ಪ್ರಾಕೃತಿಕ ಸಂಪತ್ತಿನ ಊರಿಗೆ ಅಭಿವೃದ್ಧಿಯ ಸೌಕರ್ಯ ಸಿಗಲಿ

ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶ, ಸ್ಥಳೀಯ ಬೇಡಿಕೆಗಳಿಗೆ ಸ್ಪಂದನೆ ಅಗತ್ಯ

Team Udayavani, Oct 11, 2022, 12:49 PM IST

10

ಉಳ್ಳಾಲ: ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ವಿರುವ ನೇತ್ರಾವತಿ ನದಿ ತಟದಲ್ಲಿರುವ ಪಾವೂರು ಗ್ರಾಮ ಅಭಿವೃದ್ಧಿಗೆ ಪೂರಕ ಯೋಜನೆಗಳ ಆವಶ್ಯಕತೆಯಿದೆ. ಗ್ರಾಮದ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ಪ್ರದೇಶ ಅಭಿವೃದ್ಧಿಯಾಗಿದ್ದು, ಒಳಪ್ರದೇಶಗಳ ಅಭಿವೃದ್ಧಿಯಾಗಬೇಕಿದೆ.

ನೇತ್ರಾವತಿ ನದಿ ತಟದಲ್ಲಿರುವ ಈ ಗ್ರಾಮಕ್ಕೆ ಹರೇಕಳ- ಅಡ್ಯಾರ್‌ ಸಂಪರ್ಕಿಸುವ ನೂತನ ಸೇತುವೆಯ ನದಿ ತಟದಿಂದ ಪಾವೂರು ಇನೋಳಿ – ಸಜಿಪ ಸಂಪರ್ಕ ರಸ್ತೆ ಅಭಿವೃದ್ಧಿ, ಕೃಷಿ ಭೂಮಿಗೆ ನೀರು ನುಗ್ಗುವುದನ್ನು ತಡೆಯಲು ತಡೆಗೋಡೆ, ಪಾವೂರು ಉಳಿಯಕ್ಕೆ ತೂಗು ಸೇತುವೆ ಸಂಪರ್ಕ ಕಲ್ಪಿಸಿದರೆ ಗ್ರಾಮ ಕೃಷಿ, ಪ್ರವಾಸೋದ್ಯಮದೊಂದಿಗೆ ಅಭಿವೃದ್ಧಿಯ ಪಥದತ್ತ ಸಾಗಲು ಸಾಧ್ಯ.

ಜಿಲ್ಲಾ ಕೇಂದ್ರ ಮಂಗಳೂರಿನಿಂದ ಸುಮಾರು 25 ಕಿ. ಮೀ. ದೂರವಿರುವ ಪಾವೂರು ಪ್ರಾಕೃತಿಕವಾಗಿ ಅತೀ ಸುಂದರ ಗ್ರಾಮ. ಗುಡ್ಡಬೆಟ್ಟಗಳಿಂದ ಸೇರಿದ ಈ ಗ್ರಾಮದ ಒಂದು ಬದಿ ನೇತ್ರಾವತಿ ನದಿ ತಟವನ್ನು ಹೊಂದಿದ್ದು, ಇನೋಳಿ ದೇವಂದಬೆಟ್ಟ ಧಾರ್ಮಿಕ ಪ್ರವಾಸೋದ್ಯಮ ಮತ್ತು ನಡುಗುಡ್ಡೆಗಳನ್ನು ಅಭಿವೃದ್ಧಿ ಪಡಿಸಿದರೆ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ.

ಪೊಡಾರ್‌ ಸೈಟ್‌, ಗಾಡಿಗದ್ದೆ, ಮಲಾರ್‌, ಖಂಡಿಗ, ಉಳಿಯ, ಕಿಲ್ಲೂರು, ಇನೋಳಿ, ಕಂಬಳಪದವು ಮುಂತಾದ ಪ್ರದೇಶಗಳನ್ನು ಹೊಂದಿದ್ದು ಪಾವೂರು ಉಳಿಯ ಇಲ್ಲಿನ ಪ್ರಮುಖ ಪ್ರದೇಶಗಳು. ಗ್ರಾಮದಲ್ಲಿ ಒಂದು ಪ್ರೌಢ ಶಾಲೆ, ಮೂರು ಹಿರಿಯ ಪ್ರಾಥಮಿಕ ಶಾಲೆ, 8 ಅಂಗನವಾಡಿ ಕೇಂದ್ರಗಳಿದ್ದು, ಆರೋಗ್ಯ ಕೇಂದ್ರ, ಪಶುಚಿಕಿತ್ಸಾ ಕೇಂದ್ರವಿದೆ.

ತೂಗು ಸೇತುವೆ ಹಲವು ವರ್ಷದ ಬೇಡಿಕೆ:

ಸುಮಾರು 38 ಕುಟುಂಬಗಳು, ಒಂದು ಕ್ರೈಸ್ತರ ಧರ್ಮಕೇಂದ್ರವನ್ನು ಹೊಂದಿರುವ ನೇತ್ರಾವತಿ ತಟದ ದ್ವೀಪ ಪಾವೂರು ಉಳಿಯಕ್ಕೆ ಮೇಲಿನ ಅಡ್ಯಾರ್‌ನಿಂದ ತೂಗು ಸೇತುವೆ ಬೇಡಿಕೆ ಕಳೆದ 20 ವರುಷಗಳಿಂದ ಇದೆ. ತೂಗು ಸೇತುವೆಗೆ 6.5 ಕೋಟಿ ರೂ. ಯೋಜನೆಗೆ ಅನುಮೋದನೆ ಸಿಕ್ಕಿತ್ತು. ಮಲೆನಾಡು ಅಭಿವೃದ್ಧಿ ಯೋಜನೆಯಡಿ 1.5 ಕೋಟಿ ರೂ. ಬಿಡುಗಡೆಯಾಗಿದ್ದು, ಬಳಿಕ ತಾಂತ್ರಿಕ ಕಾರಣಗಳಿಂದ ಯೋಜನೆ ನನೆಗುದಿಗೆ ಬಿತ್ತು ಎನ್ನುತ್ತಾರೆ ಗ್ರಾ.ಪಂ.ಮತ್ತು ತಾ. ಪಂ.ಮಾಜಿ ಅಧ್ಯಕ್ಷ ಮಹಮ್ಮದ್‌ ಮೋನು. ಹಿಂದೆ ಬೇಸಗೆ ಕಾಲದಲ್ಲಿ ನದಿಯಲ್ಲಿ ನಡೆದಾಡಿಕೊಂಡು ದಾಟುತ್ತಿದ್ದು, ಮರಳು ಮಾಫಿಯಾದ ಕಾರಣ ನದಿ ಆಳವಾಗಿದೆ. ಕಳೆದ ಐದು ವರುಷಗಳಿಂದ ಬೇಸಗೆ ಕಾಲದಲ್ಲಿ ತಾತ್ಕಾಲಿಕ ಸೇತುವೆಯ ಮೂಲಕ ಜನರು ಪಟ್ಟಣ ಸೇರಿದರೆ, ಮಳೆಗಾಲದಲ್ಲಿ ಸೇತುವೆ ಕಳಚಿ ದೋಣಿಯಲ್ಲೇ ದೈನಂದಿನ ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿ ಗಳು ಪರದಾಡುವಂತಾಗಿದೆ.

ಹರೇಕಳ-ಅಡ್ಯಾರ್‌ ಸೇತುವೆಯಿಂದ ಇನೋಳಿವರೆಗೆ ನದಿ ತಟದಲ್ಲಿ ರಸ್ತೆಯೊಂದಿಗೆ ಕೃಷಿಭೂಮಿಗೆ ನೀರು ಹರಿಯದ ಹಾಗೆ ತಡೆಗೋಡೆ ನಿರ್ಮಾಣವಾದರೆ ಗ್ರಾಮದ ಜನರಿಗೆ ಮಂಗಳೂರು ಸಂಪರ್ಕ 10 ಕಿ. ಮೀ. ಉಳಿತಾಯದೊಂದಿಗೆ ಕೃಷಿ ಅಭಿವೃದ್ಧಿಗೆ ಪೂರಕವಾಗಲಿದೆ. ಈ ಯೋಜನೆಗೆ ಸರ್ವೇ ಕಾರ್ಯ ನಡೆದಿದ್ದು, ಯೋಜನೆ ಅನುಷ್ಠಾನವಾಗಬೇಕಾಗಿದೆ. ಇದರೊಂದಿಗೆ ಧಾರ್ಮಿಕ ಪ್ರವಾಸೋದ್ಯಮವಾಗಿರುವ ದೇವಂದಬೆಟ್ಟದ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರೀ ಕ್ಷೇತ್ರಕ್ಕೂ ಸಂಪರ್ಕ ಕಲ್ಪಿಸಲು ಸಾಧ್ಯವಿದ್ದು ಈ ಪ್ರದೇಶ ಪ್ರವಾಸೋದ್ಯಮ ತಾಣವಾಗಲಿದೆ.

ವಿವಿಧ ಬೇಡಿಕೆಗಳು:

ಪಜೀರು, ಬೋಳಿಯಾರ್‌ ಸಂಪರ್ಕಿಸುವ ಈ ಗ್ರಾಮಕ್ಕೆ ಪದವಿಪೂರ್ವ ಕಾಲೇಜು, ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರ ಕೊರತೆ ನಿವಾರಣೆ, ಆರೋಗ್ಯ ಕೇಂದ್ರ ಮೇಲ್ದರ್ಜೆಗೆ, ಪಶುಚಿಕಿತ್ಸಾ ಕೇಂದ್ರಕ್ಕೆ ವೈದ್ಯಾಧಿಕಾರಿ, ನಿವೇಶನ ರಹಿತರಿಗೆ ನಿವೇಶನ, ಆಟದ ಮೈದಾನ, ಸರಕಾರಿ ಬಸ್‌, ಕಂಬಳಪದವು ಪರಿಶಿಷ್ಟ ಜಾತಿ ಕಾಲನಿ ಅಭಿವೃದ್ಧಿ ಪ್ರಮುಖ ಬೇಡಿಕೆಗಳು.

ಪಾವೂರು ಗ್ರಾಮದ ಭಂಡಾರ ಮನೆಯಿಂದ ಹರೇಕಳ ಕಡವು ಬಳಿಗೆ ಸಂಪರ್ಕರಸ್ತೆ, ಇನೋಳಿ ಮಲರಾಯ ದೈವಸ್ಥಾನ ರಸ್ತೆ ಮತ್ತು ಅಭಿವೃದ್ಧಿ, ವೈದ್ಯನಾಥ ದೈವಸ್ಥಾನಕ್ಕೆ ರಸ್ತೆ ಸಂಪರ್ಕ, ಅಲ್‌ ಮುಬಾರಕ್‌ ಜುಮಾ ಮಸೀದಿಯಿಂದ ಜುಮಾ ಮಸೀದಿಗೆ ಸಂಪರ್ಕ ರಸ್ತೆ, ಇನೋಳಿ ದೇವಸ್ಥಾನದಿಂದ ಇನೋಳಿ ಕೆಳಗಿನ ಕೆರೆ ರಸ್ತೆ ಅಭಿವೃದ್ಧಿ, ಪಾವೂರು ಗ್ರಾಮ ನಾಟ್ರಕೋಡಿಗ ರಸ್ತೆ ರಚನೆ, ಪಾವೂರು ಕೋರಿಯ ಪ್ರದೇಶಕ್ಕೆ ರಸ್ತೆ ರಚನೆ, ಇನೋಳಿ ಹಿಂದೂ ಶ್ಮಶಾನಭೂಮಿಗೆ ರಸ್ತೆ ಅಭಿವೃದ್ಧಿ, ಮಜಿಕಟ್ಟ ಕಾಲನಿ ರಸ್ತೆ ಅಭಿವೃದ್ಧಿ, ಉಗ್ಗನ ಬೈಲ್‌ ಸರಕಾರಿ ತೋಡಿಗೆ ಬದಿ ಕಟ್ಟುವುದು ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಬೇಡಿಕೆಯಿದೆ.

ಊರಿನ ಹಿನ್ನೆಲೆ

ಪಾವೂರು ಗ್ರಾಮದ ಬಗ್ಗೆ “ಪಾಂಬುನ + ಊರು “ಪಾಂಬೂರು’ ಕ್ರಮೇಣ ಪಾವೂರು ಆಯಿತು. ನದಿ ತೀರದ ಮುಳುಗಡೆ ಪ್ರದೇಶ ಅಥವಾ ನೆರೆ ನೀರಲ್ಲಿ ತೇಲುವ ಪ್ರದೇಶವನ್ನು ತುಳುವಿನಲ್ಲಿ ಪಾಂಬೂ /ಪಾಂಬುನ ಎನ್ನಲಾಗುತ್ತದೆ. ನೇತ್ರಾವತಿ ನದಿ ತೀರದ ಈ ಮುಳುಗಡೆಯಾಗುತ್ತಿದ್ದ ಪ್ರದೇಶದಲ್ಲಿ ಪಾವೂರು ಎಂಬ ಬಂಟ ಮನೆತನದ ಮನೆಯೊಂದಿತ್ತು. ಹೀಗೆ ಈ ಗ್ರಾಮಕ್ಕೆ ಪಾವೂರು ಎಂಬ ಹೆಸರು ಬಂದಿರಬಹುದು ಎಂಬುದು ಐತಿಹ್ಯ.

ಹಿಂದೆ ಬೇಸಗೆ ಕಾಲದಲ್ಲಿ ನಡೆದಾಡಿಕೊಂಡು ಹೋಗುತ್ತಿದ್ದು, ಮರಳುಗಾರಿಕೆ ಆರಂಭದ ಬಳಿಕ ಬೇಸಗೆಯಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿ ದೈನಂದಿನ ಕಾರ್ಯಚಟುವಟಿಕೆ ನಡೆಸುತ್ತಿದ್ದೇವೆ. ಇದೀಗ ಅಡ್ಯಾರ್‌-ಹರೇಕಳ ಸೇತುವೆ ನಿರ್ಮಾಣದ ಬಳಿ ಡ್ಯಾಂನಲ್ಲಿ ನೀರು ನಿಲ್ಲಿಸುವುದರಿಂದ ಮುಂದಿನ ಬೇಸಗೆಯಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸುವುದು ಕಷ್ಟ ಸಾಧ್ಯ. ಈಗಾಗಲೇ ಸಣ್ಣ ದೋಣಿಯಲ್ಲಿ ಮೀನುಗಾರಿಕೆ ನಡೆಸಲು ಕಷ್ಟವಾಗುತ್ತಿದ್ದು, ಮೀನುಗಾರಿಕೆಯನ್ನೇ ವೃತ್ತಿಯನ್ನಾಗಿಸಿದವರಿಗೆ ತೊಂದರೆಯಾಗಲಿದೆ. ಸ್ಥಳೀಯ ಶಾಸಕರು ಇಲ್ಲಿನ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ್ದು, ಬೇಡಿಕೆ ಈಡೇರಿಕೆಗೆ ಜನಪ್ರತಿನಿಧಿಗಳು ಮತ್ತು ಸ್ಥಳೀಯ ಪಂಚಾಯತ್‌ ಆಡಳಿತ ಮುಂದೆ ಬರಬೇಕು.. – ಗಿಲ್ಬರ್ಟ್‌ ಡಿ’ಸೋಜಾ, ಪಾವೂರು ಉಳಿಯ ನಿವಾಸಿ

ಪಾವೂರು ಗ್ರಾಮದ ಗಡಿಭಾಗವಾಗಿರುವ ಹರೇಕಳ ಕಡವು ಬಳಿ ಸೇತುವೆ ಕಂ ಡ್ಯಾಂ ನಿರ್ಮಾಣವಾಗಿರುವುದರಿಂದ ಪಕ್ಕದ ಕೃಷಿಭೂಮಿಗೆ ನೀರು ನುಗ್ಗಿ ಹಾನಿಯಾಗುವ ಸಂಭವವಿದ್ದು, ಈ ಪ್ರದೇಶದಲ್ಲಿ ಶಾಶ್ವತ ಕ್ರಮವಾಗಿ ತಡೆಗೋಡೆ ನಿರ್ಮಾಣದೊಂದಿಗೆ ಈ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು. ಗ್ರಾಮದ ಇತರ ಸಮಸ್ಯೆಗಳಿಗೆ ಸ್ಥಳೀಯ ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲಾಗುವುದು. – ಕಮರುನ್ನೀಸಾ ಅಕ್ಷರ ನಗರ, ಅಧ್ಯಕ್ಷರು, ಪಾವೂರು ಗ್ರಾಮ ಪಂಚಾಯತ್‌

„ವಸಂತ್‌ ಎನ್‌. ಕೊಣಾಜೆ

ಟಾಪ್ ನ್ಯೂಸ್

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.