GT V/s DC: ಶಮಿ ದಾಳಿಗೆ ಕುಸಿದ ಡೆಲ್ಲಿ


Team Udayavani, May 3, 2023, 6:31 AM IST

SHAMI

ಅಹ್ಮದಾಬಾದ್‌: ಗುಜರಾತ್‌ ಟೈಟಾನ್ಸ್‌ ತಂಡದ ವೇಗಿ ಮೊಹಮ್ಮದ್‌ ದಾಳಿಗೆ ಸಿಲುಕಿ ನಾಟಕೀಯ ಕುಸಿತ ಅನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್‌, ಕೊನೆಗೂ ಚೇತರಿಕೆ ಕಂಡು 8 ವಿಕೆಟಿಗೆ 130 ರನ್‌ ಗಳಿಸಿದೆ . ಕೆಳ ಕ್ರಮಾಂಕದ ಆಟಗಾರ ಅಮಾನ್‌ ಹಕೀಂ ಖಾನ್‌ ಅವರ ಚೊಚ್ಚಲ ಅರ್ಧ ಶತಕ ಡೆಲ್ಲಿಗೆ ಆಸರೆಯಾಯಿತು. ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಕೂಡ ಉಪಯುಕ್ತ ಕೊಡುಗೆ ಸಲ್ಲಿಸಿದರು.

ಮೊಹಮ್ಮದ್‌ ಶಮಿ ಎಸೆದ ಪಂದ್ಯದ ಮೊದಲ ಎಸೆತ ದಲ್ಲೇ ವಿಕೆಟ್‌ ಕಳೆದುಕೊಂಡ ಸಂಕಟ ಡೆಲ್ಲಿ ಯದ್ದು. ಪವರ್‌ ಪ್ಲೇ ಮುಕ್ತಾಯಕ್ಕೆ 28ಕ್ಕೆ 5 ವಿಕೆಟ್‌ ಉರುಳಿಸಿಕೊಂಡ ವಾರ್ನರ್‌ ಪಡೆ ತೀವ್ರ ಹತಾಶ ಸ್ಥಿತಿ ಯಲ್ಲಿತ್ತು. ಈ ಅವಧಿಯಲ್ಲಿ ಉರುಳಿದ 5 ವಿಕೆಟ್‌ಗಳಲ್ಲಿ 4 ವಿಕೆಟ್‌ ಶಮಿ ಪಾಲಾಗಿತ್ತು. 3 ಕ್ಯಾಚ್‌ಗಳನ್ನು ಕೀಪರ್‌ ಸಾಹಾ ಪಡೆದಿದ್ದರು.
ಒಂದೇ ಸ್ಪೆಲ್‌ನಲ್ಲಿ 4 ಓವರ್‌ ಮುಗಿಸಿದ ಶಮಿ ಸಾಧನೆ 11ಕ್ಕೆ 4 ವಿಕೆಟ್‌. ಐಪಿಎಲ್‌ ಇತಿಹಾಸದ ಅತ್ಯು ತ್ತಮ “ಸ್ವಿಂಗ್‌ ಸ್ಪೆಲ್‌’ ಇದಾಗಿತ್ತು. ಪವರ್‌ ಪ್ಲೇಯಲ್ಲಿ 7 ರನ್ನಿತ್ತು 4 ವಿಕೆಟ್‌ ಕೆಡವಿದ್ದು ಶಮಿ ಸಾಧನೆ. ಇದು ಪವರ್‌ ಪ್ಲೇ ಅವಧಿಯಲ್ಲಿ ದಾಖಲಾದ 2ನೇ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ. ಡೆಕ್ಕನ್‌ ಚಾರ್ಜರ್ ತಂಡದ ಇಶಾಂತ್‌ ಶರ್ಮ 2012ರ ಕೊಚ್ಚಿ ಟಸ್ಕರ್ ಕೇರಳ ವಿರುದ್ಧ 12 ರನ್ನಿಗೆ 5 ವಿಕೆಟ್‌ ಉರುಳಿಸಿದ್ದು ದಾಖಲೆ.

ಫಿಲಿಪ್‌ ಸಾಲ್ಟ್ ನಿರ್ಗಮನದೊಂದಿಗೆ ಡೆಲ್ಲಿ ಕುಸಿತ ಮೊದ ಲ್ಗೊಂಡಿತು. ದ್ವಿತೀಯ ಓವರ್‌ನಲ್ಲಿ ನಾಯಕ ಡೇವಿಡ್‌ ವಾರ್ನರ್‌ ರನೌಟ್‌ ಸಂಕಟಕ್ಕೆ ಸಿಲುಕಿದರು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ನಿಂತು ಆಡುತ್ತಿದ್ದ ವಾರ್ನರ್‌ ಆಟ ಇಲ್ಲಿ ಎರಡೇ ರನ್ನಿಗೆ ಮುಗಿದಿತ್ತು. ಶಮಿ ಅವರ ದ್ವಿತೀಯ ಓವರ್‌ನಲ್ಲಿ ರಿಲೀ ರೋಸ್ಯೂ (8) ಪೆವಿಲಿಯನ್‌ ಸೇರಿಕೊಂಡರು. 3ನೇ ಓವರ್‌ನಲ್ಲಿ ಶಮಿ ಅವರ ಅವಳಿ ಆಘಾತಕ್ಕೆ ಡೆಲ್ಲಿ ತತ್ತರಿಸಿತು. ಮೊದಲ ಎಸೆತದಲ್ಲಿ ಮನೀಷ್‌ ಪಾಂಡೆ (1), ಅಂತಿಮ ಎಸೆತದಲ್ಲಿ ಪ್ರಿಯಂ ಗರ್ಗ್‌ (10) ಆಟಕ್ಕೆ ತೆರೆ ಎಳೆದರು.
ಎಂದಿನಂತೆ ಅಕ್ಷರ್‌ ಪಟೇಲ್‌ ತಂಡದ ರಕ್ಷಣೆಗೆ ನಿಂತರು. ಅಮಾನ್‌ ಹಕೀಂ ಖಾನ್‌ ಅವರಿಂದ ಉತ್ತಮ ಬೆಂಬಲ ಕೂಡ ಲಭಿಸಿತು. ಇವರಿಬ್ಬರು ಸೇರಿಕೊಂಡು 9 ಓವರ್‌ಗಳ ಜತೆಯಾಟ ನಡೆಸಿ 6ನೇ ವಿಕೆಟಿಗೆ ಭರ್ತಿ 50 ರನ್‌ ಒಟ್ಟುಗೂಡಿಸಿದರು. ಅಕ್ಷರ್‌ 30 ಎಸೆತ ನಿಭಾಯಿಸಿ 27 ರನ್‌ ಹೊಡೆದರು (2 ಬೌಂಣಡರಿ, 1 ಸಿಕ್ಸರ್‌).
ಅಮಾನ್‌ ಸಾಹಸದಿಂದ ಡೆಲ್ಲಿ ಮೊತ್ತ ನೂರರ ಗಡಿ ದಾಟಿತು. 44 ಎಸೆತ ಎದುರಿಸಿ ನಿಂತ ಅಮಾನ್‌ 3 ಬೌಂಡರಿ, 3 ಸಿಕ್ಸರ್‌ ನೆರವಿನಿಂದ 51 ರನ್‌ ಹೊಡೆದರು.

ಟಾಪ್ ನ್ಯೂಸ್

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.