ದೇವರ ಮೂರ್ತಿಗೆ ಹೊಸ ನೆಲೆ


Team Udayavani, Sep 4, 2022, 6:00 AM IST

ದೇವರ ಮೂರ್ತಿಗೆ ಹೊಸ ನೆಲೆ

ಈ ವರ್ಷದ ಗಣೇಶ ಹಬ್ಬ ಅದ್ದೂರಿಯಾಗಿದೆ ನಡೆದಿದೆ. ಹಲವು ಸ್ಥಳಗಳಲ್ಲಿ ಗಣಪತಿಯ ವಿಸರ್ಜನೆ ಆಗಿದೆಯಾದರೂ ಇನ್ನು ಕೆಲವು ಕಡೆ ಗಣಪತಿ ಹಬ್ಬದ ಗಮ್ಮತ್ತು ಇಳಿದಿಲ್ಲ. ಭೂಲೋಕದ ಜನರಿಗೆ ಒಳಿತು ಮಾಡುವ ಗಣೇಶನ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಿ, “ಗಣಪತಿ ಬಪ್ಪಾ ಮೋರಿಯಾ’ ಎಂದು ಹರ್ಷೋದ್ಘಾರ ಮಾಡಿದ ಅನಂತರವೇ ಹಬ್ಬ ಮುಗಿದಂತೆ. ಆದರೆ ನೀರಿನಲ್ಲಿ ಮುಳುಗುವ ಗಣಪನ ಮೂರ್ತಿಯಿಂದ ಮನುಷ್ಯನಿಗಾಗುವ ತೊಂದರೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ಅಂಶಗಳನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಗಣೇಶ ಸೇರಿದಂತೆ ಎಲ್ಲ ದೇವರ ಮೂರ್ತಿ, ಫೋಟೋಗಳಿಗೆ ನೆಲೆ ಕಲ್ಪಿಸಿಕೊಡಲು ಹೆಜ್ಜೆ ಇಟ್ಟವರು ನಾಸಿಕ್‌ನ ತೃಪ್ತಿ ಗಾಯಕ್‌ವಾಡ್‌.

ತೃಪ್ತಿ ಗಾಯಕ್‌ವಾಡ್‌ (34) ವಕೀಲ ವೃತ್ತಿಯಲ್ಲಿ ತೊಡಗಿಸಿ ಕೊಂಡವರು. 2019ರಲ್ಲಿ ನಾಸಿಕ್‌ನಲ್ಲಿ ಮೈದುಂಬಿ ಹರಿಯು ತ್ತಿದ್ದ ಗೋದಾವರಿಯನ್ನು ನೋಡಲೆಂದು ಹೋಗಿದ್ದರು. ಆಗ ಪಕ್ಕದಲ್ಲೇ ಹಾದು ಹೋದ ವ್ಯಕ್ತಿಯೊಬ್ಬ, ದೊಡ್ಡ ದೊಡ್ಡ ದೇವರ ಫೋಟೋಗಳನ್ನು ನದಿಗೆ ವಿಸರ್ಜಿಸುವುದಕ್ಕೆ ಮುಂದಾದದ್ದು ತೃಪ್ತಿಯ ಕಣ್ಣಿಗೆ ಕಂಡಿತು. ತತ್‌ಕ್ಷಣ ಆತನ ಬಳಿ ಓಡಿದ ತೃಪ್ತಿ “ಹೀಗೇಕೆ ಮಾಡುತ್ತಿದ್ದೀರಿ?’ ಎಂದು ಪ್ರಶ್ನಿಸಿದರು. ಅದಕ್ಕೆ ಆತ, “ಫೋಟೋಗಳು ಹಳೆಯದಾಗಿವೆ. ಹಳೆಯ ಫೋಟೋ ಅಥವಾ ಒಡೆದ ಫೋಟೋವನ್ನಿಟ್ಟು ಪೂಜಿಸ   ಬಾರದು. ಹಾಗಾಗಿ ಅದನ್ನು ಗೋದಾವರಿಯಲ್ಲಿ ವಿಸರ್ಜಿಸು ತ್ತಿದ್ದೇನೆ’ ಎಂದಿದ್ದರು. ಆ ಹೊತ್ತಿಗೆ ಏನು ಹೇಳಬೇಕೆಂದು ಅರಿಯದ ತೃಪ್ತಿ, “ಇಲ್ಲ, ನೀವು ಇದನ್ನು ಬೇರೆ ರೂಪದಲ್ಲಿ ಮರುಬಳಕೆ ಮಾಡಬಹುದು’ ಎಂದಿದ್ದರು. ಅದಕ್ಕೆ ಆತ ಮರು ಪ್ರಶ್ನೆ ಮಾಡಿದಾಗ ಸ್ವಲ್ಪ ಸಮಯ ಯೋಚಿಸಿ, “ಆ ಪೇಪರನ್ನು ನೀರಿನಲ್ಲಿ ಕರಗಿಸಿ ಗಿಡಗಳಿಗೆ ಹಾಕಬಹುದು. ಫೋಟೋ ಫ್ರೆàಮನ್ನು ಆಟಿಕೆ ಮಾಡ ಬಹುದು’ ಎಂದು ಉತ್ತರಿಸಿದ್ದಾರೆ. ಅಲ್ಲಿಂದಲೇ ಆರಂಭವಾದದ್ದು “ಸಂಪೂರ್ಣಂ’.

ನದಿಗೆ ಫೋಟೋ ಎಸೆಯಲು ಬಂದಿದ್ದ ವ್ಯಕ್ತಿಯನ್ನೇನೋ ತೃಪ್ತಿ ಮನವೊಲಿಸಿ ವಾಪಸು ಕಳುಹಿಸಿದ್ದರು. ಆದರೆ ಆ ದಿನವೆಲ್ಲ ಅವರಿಗೆ ಈ ಫೋಟೋಗಳ ಮರುಬಳಕೆಯ ವಿಚಾರವೇ ತಲೆಯಲ್ಲಿ ಓಡಿತ್ತು. ಇದೇ ರೀತಿ ದೇವರ ಫೋಟೋಗಳನ್ನು, ಮೂರ್ತಿಯನ್ನು ನದಿಗೆ ಎಸೆ  ಯುವವರು ಅದೆಷ್ಟು ಜನರಿದ್ದಾರೆ! ಅದೆಲ್ಲ  ವನ್ನು ಮರುಬಳಕೆ ಮಾಡಬಹುದಲ್ಲವೇ? ಆ ರೀತಿ ಮಾಡುವುದರಿಂದ ಪರಿಸರ ಮಾಲಿನ್ಯ ವನ್ನೂ ತಡೆಯಬಹುದು, ಜತೆಗೆ ದೇವರಿಗೂ ಗೌರವ ಸೂಚಿಸಿದಂತಾಗುತ್ತದೆಯಲ್ಲವೇ ಎನ್ನುವ ಪ್ರಶ್ನೆಗಳು ಮೂಡಿತ್ತು.

ತಲೆಗೆ ಬಂದ ವಿಚಾರವನ್ನು ತೃಪ್ತಿ ತಂದೆಯೊಂದಿಗೆ ಚರ್ಚಿ ಸಿದ್ದರು. ಈ ರೀತಿ ಫೋಟೋ, ಮೂರ್ತಿಗಳನ್ನು ಸಂಗ್ರಹಿಸಿ ನಾವೇ ಏನಾದರೂ ಮಾಡಬಹುದು ಎಂದು ತಂದೆ ಸೂಚಿಸಿದ್ದರು. ಇದಕ್ಕಾಗಿಯೇ ಸಂಘಟನೆಯೊಂದನ್ನು ರಚಿಸು ಎಂದು ತಂದೆ ಮಗಳಿಗೆ ಮಾರ್ಗದರ್ಶನ ನೀಡಿದ್ದರು. ಅದರಂತೆ “ಸಂಪೂರ್ಣಂ ಸೇವಾ ಟ್ರಸ್ಟ್‌’ ಹೆಸರಿನಲ್ಲಿ ತೃಪ್ತಿ ಟ್ರಸ್ಟ್‌ ಒಂದನ್ನು ಆರಂಭಿಸಿದರು.

ಒಬ್ಬಂಟಿಯಾಗಿ ಟ್ರಸ್ಟ್‌ ಆರಂಭಿಸಿದ ತೃಪ್ತಿ, “ನಾವು ದೇವರ ಫೋಟೋಗಳನ್ನು, ಮೂರ್ತಿಗಳನ್ನು ಮರುಬಳಕೆ ಮಾಡು ತ್ತೇವೆ. ಅವುಗಳನ್ನು ಎಲ್ಲಿಯೂ ಎಸೆಯದೆ ನಮಗೆ ತಲುಪಿಸಿ’ ಎನ್ನುವ ವಾಟ್ಸ್‌ಆ್ಯಪ್‌ ಸಂದೇಶವನ್ನು ಒಂದಷ್ಟು ಸ್ನೇಹಿತರಿಗೆ ಕಳುಹಿಸಿದರು. ಈ ಸಂದೇಶ ಒಬ್ಬರಿಂದ ಒಬ್ಬರಿಗೆ ಹರಡುತ್ತ ನೂರಾರು ಜನರನ್ನು ತಲುಪಿತ್ತು. ಭರಪೂರ ಪ್ರತಿಕ್ರಿಯೆಯೂ ಸಿಕ್ಕಿತು. “ನಮ್ಮ ಮನೆಯಲ್ಲಿ ದೇವರ ಫೋಟೋ ಜತೆ ಹಾಳು ಬಿದ್ದಿರುವ ಹಿರಿಯರ ಫೋಟೋ ಚೌಕಟ್ಟುಗಳೂ ಇವೆ. ಅವುಗಳನ್ನೂ ಹೇಗಾದರೂ ಮರುಬಳಕೆ ಮಾಡಿ’ ಎಂದು ಅನೇಕರು ಕರೆ ಮಾಡಿ ಕೋರಿಕೊಂಡಿದ್ದರು.

ಈ ಎಲ್ಲ ಕೋರಿಕೆಗಳು ಬಂದ ಅನಂತರ ಒಂದಷ್ಟು ಸ್ನೇಹಿತರು ಒಟ್ಟಾಗಿ ಫೋಟೋ, ಮೂರ್ತಿಗಳನ್ನು ಸಂಗ್ರಹಿಸಿ ದರು. ಮೂರ್ತಿಗಳನ್ನು ಪುಡಿ ಮಾಡಿ ಅದರಿಂದ ಮಕ್ಕಳ ಆಟಿಕೆ ತಯಾರಿಸಿದರು. ಫೋಟೋ ಚೌಕಟ್ಟುಗಳನ್ನು ಕತ್ತರಿಸಿ, ಅದರಿಂದ ಆಟಿಕೆಯ ಮನೆಗಳು, ಚಂದದ ನೇಮ್‌ಬೋರ್ಡ್‌ ಗಳು ಮತ್ತಿತರ ಗೃಹ ಉಪಯೋಗಿ ವಸ್ತುಗಳನ್ನು ತಯಾ ರಿಸಿದರು. ಬೀದಿ ನಾಯಿಗಳಿಗೆ ಊಟ ಹಾಕುವು ದಕ್ಕೆಂದು ತಟ್ಟೆಗಳನ್ನೂ ಅದರಲ್ಲೇ ತಯಾರಿಸಿದರು. ಈ ರೀತಿ ತಯಾರಿಸಲಾದ ಆಟಿಕೆಗಳನ್ನು ನಾಸಿಕ್‌ನ ಕೊಳಗೇರಿಗೆ ತೆರಳಿ ಅಲ್ಲಿದ್ದ ಮಕ್ಕಳಿಗೆ ಕೊಟ್ಟರು. ಈ ಆಟಿಕೆ ಎಲ್ಲಿಂದ ಬಂದಿತೆನ್ನುವ ಅರಿವೂ ಇರದ ಮಕ್ಕಳ ಅದರೊಂದಿಗೆ ಸಂತಸದಿಂದ ಆಟವಾಡಿದ್ದನ್ನು ಕಂಡು ತಂಡಕ್ಕೆ ಉತ್ಸಾಹ ಇನ್ನಷ್ಟು ಹೆಚ್ಚಿತು.

ಗಣೇಶ ಹಬ್ಬದ ಸಮಯದಲ್ಲಿ ಗಣಪತಿಯ ಮೂರ್ತಿ ಯನ್ನು ನೀರಿಗೆ ವಿಸರ್ಜಿಸದೆ ನಮಗೆ ಕೊಡಿ. ನಾವು ಅದನ್ನು ಮರುಬಳಕೆ ಮಾಡುತ್ತೇವೆ ಎಂದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಕೊಟ್ಟಿದ್ದರು. ಅದಕ್ಕೂ ಭರಪೂರ ಪ್ರತಿಕ್ರಿಯೆ ಸಿಕ್ಕಿದ್ದು, ಸಾಕಷ್ಟು ಗಣೇಶ ಮೂರ್ತಿ ಸಂಗ್ರಹ ವಾಗಿದೆ. ಮೂರ್ತಿಗಳನ್ನು ಕುಟ್ಟಿ ಪುಡಿ ಮಾಡಿ ಅದರಿಂದಲೂ ವಿವಿಧ ಆಟಿಕೆ, ಗೃಹೋಪಯೋಗಿ ವಸ್ತುಗಳನ್ನು ತಯಾರಿಸಲಾಗಿದೆ.

ಮೂರು ವರ್ಷಗಳ ಹಿಂದೆ ಆರಂಭವಾದ ಈ ಟ್ರಸ್ಟ್‌ ಈವರೆಗೆ ಒಟ್ಟು 50 ಸಾವಿರ ಟನ್‌ಗೂ ಅಧಿಕ ತೂಕದ ಮೂರ್ತಿ, ಫೋಟೋಗಳನ್ನು ಮರುಬಳಕೆ ಮಾಡಿದೆ. ಹಲವು ಕಲಾಕಾರ ಸಂಸ್ಥೆಗಳು ಈ ಟ್ರಸ್ಟ್‌ನ ಬಳಿ ಬಂದು ವಿಗ್ರಹಗಳ ಪುಡಿ ಸಂಗ್ರಹಿಸಿಕೊಂಡು ಹೋಗುತ್ತಿವೆ. ಎಲ್ಲ ಧರ್ಮದ, ಎಲ್ಲ ರೀತಿಯ ದೇವರ ಮೂರ್ತಿ, ಫೋಟೋಗಳಿಗೂ ಈ ಟ್ರಸ್ಟ್‌ ನೆಲೆ ಕಲ್ಪಿಸಿಕೊಡುತ್ತಿದೆ. ಬಾಲ್ಯದಿಂದಲೂ ಧಾರ್ಮಿಕ ಭಾವನೆಗಳನ್ನು ತುಂಬಿಕೊಂಡು ಬೆಳೆದಿರುವ ತೃಪ್ತಿ, ಯಾವುದೇ ಕಾರಣಕ್ಕೂ ಜನರ ಧಾರ್ಮಿಕ ನಂಬಿಕೆಗೆ ಧಕ್ಕೆ ಬರಬಾರದು ಎನ್ನುವ ಆಲೋಚನೆ ಹೊಂದಿದವರು. ಹಾಗಾಗಿಯೇ ಜನರು ನೀಡುವ ಮೂರ್ತಿ ಅಥವಾ ಫೋಟೋಗಳನ್ನು ಶಾಸ್ತ್ರೋಕ್ತವಾಗಿ ವಿಸರ್ಜನೆ ಪೂಜೆ ಮಾಡಿ ಅನಂತರವೇ ಮರುಬಳಕೆಗೆ ಬಳಸುತ್ತಿದ್ದಾರೆ.

ಸಂಪೂರ್ಣಂ ಸೇವಾ ಟ್ರಸ್ಟ್‌ ಈಗ ನಾಸಿಕ್‌ ಎಂಬ ಒಂದೇ ನಗರಕ್ಕೆ ಸೀಮಿತವಾಗಿಲ್ಲ. ವಾಣಿಜ್ಯ ನಗರಿ ಮುಂಬಯಿ, ದಿಲ್ಲಿ, ಔರಂಗಾಬಾದ್‌ ಹಾಗೂ ನಮ್ಮ ಬೆಂಗಳೂರಿಗೂ ಈ ತಂಡ ಕಾಲಿಟ್ಟಿದೆ. ಯಾವ ನಗರಗಳಲ್ಲಿ ಹೆಚ್ಚಾಗಿ ಮೂರ್ತಿ ಮತ್ತು ಫೋಟೋ ಮರುಬಳಕೆಗಾಗಿ ಕರೆ ಬರುತ್ತದೆಯೋ ಅಲ್ಲಿಗೆ ತಾವೇ ಹೋಗಿ ಮೂರ್ತಿಗಳನ್ನು ಸಂಗ್ರಹ ಮಾಡುವ ಕೆಲಸವನ್ನೂ ತಂಡ ಮಾಡುತ್ತಿದೆ. ನೂರಕ್ಕೂ ಅಧಿಕ ಸ್ವಯಂ ಸೇವಕರು ತೃಪ್ತಿ ಅವರೊಂದಿಗೆ ಸೇರಿಕೊಂಡು ಕೆಲಸ ಮಾಡುತ್ತಿದ್ದಾರೆ.

“ಬಹುಶಃ ದೇವರ ವಿಗ್ರಹ, ಫೋಟೋ ವಿಸರ್ಜನೆ ಮಾಡುವ   ಸರಿ ಯಾದ ಕ್ರಮ ಯಾವುದಾದರೂ ಇದೆ ಎಂದರೆ ಅದು ಇದೇ ಎನ್ನುವುದು ನನ್ನ ನಂಬಿಕೆ. ನಾವು ಪೂಜಿಸುವ ದೇವರ ಮೂರ್ತಿ ಮುಂದೆ ಒಂದೊಳ್ಳೆ ಕೆಲಸಕ್ಕೆ ಬಳಕೆಯಾಗುತ್ತದೆ ಎಂದರೆ ಅದರಲ್ಲಿ ಸಾರ್ಥಕ್ಯ ಇರುತ್ತದೆ. ಈ ಕೆಲಸ ಮಾಡಲಾ ರಂಭಿಸಿದಾಗಿನಿಂದ ನನ್ನ ಬದುಕಿನಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ವಕೀಲ ವೃತ್ತಿಯಲ್ಲಿ ನನ್ನ ಬಳಿ ಬರುವ ಕ್ಲೈಂಟ್‌ಗಳು ಕೂಡ ನನ್ನನ್ನು ಅತೀ ಹೆಚ್ಚು ನಂಬಲಾ ರಂಭಿಸಿದ್ದಾರೆ. ಈ ನಮ್ಮ ಟ್ರಸ್ಟ್‌ ಅನ್ನು ಇನ್ನೂ ಎತ್ತರಕ್ಕೆ ಬೆಳೆಸಬೇಕು. ದೇಶದ ಪ್ರತೀ ರಾಜ್ಯದ ಸಣ್ಣ ಸಣ್ಣ ನಗರದಲ್ಲೂ ನಮ್ಮ ಟ್ರಸ್ಟ್‌ನ ಕಚೇರಿ ಇರಬೇಕು. ಯಾವ ದೇವರ ಮೂರ್ತಿಯೂ ನೀರು ಅಥವಾ ಮಣ್ಣು ಪಾಲಾಗದೆ, ಮರುಬಳಕೆಯಾಗಬೇಕು ಎನ್ನುವುದು ನನ್ನ ಹೆಬ್ಬಯಕೆ’ ಎನ್ನುತ್ತಾರೆ ಸಂಪೂರ್ಣಂ ಸೇವಾ ಟ್ರಸ್ಟ್‌ನ ಸಂಸ್ಥಾಪಕಿ ತೃಪ್ತಿ ಗಾಯಕ್‌ವಾಡ್‌.

ಮನೆ ಎಂದ ಮೇಲೆ ದೇವರ ಫೋಟೋಗಳು ಇರಲೇ ಬೇಕು. ಅದರಲ್ಲಿ ಅದೆಷ್ಟೋ ಫೋಟೋಗಳು ಹಳೆಯದಾಗಿ ಮೂಲೆ ಸೇರಿರಬಹುದು. ಎಲ್ಲೋ ಯಾವುದೋ ಮರದ ಕೆಳಗೆ ಕದ್ದುಮುಚ್ಚಿ ದೇವರ ಹಳೆ ಫೋಟೋಗಳನ್ನು ಇಟ್ಟು ಬರುವ ಬದಲು ಅದೇ ಫೋಟೋ ಚೌಕಟ್ಟುಗಳಿಂದ ಒಂದಿಷ್ಟು ಮಕ್ಕಳ ಮುಖದಲ್ಲಿ ನಗು ತರಿಸುವ ಕೆಲಸವನ್ನು ನೀವೂ ಮಾಡಬಹುದು. ಇಂಥ ದೇವರ ಫೋಟೋಗಳ ನ್ನಾಗಲಿ, ಮೂರ್ತಿಯನ್ನಾಗಲಿ, ಮನೆಯ ಹಿರಿಯರ ಫೋಟೋ ಆಗಲಿ ಮರುಬಳಕೆ ಮಾಡಬೇಕು ಎನ್ನುವ ಆಲೋಚನೆ ಇದ್ದರೆ ತೃಪ್ತಿ ಅವರನ್ನು ಸಂಪರ್ಕಿಸಬಹುದು.
ತೃಪ್ತಿ ಗಾಯಕ್‌ವಾಡ್‌- 8850328225
[email protected]

– ಮಂದಾರ ಸಾಗರ

ಟಾಪ್ ನ್ಯೂಸ್

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

2

ಎಸ್‌ಎಸ್‌ಎಲ್‌ಸಿ ಗ್ರೇಸ್‌ ಮಾರ್ಕ್ಸ್ ರದ್ದು: ಪ್ರತಿಭಾವಂತರ ಶ್ರಮಕ್ಕೆ ಮನ್ನಣೆ 

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

Untitled-1

ಪವಿತ್ರಾ – ಚಂದು ಪ್ರೀತಿಯಲ್ಲಿದ್ದರು.. ಆತ ನನ್ನ ಗಂಡ ಎಂದಿದ್ದರಂತೆ ಪವಿತ್ರಾ – ಚಂದು ಪತ್ನಿ

Untitled-1

Bihar: ಕಸ್ಟಡಿಯಲ್ಲಿದ್ದ ಅಪ್ರಾಪ್ತ ವಯಸ್ಕ ಪತ್ನಿ,ಪತಿ ಸಾವು; ಗ್ರಾಮಸ್ಥರಿಂದ ಠಾಣೆ ಧ್ವಂಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Sunil Chhetri

Sunil Chhetri ಸರಿಸಾಟಿಯಿಲ್ಲದ ಆಟಗಾರ; ಭಾರತ ಫುಟ್‌ಬಾಲ್‌ನ ತೆಂಡುಲ್ಕರ್‌ ಚೆಟ್ರಿ

ರಘುಪತಿ ಭಟ್‌

ಈಗಿನ ಬಿಜೆಪಿಯಲ್ಲಿ ಚಮಚಾಗಿರಿಗೆ ಟಿಕೆಟ್‌!: ಟಿಕೆಟ್‌ ವಂಚಿತ ರಘುಪತಿ ಭಟ್‌ ಬಿರುನುಡಿ

POK ಆಜಾದಿ ರಣಕಹಳೆ! ಪಾಕಿಸ್ಥಾನ ದೌರ್ಜನ್ಯ ವಿರುದ್ಧ ಬೀದಿಗಿಳಿದ ಪಾಕ್‌ ಆಕ್ರಮಿತ ಕಾಶ್ಮೀರ ಜನ

POK ಆಜಾದಿ ರಣಕಹಳೆ! ಪಾಕಿಸ್ಥಾನ ದೌರ್ಜನ್ಯ ವಿರುದ್ಧ ಬೀದಿಗಿಳಿದ ಪಾಕ್‌ ಆಕ್ರಮಿತ ಕಾಶ್ಮೀರ ಜನ

1-wewqeqwe

Karachi ಭಾರತೀಯ ಮಹಿಳೆಯ ವಡಾಪಾವ್‌, ಪಾವ್‌ಭಾಜಿ ಕಮಾಲ್‌!

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Hubli; ಅಂಜಲಿ ಅಂಬಿಗೇರ ಪ್ರಕರಣ ತನಿಖೆ ಸಿಐಡಿಗೆ ವಹಿಸಲಿ: ಸಂತೋಷ್ ಲಾಡ್

Hubli; ಅಂಜಲಿ ಅಂಬಿಗೇರ ಪ್ರಕರಣ ತನಿಖೆ ಸಿಐಡಿಗೆ ವಹಿಸಲಿ: ಸಂತೋಷ್ ಲಾಡ್

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

7

ಇನ್‌ಸ್ಪೆಕ್ಟರ್‌ ಹೆಸರಲ್ಲಿ ಸುಲಿಗೆ: ಬೆಸ್ಕಾಂ ಎಂಜಿನಿಯರ್‌ ಸೆರೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.