ್ರಕಾರ ವಾಹನಗಳ ನೋಂದಣಿ ಸಂಖ್ಯೆ ಫಲಕ ಅಳವಡಿಕೆ ಮಾಡಬೇಕು ಎನ್ನುವ ಹೈಕೋರ್ಟ್‌ ಆದೇಶ ಕೇವಲ ದಾಖಲೆಯಲ್ಲಿ ಉಳಿದಿದೆ. ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಸರ್ಕಾರಿ ಲಾಂಛನ, ಚಿಹ್ನೆ ಬಳಕೆಯ ನಿಯಮಬಾಹಿರ ನೋಂದಣಿ ಫಲಕ ತೆರವಿಗೆ ಸಾರಿಗೆ ಹಾಗೂ ಪೊಲೀಸ್‌ ಇಲಾಖೆ ನಿರಾಸಕ್ತಿ ತೋರುತ್ತಿವೆ.

ಕೇಂದ್ರ ಮೋಟಾರು ವಾಹನಗಳ 1989 ನಿಯಮದ 50ರ ಅಡಿಯಲ್ಲಿ ನೋಂದಣಿ ಫಲಕ ಅಳವಡಿಕೆ ನಿಗದಿತ ಮಾನದಂಡಗಳಿವೆ. ಅನುಮತಿ ಇಲ್ಲದೆ ಸರ್ಕಾರಿ ಲಾಂಛನ, ಚಿಹ್ನೆಗಳನ್ನು ಬಳಸುವಂತಿಲ್ಲ. ನಿಯಮ ಮೀರಿ ಫ್ಯಾನ್ಸಿ ನೋಂದಣಿ ಫಲಕಗಳನ್ನು ಅಳವಡಿಸುವಂತಿಲ್ಲ. ಆದರೆ ಪ್ರತಿಷ್ಠಿತ ವ್ಯಕ್ತಿಗಳು, ಸರ್ಕಾರಿ ನೌಕರರು, ಸಂಘ-ಸಂಸ್ಥೆಗಳ ಪ್ರಮುಖರೇ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗಗಳ ಹೆಸರುಗಳನ್ನು ಹೋಲುವಂತಹ ಲಾಂಛನಗಳ ಬಳಕೆ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಹೈಕೋರ್ಟ್‌ ಇದನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಫಲಕಗಳ ತೆರವಿಗೆ ಗಡುವು ನೀಡಿದೆ. ಇತ್ತೀಚೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕಟ್ಟುನಿಟ್ಟಾಗಿ ಇಂತಹ ಫಲಕಗಳನ್ನು ತೆರವುಗೊಳಿಸಿ ದಂಡ ವಿಧಿಸಲು ಸಾರಿಗೆ ಹಾಗೂ ಪೊಲೀಸ್‌ ಇಲಾಖೆಗೆ ಸೂಚಿಸಿದ್ದಾರೆ. ಆದರೆ ಇದು ಕಾರ್ಯಗತಗೊಳ್ಳದೆ ಬೇಕಾಬಿಟ್ಟಿಯಾಗಿ ಸರ್ಕಾರಿ ಲಾಂಛನ, ಚಿಹ್ನೆಗಳ ಬಳಕೆ ಹೆಚ್ಚಾಗುತ್ತಿದೆ.

ರಾಜಕಾರಣಿಗಳು ಕಬ್ಬಿಣದ ಕಡಲೆ: ನಿಯಮ ಉಲ್ಲಂಘಿಸಿರುವವರ ಪೈಕಿ ರಾಜಕಾರಣಿಗಳು ಮೊದಲ ಸ್ಥಾನದಲ್ಲಿದ್ದಾರೆ. ಬೂತ್‌ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ಸ್ಥಾನ ಹೊಂದಿರುವ ಬಹುತೇಕರು ತಮ್ಮ ವಾಹನಗಳ ನಾಮಫಲಕದ ಮೇಲೆ ಪಕ್ಷದ ಚಿಹ್ನೆ, ಹುದ್ದೆ ಹಾಕಿಸಿದ್ದಾರೆ. ಇಂತಹವರನ್ನು ತಡೆದು ಫಲಕ ತೆಗಿಸಿ ದಂಡ ಹಾಕುವ ಗೋಜಿಗೆ ಸಾರಿಗೆ ಅಧಿಕಾರಿಗಳು ಅಥವಾ ಪೊಲೀಸರು ಮುಂದಾಗುತ್ತಿಲ್ಲ. ನಿಯಮಗಳು ಎಲ್ಲರಿಗೂ ಒಂದೆಯಾಗಿದ್ದರೂ ರಾಜಕಾರಣಿಗಳ ವಾಹನ ಕಬ್ಬಿಣದ ಕಡಲೆಯಂತೆ ಕಾಣಿಸುತ್ತಿವೆ.

ಬೈಕ್‌, ಹೊರ ರಾಜ್ಯದ ವಾಹನಗಳನ್ನು ಗುರಿಯಾಗಿಸಿಕೊಂಡು ದಾಖಲೆ ಪರಿಶೀಲಿಸುವ ಪೊಲೀಸರಿಗೆ ನಾಮಫಲಕ ನಿಯಮ ಉಲ್ಲಂಘನೆ ಕಾಣುತ್ತಿಲ್ಲ. ಇನ್ನು ಸಾರಿಗೆ ಅಧಿಕಾರಿಗಳು ಹೆದ್ದಾರಿ, ಪ್ರಮುಖ ರಸ್ತೆಗಳಲ್ಲಿ ಸರಕು ವಾಹನಗಳ ದಾಖಲೆಗಳ ಪರಿಶೀಲನೆಗೆ ಮಾತ್ರ ಸೀಮಿತವಾಗಿದ್ದಾರೆ. ನಿಯಮ ಪಾಲನೆಗೆ ಸೂಚಿಸಿದರೆ ಮಂತ್ರಿಗಳು, ಶಾಸಕರ ಮೂಲಕ ಒತ್ತಡ ಹೇರುವ ಕೆಲಸ ಮಾಡುತ್ತಾರೆ ಎನ್ನುತ್ತಾರೆ ಕೆಲ ಅಧಿಕಾರಿಗಳು.

ಸರ್ಕಾರದ ಸಂಸ್ಥೆ, ನಿಗಮ ಕ್ಯಾರೆ ಎನ್ನುತ್ತಿಲ್ಲ: ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಆದೇಶದ ಪ್ರಕಾರ ಸರ್ಕಾರದ ವಾಹನಗಳನ್ನು ಹೊರತುಪಡಿಸಿ ಸರ್ಕಾರದ ಅಧೀನದಲ್ಲಿ ಬರುವ ಮಂಡಳಿ, ಪ್ರಾಧಿಕಾರ, ಸಂಸ್ಥೆಗಳು ಸರ್ಕಾರದ ಲಾಂಛನ, ಚಿಹ್ನೆ ಬಳಸುವಂತಿಲ್ಲ. ಆದರೆ ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಇಂದಿಗೂ ಸರ್ಕಾರೇತರ ವಾಹನಗಳು ಸರ್ಕಾರಿ ಲಾಂಛನ, ಹೊಂದಿರುವ ಹುದ್ದೆ ಸಮೇತ ಫಲಕ ರಾರಾಜಿಸುತ್ತಿವೆ.

ಅಧಿಕಾರಿಗಳ ವಾಹನಗಳ ಮೇಲಿನ ಫಲಕ ತೆರವುಗೊಳಿಸಬಹುದಾದರೂ ನಿಗಮದ ಅಧ್ಯಕ್ಷ-ಉಪಾಧ್ಯಕ್ಷರ ವಾಹನಗಳ ಮೇಲಿನ ಫಲಕ ತೆರವುಗೊಳಿಸುವ ಸಾಮರ್ಥ್ಯ ಅಲ್ಲಿನ ಇಲಾಖೆ ಮುಖ್ಯಸ್ಥರಿಗೆ ಇಲ್ಲದಂತಾಗಿದೆ. ಗುತ್ತಿಗೆ ಆಧಾರದ ಮೇಲೆ ಪಡೆದಿರುವ ಹಳದಿ ನೋಂದಣಿ ಫಲಕ ವಾಹನಗಳು ಕೂಡ ಸರ್ಕಾರಿ ಲಾಂಛನ ಬಳಸುತ್ತಿರುವುದು ಆದೇಶವನ್ನೇ ಅಣಕಿಸುವಂತಿದೆ.

ಪ್ರತಿ ತಿಂಗಳು ಇಂತಹ ನಾಮಫಲಕ ತೆರವುಗೊಳಿಸಿದ ಬಗ್ಗೆ ಸಾರಿಗೆ ಇಲಾಖೆ ಹೈಕೋರ್ಟ್‌ಗೆ ಮಾಹಿತಿ ನೀಡಬೇಕು. ಆದರೆ ವಾಸ್ತವ ನೋಡಿದರೆ ಸಾರಿಗೆ ಇಲಾಖೆ ಹಾಗೂ ಪೊಲೀಸರ ಈ ನಡೆ ಕೇವಲ ಆದೇಶ-ಕಡತಕ್ಕೆ ಸೀಮಿತ ಎನ್ನುವಂತಾಗಿದೆ.

ಸಿಎಸ್‌ ಆದೇಶದಲ್ಲಿ ಏನಿದೆ?

ಸರ್ಕಾರಿ ಸ್ವಾಮ್ಯದ ನಿಗಮ, ಮಂಡಳಿ, ಸಂಸ್ಥೆಗಳ ವಾಹನಗಳಲ್ಲಿ ಸರ್ಕಾರಿ ಲಾಂಛನ, ಚಿಹ್ನೆ ಬಳಸುವಂತಿಲ್ಲ. ಬಳಸುತ್ತಿದ್ದರೆ ಅವುಗಳನ್ನು ತೆರವುಗೊಳಿಸಿ ಮಾಹಿತಿ ನೀಡಬೇಕು. ಒಂದು ವೇಳೆ ನಿಯಮ ಪಾಲನೆ ಮಾಡದಿದ್ದರೆ ಅದರ ಮುಖ್ಯಸ್ಥರು ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ. ಅನಧಿಕೃತ ನಾಮಫಲಕ ತಯಾರಿಸುವವರ ಮೇಲೆ, ಸರ್ಕಾರದ ಚಿಹ್ನೆ, ಲಾಂಛನ, ಫ್ಯಾನ್ಸಿ ನೋಂದಣಿ ಫಲಕ ತಯಾರಕರ ವಿರುದ್ಧ ಪೊಲೀಸ್‌ ಇಲಾಖೆ ಕಾರ್ಯಾಚರಣೆ ಕೈಗೊಳ್ಳಬೇಕು. ಮಧ್ಯಪ್ರದೇಶದ ಇಂದೋರ್‌ನಲ್ಲಿ ಈಗಾಗಲೇ ಪೊಲೀಸ್‌ ಇಲಾಖೆ ಸಿಆರ್‌ಪಿಸಿ ಕಾಯ್ದೆಯ ಕಲಂ 144 (2) ಪ್ರಕಾರ ಫ್ಯಾನ್ಸಿ ನಂಬರ್‌ ತಯಾರಿಕೆ ಹಾಗೂ ಅಳವಡಿಕೆ ಎರಡನ್ನೂ ನಿಷೇಧಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಸರ್ಕಾರಿ ಸ್ವಾಮ್ಯದ ನಿಗಮ, ಮಂಡಳಿ, ಪ್ರಾಧಿಕಾರ ಹಾಗೂ ಖಾಸಗಿ ವಾಹನಗಳು ಯಾವುದೇ ಕಾರಣಕ್ಕೂ ಸರ್ಕಾರಿ ಲಾಂಛನ, ಚಿಹ್ನೆ ಬಳಸುವಂತಿಲ್ಲ. ನಿಯಮ ಬಾಹಿರ ನೋಂದಣಿ ಫಲಕ ತೆರವುಗೊಸುವಂತೆ ಈಗಾಗಲೇ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ. ಇಂತಹ ಫಲಕ ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ನಿಯಮ ಬಾಹಿರ ಹಾಗೂ ಸರ್ಕಾರಿ ಲಾಂಛನ, ಚಿಹ್ನೆ ಬಳಸಿದ ನಾಮಫಲಕ ಹೊಂದಿರುವ ವಾಹನಗಳ ಚಿತ್ರ ತೆಗೆದು ಆಯಾ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವಾಟ್ಸ್‌ಆ್ಯಪ್‌ ಸಂಖ್ಯೆಗೆ ಕಳುಹಿಸಬಹುದು.  –ಎಂ.ಶೋಭಾ,  ಜಂಟಿ ಆಯುಕ್ತರು, ಸಾರಿಗೆ ಇಲಾಖೆ           

ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

Puttur ಮದುವೆ ಸಮಾರಂಭದಲ್ಲಿ ಹುಡುಗಿಯರ ಪೋಟೋ ತೆಗೆದವರಿಗೆ ಧರ್ಮದೇಟು..!

Puttur ಮದುವೆ ಸಮಾರಂಭದಲ್ಲಿ ಹುಡುಗಿಯರ ಪೋಟೋ ತೆಗೆದವರಿಗೆ ಧರ್ಮದೇಟು..!

ಅಮೆರಿಕದಲ್ಲೇ ಕುಳಿತು ಕನ್ನಡ, ತುಳು ಕಲಿತ ಸ್ಯಾಮ್ಯುಯಲ್‌!

ಅಮೆರಿಕದಲ್ಲೇ ಕುಳಿತು ಕನ್ನಡ, ತುಳು ಕಲಿತ ಸ್ಯಾಮ್ಯುಯಲ್‌!

ಫ‌ಲಿತಾಂಶಕ್ಕೆ ಮುನ್ನವೇ ಬಿಜೆಪಿ-ಜೆಡಿಎಸ್‌ ಮೈತ್ರಿ ಖತಂ?

ಫ‌ಲಿತಾಂಶಕ್ಕೆ ಮುನ್ನವೇ ಬಿಜೆಪಿ-ಜೆಡಿಎಸ್‌ ಮೈತ್ರಿ ಖತಂ?

Sam Pitroda; ದಕ್ಷಿಣ ಭಾರತೀಯ ಜನತೆ ಆಫ್ರಿಕನ್ನರಂತೆ: ರಾಹುಲ್‌ ಆಪ್ತ

Sam Pitroda; ದಕ್ಷಿಣ ಭಾರತೀಯ ಜನತೆ ಆಫ್ರಿಕನ್ನರಂತೆ: ರಾಹುಲ್‌ ಆಪ್ತ

ಇಂದು ಜೆಡಿಎಸ್‌ ಮಹತ್ವದ ಕೋರ್‌ ಕಮಿಟಿ ಸಭೆ

ಇಂದು ಜೆಡಿಎಸ್‌ ಮಹತ್ವದ ಕೋರ್‌ ಕಮಿಟಿ ಸಭೆ

ಇನ್ನೂ ಒಂದು ವಾರ ಪ್ರಜ್ವಲ್‌ ಬರುವುದು ಸಂಶಯ

ಇನ್ನೂ ಒಂದು ವಾರ ಪ್ರಜ್ವಲ್‌ ಬರುವುದು ಸಂಶಯ

SIT ಕಿರುಕುಳ ವಿರುದ್ಧ ಕೋರ್ಟ್‌ ನಲ್ಲಿ ಕೇಸು: ಬಿಜೆಪಿ‌ ಮುಖಂಡ ದೇವರಾಜೇಗೌಡ

SIT ಕಿರುಕುಳ ವಿರುದ್ಧ ಕೋರ್ಟ್‌ ನಲ್ಲಿ ಕೇಸು: ಬಿಜೆಪಿ‌ ಮುಖಂಡ ದೇವರಾಜೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

prahlad-joshi

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ

1-wewewqeeq

Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ‌ ಪ್ರಹ್ಲಾದ ಜೋಶಿ

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರದ ಜನರು

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರಿದ ಜನರು

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Puttur ಮದುವೆ ಸಮಾರಂಭದಲ್ಲಿ ಹುಡುಗಿಯರ ಪೋಟೋ ತೆಗೆದವರಿಗೆ ಧರ್ಮದೇಟು..!

Puttur ಮದುವೆ ಸಮಾರಂಭದಲ್ಲಿ ಹುಡುಗಿಯರ ಪೋಟೋ ತೆಗೆದವರಿಗೆ ಧರ್ಮದೇಟು..!

ಅಮೆರಿಕದಲ್ಲೇ ಕುಳಿತು ಕನ್ನಡ, ತುಳು ಕಲಿತ ಸ್ಯಾಮ್ಯುಯಲ್‌!

ಅಮೆರಿಕದಲ್ಲೇ ಕುಳಿತು ಕನ್ನಡ, ತುಳು ಕಲಿತ ಸ್ಯಾಮ್ಯುಯಲ್‌!

ಫ‌ಲಿತಾಂಶಕ್ಕೆ ಮುನ್ನವೇ ಬಿಜೆಪಿ-ಜೆಡಿಎಸ್‌ ಮೈತ್ರಿ ಖತಂ?

ಫ‌ಲಿತಾಂಶಕ್ಕೆ ಮುನ್ನವೇ ಬಿಜೆಪಿ-ಜೆಡಿಎಸ್‌ ಮೈತ್ರಿ ಖತಂ?

Sam Pitroda; ದಕ್ಷಿಣ ಭಾರತೀಯ ಜನತೆ ಆಫ್ರಿಕನ್ನರಂತೆ: ರಾಹುಲ್‌ ಆಪ್ತ

Sam Pitroda; ದಕ್ಷಿಣ ಭಾರತೀಯ ಜನತೆ ಆಫ್ರಿಕನ್ನರಂತೆ: ರಾಹುಲ್‌ ಆಪ್ತ

ಇಂದು ಜೆಡಿಎಸ್‌ ಮಹತ್ವದ ಕೋರ್‌ ಕಮಿಟಿ ಸಭೆ

ಇಂದು ಜೆಡಿಎಸ್‌ ಮಹತ್ವದ ಕೋರ್‌ ಕಮಿಟಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.