ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…


ಸುಧೀರ್, Jan 28, 2023, 6:15 PM IST

ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…

ದೇಶದಲ್ಲಿ ಹಲವಾರು ಪುರಾಣ ಪ್ರಸಿದ್ಧ ಸ್ಥಳಗಳನ್ನು ಕಾಣಬಹುದಾಗಿದೆ ಒಂದೊಂದು ಸ್ಥಳಗಳು ಅಲ್ಲಿನ ಕಾರಣಿಕಗಳನ್ನು ಹೊಂದಿರುತ್ತವೆ ಜೊತೆಗೆ ಅಷ್ಟೇ ಪಾವಿತ್ರ್ಯತೆಯನ್ನು ಕೂಡಾ ಪಡೆದುಕೊಂಡಿರುತ್ತದೆ. ಕೆಲವೊಂದು ಪುಣ್ಯ ಕ್ಷೇತ್ರಗಳು ಅಲ್ಲಿನ ಪೌರಾಣಿಕ ಹಿನ್ನೆಲೆಯಿಂದಲೇ ಹೆಚ್ಚು ಮಹತ್ವವನ್ನು ಪಡೆದಿರುತ್ತದೆ ಅತಂತದರಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ನೆಲ್ಲಿತೀರ್ಥ ತೀರ್ಥ ಸೋಮೇಶ್ವರ ಗುಹಾ ದೇವಾಲಯವು ಒಂದು.

ನೆಲ್ಲಿ ತೀರ್ಥ ಸೋಮೇಶ್ವರ ಗುಹಾ ದೇವಾಲಯವು ಕರಾವಳಿಯ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ಇದೊಂದು ಗುಹಾ ದೇವಾಲಯವಾಗಿದ್ದು ಮಹಾ ಶಿವನು ಲಿಂಗ ಸ್ವರೂಪಿಯಾಗಿ ಇಲ್ಲಿ ನೆಲೆಸಿದ್ದಾನೆ.

ಇದೊಂದು ಉದ್ಭವ ಶಿವಲಿಂಗದ ನೆಲೆಯಾಗಿದೆ ಅಂದ ಹಾಗೆ ಭಕ್ತರಿಗೆ ಈ ಶಿವಲಿಂಗದ ದರ್ಶನಕ್ಕೆ ಅವಕಾಶ ಸಿಗುವುದು ವರ್ಷದಲ್ಲಿ ಆರು ತಿಂಗಳು ಮಾತ್ರ ಉಳಿದ ಆರು ತಿಂಗಳು ಭಕ್ತರಿಗೆ ಈ ಶಿವಲಿಂಗದ ದರ್ಶನಕ್ಕೆ ಅವಕಾಶವಿಲ್ಲ. ಈ ಸಮಯದಲ್ಲಿ ಋಷಿಮುನಿಗಳು ಈ ಗುಹೆಯೊಳಗೆ ತಪಸ್ಸನ್ನು ಮಾಡುತ್ತಿರುತ್ತಾರೆ ಎಂಬುದು ಪ್ರತೀತಿ.

ಈ ಗುಹೆಯನ್ನು ನೋಡುವಾಗ ದೈತ್ಯಾಕಾರದ ಮೊಸಳೆಯೊಂದು ಬಾಯ್ತೆರೆದು ನಿಂತ ರೀತಿಯಲ್ಲಿ ಗೋಚರಿಸುತ್ತದೆ, ಅಲ್ಲದೆ ಈ ಗುಹೆ ಕಾಡುಪ್ರಾಣಿಗಳ ಆವಾಸಸ್ಥಾನವಾಗಿದೆ ಎಂದು ಹೇಳಲಾಗುತ್ತಿದೆ ಅದಕ್ಕೆ ಪ್ರತೀತಿ ಎಂಬಂತೆ ಹಾವು, ಕಾಡುಹಂದಿ, ಬಾವಲಿಗಳು ಇಲ್ಲಿ ಕಾಣಸಿಗುತ್ತವೆ.

ಈ ನೆಲ್ಲಿತೀರ್ಥದಲ್ಲಿರುವ ಶಿವ ಲಿಂಗಕ್ಕೆ ಸೋಮನಾಥೇಶ್ವರ ಎಂಬ ಹೆಸರಿದೆ ಈ ಶಿವಲಿಂಗವನ್ನು ತಲುಪಬೇಕಾದರೆ ಗುಹೆಯೊಳಗೆ ಸುಮಾರು 200 ಮೀಟರ್ ದೂರ ಸಾಗಬೇಕು ಕೆಲವೊಂದು ಕಡೆ ತೆವಳಿಕೊಂಡು ಸಾಗಬೇಕಾಗುತ್ತದೆ. ಹೀಗೆ ಸಾಗಿದಾಗ ಸೋಮನಾಥೇಶ್ವರನ ಉದ್ಭವ ಲಿಂಗದ ದರ್ಶನವಾಗುತ್ತದೆ.

ಕೆರೆಯಲ್ಲಿ ಸ್ನಾನಮಾಡಿ ದೇವರ ದರ್ಶನಕ್ಕೆ ಅವಕಾಶ
ಶಿವಲಿಂಗದ ದರ್ಶನ ಪಡೆಯಲು ಬರುವ ಭಕ್ತರು ಗುಹೆಯ ಹೊರಭಾಗದಲ್ಲಿರುವ ನಾಗಪ್ಪ ಕೆರೆಯಲ್ಲಿ ಸ್ನಾನ ಮಾಡಿ ಮಡಿ ಬಟ್ಟೆಯಲ್ಲಿ ಗುಹೆಯನ್ನು ಪ್ರವೇಶಿಸಬೇಕು ಎಂಬುದು ಇಲ್ಲಿನ ಪ್ರತೀತಿ, ಹಾಗಾಗಿ ಭಕ್ತರು ದೇವರ ದರ್ಶನಕ್ಕೆ ಬರುವ ಸಂದರ್ಭ ಒಂದು ಜೊತೆ ಬಟ್ಟೆಯನ್ನು ತರಬೇಕಾಗುತ್ತದೆ.

ಕಿರಿದಾದ ಗುಹೆ :
ಗುಹೆಯು ಸುಮಾರು ಇನ್ನೂರು ಮೀಟರ್ ದೂರ ಇರುವುದರಿಂದ ಕೆಲವೊಂದು ಕಡೆ ತುಂಬಾ ಕಿರಿದಾಗಿದೆ ಇಲ್ಲಿ ಮಂಡಿಯೂರಿ ಮುಂದೆ ಸಾಗಬೇಕಾಗುತ್ತದೆ, ಅಲ್ಲದೆ ಬೆಳಕು ಇಲ್ಲದಿರುವುದರಿಂದ ಬೆಳಕಿನ ವ್ಯವಸ್ಥೆ (ಟಾರ್ಚ್ ಅಥವಾ ದೊಂದಿ) ಮಾಡಿಕೊಂಡು ಸಾಗಬೇಕಾಗುತ್ತದೆ.

ನೆಲ್ಲಿತೀರ್ಥ ಹೆಸರು ಬಂದದ್ದು ಹೀಗೆ :
ಗುಹೆಯು ಕೆಂಪು ಕಲ್ಲಿನಿಂದ ಆವರಿಸಿದ್ದು ಒಳ ಪ್ರವೇಶಿಸಿದಂತೆ ಕಲ್ಲಿನ ಸಂದುಗಳಲ್ಲಿ ನೆಲ್ಲಿಕಾಯಿ ಆಕಾರದಲ್ಲಿ ನೀರಿನ ಹನಿಗಳು ಜಿನುಗುತ್ತಿರುತ್ತವೆ ಹಾಗಾಗಿ ಈ ಪ್ರಸಿದ್ಧ ಸ್ಥಳಕ್ಕೆ ನೆಲ್ಲಿತೀರ್ಥ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ.

ಈ ಶಿವಲಿಂಗದ ಸುತ್ತಲೂ ಸದಾ ನೀರು ಹರಿಯುತ್ತಿರುತ್ತದೆ ಇದನ್ನು ಉದ್ಭವ ಗಂಗೆ ಎಂದು ಕರೆಯುತ್ತಾರೆ ಅಲ್ಲದೆ ಇಲ್ಲಿಗೆ ಭೇಟಿ ನೀಡಿದ ಭಕ್ತರು ಈ ನೀರಿನಿಂದಲೇ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುತ್ತಾರೆ. ಜೊತೆಗೆ ತೀರ್ಥ ರೂಪದಲ್ಲಿ ಈ ನೀರನ್ನು ಕೊಂಡೊಯ್ಯುತ್ತಾರೆ ಅಷ್ಟು ಮಾತ್ರವಲ್ಲದೆ ಇಲ್ಲಿರುವ ಮೃತ್ತಿಕೆಯನ್ನು ಮೈಗೆ ಹಚ್ಚಿಕೊಂಡರೆ ಚರ್ಮ ರೋಗಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆಯೂ ಇದೆ.

ಕಾಶಿಗೆ ಸಂಪರ್ಕ ಹೊಂದುವ ಗುಹೆ
ಅಂದಹಾಗೆ ಈ ಗುಹೆಯಲ್ಲಿ ಭಕ್ತರಿಗೆ ಶಿವ ಲಿಂಗದ ಬಳಿ ತನಕ ಹೋಗಲು ಅವಕಾಶ ಮಾಡಲಾಗಿದೆ ಪುರಾಣದ ಪ್ರಕಾರ ಈ ಗುಹೆಯು ಮುಂದುವರೆದು ಕಾಶಿಗೆ ಸಂಪರ್ಕ ಹೊಂದಿದೆ ಎಂದು ಹೇಳಲಾಗಿದೆ. ಮುಂದೆ ಈ ಗುಹೆಯು ತೀರಾ ಕಡಿದಾದ ರೀತಿಯಲ್ಲಿ ಗೋಚರಿಸುತ್ತಿದ್ದು ಶಿವಲಿಂಗದಿಂದ ನಂತರ ಗುಹೆಯೊಳಗೆ ಮುಂದುವರೆಯಲು ಯಾರಿಗೂ ಅವಕಾಶವಿಲ್ಲ.

ಜಾಬಾಲಿ ಮಹರ್ಷಿಯ ತಪಸ್ಸಿನ ತಾಣ
ಸ್ಥಳ ಪುರಾಣದ ಪ್ರಕಾರ ಈ ಗುಹೆಯು ಮಹರ್ಷಿ ಜಾಬಾಲಿಯ ತಪಸ್ಸಿನ ತಾಣವಾಗಿತ್ತಂತೆ ಈ ನೆಲ್ಲಿತೀರ್ಥಕ್ಕೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರಕ್ಕೂ ಅನನ್ಯವಾದ ಸಂಬಂಧವಿದೆಯಂತೆ ಜಾಬಾಲಿ ಮಹರ್ಷಿಯ ಬಳಿ ಅರುಣಾಸುರನೆಂಬ ರಾಕ್ಷಸ ಗಾಯತ್ರಿ ಮಂತ್ರ ಕಲಿಯುತ್ತಿದ್ದನಂತೆ ಆದರೆ ಅರುಣಾಸುರ ಕಲಿಯುತ್ತಿರುವ ಗಾಯತ್ರಿ ಮಂತ್ರವನ್ನು ಜನರ ಒಳಿತಿಗಾಗಿ ಬಳಸುವ ಬದಲು ಗಾಯತ್ರಿ ಮಂತ್ರದ ಶಕ್ತಿಯಿಂದ ರಾಕ್ಷಸ ಅರುಣಾಸುರ ಜಗತ್ತಿನಲ್ಲಿ ಪರಾಕ್ರಮವನ್ನು ಮೆರೆಯಲ್ಲು ಆರಂಭಿಸುತ್ತಾನೆ. ಜಾಬಾಲಿ ಮುನಿಗಳು ಅರುಣಾಸುರನ ಪರಾಕ್ರಮವನ್ನು ತಡೆಯಲಾರದೆ ನೆಲ್ಲಿತೀರ್ಥದಲ್ಲಿರುವ ಗುಹೆಯೊಳಗೆ ಆದಿಶಕ್ತಿಯನ್ನು ಒಲಿಸಿಕೊಳ್ಳಲು ತಪಸ್ಸು ಮಾಡುತ್ತಾರೆ. ಈ ಜಾಬಾಲಿ ಮಹರ್ಷಿಯ ತಪಸ್ಸಿಗೆ ಒಲಿದ ಆದಿಶಕ್ತಿಯು ದುಂಬಿಯ ಆಕಾರದಲ್ಲಿ ಅರುಣಾಸುರನನ್ನು ಸಂಹರಿಸಿ ದುರ್ಗಾಪರಮೇಶ್ವರಿಯಾಗಿ ಅವತರಿಸಿ ಕಟೀಲಿನಲ್ಲಿ ನೆಲೆನಿಲ್ಲುತ್ತಾಳೆ.

ಕಟೀಲಿನನಲ್ಲಿರುವ ನಂದಿನಿ ಹೊಳೆಯೇ ಈ ನೆಲ್ಲಿತೀರ್ಥ ಗುಹಾಲಯದಲ್ಲಿ ಅಂತರಗಂಗೆಯಾಗಿ ಹರಿಯುತ್ತಿದ್ದಾಳೆ ಎಂಬುದು ಪ್ರತೀತಿ, ನೆಲ್ಲಿತೀರ್ಥದಲ್ಲಿರುವ ಇನ್ನೊಂದು ಗುಹೆ ಕಟೀಲಿಗೆ ಸಂಪರ್ಕ ಹೊಂದಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಜಾಬಾಲಿ ಮಹರ್ಷಿಗಳು ತಪಸ್ಸು ಮಾಡಿದ ಸ್ಥಳವನ್ನು ಇಲ್ಲಿಗೆ ಭೇಟಿ ನೀಡಿದ ಭಕ್ತರು ಕಾಣಬಹುದು.

ಭಕ್ತರಿಗೆ ಗುಹೆ ಪ್ರವೇಶಕ್ಕೆ ಪ್ರತಿದಿನ ಬೆಳಗ್ಗೆ 6.30ರಿಂದ ಮಧ್ಯಾಹ್ನ 12.30ರವರೆಗೂ ಅವಕಾಶವಿದೆ.

ಭಗವಾನ್‌ ಈಶ್ವರ (ಶ್ರೀ ಸೋಮನಾಥೇಶ್ವರ) ಈ ದೇವಾಲಯದ ಮುಖ್ಯ ದೇವರಾಗಿದ್ದು, ಪಕ್ಕದಲ್ಲಿ ‘ಮಹಾಗಣಪತಿ’ ಮತ್ತು ‘ಜಾಬಾಲಿ ಮಹರ್ಷಿ’ಯ ಗುಡಿಗಳು ಇವೆ. ಇದರ ಜೊತೆಯಲ್ಲಿ ದೇವಾಲಯದ ಪಕ್ಕದಲ್ಲೇ ಪ್ರಮುಖ ದೈವಗಳಾದ ಪಿಲಿಚಾಮುಂಡಿ, ರಕ್ತೇಶ್ವರಿ, ಧೂಮಾವತಿ ಮತ್ತು ಕ್ಷೇತ್ರಪಾಲಕರ ದೇವಾಲಯವಿದೆ.

ಗುಹಾ ದೇವಾಲಯವನ್ನು ಪ್ರತೀ ವರ್ಷ ತುಲಾ ಸಂಕ್ರಮಣದಂದು ತೆರೆಯಲಾಗುತ್ತದೆ ಅಲ್ಲಿಂದ ಆರು ತಿಂಗಳುಗಳ ಕಾಲ ಭಕ್ತರಿಗೆ ಗುಹೆ ಪ್ರವೇಶಿಸಲು ಅವಕಾಶವಿದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ, ಅಂದರೆ ಮೇಷ ಸಂಕ್ರಮಣದಂದು ಸಕಲ ವಿಧಿ ವಿಧಾನಗಳೊಂದಿಗೆ ದೇವಾಲಯವನ್ನು ಮುಚ್ಚಲಾಗುತ್ತದೆ.

ದೇವಳಕ್ಕೆ ಮಾರ್ಗ:
ಮಂಗಳೂರಿನಿಂದ ಸುಮಾರು 30ಕಿ.ಮೀ ದೂರದಲ್ಲಿದೆ ಗುಹಾಂತರ ದೇವಾಲಯ. ಮಂಗಳೂರಿನಿಂದ ಮೂಡಬಿದರೆ ರಸ್ತೆಯಲ್ಲಿ ಚಲಿಸುತ್ತಾ ಎಡಪದವಿನಲ್ಲಿ ಎಡಗಡೆ ತಿರುಗಿ 8 ಕಿ.ಮೀ.ಸಾಗಿಯೂ ನೆಲ್ಲಿತೀರ್ಥ ತೀರ್ಥ ಸೋಮೇಶ್ವರ ಗುಹಾ ದೇವಾಲಯವನ್ನು ತಲುಪಬಹುದು. ಕಟೀಲಿನಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿದೆ. ಅದೇ ರೀತಿ ಬಜ್ಪೆಯಿಂದ ಕತ್ತಲ್‌ಸರ್‌ ರಸ್ತೆಯ ಮೂಲಕವೂ ಇಲ್ಲಿಗೆ ಬರಬಹುದು. ಉಡುಪಿಯಿಂದ ಬರುವವರು ಮೂಲ್ಕಿ, ಕಿನ್ನಿಗೋಳಿ ನಿಡ್ಡೋಡಿಯಿಂದಾಗಿ ನೆಲ್ಲಿತೀರ್ಥಕ್ಕೆ ತಲುಪಬಹುದು.

– ಸುಧೀರ್ ಪರ್ಕಳ

ಟಾಪ್ ನ್ಯೂಸ್

Jet Airways ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ಕ್ಯಾನ್ಸರ್‌ನಿಂದ ನಿಧನ

Jet Airways ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ಕ್ಯಾನ್ಸರ್‌ನಿಂದ ನಿಧನ

Lok Sabha Election: ರಾಹುಲ್‌ ಗಾಂಧಿ ಪಿಎಂ ಆಗುತ್ತಾರೆ: ಕೈ ನಾಯಕ

Lok Sabha Election: ರಾಹುಲ್‌ ಗಾಂಧಿ ಪಿಎಂ ಆಗುತ್ತಾರೆ: ಕೈ ನಾಯಕ

Lok Sabha Polls: ಪಂಜಾಬ್‌ನ ಖಡೂರ್‌ ಕ್ಷೇತ್ರದಿಂದ ಖಲಿಸ್ಥಾನ ಉಗ್ರ ಅಮೃತ್‌ ಸ್ಪರ್ಧೆ

Lok Sabha Polls: ಪಂಜಾಬ್‌ನ ಖಡೂರ್‌ ಕ್ಷೇತ್ರದಿಂದ ಖಲಿಸ್ಥಾನ ಉಗ್ರ ಅಮೃತ್‌ ಸ್ಪರ್ಧೆ

Mallikarjun Kharge: ಮಟನ್‌-ಚಿಕನ್‌ ಬಿಡಿ, ಅಭಿವೃದ್ಧಿ ಬಗ್ಗೆ ಮಾತಾಡಿ: ಮೋದಿಗೆ ಖರ್ಗೆ

Mallikarjun Kharge: ಮಟನ್‌-ಚಿಕನ್‌ ಬಿಡಿ, ಅಭಿವೃದ್ಧಿ ಬಗ್ಗೆ ಮಾತಾಡಿ: ಮೋದಿಗೆ ಖರ್ಗೆ

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ಗೆ ಗುಂಡೇಟು…

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ ಮೇಲೆ ಗುಂಡಿನ ದಾಳಿ…

Haji Karam Din: 102ನೇ ವಯಸ್ಸಿನಲ್ಲೂ ಕ್ರಿಕೆಟ್‌ ಆಟ!

Haji Karam Din: 102ನೇ ವಯಸ್ಸಿನಲ್ಲೂ ಕ್ರಿಕೆಟ್‌ ಆಟ!

Ipl 2024: ಹೈದರಾಬಾದ್‌ಗೆ ಗೆಲುವು ಅನಿವಾರ್ಯ, ವಿದಾಯ ಪಂದ್ಯ ಆಡಲಿರುವ ಗುಜರಾತ್‌ ಟೈಟಾನ್ಸ್‌

Ipl 2024: ಹೈದರಾಬಾದ್‌ಗೆ ಗೆಲುವು ಅನಿವಾರ್ಯ, ವಿದಾಯ ಪಂದ್ಯ ಆಡಲಿರುವ ಗುಜರಾತ್‌ ಟೈಟಾನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World War III Cinema: ಜಗತ್ತಿನಲ್ಲಿ 3ನೇ ಮಹಾಯುದ್ಧ ಘಟಿಸಿದರೆ ಏನಾಗಬಹುದು? ಹೇಗಾಗಬಹುದು?

World War III Cinema: ಜಗತ್ತಿನಲ್ಲಿ 3ನೇ ಮಹಾಯುದ್ಧ ಘಟಿಸಿದರೆ ಏನಾಗಬಹುದು? ಹೇಗಾಗಬಹುದು?

ಟೀಂ ಇಂಡಿಯಾದಲ್ಲೂ ರೋಹಿತ್ ಕೆರಿಯರ್ ಮುಗಿಸಿದ್ರಾ ಹಾರ್ದಿಕ್ ಪಾಂಡ್ಯ? ಏನಿದು ವರದಿ

ಟೀಂ ಇಂಡಿಯಾದಲ್ಲೂ ರೋಹಿತ್ ಕೆರಿಯರ್ ಮುಗಿಸಿದ್ರಾ ಹಾರ್ದಿಕ್ ಪಾಂಡ್ಯ? ಏನಿದು ವರದಿ

World Mother’s Day 2024: ಅಮ್ಮನಾಗಿ ಅಮ್ಮನನ್ನು ಅರಿತಾಗ….

World Mother’s Day 2024: ಅಮ್ಮನಾಗಿ ಅಮ್ಮನನ್ನು ಅರಿತಾಗ….

Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?

Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?

Mount Rushmore National Memorial: ಮೌಂಟ್‌ ರಶ್ಮೋರ್‌ನ ಸಿಕ್ಸ್‌ ಗ್ರಾಂಡ್‌ ಫಾದರ್ಸ್‌

Mount Rushmore National Memorial: ಮೌಂಟ್‌ ರಶ್ಮೋರ್‌ನ ಸಿಕ್ಸ್‌ ಗ್ರಾಂಡ್‌ ಫಾದರ್ಸ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Jet Airways ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ಕ್ಯಾನ್ಸರ್‌ನಿಂದ ನಿಧನ

Jet Airways ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ಕ್ಯಾನ್ಸರ್‌ನಿಂದ ನಿಧನ

Lok Sabha Election: ರಾಹುಲ್‌ ಗಾಂಧಿ ಪಿಎಂ ಆಗುತ್ತಾರೆ: ಕೈ ನಾಯಕ

Lok Sabha Election: ರಾಹುಲ್‌ ಗಾಂಧಿ ಪಿಎಂ ಆಗುತ್ತಾರೆ: ಕೈ ನಾಯಕ

Lok Sabha Polls: ಪಂಜಾಬ್‌ನ ಖಡೂರ್‌ ಕ್ಷೇತ್ರದಿಂದ ಖಲಿಸ್ಥಾನ ಉಗ್ರ ಅಮೃತ್‌ ಸ್ಪರ್ಧೆ

Lok Sabha Polls: ಪಂಜಾಬ್‌ನ ಖಡೂರ್‌ ಕ್ಷೇತ್ರದಿಂದ ಖಲಿಸ್ಥಾನ ಉಗ್ರ ಅಮೃತ್‌ ಸ್ಪರ್ಧೆ

Mallikarjun Kharge: ಮಟನ್‌-ಚಿಕನ್‌ ಬಿಡಿ, ಅಭಿವೃದ್ಧಿ ಬಗ್ಗೆ ಮಾತಾಡಿ: ಮೋದಿಗೆ ಖರ್ಗೆ

Mallikarjun Kharge: ಮಟನ್‌-ಚಿಕನ್‌ ಬಿಡಿ, ಅಭಿವೃದ್ಧಿ ಬಗ್ಗೆ ಮಾತಾಡಿ: ಮೋದಿಗೆ ಖರ್ಗೆ

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ಗೆ ಗುಂಡೇಟು…

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ ಮೇಲೆ ಗುಂಡಿನ ದಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.