ಸದ್ದಿಲ್ಲದೇ ಮಂಗಳಯಾನ ಮುಕ್ತಾಯ? ಭೂಮಿ ಜತೆಗಿನ ಸಂಪರ್ಕ ಬಂದ್‌

ಬರಿದಾದ ಬ್ಯಾಟರಿ ಸಾಮರ್ಥ್ಯ

Team Udayavani, Oct 3, 2022, 7:30 AM IST

ಸದ್ದಿಲ್ಲದೇ ಮಂಗಳಯಾನ ಮುಕ್ತಾಯ? ಭೂಮಿ ಜತೆಗಿನ ಸಂಪರ್ಕ ಬಂದ್‌

ನವದೆಹಲಿ: ಎಂಟು ವರ್ಷಗಳ ಹಿಂದೆ ಭೂಮಿಯಿಂದ ನಭಕ್ಕೆ ನೆಗೆದು, ಮಂಗಳನ ಸುತ್ತ ಸುತ್ತುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಾರ್ಸ್‌ ಆರ್ಬಿಟರ್‌(ಮಂಗಳಯಾನ) ನೌಕೆ ಇದೀಗ ಭೂಮಿಯೊಂದಿಗಿನ ಸಂಪರ್ಕವನ್ನು ಕಡಿತಗೊಳಿಸಿಕೊಂಡಿದೆ ಎನ್ನಲಾಗಿದೆ.

ನೌಕೆಯಲ್ಲಿನ ಬ್ಯಾಟರಿ ಸಾಮರ್ಥ್ಯ ಸಂಪೂರ್ಣವಾಗಿ ಬರಿದಾಗಿರುವ ಹಿನ್ನೆಲೆ ಸಂಪರ್ಕ ಕಡಿತವಾಗಿದೆ ಎಂದು ಇಸ್ರೋದ ಮೂಲಗಳು ತಿಳಿಸಿವೆ.

ಮಂಗಳಯಾನ ನೌಕೆಯನ್ನು 450 ಕೋಟಿ ರೂ. ವೆಚ್ಚದಲ್ಲಿ 2013ರ ನವೆಂಬರ್‌ನಲ್ಲಿ ಉಡಾವಣೆ ಮಾಡಲಾಗಿತ್ತು. ಪಿಎಸ್‌ಎಲ್‌ವಿ-ಸಿ25 ರಾಕೆಟ್‌ ಹೊತ್ತೂಯ್ದಿದ್ದ ಈ ನೌಕೆಯನ್ನು 2014ರ ಸೆ.24ರಂದು ಮಂಗಳನ ಕಕ್ಷೆಯಲ್ಲಿ ಕೂರಿಸಲಾಗಿತ್ತು. ಗ್ರಹಣ ವೇಳೆ ಬ್ಯಾಟರಿ ಬಳಸಿಕೊಳ್ಳುತ್ತಿದ್ದ ನೌಕೆಗೆ ಒಟ್ಟು 1 ಗಂಟೆ 40 ನಿಮಿಷಗಳ ಕಾಲ ಬಳಸುವಷ್ಟು ಬ್ಯಾಟರಿ ಸಾಮರ್ಥ್ಯವಿತ್ತು. ಇದೀಗ ಅದು ಸಂಪೂರ್ಣವಾಗಿ ಬರಿದಾಗಿದೆ. ಇತ್ತೀಚೆಗೆ ಹೆಚ್ಚು ಗ್ರಹಣಗಳು ಸಂಭವಿಸಿವೆ. ಅದರಲ್ಲೂ ಒಂದು ಗ್ರಹಣವು ಏಳೂವರೆ ತಾಸುಗಳಷ್ಟು ಕಾಲ ಆವರಿಸಿತ್ತು. ಅದರಿಂದಾಗಿ ಬ್ಯಾಟರಿ ಖಾಲಿಯಾಗಿದೆ ಎಂದು ಮೂಲವು ತಿಳಿಸಿದೆ.

ಈ ಬಗ್ಗೆ ಇಸ್ರೋ ಆಗಲೀ ಅಥವಾ ಸರ್ಕಾರವಾಗಲೀ ಯಾವುದೇ ಅಧಿಕೃತ ಹೇಳಿಕೆ ಕೊಟ್ಟಿಲ್ಲ.

ಈ ನೌಕೆಯು ಆರು ತಿಂಗಳ ಕಾಲ ಕೆಲಸ ಮಾಡುತ್ತದೆ ಎನ್ನುವ ನಿರೀಕ್ಷೆಯೊಂದಿಗೆ ಉಡಾವಣೆ ಮಾಡಲಾಗಿತ್ತಾದರೂ ಇದು ಬರೋಬ್ಬರಿ 8 ವರ್ಷಗಳ ಕಾಲ ಅತ್ಯುತು½ತವಾಗಿ ಕೆಲಸ ಮಾಡಿದೆ ಎಂದೂ ತಿಳಿಸಲಾಗಿದೆ.

ಏನೇನು ಕಳುಹಿಸಿಕೊಟ್ಟಿದೆ?
ಮಂಗಳಯಾನ ನೌಕೆಯಲ್ಲಿ ವಿವಿಧ ವಿದ್ಯಮಾನಗಳ ಪರೀಕ್ಷೆಗೆಂದು ಒಟ್ಟು ಐದು ರೀತಿಯ ಸಲಕರಣೆಗಳನ್ನು ಕಳುಹಿಸಿಕೊಡಲಾಗಿತ್ತು. ಇವುಗಳು ಮಂಗಳ ಗ್ರಹದ ಎರಡು ಚಂದ್ರಗಳಲ್ಲಿ ಒಂದಾದ ಡಿಮೋಸ್‌ನ ಚಿತ್ರವನ್ನು ಕಳುಹಿಸಿಕೊಟ್ಟಿದೆ. ಗ್ರಹದಲ್ಲಿ ಎಷ್ಟೋ ವರ್ಷಗಳ ಹಿಂದೆ ಇದ್ದ ಟಿಹೆìನಸ್‌ ಮಾನ್ಸ್‌ ಅಗ್ನಿಪರ್ವತ ಹಾಗೂ ಅದರಿಂದ ಆದ ಕುಳಿ, ಕಾಲುವೆಗಳ ಚಿತ್ರ, ಗ್ರಹದ ಅತಿದೊಡ್ಡ ಕಣಿವೆ ವ್ಯಾಲ್ಲಿಸ್‌ ಮರೈನರಿಸ್‌ ಚಿತ್ರಗಳನ್ನೂ ಕಳುಹಿಸಿದೆ. ಒಟ್ಟಾರೆಯಾಗಿ ಮಂಗಳನ ಸಾವಿರಕ್ಕೂ ಅಧಿಕ ಚಿತ್ರಗಳು ಈ ನೌಕೆಯಿಂದ ಸಿಕ್ಕಿದೆ.

ಮತ್ತೊಂದು ಮಂಗಳಯಾನ:
ಮಂಗಳಯಾನ ಎರಡರ ನೌಕೆಯನ್ನು ನಭಕ್ಕೆ ಕಳುಹಿಸಬೇಕೆಂದು ಇಸ್ರೋ 2016ರಲ್ಲಿಯೇ ಯೋಜನೆ ರೂಪಿಸಿತ್ತು. ಆದರೆ ಗಗನಯಾನ, ಚಂದ್ರಯಾನ-3 ಮತ್ತು ಆದಿತ್ಯಾ-ಎಲ್‌1 ಯೋಜನೆಗಳ ಹಿನ್ನೆಲೆ ಈ ಯೋಜನೆ ತಡವಾಗಿದೆ.

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

Election Campaign; ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.