100 ರೂ. ಹಣ ಡ್ರಾ ಮಾಡಿದ ಕಾರ್ಮಿಕನಿಗೆ ಬಂದಿದ್ದು 2,700 ಕೋಟಿ ರೂ. ಎಸ್ ಎಮ್ ಎಸ್ !
ಲಾಲ್ ರಾಜಸ್ಥಾನದಿಂದ ಉತ್ತರಪ್ರದೇಶಕ್ಕೆ ವಾಪಸ್ ಆಗಲು ಸಿದ್ಧತೆ ನಡೆಸಿದ್ದ.
Team Udayavani, Aug 5, 2022, 3:56 PM IST
ನವದೆಹಲಿ: ಕೆಲವು ಬಾರಿ ನಮಗೆ ಅರಿವಿಲ್ಲದೆ ಕೆಲವೊಂದು ಅಚ್ಚರಿಗಳು ಸಂಭವಿಸುತ್ತದೆ. ಅದಕ್ಕೊಂದು ಹೊಸ ಸೇರ್ಪಡೆ ಎಂಬಂತೆ ಕಾರ್ಮಿಕನೊಬ್ಬ ಬ್ಯಾಂಕ್ ಖಾತೆಯಿಂದ ನೂರು ರೂಪಾಯಿ ಹಣ ಡ್ರಾ ಮಾಡಿದ್ದ..ಆದರೆ ಆತನ ಮೊಬೈಲ್ ಗೆ ಬಂದ ಎಸ್ ಎಂಎಸ್ ಕಂಡು ಆಘಾತಕ್ಕೊಳಗಾಗಿಬಿಟ್ಟಿದ್ದ…ಯಾಕೆಂದರೆ ಆತನ ಬ್ಯಾಂಕ್ ಖಾತೆಯಲ್ಲಿ 2,700 ಕೋಟಿ ರೂಪಾಯಿ ಬ್ಯಾಲೆನ್ಸ್ ಇದೆ ಎಂಬ ಎಸ್ ಎಂಎಸ್ ಬಂದಿರುವುದು!
ಇದನ್ನೂ ಓದಿ:ಕೌಟುಂಬಿಕ ಕಲಹ: ಪತ್ನಿ-ಪುತ್ರನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನ
ಉತ್ತರಪ್ರದೇಶದ ಛಿಬ್ರಾಮೌ ಕೋವಾಲಿ ಪೊಲೀಸ್ ಠಾಣಾ ಪ್ರದೇಶದ ಕಮಲಾಪುರ್ ಗ್ರಾಮದ ನಿವಾಸಿ ಬಿಹಾರಿ ಲಾಲ್ ರಾಜಸ್ಥಾನದಲ್ಲಿ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುವ ಕಾರ್ಮಿಕ. ಮಳೆಗಾಲದಿಂದಾಗಿ ಫ್ಯಾಕ್ಟರಿ ಕೆಲಸ ಬಂದ್ ಆಗಿದ್ದು, ಲಾಲ್ ರಾಜಸ್ಥಾನದಿಂದ ಉತ್ತರಪ್ರದೇಶಕ್ಕೆ ವಾಪಸ್ ಆಗಲು ಸಿದ್ಧತೆ ನಡೆಸಿದ್ದ.
ಈ ಸಂದರ್ಭದಲ್ಲಿ ತನ್ನ ಜನ್ ಧನ್ ಖಾತೆಯಿಂದ 100 ರೂಪಾಯಿ ವಿತ್ ಡ್ರಾ ಮಾಡಿದ್ದ. ಹಣ ಪಡೆದ ನಂತರ, ಬ್ಯಾಲೆನ್ಸ್ ಹಣ ಎಷ್ಟಿದೆ ಎಂಬ ಎಸ್ ಎಂಎಸ್ ಬಂತಿತ್ತು. ಆದರೆ ತನ್ನ ಖಾತೆಯಲ್ಲಿ 2,700 ಕೋಟಿ ಇದೆ ಎಂಬ ಎಸ್ ಎಂಎಸ್ ಕಂಡು ಲಾಲ್ ನಂಬಲು ಕೂಡಾ ಸಿದ್ಧನಿಲ್ಲ. ಕೂಡಲೇ ಬ್ಯಾಂಕ್ ಮ್ಯಾನೇಜರ್ ಬಳಿ ತೆರೆಳಿದ್ದ, ಅವರು ಲಾಲ್ ಖಾತೆಯಲ್ಲಿ 27,07,85,13,985 ಕೋಟಿ ರೂಪಾಯಿ ಇದ್ದಿರುವುದಾಗಿ ತಿಳಿಸಿದ್ದರು.
ನಾನು ಮೂರು ಬಾರಿ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಿದ್ದು, ಪ್ರತಿ ಬಾರಿಯೂ 2,700 ಕಕೋಟಿ ರೂಪಾಯಿ ಅಂತ ನಮೂದಾಗಿತ್ತು ಎಂದು ಬ್ಯಾಂಕ್ ಮ್ಯಾನೇಜರ್ ಗೆ ಮಾಹಿತಿ ನೀಡಿದ್ದ. ಆದರೆ ಈ ಆಘಾತ, ನಂಬಿಕೆ ಹೆಚ್ಚು ಸಮಯ ಉಳಿದಿರಲಿಲ್ಲವಾಗಿತ್ತು, ಯಾಕೆಂದರೆ ಲಾಲ್ ಸಮೀಪದ ಮತ್ತೊಂದು ಬ್ರ್ಯಾಂಚ್ ಗೆ ಹೋಗಿ ತನ್ನ ಖಾತೆಯ ಬ್ಯಾಲೆನ್ಸ್ ಪರಿಶಿಲಿಸಿದಾಗ ಕೇವಲ 126! ರೂಪಾಯಿ ಇದ್ದಿರುವುದಾಗಿ ನಮೂದಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
MUST WATCH
ಹೊಸ ಸೇರ್ಪಡೆ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ