ಕೊಹಿನೂರ್‌ ವಜ್ರವನ್ನು ಮರಳಿ ತರಲು ಮೋದಿ ಯತ್ನ

ಯುಕೆಯಲ್ಲಿರುವ ಸಾವಿರಾರು ಇತರೆ ಕಲಾಕೃತಿಗಳೂ ಸ್ವದೇಶಕ್ಕೆ? -ಶೀಘ್ರದಲ್ಲೇ ಪ್ರಕ್ರಿಯೆ ಆರಂಭಿಸಲು ಪ್ರಧಾನಿ ಮೋದಿ ಸಲಹೆ

Team Udayavani, May 15, 2023, 7:09 AM IST

KOHINOOR DIAMOND

ನವದೆಹಲಿ: “ಬೆಳಕಿನ ಶಿಖರ” ಎಂದೇ ಕರೆಯಲ್ಪಡುವ ಕೊಹಿನೂರು ವಜ್ರವನ್ನು ಮರಳಿ ಭಾರತಕ್ಕೆ ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಹೆಜ್ಜೆಯಿಟ್ಟಿದೆ. ಕೊಹಿನೂರು ಮಾತ್ರವಲ್ಲದೇ ಬ್ರಿಟಿಷರ ಆಡಳಿತಾವಧಿಯಲ್ಲಿ ಭಾರತದಿಂದ ಹೊತ್ತೂಯ್ದಿದ್ದ ಇತರೆ ಅನೇಕ ಅಮೂಲ್ಯ ವಸ್ತುಗಳನ್ನು ವಾಪಸ್‌ ತರುವ ಉದ್ದೇಶದಿಂದ ಶೀಘ್ರದಲ್ಲೇ ರಾಜತಾಂತ್ರಿಕ ಅಭಿಯಾನವೊಂದನ್ನು ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಮೋದಿ ಆಸ್ಥೆ:

ಈ ರಾಜತಾಂತ್ರಿಕ ಅಭಿಯಾನವನ್ನು “ಗತಕಾಲದ ಪರಿಗಣನೆ’ ಎಂದು ವ್ಯಾಖ್ಯಾನಿಸಲಾಗಿದ್ದು, ಯುನೈಟೆಡ್‌ ಕಿಂಗ್‌ಡಮ್‌ ಎದುರಿಸಲಿರುವ ಅತಿದೊಡ್ಡ “ವಾಪಸಾತಿ ಬೇಡಿಕೆ’ ಇದಾಗಿರಲಿದೆ. ಕೊಹಿನೂರು ವಜ್ರ ಮತ್ತು ಭಾರತದ ಕಲಾಕೃತಿಗಳನ್ನು ಮರಳಿ ತರುವುದಕ್ಕೆ ಖುದ್ದು ಪ್ರಧಾನಿ ಮೋದಿಯವರೇ ಆಸ್ಥೆ ವಹಿಸಿದ್ದು, ಆದ್ಯತೆಯ ಮೇರೆಗೆ ಈ ಕೆಲಸ ನಡೆಯಬೇಕೆಂದು ಸೂಚಿಸಿದ್ದಾರೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ್‌ ಮೋಹನ್‌ ಹೇಳಿದ್ದಾರೆ.

ಈ ವರ್ಷವೇ ಆರಂಭ:

ಭಾರತ ಮೂಲದ ಅಮೂಲ್ಯ ಕಲಾಕೃತಿಗಳನ್ನು ಹೊಂದಿರುವ, ಖರೀದಿಸಿರುವಂಥ ಯುಕೆಯಲ್ಲಿನ ವಿವಿಧ ಸಂಸ್ಥೆಗಳನ್ನು ಮೊದಲಿಗೆ ಲಂಡನ್‌ನಲ್ಲಿರುವ ರಾಜತಾಂತ್ರಿಕ ಅಧಿಕಾರಿಗಳು ಸಂಪರ್ಕಿಸಿ, ಔಪಚಾರಿಕ ಕೋರಿಕೆ ಸಲ್ಲಿಸಲಿದ್ದಾರೆ. ಈ ಪ್ರಕ್ರಿಯೆಯು ಪ್ರಸಕ್ತ ವರ್ಷವೇ ಆರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

1849ರಿಂದಲೂ ಕೊಹಿನೂರು ವಜ್ರವು ಬ್ರಿಟಿಷ್‌ ರಾಜಮನೆತನದ ವಶದಲ್ಲಿದೆ. 1849ರಲ್ಲಿ 10 ವರ್ಷದವರಾಗಿದ್ದ ಭಾರತದ ಮಹಾರಾಜ ದುಲೀಪ್‌ ಸಿಂಗ್‌ ಅವರಿಂದ ಬಲವಂತವಾಗಿ ಲಾಹೋರ್‌ ಒಪ್ಪಂದಕ್ಕೆ ಸಹಿ ಹಾಕಿಸಿ, ಕೊಹಿನೂರು ವಜ್ರವನ್ನು ಬ್ರಿಟಿಷರು ಒಯ್ದರು ಎನ್ನಲಾಗಿದೆ. ಆದರೆ, “ಕೊಹಿನೂರು ವಜ್ರವು ಭಾರತದಿಂದ ಈಸ್ಟ್‌ ಇಂಡಿಯಾ ಕಂಪನಿಗೆ ನೀಡಲ್ಪಟ್ಟ ಉಡುಗೊರೆಯಾಗಿದೆ’ ಎನ್ನುವುದು ಬ್ರಿಟಿಷರ ವಾದ. ನಂತರದಲ್ಲಿ, ಕೊಹಿನೂರ್‌ ವಜ್ರವು ಬ್ರಿಟನ್‌ ರಾಣಿಯ ಕಿರೀಟದಲ್ಲಿ 2 ಸಾವಿರದಷ್ಟು ಇತರೆ ವಜ್ರಗಳೊಂದಿಗೆ ಸ್ಥಾನ ಪಡೆದುಕೊಂಡಿತು. ಈ ವಜ್ರವು ಭಾರತದಿಂದ ಕೊಂಡೊಯ್ಯುವ ವೇಳೆ 186 ಕ್ಯಾರೆಟ್‌ ಇತ್ತು.

ಬೇರೆ ಇನ್ನೇನಿವೆ?

ತೈಮೂರನ ಮಾಣಿಕ್ಯ, ಟಿಪ್ಪು ಸುಲ್ತಾನ್‌ ಒಡೆತನದ ರತ್ನಖಚಿತ ಹುಲಿಯ ತಲೆಯ ಕಲಾಕೃತಿ, ಟಿಪ್ಪು ಸುಲ್ತಾನನ ಹುಲಿಯ ಪ್ರತಿಕೃತಿ, ಅಮರಾವತಿ ಮಾರ್ಬಲ್‌, ಹರಿಹರ ವಿಗ್ರಹ, ಶಹಜಹಾನನ ವೈನ್‌ ಕಪ್‌ಗಳು, ಮಹಾರಾಜ ರಣಜಿತ್‌ ಸಿಂಗ್‌ನ ಸಿಂಹಾಸನ ಮತ್ತು ಹಿಂದೂ ದೇವದೇವತೆಗಳ ವಿಗ್ರಹಗಳು, ಕಲಾಕೃತಿಗಳು.

ಸಂಪತ್ತಿನ ಮೌಲ್ಯ

1765ರಿಂದ 1938ರ ಅವಧಿಯಲ್ಲಿ ಬ್ರಿಟಿಷರು ಭಾರತದಿಂದ ಹೊತ್ತೂಯ್ದ ಸಂಪತ್ತಿನ ಮೌಲ್ಯ 45 ಲಕ್ಷಕೋಟಿ ಡಾಲರ್‌ ಎಂದು 2018ರಲ್ಲಿ ಅರ್ಥಶಾಸ್ತ್ರಜ್ಞರಾದ ಉತ್ಸಾ ಪಟ್ನಾಯಕ್‌ ಅವರ ಸಂಶೋಧನಾ ವರದಿ ಹೇಳಿದೆ.

 

ಟಾಪ್ ನ್ಯೂಸ್

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

1-modi

Varanasi; 25000 ಮಹಿಳೆಯರ ಜತೆ ಸ್ವಕ್ಷೇತ್ರದಲ್ಲಿ ಪಿಎಂ ಸಂವಾದ

ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

MOdi (3)

Odisha ರಾಜ್ಯ ಸರಕಾರವು ಭ್ರಷ್ಟರ ಹಿಡಿತಕ್ಕೆ ಸಿಲುಕಿದೆ: ಪಿಎಂ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

Iran President

Iran ಅಧ್ಯಕ್ಷ ಮೃತ್ಯು; ಭಾರತದಾದ್ಯಂತ ಒಂದು ದಿನದ ಶೋಕಾಚರಣೆ

1-wqeqwewq

Goa:ಬೋಟ್ ನಲ್ಲಿ ಅಪಾಯಕ್ಕೆ ಸಿಲುಕಿದ್ದ 26 ಪ್ರವಾಸಿಗರ ರಕ್ಷಣೆ

Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!

Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!

1-weeqwe

Chhattisgarh; ಪಿಕಪ್ ವಾಹನ ಕಂದಕಕ್ಕೆ ಪಲ್ಟಿಯಾಗಿ 18 ಮಂದಿ ದಾರುಣ ಅಂತ್ಯ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.