ತಗ್ಗಿದ ಡಿವೈಡರ್‌ ಎತ್ತರ: ಅಪಘಾತ ಹೆಚ್ಚಳ

ಹೆದ್ದಾರಿ ಇಲಾಖೆಯಿಂದ ಅವೈಜ್ಞಾನಿಕ ರಸ್ತೆ ಡಾಮರು ಕಾಮಗಾರಿ

Team Udayavani, Dec 1, 2022, 12:07 PM IST

7

ಸುರತ್ಕಲ್‌: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‌ನಿಂದ ಕೂಳೂರು ಕೊಟ್ಟಾರವರೆಗೆ ಹೆದ್ದಾರಿ ಇಲಾಖೆಯ ಹಾಕುವ ಅವೈಜ್ಞಾನಿಕ ಡಾಮರು ಕಾಮಗಾರಿಯಿಂದ ಡಿವೈಡರ್‌ಗಳ ಎತ್ತರ ಕಡಿಮೆಯಾಗಿ ವಾಹನಗಳು ಡಿವೈಡರ್‌ ಹಾರಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ.

6 ತಿಂಗಳುಗಳ ಅವಧಿಯಲ್ಲಿ ತಡಂಬೈಲ್‌ನಿಂದ ಕೋಡಿಕಲ್‌ ವರೆಗೆ 7 ವಾಹನಗಳು ಡಿವೈಡರ್‌ ಹಾರಿ ಅಪಘಾತ ಸಂಭವಿಸಿದೆ. ಇದರಲ್ಲಿ ಎರಡು ಮಾತ್ರ ಟ್ರಾಫಿಕ್‌ ವಿಭಾಗದಲ್ಲಿ ದೂರು ದಾಖಲಾಗಿದೆ. ಉಳಿದಂತೆ ನಾಲ್ಕು ಕಾರುಗಳಿಗೆ ಸಣ್ಣ ಪುಟ್ಟ ಹಾನಿಯಾದ ಕಾರಣ ಕೇಸು ದಾಖಲಿಸದೆ ಪ್ರಯಾಣ ಮುಂದುವರಿಸಿದ್ದಾರೆ. ಓವರ್‌ಟೇಕ್‌ ಮಾಡುವ ಸಂದರ್ಭ ಇಂತಹ ಪ್ರಮಾದಗಳು ನಡೆಯುತ್ತಿವೆ. ರಸ್ತೆ ಡಾಮರು ಹಾಕುವ ಮಾಡಿದ ಎಡವಟ್ಟಿನಿಂದ ಡಿವೈಡರ್‌ಗಳ ಎತ್ತರ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಲೇ ಹೋಗುತ್ತಿದ್ದು, ಕೆಲವೆಡೆ ಕಾಣದಂತಾಗಿದೆ. ಕೇವಲ ಹಳದಿ ಪೈಂಟ್‌ ಮಾತ್ರ ಕಾಣಿಸುತ್ತಿದೆ! ಇರ್ಕಾನ್‌ ನಿರ್ಮಾಣದ ಸುರತ್ಕಲ್‌ ಕೊಟ್ಟಾರವರೆಗಿನ ರಸ್ತೆ ನಿರ್ವಹಣೆ ಗಮನಿಸಿದರೆ ಡಿವೈಡರ್‌ಗಳ ಅಯೋಮಯ ಸ್ಥಿತಿ ಕಂಡು ಬರುತ್ತಿದೆ.

ಡಿವೈಡರ್‌ ಕನಿಷ್ಠ 1 ಅಡಿ ಎತ್ತರಬೇಕು

ಪ್ರತೀಯೊಂದು ಕಡೆ ಡಿವೈಡರ್‌ ಕನಿಷ್ಠ ಒಂದು ಅಡಿ ಅಂದರೆ 12 ಇಂಚಿನಿಂದ 15 ಇಂಚಿನವೆರೆಗೆ ಎತ್ತರವಿರಬೇಕು. ಹೊಸ ರಸ್ತೆ ಮಾಡುವ ಸಂದರ್ಭ ಈ ಡಿವೈಡರ್‌ ಕಾನೂನಾತ್ಮಕವಾಗಿಯೇ ಇದ್ದರೂ ಬಳಿಕ ನಿರ್ವಹಣೆ ಸಂದರ್ಭ ಮಾಯವಾಗುತ್ತಿದೆ. ಪ್ರತೀ ಬಾರಿಯೂ ಡಾಮರು ಹಾಕುವ ಮೊದಲು ಹಿಂದೆ ಹಾಕಿದ ಡಾಮರು ತೆಗೆದು ಹೊಸ ಡಾಮರು ಅಳವಡಿಸಬೇಕು. ಆದರೆ ಈ ಬಗ್ಗೆ ಹೆದ್ದಾರಿ ಇಲಾಖೆಯೂ ನಿರ್ಲಕ್ಷ್ಯ ವಹಿಸಿದ ಕಾರಣ ಗುತ್ತಿಗೆ ಪಡೆದ ಮಂದಿ ಹಳೆಯ ಡಾಮರಿನ ಮೇಲೆಯೇ ಮತ್ತೆ ಮತ್ತೆ ಹಾಕುವುದರಿಂದ ಡಿವೈಡರ್‌ ಎತ್ತರ ಕಡಿಮೆಯಾಗುತ್ತಲೇ ಹೋಗುತ್ತಿದೆ. ಡಾಮರು ಹಾಕಿದರೂ ಡಿವೈಡರ್‌ಗಳನ್ನು ಮತ್ತೆ ಎತ್ತರಿಸಲಾಗುವುದಿಲ್ಲ.

ಪಣಂಬೂರು, ಬೈಕಂಪಾಡಿ, ಪೋರ್ತ್‌ ಮೈಲ್‌ ಭಾಗದಲ್ಲಿ ಡಿವೈಡರ್‌ 10 ಇಂಚುಗಳಷ್ಟು ಡಾಮರು ರಸ್ತೆಯ ಒಳಗೆ ಸೇರಿದೆ. ಇದರಿಂದಾಗಿ ಡಿವೈಡರ್‌ಗಳು ರಾತ್ರಿ ವೇಳೆ ಸರಿಯಾಗಿ ಕಾಣದ ಕಾರಣ ವಾಹನಗಳು ಡಿವೈಡರ್‌ ಹತ್ತಿ ಅಪಘಾತವಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸಮರ್ಪಕ ಡಾಮರು ಹಾಕುವ ಕಾರ್ಯಕ್ಕೆ ಒತ್ತು ನೀಡಬೇಕಿದೆ.

ಸುರಕ್ಷಿತ ಸಂಚಾರಕ್ಕೆ ಆದ್ಯತೆ: ಹೆದ್ದಾರಿ ನಿರ್ವಹಣೆ ಹಾಗೂ ಮರು ಡಾಮರು ಅಳವಡಿಸುವ ವೇಳೆ ಅನುಸರಿಸುಬೇಕಾದ ನೀತಿ ನಿಯಮಾವಳಿ ಬಗ್ಗೆ ಸ್ಥಳೀಯ ಹೆದ್ದಾರಿ ಪ್ರಾದೇಶಿಕ ಅಧಿಕಾರಿಗಳಲ್ಲಿ ಮಾಹಿತಿ ಪಡೆದು ಪರಿಶೀಲಿಸುತ್ತೇನೆ. ಹೆದ್ದಾರಿಗಳಲ್ಲಿ ಸುರಕ್ಷಿತ ಸಂಚಾರಕ್ಕೆ ಆದ್ಯತೆ ನೀಡಬೇಕು. ಗುತ್ತಿಗೆದಾರರ ತಪ್ಪಾಗಿದ್ದಲ್ಲಿ ಅದಕ್ಕೆ ಬೇಕಾದ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. – ಡಾ| ಭರತ್‌ ಶೆಟ್ಟಿ ವೈ., ಶಾಸಕರು

-ಲಕ್ಷ್ಮೀ ನಾರಾಯಣ ರಾವ್‌

ಟಾಪ್ ನ್ಯೂಸ್

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

1-qweewqe

Ayodhya; ‘ಮಂದಿರ-ಮಸೀದಿ’ಸಮಸ್ಯೆಯಲ್ಲ,ಅಭಿವೃದ್ಧಿ ಬಯಸುತ್ತೇವೆ ಎಂದ ಮುಸ್ಲಿಮರು

1-weweqwew

CRPF exits;ಮೇ 20 ರಿಂದ ಸಿಐಎಸ್ಎಫ್ ತುಕಡಿಗಳಿಂದ ಸಂಸತ್ತಿಗೆ ಭದ್ರತೆ

1-wqqewqeq

Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ

1-qweeqw

Kundapura; ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿಯೂ ವಿಧಿವಶ!

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Mangaluru ಫಾತಿಮಾ ರಲಿಯಾ ಸಹಿತ ಆರು ಮಂದಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ

Mangaluru ಫಾತಿಮಾ ರಲಿಯಾ ಸಹಿತ ಆರು ಮಂದಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ

Surathkal ಶಬರಿಮಲೆ ಯಾತ್ರೆ ಸಂದರ್ಭ ಹೃದಯಾಘಾತದಿಂದ ಸಾವು

Surathkal ಶಬರಿಮಲೆ ಯಾತ್ರೆ ಸಂದರ್ಭ ಹೃದಯಾಘಾತದಿಂದ ಸಾವು

Fake CBI ಅಧಿಕಾರಿಗಳ ಬಲೆಯಿಂದ ಸಂಗೀತ ಕಲಾವಿದ ಪಾರು

Fake CBI ಅಧಿಕಾರಿಗಳ ಬಲೆಯಿಂದ ಸಂಗೀತ ಕಲಾವಿದ ಪಾರು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-qweewqe

Ayodhya; ‘ಮಂದಿರ-ಮಸೀದಿ’ಸಮಸ್ಯೆಯಲ್ಲ,ಅಭಿವೃದ್ಧಿ ಬಯಸುತ್ತೇವೆ ಎಂದ ಮುಸ್ಲಿಮರು

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

1-weweqwew

CRPF exits;ಮೇ 20 ರಿಂದ ಸಿಐಎಸ್ಎಫ್ ತುಕಡಿಗಳಿಂದ ಸಂಸತ್ತಿಗೆ ಭದ್ರತೆ

1-qweqwe

Kushtagi: ಸಿಡಿಲಿಗೆ ಬಿತ್ತನೆ ಕಾರ್ಯ ನಿರತ ರೈತ ಬಲಿ

1-wqqewqeq

Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.