ರಾಜ್ಯ ವಿಧಾನಮಂಡಲದ ಇನ್ನೊಂದು ಸಮಿತಿಯಿಂದ ಅಧ್ಯಯನ ಪ್ರವಾಸ
Team Udayavani, Jul 4, 2022, 10:22 PM IST
ಬೆಂಗಳೂರು : ರಾಜ್ಯ ವಿಧಾನಮಂಡಲದ ಇನ್ನೊಂದು ಸಮಿತಿ ಈಗ ಅಧ್ಯಯನ ಪ್ರವಾಸಕ್ಕೆ ಸಿದ್ದವಾಗಿದೆ.ಸೋಮಶೇಖರ್ ರೆಡ್ಡಿ ಅಧ್ಯಕ್ಷತೆಯ ವಿಧಾನ ಮಂಡಲದ ಉಭಯ ಸದನಗಳ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯಿತ್ ರಾಜ್ ಸಂಸ್ಥೆಗಳ ಸಮಿತಿ ಜುಲೈ 5 ರಿಂದ 8 ರವರೆಗೆ ದಿಲ್ಲಿ ಹಾಗೂ ಗುಜರಾತ್ ರಾಜ್ಯಗಳಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲಿದೆ.
ನಾಳೆ ಬೆಳಗ್ಗೆ ಎಂಟು ಗಂಟೆಗೆ ಈ ಸಮಿತಿಯ ಪ್ರವಾಸ ಆರಂಭವಾಗುತ್ತದೆ.ಸದಸ್ಯರಾದ ಸಿ.ಎಸ್.ಪುಟ್ಟರಾಜು, ಡಾ.ಅಂಜಲಿ ನಿಂಬಾಳ್ಕರ್, ಶರಣು ಸಲಗಾರ್, ಅರುಣ್ ಕುಮಾರ್ ಗುತ್ತೂರು, ಕೆ.ವಿ.ನಂಜೇಗೌಡ, ಆರ್.ಶಂಕರ್, ಸಿ.ಎಂ.ಲಿಂಗಪ್ಪ, ಎನ್.ರವಿಕುಮಾರ್, ಎಂ.ಎಲ್.ಅನಿಲ್ ಕುಮಾರ್, ಟಿ.ನಾರಾಯಣಸ್ವಾಮಿ ಈ ತಂಡದಲ್ಲಿ ಇದ್ದಾರೆ.
ಈ ಪೈಕಿ ಕೆಲ ಶಾಸಕರು ತಮ್ಮ ಪತ್ನಿ ಹಾಗೂ ಮಕ್ಕಳನ್ನೂ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದಾರೆ. ಕಳೆದ ವಾರ ಇನ್ನೊಂದು ಸಮಿತಿ ಸದಸ್ಯರು ಲೇಹ್ ಲಡಾಕ್ ಪ್ರವಾಸಕ್ಕೆ ಕುಟುಂಬ ಸಮೇತ ಪ್ರವಾಸ ತೆರಳಿದ್ದರು.ಇದು ಈ ಸಮಿತಿಯ ಅಂತಿಮ ಅಧ್ಯಯನ ಪ್ರವಾಸವಾಗಿದ್ದು, ಆ ಬಳಿಕ ವರದಿ ಸಲ್ಲಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Gundmi Toll Plaza ಸ್ಥಳೀಯರಿಗೆ ಟೋಲ್ ಬರೆ; ಟೋಲ್ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ
Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ
D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ; ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್’
Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ ರಕ್ಷಣೆ
Chhattisgarh; ನಿಲ್ಲದ ನಕ್ಸಲ್ ಬೇಟೆ: ಓರ್ವನ ಹತ್ಯೆ