LOVE: ಮದುವೆಯಾದ 20 ದಿನದಲ್ಲೇ ಓಡಿಹೋದ ಪತ್ನಿ; ಹಳೆ ಪ್ರೇಮ್ ಕಹಾನಿಗೆ ಸಾಥ್ ಕೊಟ್ಟ ಪತಿ.!
Team Udayavani, Jun 5, 2023, 9:38 AM IST
ಮಹಾರಾಷ್ಟ್ರ: ಪ್ರೀತಿ ಸಿಗೋದು ಕಷ್ಟ. ಅದೇ ಪ್ರೀತಿಯನ್ನು ಉಳಿಸಿಕೊಳ್ಳುವುದು ಕೆಲವರಿಗೆ ಇನ್ನು ಕಷ್ಟ. ಪ್ರೀತಿಸಿದವರನ್ನೇ ಮದುವೆಯಾಗಿ ಸುಖವಾಗಿ ಬಾಳುವುದು ಬಹುಶಃ ನೂರರಲ್ಲಿ ಒಂದಷ್ಟು ಸಂಖ್ಯೆಯ ಜನರು ಮಾತ್ರ.
ಇಲ್ಲೊಂದು ಪ್ರೇಮ ಕಥೆಗೆ ಪತಿಯೇ ಸಹಾಯ ಮಾಡಿದ ಘಟನೆ ನಡೆದಿದೆ. ಮದುವೆಯ ಬಳಿಕ ತನ್ನ ಪತ್ನಿಯ ಮೊದಲ ಪ್ರೇಮಯಾನಕ್ಕೆ ಆಕೆಯ ಪತಿಯೇ ಸಹಾಯ ಮಾಡಿರುವ ಘಟನೆ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ನಡೆದಿದೆ.
ಮಹಾರಾಷ್ಟ್ರದ ಬೀಚ್ಕಿಲಾ ಗ್ರಾಮದ ನಿವಾಸಿ ಸನೋಜ್ ಕುಮಾರ್ ಸಿಂಗ್ ಅವರು ಮೇ 10 ರಂದು ಪ್ರಿಯಾಂಕಾ ಕುಮಾರಿ ಎಂಬಾಕೆಯನ್ನು ವಿವಾಹವಾಗಿದ್ದಾರೆ. ಮದುವೆಯಾದ ಕೆಲ ದಿನಗಳ ಬಳಿಕ ತನ್ನ ಪತ್ನಿ ಪ್ರಿಯಾಂಕ ನಿತ್ಯ ನಿರಾಶರಾಗಿ ಕೂತಿರುವುದನ್ನು, ಏನೋ ಮುಚ್ಚಿಡುವುದನ್ನು ಪತಿ ಸನೋಜ್ ಅವರು ಗಮನಿಸಿದ್ದಾರೆ. ಪ್ರಿಯಾಂಕ ಅವರು ಜಿತೇಂದ್ರ ಎಂಬ ಯುವಕನನ್ನು ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ಪತಿ ಸನೋಜ್ ಗೆ ಗೊತ್ತಾಗಿದೆ. ಕಳೆದ 10 ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದಾರೆ. ಜಾತಿಯ ವಿಚಾರದಲ್ಲಿ ಅವರ ಸಂಬಂಧವನ್ನು ಒಪ್ಪಲಿಲ್ಲ ಎಂದು ಪತಿಗೆ ಗೊತ್ತಾಗಿದೆ.
ಮದುವೆಯಾಗಿ ಸರಿಯಾಗಿ 20 ದಿನಗಳ ಬಳಿಕ ಪ್ರಿಯಾಂಕ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಲು ನಿರ್ಧರಿಸಿದ್ದಾರೆ. ಜಿತೇಂದ್ರ- ಪ್ರಿಯಾಂಕ ಇಬ್ಬರು ಓಡಿ ಹೋಗಲು ಯತ್ನಿಸಿದ್ದಾರೆ. ಆದರೆ ಇಬ್ಬರನ್ನು ಗ್ರಾಮಸ್ಥರು ನೋಡಿ, ಮನಾಟು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಇದಾದ ಬಳಿಕ ಪೊಲೀಸರು ಎರಡೂ ಕುಟುಂಬದವರನ್ನು ಠಾಣೆಗೆ ಕರೆಸಿದ್ದಾರೆ. ಈ ವೇಳೆ ಪತಿ ಸನೋಜ್ ಪತ್ನಿ ಪ್ರಿಯಾಂಕ ಅವರ ಪ್ರೀತಿಗೆ ಸಹಾಯ ಮಾಡಿದ್ದಾರೆ. ಪ್ರಿಯಾಕರನೊಂದಿಗೆ ಓಡಿ ಹೋದದ್ದಕ್ಕೆ ಯಾವುದೇ ತಕರಾರು ಎತ್ತದೇ ಇಬ್ಬರ ಸಹಾಯಕ್ಕೆ ನಿಂತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Kunigal; ಬೈಕ್ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ
ನಮ್ಮ ವಿರುದ್ಧ ಷಡ್ಯಂತ್ರ: ಎಚ್.ಡಿ. ರೇವಣ್ಣ