ಇಂದು 2ನೇ ಟಿ20: ಮೀಸಲು ಕ್ರಿಕೆಟ್‌ ಪಡೆಯ ಕ್ಲೀನ್‌ ಸ್ವೀಪ್‌ ಯೋಜನೆ

1-0 ಮುನ್ನಡೆಯಲ್ಲಿ ಭಾರತ

Team Udayavani, Jun 28, 2022, 7:35 AM IST

ಇಂದು 2ನೇ ಟಿ20: ಮೀಸಲು ಕ್ರಿಕೆಟ್‌ ಪಡೆಯ ಕ್ಲೀನ್‌ ಸ್ವೀಪ್‌ ಯೋಜನೆ

ಡಬ್ಲಿನ್‌: ಐರ್ಲೆಂಡ್‌ನ‌ ಮಳೆ ಹಾಗೂ ಚಳಿ ವಾತಾವರಣದಲ್ಲಿ ಸಾಗಿದ ಮೊದಲ ಟಿ20 ಪಂದ್ಯವನ್ನು ಗೆದ್ದ ಭಾರತ ವೀಗ ಸರಣಿಯನ್ನು ವಶಪಡಿಸಿಕೊಳ್ಳುವ ಉಮೇದಿನಲ್ಲಿದೆ.

ಮಂಗಳವಾರ ದ್ವಿತೀಯ ಮುಖಾಮುಖೀ ಸಾಗಲಿದ್ದು, ಇದನ್ನೂ ಜಯಿಸಿದರೆ ಭಾರತದ “ಮೀಸಲು ಕ್ರಿಕೆಟ್‌ ಪಡೆ’ ಕ್ಲೀನ್‌ ಸ್ವೀಪ್‌ ಸಾಧನೆಗೈದ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಆದರೆ ಈ ಪಂದ್ಯಕ್ಕೂ ಮಳೆಯ ಭೀತಿ ತಪ್ಪಿದ್ದಲ್ಲ!

ರವಿವಾರದ ಮೊದಲ ಮುಖಾಮುಖಿ ಭಾರೀ ಮಳೆಯಿಂದಾಗಿ 12 ಓವರ್‌ಗಳಿಗೆ ಸೀಮಿತಗೊಂಡಿತ್ತು. ಇದನ್ನು ಭಾರತ 7 ವಿಕೆಟ್‌ಗಳಿಂದ ಜಯಿಸಿತ್ತು. ಐರ್ಲೆಂಡ್‌ 4 ವಿಕೆಟಿಗೆ 108 ರನ್‌ ಮಾಡಿದರೆ, ಪಾಂಡ್ಯ ಪಡೆ 9.2 ಓವರ್‌ಗಳಲ್ಲಿ 3 ವಿಕೆಟಿಗೆ 111 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು.

ಗಾಯಕ್ವಾಡ್‌ ಅನುಮಾನ
ಭಾರತ ಗೆಲುವು ಸಾಧಿಸಿದರೂ ಕೆಲವು ಸಮಸ್ಯೆಗಳನ್ನು ಎದುರಿಸಿದೆ. ಋತುರಾಜ್‌ ಗಾಯಕ್ವಾಡ್‌ ಕಾಲಿನ ಸ್ನಾಯು ಸೆಳೆತದಿಂದ ಇನ್ನಿಂಗ್ಸ್‌ ಆರಂಭಿಸಲು ಬರಲಿಲ್ಲ. ದ್ವಿತೀಯ ಪಂದ್ಯಕ್ಕೂ ಅವರು ಚೇತರಿಸಿಕೊಳ್ಳುವುದು ಅನುಮಾನ. ಹೀಗಾಗಿ ಸಂಜು ಸ್ಯಾಮ್ಸನ್‌ ಅಥವಾ ರಾಹುಲ್‌ ತ್ರಿಪಾಠಿ ಆಡಲಿಳಿಯಬಹುದು.

ಇದೇ ಮೊದಲ ಸಲ ಆರಂಭಿಕನಾಗಿ ಇಳಿದ ದೀಪಕ್‌ ಹೂಡಾ ಅಜೇಯ 47 ರನ್‌ ಮೂಲಕ (29 ಎಸೆತ, 6 ಬೌಂಡರಿ, 2 ಸಿಕ್ಸರ್‌) ಭಾರತದ ಚೇಸಿಂಗ್‌ ನೇತೃತ್ವ ವಹಿಸಿದರು. ಆದರೂ ಇವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯದಿದ್ದುದೊಂದು ಅಚ್ಚರಿ.

ಸೂರ್ಯಕುಮಾರ್‌ ಯಾದವ್‌ ಗಾಯದಿಂದ ಚೇತರಿಸಿಕೊಂಡು ಮರಳಿದರೂ “ಗೋಲ್ಡನ್‌ ಡಕ್‌’ ಸಂಕಟಕ್ಕೆ ಸಿಲುಕಿದರು. ಅವರು ಮತ್ತೆ ಬ್ಯಾಟಿಂಗ್‌ ಲಯಕ್ಕೆ ಮರಳಬೇಕಿದೆ. ಹಾಗೆಯೇ ಚೊಚ್ಚಲ ಪಂದ್ಯವಾಡಿದ ಬಹು ನಿರೀಕ್ಷೆಯ ವೇಗಿ ಉಮ್ರಾನ್‌ ಮಲಿಕ್‌ ಒಂದೇ ಓವರ್‌ನಲ್ಲಿ 14 ರನ್‌ ನೀಡಿ ದುಬಾರಿಯಾದರು. ಇವರೂ ನಿಯಂತ್ರಣ ಸಾಧಿಸಬೇಕಿದೆ. ಮಲಿಕ್‌ ಹಳೆ ಚೆಂಡಿನಲ್ಲಿ ಉತ್ತಮ ನಿಯಂತ್ರಣ ಸಾಧಿಸುವ ಸಾಧ್ಯತೆ ಇರುವುದರಿಂದ ಅವರನ್ನು ಪವರ್‌ ಪ್ಲೇ ಬಳಿಕ ದಾಳಿಗೆ ಇಳಿಸುವುದು ಪಾಂಡ್ಯ ಯೋಜನೆ. ಹೀಗಾಗಿ ರವಿವಾರ ಭುವನೇಶ್ವರ್‌ ಕುಮಾರ್‌ ಜತೆ ಸ್ವತಃ ಪಾಂಡ್ಯ ಅವರೇ ಬೌಲಿಂಗ್‌ ಆರಂಭಿಸಿದ್ದರು.

ಆವೇಶ್‌ ಖಾನ್‌ ಡೆತ್‌ ಓವರ್‌ಗಳಲ್ಲಿ ಹರ್ಷಲ್‌ ಪಟೇಲ್‌ ಅವರಷ್ಟು ಪರಿಣಾಮಕಾರಿ ಎನಿಸಲಿಲ್ಲ. ಈ ನಡುವೆ ಯಾರ್ಕರ್‌ ಸ್ಪೆಷಲಿಸ್ಟ್‌ ಆರ್ಷದೀಪ್‌ ಸಿಂಗ್‌ ಅವರಿಗೊಂದು ಅವಕಾಶ ನೀಡಬೇಕಿದೆ. ದಕ್ಷಿಣ ಆಫ್ರಿಕಾ ಸರಣಿಯ ಐದೂ ಪಂದ್ಯಗಳಲ್ಲಿ ಇವರು ಬೆಂಚ್‌ ಮೇಲೆಯೇ ಕುಳಿತ್ತಿದ್ದರು.

ಮುಂದಿನ ತಿಂಗಳು ಇಂಗ್ಲೆಂಡ್‌ ನೆಲದಲ್ಲಿ ಭಾರತ ಪೂರ್ಣ ಸಾಮರ್ಥ್ಯದ ತಂಡವನ್ನು ಕಟ್ಟಿಕೊಂಡು ಕಣಕ್ಕಿಳಿಯುವಷ್ಟರಲ್ಲಿ ಮೀಸಲು ಆಟಗಾರರನ್ನೆಲ್ಲ ಒಮ್ಮೆ ಪ್ರಯೋಗಿಸಿ ನೋಡುವುದು ನಾಯಕ ಪಾಂಡ್ಯ ಮತ್ತು ಕೋಚ್‌ ವಿವಿಎಸ್‌ ಲಕ್ಷ್ಮಣ್‌ ಅವರ ಐಡಿಯಾ. ಆದರೆ ಇದಕ್ಕೆ ಇರುವುದು ಎರಡೇ ಅವಕಾಶವಾದ್ದರಿಂದ ಕೆಲವು ಕಾರ್ಯತಂತ್ರಗಳನ್ನು ರೂಪಿಸುವುದು ಕಷ್ಟವಾಗುತ್ತಿದೆ. ದಕ್ಷಿಣ ಆಫ್ರಿಕಾ ಎದುರಿನ ಐದೂ ಪಂದ್ಯಗಳಲ್ಲಿ ಒಂದೇ ತಂಡವನ್ನು ಆಡಿಸಿದ್ದರ ಫ‌ಲವಿದು!

ಐರ್ಲೆಂಡ್‌ ದುರ್ಬಲವಲ್ಲ…
ಐರ್ಲೆಂಡ್‌ ಬ್ಯಾಟಿಂಗ್‌ ಸರದಿಯಲ್ಲಿ ಮಿಂಚಿದ್ದು ಹ್ಯಾರಿ ಟೆಕ್ಟರ್‌ ಮಾತ್ರ. 4 ಓವರ್‌ ಮುಗಿಯುವಷ್ಟರಲ್ಲಿ 23ಕ್ಕೆ 3 ವಿಕೆಟ್‌ ಬಿದ್ದ ಬಳಿಕ ಕ್ರೀಸ್‌ ಆಕ್ರಮಿಸಿಕೊಂಡ ಟೆಕ್ಟರ್‌ 33 ಎಸೆತಗಳಿಂದ 64 ರನ್‌(6 ಬೌಂಡರಿ, 3 ಸಿಕ್ಸರ್‌) ಬಾರಿಸಿ ಐರ್ಲೆಂಡ್‌ ಸರದಿಯನ್ನು ಆಧರಿಸಿದ್ದರು.

ಅಂದಮಾತ್ರಕ್ಕೆ ಐರಿಷ್‌ ಬ್ಯಾಟಿಂಗ್‌ ಸರದಿ ದುರ್ಬಲವೇನಲ್ಲ. ಪೂರ್ತಿ 20 ಓವರ್‌ಗಳ ಅವಕಾಶ ಲಭಿಸಿದರೆ ಐರ್ಲೆಂಡ್‌ ಸ್ಕೋರ್‌ಬೋರ್ಡ್‌ನಲ್ಲಿ ದೊಡ್ಡ ಮೊತ್ತ ದಾಖಲಾಗುವ ಎಲ್ಲ ಸಾಧ್ಯತೆ ಇದೆ.

ಆರಂಭ: ರಾತ್ರಿ 9.00
ಪ್ರಸಾರ: ಸೋನಿ ಸಿಕ್ಸ್‌

ಟಾಪ್ ನ್ಯೂಸ್

Suspense still about Rae Bareli, Amethi Congress candidates!

Lok Sabha; ರಾಯ್‌ಬರೇಲಿ, ಅಮೇಠಿ ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್‌!

6-time Madhya Pradesh MLA Ramniwas Rawat quits Congress, joins BJP

Madhya Pradesh; ರಾಹುಲ್‌ ಗಾಂಧಿ ಭೇಟಿ ನಡುವೆ, ಬಿಜೆಪಿ ಸೇರಿದ ಕಾಂಗ್ರೆಸ್‌ ಶಾಸಕ!

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Implementation of secular law for Muslim succession: Supreme Court debate

Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್‌ ಚರ್ಚೆ

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Suspense still about Rae Bareli, Amethi Congress candidates!

Lok Sabha; ರಾಯ್‌ಬರೇಲಿ, ಅಮೇಠಿ ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್‌!

6-time Madhya Pradesh MLA Ramniwas Rawat quits Congress, joins BJP

Madhya Pradesh; ರಾಹುಲ್‌ ಗಾಂಧಿ ಭೇಟಿ ನಡುವೆ, ಬಿಜೆಪಿ ಸೇರಿದ ಕಾಂಗ್ರೆಸ್‌ ಶಾಸಕ!

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Implementation of secular law for Muslim succession: Supreme Court debate

Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್‌ ಚರ್ಚೆ

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.