ಮತ್ತೆ ತೆರೆದ ಶಬರಿಮಲೆ ಅಯ್ಯಪ್ಪ ದೇಗುಲ
Team Udayavani, Dec 30, 2022, 10:42 PM IST
ಪತನಂತಿಟ್ಟ: ಶಬರಿಮಲೆ ಅಯ್ಯಪ್ಪ ದೇಗುಲವನ್ನು ಶುಕ್ರವಾರ ಮತ್ತೆ ತೆರೆಯಲಾಗಿದೆ. ಮುಖ್ಯ ಅರ್ಚಕ ಕಂದರಾರು ರಾಜೀವರಾರು ಅವರು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಗರ್ಭಗುಡಿಯ ಬಾಗಿಲು ತೆರೆದಿದ್ದಾರೆ.
ಮಲ್ಲಿಕಾಪುರ ಕ್ಷೇತ್ರವನ್ನು ಮತ್ತೂಬ್ಬ ಅರ್ಚಕ ಹರಿಹರನ್ ನಂಬೂದಿರಿ ತೆರೆದರು. ಜ.14ರಂದು ಸಂಕ್ರಾತಿ ಸಂದರ್ಭದಲ್ಲಿ ಮಕರಜ್ಯೋತಿ ಕಾಣಿಸಿಕೊಳ್ಳಲಿದೆ. ಜ.20ರಂದು ದೇಗುಲವನ್ನು ಮುಚ್ಚಲಾಗುತ್ತದೆ.
ಯಾತ್ರಾರ್ಥಿ ಋತುವಿನ ಮೊದಲಾರ್ಧದಲ್ಲಿ ಭಕ್ತರ ನೂಕುನುಗ್ಗಲು ಕಂಡುಬಂದರೆ, ಮಂಡಳಿಯು ದೈನಂದಿನ ಕಾಲ್ನಡಿಗೆಯಲ್ಲಿ ಮತ್ತಷ್ಟು ಏರಿಕೆಯನ್ನು ಎಣಿಕೆ ಮಾಡ ಲಾಗಿತ್ತು, ಅದಕ್ಕೆ ತಕ್ಕಂತೆ ವ್ಯವಸ್ಥೆಗಳನ್ನು ಮಾಡುತ್ತಿದೆ.
ಕೇಸು ದಾಖಲು: ಇದೇ ವೇಳೆ ಅಯ್ಯಪ್ಪ ದೇವರ ವಿರುದ್ಧ ತೆಲಂಗಾಣದ ಬಿ.ನರೇಶ್ ಎಂಬುವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಡಿ.19ರಂದು ನೀಡಿದ್ದ ಹೇಳಿದ್ದ ವಿಡಿಯೋ ಈಗ ವೈರಲ್ ಆಗಿದೆ. ಅವರ ವಿರುದ್ಧ ಕೇಸು ದಾಖಲಿಸಲಾಗಿದೆ.