ಜಲೇಬಿ ಮೀನು ಕೃಷಿಗೆ ಸರಕಾರದಿಂದ ಬೆಂಬಲ
Team Udayavani, Aug 19, 2022, 8:00 AM IST
ಮುಂಬಯಿ: ಟಿಲಾಪಿಯಾ ಮೀನು(ಜಲೇಬಿ ಮೀನು) ವಿಶ್ವದಲ್ಲಿಯೇ ಅತಿ ಹೆಚ್ಚು ಬೇಡಿಕೆಯಿರುವ ಮೀನುಗಳಲ್ಲಿ ಒಂದಾಗಿದ್ದು, ಇದರ ರಫ್ತು ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೆಲಸ ಮಾಡುತ್ತಿದೆ. ಅದಕ್ಕೆಂದೇ ಮಹಾರಾಷ್ಟ್ರದ ಮುಂಬಯಿಯ ಫೌಂಟೇನ್ಹೆಡ್ ಅಗ್ರೋ ಫಾಮ್ಸ್ì ಪ್ರೈ. ಲಿ. ಸಂಸ್ಥೆಗೆ ಧನ ಸಹಾಯ ಮಾಡುವುದಕ್ಕೂ ಸರಕಾರ ಸಿದ್ಧವಾಗಿದೆ.
ಫೌಂಟೇನ್ಹೆಡ್ ಸಂಸ್ಥೆಯು ಇಸ್ರೇಲಿ ತಂತ್ರಜ್ಞಾನ ಬಳಸಿಕೊಂಡು ಹೆಚ್ಚಿನ ಜಲೇಬಿ ಮೀನು ಕೃಷಿಗೆ ಯೋಜನೆಯೊಂದನ್ನು ಹಾಕಿ ಕೊಂಡಿದೆ. 29.78 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಅದಕ್ಕೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು (ಡಿಟಿಎಸ್) 8.42 ಕೋಟಿ ರೂ. ಸಾಲ ನೀಡಲಿದೆ.
ವಿಶೇಷವೆಂದರೆ ಫೌಂಟೇನ್ಹೆಡ್ ಸಂಸ್ಥೆ ಯು ಈ ಇಸ್ರೇಲಿ ಜಲೇಬಿ ಮೀನುಗಳ ತಳಿ ಸಂವರ್ಧನೆಯಿಂದ ಹಿಡಿದು ಮೀನುಗಳ ಸಂಪೂರ್ಣ ಕೃಷಿಯನ್ನು ಕರ್ನಾಟಕದ ಮುಧೋಳದಲ್ಲಿ ಮಾಡಲಿದೆ. ಒಟ್ಟು 500 ಟನ್ ಜಲೇಬಿ ಮೀನನ್ನು ಬೆಳೆಸುವ ಗುರಿ ಹಾಕಿಕೊಳ್ಳಲಾಗಿದೆ. ಇಸ್ರೇಲ್ನ ನಿರ್ ಡೇವಿಡ್ ಫಿಶ್ ಬ್ರಿಡಿಂಗ್ ಫಾರ್ಮ್ನಿಂದ ತರಲಾಗಿ ರುವ ಜಲೇಬಿಯ ಹರ್ಮನ್ ಜಾತಿಯ ಮೀನಿನಿಂದ ತಳಿ ಸಂವರ್ಧನೆ ಮಾಡಲಾಗು ವುದು ಎಂದು ತಿಳಿಸಲಾಗಿದೆ.
ತಳಿ ವಿಶೇಷ: ಈ ಹರ್ಮನ್ ಜಾತಿಯು ಜಲೇಬಿಯ ಓರಿಯೊಕ್ರೊಮಿಸ್ ನಿಲೊಟಿಕಸ್(ಗಂಡು) ಮತ್ತು ಓರಿಯೊಕ್ರೊಮಿಸ್ ಆರಿ ಯಸ್(ಹೆಣ್ಣು) ತಳಿಯಿಂದ ತಯಾರಿಸಲಾಗಿ ರುವ ವಿಶೇಷ ತಳಿಯಾಗಿದೆ. ಈ ತಳಿಯು ಅತ್ಯಂತ ವಿಶೇಷವಾಗಿದ್ದು, ಹೆಚ್ಚು ಬೆಳವಣಿಗೆ ಯಾಗಬಲ್ಲದ್ದಾಗಿದೆ. ಅತ್ಯಾಕರ್ಷಕ ತಿಳಿ ಬಣ್ಣ ದಲ್ಲಿರುವ ಈ ತಳಿಯ ಮೀನುಗಳು ಕಡಿಮೆ ತಾಪಮಾನವನ್ನೂ ತಡೆದುಕೊಳ್ಳಬಲ್ಲದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ
Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ
Priyanka Gandhi ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ; ಇಲ್ಲಿದೆ ಅವರೇ ಕೊಟ್ಟ ಉತ್ತರ
Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ
Panaji: 55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೋಸ್ಟರ್ ಅನಾವರಣ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
BJP ಕಚೇರಿಗೆ ಬರುತ್ತಿದ್ದೇವೆ.. ಎಲ್ಲರನ್ನೂ ಬಂಧಿಸಿ: ಪ್ರಧಾನಿಗೆ ಕೇಜ್ರಿವಾಲ್ ಸವಾಲು
Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ
RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ
Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು
Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ