ಟಿಪ್ಪರ್ ಹಿಂಬದಿಗೆ ಬೈಕ್ ಢಿಕ್ಕಿ: ತಾ.ಪಂ ಸಾಮಾಜಿಕ ಲೆಕ್ಕ ಪರಿಶೋಧಕ ಸ್ಥಳದಲ್ಲೇ ಸಾವು
Team Udayavani, Oct 29, 2022, 7:29 PM IST
ಕುಣಿಗಲ್: ಟಿಪ್ಪರ್ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ತಾಲೂಕು ಪಂಚಾಯ್ತಿ ಸಾಮಾಜಿಕ ಪರಿಶೋದಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಜ್ಯ ಹೆದ್ದಾರಿ 38 ದೊಡ್ಡಮಲಳವಾಡಿ ಗ್ರಾಮದಲ್ಲಿ ಶನಿವಾರ ( ಅ.29 ರಂದು) ಸಂಜೆ ನಡೆದಿದೆ.
ತುಮಕೂರು ವಿಜಯನಗರ ವಾಸಿ ಯು.ಆರ್ ಅನಂತ ಮೃತ ದುರ್ಧೈವಿ.
ಘಟನೆ ವಿವರ: ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ತಮ್ಮ ಕರ್ತವ್ಯ ಮುಗಿಸಿಕೊಂಡು ತಮ್ಮ ಮನೆಗೆ ವಾಪಸ್ಸ್ ಆಗುತ್ತಿದ್ದ ವೇಳೆ ದೊಡ್ಡಮಲಳವಾಡಿ ಗ್ರಾಮದ ಬಳಿ ನಿಂತಿದ್ದ ಟಿಪ್ಪರ್ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.