ಚೆನ್ನೈಗೆ 15 ರನ್‌ ಗೆಲುವು: ಫೈನಲಿಗೆ


Team Udayavani, May 24, 2023, 12:56 AM IST

ಚೆನ್ನೈಗೆ 15 ರನ್‌ ಗೆಲುವು: ಫೈನಲಿಗೆ

ಚೆನ್ನೈ: ನಿಖರ ದಾಳಿಯ ಬಲದಿಂದ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡವನ್ನು ಕೇವಲ 157 ರನ್ನಿಗೆ ನಿಯಂತ್ರಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು 15 ರನ್ನುಗಳ ಗೆಲುವು ಸಾಧಿಸಿ ಐಪಿಎಲ್‌ ಕೂಟದ ಫೈನಲ್‌ ಹಂತಕ್ಕೇರಿತು. ಫೈನಲ್‌ ಹೋರಾಟ ಮೇ 28ರಂದು ನಡೆಯಲಿದೆ.

ಸೋತ ಗುಜರಾತ್‌ ಟೈಟಾನ್ಸ್‌ ತಂಡವು ಮೇ 26ರಂದು ನಡೆಯುವ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಆಡಲಿದೆ. ಬುಧವಾರ ನಡೆಯುವ ಎಲಿಮಿನೇಟರ್‌ ಪಂದ್ಯದ ವಿಜೇತ ತಂಡದ ಜತೆ ಗುಜರಾತ್‌ ಹೋರಾಡ‌ಲಿದೆ. ಈ ಪಂದ್ಯದ ವಿಜೇತ ತಂಡವು ಫೈನಲಿನಲ್ಲಿ ಚೆನ್ನೈ ಜತೆ ಮುಖಾಮುಖೀಯಾಗಲಿದೆ.

ಚೆನ್ನೈ ತಂಡದ ಎಂಎಸ್‌ ಧೋನಿ ಅವರಿಗಿದು ಬಹುತೇಕ ಕೊನೆಯ ಐಪಿಎಲ್‌ ಆಗಿದೆ. ಇದೀಗ ಚೆನ್ನೈ ಫೈನಲಿಗೇರಿದ್ದು ಪ್ರಶಸ್ತಿ ಗೆಲ್ಲುವ ಸುವರ್ಣಾವಕಾಶ ಪಡೆದಿದೆ. ಈ ಮೂಲಕ ಧೋನಿ ಅವರಿಗೆ ಐಪಿಎಲ್‌ ಪ್ರಶಸ್ತಿ ಉಡುಗೊರೆ ನೀಡಲು ಚೆನ್ನೈ ತಂಡ ಯೋಚಿಸುತ್ತಿದೆ.

ಒದ್ದಾಡಿದ ಗುಜರಾತ್‌
ಚೆನ್ನೈಯ ನಿಖರ ದಾಳಿಯನ್ನು ಎದುರಿಸಲು ಗುಜರಾತ್‌ ಆಟಗಾರರು ಬಹಳಷ್ಟು ಒದ್ದಾಟ ನಡೆಸಿದರು. ಆರಂಭದಲ್ಲಿಯೇ ನಿಧಾನವಾಗಿ ರನ್‌ ಪೇರಿಸತೊಡಗಿದ ಗುಜರಾತ್‌ ಆಗಾಗ್ಗೆ ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಬಿತ್ತು.

ಆರಂಭಿಕ ಶುಭ್‌ಮನ್‌ ಗಿಲ್‌ ಹೊರತುಪಡಿಸಿ ಉಳಿದ ಯಾವುದೇ ಆಟಗಾರ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಲು ವಿಫ‌ಲ ರಾದರು. ಇದರಿಂದ ತಂಡ ಬ್ಯಾಟಿಂಗ್‌ನಲ್ಲಿ ಕುಸಿಯ ತೊಡಗಿತು. ಗಿಲ್‌ 42 ರನ್‌ ಗಳಿಸಿ ಔಟಾದರೆ ರಶೀದ್‌ ಖಾನ್‌ 30 ರನ್‌ ಗಳಿಸಿದರು.

ರವೀಂದ್ರ ಜಡೇಜ. ಚಹರ್‌ ಮತ್ತು ತೀಕ್ಷಣ ಅವರ ಅಮೋಘ ದಾಳಿಗೆ ಗುಜರಾತ್‌ ಆಟಗಾರರು ಸಂಪೂರ್ಣ ಶರಣಾದರು. ಯಾವುದೇ ಹಂತದಲ್ಲೂ ಪ್ರತಿಹೋರಾಟ ನೀಡಲು ವಿಫ‌ಲರಾದ ಕಾರಣ ತಂಡ ಅಂತಿಮವಾಗಿ 157 ರನ್ನಿಗೆ ಆಲೌಟಾಯಿತು.

ಚಹರ್‌, ತೀಕ್ಷಣ, ಜಡೇಜ ಮತ್ತು ಪತಿರಣ ತಲಾ ಎರಡು ವಿಕೆಟ್‌ ಕಿತ್ತು ಮಿಂಚಿದರು. ಜಡೇಜ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 18 ರನ್‌ ನೀಡಿದ್ದರು.

ಗಾಯಕ್ವಾಡ್‌ ಅರ್ಧಶತಕ
ಚೆನ್ನೈಯ ಆರಂಭ ಉತ್ತಮವಾಗಿತ್ತು. ಆರಂಭಿಕ ರಾದ ರುತುರಾಜ್‌ ಗಾಯಕ್ವಾಡ್‌ ಮತ್ತು ಡೇವನ್‌ ಸ್ಮಿತ್‌ ಗುಜರಾತ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿ ರನ್‌ ಪೇರಿಸತೊಡ ಗಿದರು. ಶಮಿ ಎಸೆದ ಮೊದಲ ಓವರಿನಲ್ಲಿ ಹೆಚ್ಚಿನ್‌ ರನ್‌ ಬಂದಿರಲಿಲ್ಲ. ಆಬಳಿಕ ಅವರಿಬ್ಬರು ಭರ್ಜರಿಯಾಗಿ ಆಡಿದರು. ಇದರಿಂದಾಗಿ ಮೊದಲ 10 ಓವರ್‌ ಮುಗಿದಾಗ ತಂಡದ ಮೊತ್ತ 80ರ ಗಡಿ ದಾಟಿತ್ತು. ಮುಂದಿನ ಓವರಿನಲ್ಲಿ ಉತ್ತಮವಾಗಿ ಆಡುತ್ತಿದ್ದ ಗಾಯಕ್ವಾಡ್‌ ಅವರು ಮೋಹಿತ್‌ ಶರ್ಮ ಅವರಿಗೆ ವಿಕೆಟ್‌ ಒಪ್ಪಿಸಿದರು. 44 ಎಸೆತ ಎದುರಿಸಿದ ಅವರು 7 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 60 ರನ್‌ ಹೊಡೆದರು.

ರನ್‌ವೇಗಕ್ಕೆ ಕಡಿವಾಣ
ಗಾಯಕ್ವಾಡ್‌ ಔಟಾದ ಬಳಿಕ ತಂಡದ ರನ್‌ವೇಗಕ್ಕೆ ಕಡಿವಾಣ ಬಿತ್ತು. ಆಬಳಿಕ ಬಂದ ಶಿವಂ ದುಬೆ 1 ರನ್‌ ಗಳಿಸಿ ನೂರ್‌ ಅಹ್ಮದ್‌ಗೆ ಕ್ಲೀನ್‌ಬೌಲ್ಡ್‌ ಆದರು. ಇದರಿಂದ ತಂಡ ಆಘಾತಕ್ಕೆ ಒಳಗಾಯಿತು. ಅಜಿಂಕ್ಯ ರಹಾನೆ ಕೂಡ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದರು. ಅಂಬಾಟಿ ರಾಯುಡು, ಧೋನಿ ಇಲ್ಲಿಯೂ ಮಿಂಚಲು ವಿಫ‌ಲರಾದರು. ಇದರಿಂದ ತಂಡದ ರನ್‌ ವೇಗ ಬಹಳಷ್ಟು ಕುಸಿಯಿತು.

ಕೊನೆಹಂತದಲ್ಲಿ ರವೀಂದ್ರ ಜಡೇಜ ಉತ್ತಮವಾಗಿ ಆಡಿದ್ದರಿಂದ ತಂಡದ ಮೊತ್ತ 170ರ ಗಡಿ ದಾಟಿತು. ಅಂತಿಮ ಎಸೆತದಲ್ಲಿ ಔಟಾದ ಜಡೇಜ 16 ಎಸೆತ ಎದುರಿಸಿದ್ದು 22 ರನ್‌ ಗಳಿಸಿದ್ದರು. ಗುಜರಾತ್‌ನ ನಿಖರ ದಾಳಿಯಿಂದಾಗಿ ಚೆನ್ನೈ ಅಂತಿಮ ಮೂರು ಓವರ್‌ಗಳಲ್ಲಿ 35 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

ಬಿಗು ದಾಳಿ ಸಂಘಟಿಸಿದ ಮೊಹಮ್ಮದ್‌ ಶಮಿ 28 ರನ್ನಿಗೆ 2 ವಿಕೆಟ್‌ ಕಿತ್ತರು. ಮೋಹಿತ್‌ ಶರ್ಮ 31 ರನ್ನಿಗೆ 2 ವಿಕೆಟ್‌ ಪಡೆದರೆ ರಶೀದ್‌ ಖಾನ್‌, ನೂರ್‌ ಅಹ್ಮದ್‌ ಮತ್ತು ದರ್ಶನ್‌ ನಲ್ಕಾಂಡೆ ತಲಾ ಒಂದು ವಿಕೆಟ್‌ ಪಡೆದರು.

ಸ್ಕೋರ್‌ ಪಟ್ಟಿ
ಚೆನ್ನೈ ಸೂಪರ್‌ ಕಿಂಗ್ಸ್‌
ರುತುರಾಜ್‌ ಗಾಯಕ್ವಾಡ್‌ ಸಿ ಮಿಲ್ಲರ್‌ ಬಿ ಶರ್ಮ 60
ಡೇವನ್‌ ಕಾನ್ವೇ ಸಿ ರಶೀದ್‌ ಬಿ ಶಮಿ 40
ಶಿವಂ ದುಬೆ ಬಿ ರೂರ್‌ ಅಹ್ಮದ್‌ 1
ಅಜಿಂಕ್ಯ ರಹಾನೆ ಸಿ ಗಿಲ್‌ ಬಿ ನಲ್ಕಾಂಡೆ 17
ಅಂಬಾಟಿ ರಾಯುಡು ಸಿ ಶಣಕ ಬಿ ರಶೀದ್‌ 17
ರವೀಂದ್ರ ಜಡೇಜ ಬಿ ಶಮಿ 22
ಎಂಎಸ್‌ ಧೋನಿ ಸಿ ಪಾಂಡ್ಯ ಬಿ ಶರ್ಮ 1
ಮೊಯಿನ್‌ ಅಲಿ ಔಟಾಗದೆ 9
ಇತರ: 5
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 172
ವಿಕೆಟ್‌ ಪತನ: 1-87, 2-90, 3-121, 4-125, 5-148, 6-155, 7-172
ಬೌಲಿಂಗ್‌:
ಮೊಹಮ್ಮದ್‌ ಶಮಿ 4-0-28-2
ದರ್ಶನ್‌ ನಲ್ಕಾಂಡೆ 4-0-44-1
ರಶೀದ್‌ ಖಾನ್‌ 4-0-37-1
ನೂರ್‌ ಅಹ್ಮದ್‌ 4-0-29-1
ಮೋಹಿತ್‌ ಶರ್ಮ 4-0-31-2

ಗುಜರಾತ್‌ ಟೈಟಾನ್ಸ್‌
ವೃದ್ಧಿಮಾನ್‌ ಸಾಹ ಸಿ ಪತಿರಣ ಬಿ ಚಹರ್‌ 12
ಶುಭ್‌ಮನ್‌ ಗಿಲ್‌ ಸಿ ಕಾನ್ವೆ ಬಿ ಚಹರ್‌ 42
ಹಾರ್ದಿಕ್‌ ಪಾಂಡ್ಯ ಸಿ ಜಡೇಜ ಬಿ ತೀಕ್ಷಣ 8
ದಾಸುನ್‌ ಶಣಕ ಸಿ ತೀಕ್ಷಣ ಬಿ ಜಡೇಜ 17
ಡೇವಿಡ್‌ ಮಿಲ್ಲರ್‌ ಬಿ ಜಡೇಜ 4
ವಿಜಯ್‌ ಶಂಕರ್‌ ಸಿ ಗಾಯಕ್ವಾಡ್‌ ಬಿ ಪತಿರಣ 14 ರಾಹುಲ್‌ ತೆವಾಟಿಯ ಬಿ ತೀಕ್ಷಣ 3
ರಶೀದ್‌ ಖಾನ್‌ ಸಿ ಕಾನ್ವೆ ಬಿ ದೇಶಪಾಂಡೆ 30
ದರ್ಶನ್‌ ನಲ್ಗಾಂಡೆ ರನೌಟ್‌ 0
ನೂರ್‌ ಅಹ್ಮದ್‌ ಔಟಾಗದೆ 7
ಮೊಹಮ್ಮದ್‌ ಶಮಿ ಸಿ ಚಹರ್‌ ಬಿ ಪತಿರಣ 5
ಇತರ: 15
ಒಟ್ಟು (20 ಓವರ್‌ಗಳಲ್ಲಿ ಆಲೌಟ್‌) 157
ವಿಕೆಟ್‌ ಪತನ: 1-22, 2-41, 3-72, 4-88, 5-88, 6-98, 7-136, 8-136, 9-142
ಬೌಲಿಂಗ್‌:
ದೀಪಕ್‌ ಚಹರ್‌ 4-0-29-2
ತುಷಾರ್‌ ದೇಶಪಾಂಡೆ 4-0-43-1 ಮಹೀಶ್‌ ತೀಕ್ಷಣ 4-0-28-2
ರವೀಂದ್ರ ಜಡೇಜ 4-0-18-2
ಮತೀಶ ಪತಿರಣ 4-0-37-2

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.