ಹುಣಸೂರು: ಬಳೆ ವ್ಯಾಪಾರಿ, ಕೃಷಿಕ, ಅಡುಗೆಯವರ ಮಕ್ಕಳ ಸಾಧನೆ
Team Udayavani, Apr 22, 2023, 11:59 AM IST
ಹುಣಸೂರು: ಅಡುಗೆ ಕೆಲಸಗಾರನ ಮಗಳು, ರೈತನ ಮಗ, ವ್ಯಾಪಾರಿ ಪುತ್ರಿ ಈ ಬಾರಿಯ ಪಿಯು ಪರೀಕ್ಷೆಯ ಮೂರು ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವುದು ಈ ಬಾರಿಯ ವಿಶೇಷ.
ಹುಣಸೂರು ತಾಲೂಕಿನ ಬಿಳಿಗೆರೆ ಅನ್ವೇಷಣಾ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶ್ರೀರಕ್ಷಾ ಎಂ.ಎನ್. (579) ಅಂಕ, ವಾಣಿಜ್ಯ ವಿಭಾಗದಲ್ಲಿ ಹುಣಸೂರು ಶಾಸ್ತ್ರಿ ಕಾಲೇಜಿನ ಎಚ್.ಪಿ.ತ್ರಿಶಾ(583) ಅಂಕ, ಕಲಾ ವಿಭಾಗದಲ್ಲಿ ಸಂತ ಜೋಸೆಫರ ಶಾಲೆಯ ಸುಮಂತ್ ಕೆ.ಟಿ (577)ಅಂಕ ಪಡೆದಿರುವ ಸಾಧಕರು. ವಿಜ್ಞಾನ ವಿಭಾಗದ ಶ್ರೀರಕ್ಷಾ ಎಂ.ಎನ್. ಕೆ.ಆರ್ .ನಗರದಲ್ಲಿ ಅಡುಗೆ ಕೆಲಸ ನಿರ್ವಹಿಸುವ ಎಂ.ಎಸ್ .ನಾಗರಾಜ್-ಉಷಾ ದಂಪತಿ ಪುತ್ರಿಯಾಗಿದ್ದು, ಎಂಜಿನಿಯರಿಂಗ್ ಓದುವ ಅಭಿಲಾಷೆ ವ್ಯಕ್ತಪಡಿಸಿದ್ದರೆ.
ಶಾಸ್ತ್ರಿ ಕಾಲೇಜಿನ ಎಚ್.ಪಿ.ತ್ರಿಶಾ ಹುಣಸೂರು ನಗರದ ಸೇತುವೆಯ ಶ್ರೀನಿಧಿ ಫ್ಯಾನ್ಸಿ ಸ್ಟೋರ್ನ ಮಾಲೀಕ ಎಚ್.ಎ.ಪ್ರದೀಪ್ ಕುಮಾರ್ -ಮಂಜುಳ ದಂಪತಿ ಪುತ್ರಿಯಾಗಿದ್ದು, ಮುಂದೆ ಬಿಬಿಎ ಮಾಡುವ ಇಚ್ಚೆ ವ್ಯಕ್ತಪಡಿಸಿದ್ದಾರೆ.
ಕಲಾ ವಿಭಾಗದಲ್ಲಿ ಹುಣಸೂರಿನ ಸಂತಜೋಸೆಫರ ಪಿಯು ಕಾಲೇಜಿನ ಸುಮಂತ್ ಪಿರಿಯಾಪಟ್ಟಣ ತಾಲೂಕಿನ ಕಂಪ್ಲಾಪುರದ ರೈತ ತಿಮ್ಮಪ್ಪ-ರುಕ್ಮಿಣಿ ದಂಪತಿ ಪುತ್ರನಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತೇನೆಂದು ತಿಳಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ