ಕುಂದಾಪುರ: ತಂದೆ ಮೃತಪಟ್ಟರೂ ಕರ್ತವ್ಯಕ್ಕೆ ಹಾಜರಾದ ಮಹಿಳೆ !
Team Udayavani, May 11, 2023, 6:55 AM IST
ಕುಂದಾಪುರ: ಇಲ್ಲಿನ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಸುಮಲತಾ ಆರೂರು ತಮ್ಮ ತಂದೆ ಮುಕುಂದ ನಾಯ್ಕ (75) ಮೃತಪಟ್ಟಿದ್ದರೂ ಅಂತ್ಯಸಂಸ್ಕಾರ ನೆರವೇರುವ ಮುನ್ನವೇ ಚುನಾವಣ ಕರ್ತವ್ಯಕ್ಕೆ ಹಾಜರಾಗಿ ಕರ್ತವ್ಯಬದ್ಧತೆ ಮೆರೆದಿದ್ದಾರೆ.
ಒಂದೆಡೆ ಅಪ್ಪನ ಶವ, ಮಡುಗಟ್ಟಿದ ಕುಟುಂಬದ ದುಃಖ. ಎಲ್ಲದರ ಮಧ್ಯೆ ಕರ್ತವ್ಯಕ್ಕೆ ಓಗೊಟ್ಟು ಮಾದರಿಯಾಗಿದ್ದಾರೆ. ಬ್ರಹ್ಮಾವರದ ಆರೂರಿನಲ್ಲಿ ಮಂಗಳವಾರ ರಾತ್ರಿ 2.30ರ ವೇಳೆಗೆ ಸುಮಲತಾ ಅವರ ತಂದೆ ಮೃತಪಟ್ಟಿದ್ದರು.
ಮನೆಯಲ್ಲೇ ತಂದೆಯ ಮೃತದೇಹ ಇದ್ದರೂ ಸುಮಲತಾ ಅವರು ಬೆಳಗ್ಗೆ 4.30 ರ ವೇಳೆಗೆ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಸ್ಟ್ರಾಂಗ್ ರೂಮಿನ ಕರ್ತವ್ಯಕ್ಕೆ ಹಾಜರಾಗಿ ಬೆಳಗ್ಗೆ 7ರವರೆಗೆ ಕರ್ತವ್ಯ ನಿರ್ವಹಿಸಿದರು. ಬಳಿಕ ಚುನಾವಣಾಧಿಕಾರಿಯೂ ಆದ ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್. ಅವರು ವಿಷಯವನ್ನು ಮಾನವೀಯ ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತತ್ಕ್ಷಣ ಬದಲಿ ಅಧಿಕಾರಿಯನ್ನು ಕರ್ತವ್ಯಕ್ಕೆ ನಿಯೋಜಿಸಿ ಸುಮಲತಾ ಅವರನ್ನು ಮನೆಗೆ ಕಳುಹಿಸಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ