ಬರಲಿದೆ Brahmos ಹೈಪರ್‌ಸಾನಿಕ್‌ ಆವೃತ್ತಿ! ಭಾರತ-ರಷ್ಯಾ ಸಹಯೋಗದಲ್ಲಿ ಅಭಿವೃದ್ಧಿ

ಉಭಯ ದೇಶಗಳ ಎನ್‌ಎಸ್‌ಎ ಸಭೆಯಲ್ಲಿ ಮಾತುಕತೆ

Team Udayavani, Apr 5, 2023, 7:50 AM IST

ಬರಲಿದೆ ಬ್ರಹ್ಮೋಸ್‌ ಹೈಪರ್‌ಸಾನಿಕ್‌ ಆವೃತ್ತಿ! ಭಾರತ-ರಷ್ಯಾ ಸಹಯೋಗದಲ್ಲಿ ಅಭಿವೃದ್ಧಿ

ನವದೆಹಲಿ: ಅಮೆರಿಕ ಮತ್ತು ಚೀನಾ ಕೈಜೋಡಿಸಿಕೊಂಡು ತಮ್ಮ ಕ್ರೂಸ್‌ ಕ್ಷಿಪಣಿಗಳ(Brahmos) ಹೈಪರ್‌ಸಾನಿಕ್‌ ಆವೃತ್ತಿಗಳನ್ನು ಹೇಗೆ ಅಭಿವೃದ್ಧಿಪಡಿಸುತ್ತಿವೆಯೋ, ಅದೇ ರೀತಿ ಭಾರತ ಮತ್ತು ರಷ್ಯಾ ಜಂಟಿಯಾಗಿ(Brahmos) ಬ್ರಹ್ಮೋಸ್‌ ಕ್ಷಿಪಣಿಯ ಹೈಪರ್‌ಸಾನಿಕ್‌ ಆವೃತ್ತಿಯನ್ನು ಅಭಿವೃದ್ಧಿಪಡಿಸಲಿದೆ!

ಹೌದು, ಕಳೆದ ವಾರ ನಡೆದ ಭಾರತ ಮತ್ತು ರಷ್ಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮಟ್ಟದ ಸಭೆಯಲ್ಲಿ ಈ ಕುರಿತು ಸುದೀರ್ಘ‌ ಚರ್ಚೆಗಳು ನಡೆದಿವೆ. ಬ್ರಹ್ಮೋಸ್‌ ಅಥವಾ ಬ್ರಹ್ಮೋಸ್‌-2 ಕ್ಷಿಪಣಿಯ ಹೈಪರ್‌ಸಾನಿಕ್‌ ಆವೃತ್ತಿಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ಕುರಿತು ಅಜಿತ್‌ ದೋವಲ್‌ ಮತ್ತು ರಷ್ಯಾ ಎನ್‌ಎಸ್‌ಎ ನಿಕೋಲಾಯ್‌ ಪಟ್ರಾಶೆವ್‌ ಮಾತುಕತೆ ನಡೆಸಿದ್ದಾರೆ. ಹೈಪರ್‌ಸಾನಿಕ್‌ ಕ್ಷಿಪಣಿಗಳ ನಿರ್ಮಾಣದಲ್ಲಿ ರಷ್ಯಾವು ಅಮೆರಿಕ ಹಾಗೂ ಇತರೆ ಪಾಶ್ಚಿಮಾತ್ಯ ದೇಶಗಳಿಗಿಂತಲೂ ಮುಂದಿದೆ.

ರಷ್ಯಾ-ಉಕ್ರೇನ್‌ ಯುದ್ಧ ಆರಂಭವಾದ ಬಳಿಕ ಹೈಪರ್‌ಸಾನಿಕ್‌ ಶಸ್ತ್ರಾಸ್ತ್ರ ವ್ಯವಸ್ಥೆಯು ಹೆಚ್ಚು ಬೆಳಕಿಗೆ ಬಂತು. ಭಾರತದ ಬ್ರಹ್ಮೋಸ್‌-2 ಮತ್ತು ರಷ್ಯಾದ ಸಿರ್ಕಾನ್‌(ಝಿರ್ಕಾನ್‌) ಸಮಾನ ಕಾರ್ಯಕ್ಷಮತೆಯನ್ನು ಹೊಂದಿವೆ. ಪ್ರಸ್ತುತ ಜಗತ್ತಿನಲ್ಲಿ ಯಾವ ರಾಷ್ಟ್ರವೂ ಹೈಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿಯನ್ನು ಹೊಂದಿಲ್ಲ.

ನೌಕಾಸೇನೆಗೆ ಹೆಲ್‌ಫೈರ್‌ ಕ್ಷಿಪಣಿ ಬಲ
ಭಾರತೀಯ ನೌಕಾಸೇನೆ ಇನ್ನಷ್ಟು ಬಲಿಷ್ಠಗೊಳ್ಳಲು ಸಜ್ಜಾಗಿದೆ. ಅದೇ ಕಾರಣದಿಂದ 2,465 ಕೋಟಿ ರೂ. ವೆಚ್ಚದಲ್ಲಿ ಅಮೆರಿಕದಿಂದ ಹೆಲ್‌ಫೈರ್‌ ಕ್ಷಿಪಣಿಗಳು, ಎಂಕೆ 54 ಹೆಸರಿನ ಲಘುತೂಕದ ಟಾಪೆìಡೊಗಳನ್ನು (ಸಬ್‌ಮರಿನ್‌ ನಾಶಗೊಳಿಸುವ ಸಾಧನ) ತರಿಸಿಕೊಳ್ಳಲು ತೀರ್ಮಾನಿಸಿದೆ. ಅತ್ಯಾಧುನಿಕ ಯದ್ಧಸಾಧಗಳಾದ ಇವು ಭಾರತೀಯ ನೌಕಾಸೇನೆಯ ಬಲವನ್ನು ಇನ್ನೊಂದು ಎತ್ತರಕ್ಕೆ ಏರಿಸಲಿವೆ. ಸದ್ಯ ಭಾರತೀಯ ನೌಕಾ ಸೇನೆ ಎಂಎಚ್‌ 60 ರೋಮಿಯೊ ಹೆಸರಿನ 24 ಚಾಪರ್‌ಗಳನ್ನು ಹೊಂದಿದೆ.

ಏನಿದು ಹೈಪರ್‌ಸಾನಿಕ್‌ ವ್ಯವಸ್ಥೆ?
ಕ್ಷಿಪ್ರ ವೇಗದಲ್ಲಿ ಅಂದರೆ ಶಬ್ದದ ವೇಗಕ್ಕಿಂತ 5 ಪಟ್ಟು ಅಧಿಕ ವೇಗದಲ್ಲಿ ಸಂಚರಿಸುವಂಥ ಸುಧಾರಿತ ಸೇನಾ ತಂತ್ರಜ್ಞಾನವನ್ನು ಹೈಪರ್‌ಸಾನಿಕ್‌ ಶಸ್ತ್ರಾಸ್ತ್ರ ವ್ಯವಸ್ಥೆ ಎನ್ನುತ್ತಾರೆ. ತ್ವರಿತವಾಗಿ ಮಾರ್ಗ ಬದಲಿಸಲು, ಶತ್ರುಗಳ ರಕ್ಷಣಾ ವ್ಯವಸ್ಥೆಯನ್ನು ಛಿದ್ರಗೊಳಿಸಲು, ಅತಿ ಕಡಿಮೆ ಅವಧಿಯಲ್ಲಿ ಬಹಳ ದೂರ ತಲುಪಲು ಸಾಧ್ಯವಾಗುವಂತೆ ಈ ವ್ಯವಸ್ಥೆಯನ್ನು ಬಹಳ ಕುಶಲತೆಯಿಂದ ಅಭಿವೃದ್ಧಿಪಡಿಸಲಾಗುತ್ತದೆ.

 

ಟಾಪ್ ನ್ಯೂಸ್

Haji Karam Din: 102ನೇ ವಯಸ್ಸಿನಲ್ಲೂ ಕ್ರಿಕೆಟ್‌ ಆಟ!

Haji Karam Din: 102ನೇ ವಯಸ್ಸಿನಲ್ಲೂ ಕ್ರಿಕೆಟ್‌ ಆಟ!

Ipl 2024: ಹೈದರಾಬಾದ್‌ಗೆ ಗೆಲುವು ಅನಿವಾರ್ಯ, ವಿದಾಯ ಪಂದ್ಯ ಆಡಲಿರುವ ಗುಜರಾತ್‌ ಟೈಟಾನ್ಸ್‌

Ipl 2024: ಹೈದರಾಬಾದ್‌ಗೆ ಗೆಲುವು ಅನಿವಾರ್ಯ, ವಿದಾಯ ಪಂದ್ಯ ಆಡಲಿರುವ ಗುಜರಾತ್‌ ಟೈಟಾನ್ಸ್‌

Federation Cup: ನೀರಜ್‌ ಚೋಪ್ರಾ ಸ್ವರ್ಣ ಸಂಭ್ರಮ…

Federation Cup: ನೀರಜ್‌ ಚೋಪ್ರಾ ಸ್ವರ್ಣ ಸಂಭ್ರಮ…

Ipl 2024: ರಾಜಸ್ಥಾನ್‌ ತಂಡವನ್ನು ಐದು ವಿಕೆಟ್ ಗಳಿಂದ ಮಣಿಸಿದ ಪಂಜಾಬ್

Ipl 2024: ರಾಜಸ್ಥಾನ್‌ ತಂಡವನ್ನು ಐದು ವಿಕೆಟ್ ಗಳಿಂದ ಮಣಿಸಿದ ಪಂಜಾಬ್

Dakshina Kannada: 14 ಗ್ರಾ.ಪಂ.ಗಳಲ್ಲಿ ಶೇಕಡಾ 100 ತೆರಿಗೆ ಸಂಗ್ರಹ

Dakshina Kannada: 14 ಗ್ರಾ.ಪಂ.ಗಳಲ್ಲಿ ಶೇಕಡಾ 100 ತೆರಿಗೆ ಸಂಗ್ರಹ

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

1-24-thursday

Daily Horoscope: ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಅನವಶ್ಯ ವೈಮನಸ್ಯಕ್ಕೆ ಅವಕಾಶ ಬೇಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

32 ಕೋಟಿ ರೂ. ಅಕ್ರಮ ಹಣ ಪತ್ತೆ: ಜಾರ್ಖಂಡ್‌ ಸಚಿವ ಆಲಂಗೀರ್‌ ಸೆರೆ

32 ಕೋಟಿ ರೂ. ಅಕ್ರಮ ಹಣ ಪತ್ತೆ: ಜಾರ್ಖಂಡ್‌ ಸಚಿವ ಆಲಂಗೀರ್‌ ಸೆರೆ

INDIA ಒಕ್ಕೂಟಕ್ಕೆ ಬಾಹ್ಯ ಬೆಂಬಲವಿದೆ ಆದರೆ ಎಡಪಕ್ಷಗಳು ಹೊರಗಿರಲಿ: ಮಮತಾ

INDIA ಒಕ್ಕೂಟಕ್ಕೆ ಬಾಹ್ಯ ಬೆಂಬಲವಿದೆ ಆದರೆ ಎಡಪಕ್ಷಗಳು ಹೊರಗಿರಲಿ: ಮಮತಾ

ರಾಜಸ್ಥಾನ ತಾಮ್ರ ಗಣಿಯಲ್ಲಿ ಲಿಫ್ಟ್ ಕುಸಿತ: ಹಿರಿಯ ಅಧಿಕಾರಿ ಮೃತ್ಯು, 15 ಮಂದಿಗೆ ಗಾಯ

ರಾಜಸ್ಥಾನ ತಾಮ್ರ ಗಣಿಯಲ್ಲಿ ಲಿಫ್ಟ್ ಕುಸಿತ: ಹಿರಿಯ ಅಧಿಕಾರಿ ಮೃತ್ಯು, 15 ಮಂದಿಗೆ ಗಾಯ

ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯ 2.73 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯ 2.73 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

CAA ಅಡಿಯಲ್ಲಿ ಮೊದಲ ಬಾರಿಗೆ 14 ಜನರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರ ವಿತರಣೆ

CAA ಅಡಿಯಲ್ಲಿ ಮೊದಲ ಬಾರಿಗೆ 14 ಜನರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರ ವಿತರಣೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Haji Karam Din: 102ನೇ ವಯಸ್ಸಿನಲ್ಲೂ ಕ್ರಿಕೆಟ್‌ ಆಟ!

Haji Karam Din: 102ನೇ ವಯಸ್ಸಿನಲ್ಲೂ ಕ್ರಿಕೆಟ್‌ ಆಟ!

Ipl 2024: ಹೈದರಾಬಾದ್‌ಗೆ ಗೆಲುವು ಅನಿವಾರ್ಯ, ವಿದಾಯ ಪಂದ್ಯ ಆಡಲಿರುವ ಗುಜರಾತ್‌ ಟೈಟಾನ್ಸ್‌

Ipl 2024: ಹೈದರಾಬಾದ್‌ಗೆ ಗೆಲುವು ಅನಿವಾರ್ಯ, ವಿದಾಯ ಪಂದ್ಯ ಆಡಲಿರುವ ಗುಜರಾತ್‌ ಟೈಟಾನ್ಸ್‌

Federation Cup: ನೀರಜ್‌ ಚೋಪ್ರಾ ಸ್ವರ್ಣ ಸಂಭ್ರಮ…

Federation Cup: ನೀರಜ್‌ ಚೋಪ್ರಾ ಸ್ವರ್ಣ ಸಂಭ್ರಮ…

Ipl 2024: ರಾಜಸ್ಥಾನ್‌ ತಂಡವನ್ನು ಐದು ವಿಕೆಟ್ ಗಳಿಂದ ಮಣಿಸಿದ ಪಂಜಾಬ್

Ipl 2024: ರಾಜಸ್ಥಾನ್‌ ತಂಡವನ್ನು ಐದು ವಿಕೆಟ್ ಗಳಿಂದ ಮಣಿಸಿದ ಪಂಜಾಬ್

Dakshina Kannada: 14 ಗ್ರಾ.ಪಂ.ಗಳಲ್ಲಿ ಶೇಕಡಾ 100 ತೆರಿಗೆ ಸಂಗ್ರಹ

Dakshina Kannada: 14 ಗ್ರಾ.ಪಂ.ಗಳಲ್ಲಿ ಶೇಕಡಾ 100 ತೆರಿಗೆ ಸಂಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.