ದೇಗುಲಗಳ ಟ್ರಸ್ಟ್ಗಳಲ್ಲಿ ರಾಜಕಾರಣಿಗಳಿಗೆ ಏನು ಕೆಲಸ?
Team Udayavani, Sep 27, 2022, 6:55 AM IST
ಹೊಸದಿಲ್ಲಿ: ದೇವಾಲಯಗಳ ಟ್ರಸ್ಟ್ಗಳ ಆಡಳಿತ ಮಂಡಳಿಗಳಲ್ಲಿ ರಾಜಕಾರಣಿಗಳ ನೇಮಕದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
“ಹಲವು ಆರೋಪಗಳನ್ನು ಎದುರಿಸುತ್ತಿರುವವರನ್ನು, ನಡವಳಿಕೆಯೇ ಪ್ರಶ್ನಾರ್ಹವಾಗಿರುವವರನ್ನು ಮತ್ತು ವಿಶ್ವಾಸಾರ್ಹತೆಯೇ ಇಲ್ಲದವರನ್ನು ಹೇಗೆ ದೇಗುಲಗಳ ಟ್ರಸ್ಟ್ನಲ್ಲಿ ಸೇರಿಸುತ್ತೀರಿ’ ಎಂದು ಪ್ರಶ್ನಿಸಿದೆ.
ಶ್ರೀ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳ ಮಂಡಳಿ ನೇಮಕದ ಕುರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾ|ಅಜಯ್ ರಸ್ತೋಗಿ ಮತ್ತು ನ್ಯಾ|ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ, “ಕೆಲವು ದೇವಾಲಯಗಳ ವಿಚಾರಕ್ಕೆ ಬಂದಾಗ ಅದು ಹೇಗೆ ರಾಜಕಾರಣಿಗಳು ಅಷ್ಟೊಂದು ಸಕ್ರಿಯರಾಗುತ್ತಾರೆ? ರಾಜಕಾರಣಿಗಳು ತಮ್ಮವರನ್ನೇ ಟ್ರಸ್ಟ್ಗಳಿಗೆ ಏಕೆ ನೇಮಿಸುತ್ತಾರೆ?’ ಎಂದು ಪ್ರಶ್ನಿಸಿದೆ.
ದೇವಾಲಯಗಳ ಮೇಲೆ ಜನರಿಗೆ ಅಗಾಧ ನಂಬಿಕೆಯಿರುತ್ತದೆ. ಹೀಗಿರುವಾಗ, ಉತ್ತಮ ವ್ಯಕ್ತಿತ್ವ, ಸಮಗ್ರತೆ, ಪರಿಣತಿಯಿರುವಂಥ ವ್ಯಕ್ತಿಗಳನ್ನು ಟ್ರಸ್ಟ್ಗಳಿಗೆ ನೇಮಕ ಮಾಡಬೇಕು. ಆ ಮೂಲಕ ಅಲ್ಲಿ ದೌರ್ಜನ್ಯಗಳು ನಡೆಯದೇ, ಭಕ್ತರಿಗೆ ಅನುಕೂಲ, ಉತ್ತಮ ಸೇವೆಗಳು ಲಭ್ಯವಾಗುವಂತೆ ಮಾಡಬೇಕು ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ