ಶೂಟ್ ವೇಳೆ ನನ್ನನು ನೋಡಲು ಅಭಿಮಾನಿಗಳು ಕಲ್ಲು ತೂರಾಟಕ್ಕೆ ಸಿದ್ಧರಾಗಿದ್ದರು: ಅಮೀಶಾ ಪಟೇಲ್
Team Udayavani, Jul 27, 2023, 4:21 PM IST
ಮುಂಬಯಿ: ಸನ್ನಿ ಡಿಯೋಲ್ – ಅಮೀಶಾ ಪಟೇಲ್ ಅವರ ʼಗದರ್-2ʼ ಬಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. ಸಿನಿಮಾದ ಟ್ರೇಲರ್ ಈಗಾಗಲೇ ರಿಲೀಸ್ ಆಗಿದ್ದು, ಟ್ರೆಂಡಿಂಗ್ ನಲ್ಲಿದೆ.
ಸಿನಿಮಾದ ಹಾಡು ಹಾಗೂ ಟ್ರೇಲರ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಸನ್ನಿ ಡಿಯೋಲ್ ಮತ್ತೆ ತಾರಾ ಸಿಂಗ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕ್ ನಲ್ಲಿ ಸಿಲುಕಿರು ತನ್ನ ಮಗನನ್ನು ಉಳಿಸಲು ಹೋರಾಡುವ ʼಗದರ್-2ʼ ನಲ್ಲಿ ಸಾಹಸದ ದೃಶ್ಯಗಳಿವೆ. ಸನ್ನಿ ಡಿಯೋಲ್ ಅವರ ಡೈಲಾಗ್ಸ್ ಗಳಿವೆ. ಒಟ್ಟಿನಲ್ಲಿ ಸಿನಿಮಾದಲ್ಲಿ ದೇಶ ಪ್ರೇಮದೊಂದಿಗೆ, ಮಾಸ್ ಅಂಶಗಳು ಇರುವುದು ಪಕ್ಕಾ ಎನ್ನುವಂತಿದೆ ಟ್ರೇಲರ್.
ಪ್ರಚಾರದ ಹಂತವಾಗಿ ಚಿತ್ರತಂಡ ಪ್ರತಿಕಾಗೋಷ್ಠಿ ನಡೆಸಿದೆ. ಇದರಲ್ಲಿ ನಾಯಕಿ ಅಮೀಶಾ ಪಟೇಲ್ ಶೂಟಿಂಗ್ ಸಂದರ್ಭದಲ್ಲಾದ ಘಟನೆಯೊಂದರ ಬಗ್ಗೆ ಮಾತನಾಡಿದ್ದಾರೆ.
“ಅಂದಿನ ಶೂಟಿಂಗ್ ಗೆ ನಮ್ಮ ತಂಡದವರು ಕಷ್ಟಪಟ್ಟು ಸೆಟ್ ಹಾಕಿದರು. ಅದು ರಾತ್ರಿ ನಡೆಯುವ ಚಿತ್ರೀಕರಣವಾಗಿತ್ತು. ಆದರೆ ರಾತ್ರಿಯಾದರೂ ಅಲ್ಲಿ ಅನೇಕ ಜನರು ಸೇರಿದ್ದರು. ನಾವು ಏನೇ ಹೇಳಿದರೂ ಅವರು ಹೋಗಲು ಕೇಳುತ್ತಿರಲಿಲ್ಲ. ಅವರು ನನ್ನನ್ನೊಮ್ಮೆ ನೋಡಬೇಕೆಂದು ಹಟ ಹಿಡಿದಿದ್ದರು. ಇಲ್ಲದಿದ್ರೆ ನಾವು ಶೂಟಿಂಗ್ ಮಾಡಲು ಬಿಡುವುದಿಲ್ಲ ಎನ್ನುತ್ತಿದ್ದರು. ನಮ್ಮ ತಂಡ ಶೂಟ್ ಗಾಗಿ ಸಾಕಷ್ಟು ತಯಾರಿ ನಡೆಸಿಕೊಂಡು ಕಾಯುತ್ತಿದ್ದರು. ನಾನು ಮೇಕಪ್ ವಾಹನದಲ್ಲಿ ಕೂತಿದ್ದೆ. ನೀವು ಹೊರಗೆ ಹೋಗಿ ಕೈ ಬೀಸಿ, ಅಲ್ಲಿಂದಲೇ ಹೊಟೇಲ್ ಗೆ ಹೋಗಿ, ಇಲ್ಲದಿದ್ರೆ ಅವರು ನಮ್ಮ ಮೇಲೆ ಕಲ್ಲು ಎಸೆಯುತ್ತಾರೆ ಎಂದು ನನ್ನ ಬಳಿ ನಿರ್ದೇಶಕರು ಹೇಳಿದರು. ಇದಲ್ಲದೆ ನಮ್ಮ ವಾಹನವನ್ನು ಬಡಿಯಲು ಆರಂಭಿಸಿದರು ಎಂದು ಘಟನೆ ಬಗ್ಗೆ ಹೇಳಿದರು.
ಇದಲ್ಲದೇ ಅಮೃತಸರದಲ್ಲಿ ಸನ್ನಿ ಡಿಯೋಲ್ ಬರುವುದು ಗೊತ್ತಾಗಿ ಅಲ್ಲಿ, ಅನೇಕರು ಗುಂಪುಗೂಡಿದ್ದರು. ಅವರನ್ನು ನಿಯಂತ್ರಿಸಲು ಲಾಠಿ ಪ್ರಹಾರ ಮಾಡಬೇಕಾಗಿ ಬಂತು. ಅಲ್ಲಿಗೆ ಬಂದ ಸನ್ನಿ ಡಿಯೋಲ್ ಜನರ ಗುಂಪನ್ನು ನೋಡಿ, ಮುಂದಿನ ಫ್ಲೈಟ್ ನಲ್ಲಿ ವಾಪಾಸ್ ಮುಂಬಯಿಗೆ ಹೋದರು ಎಂದು ನಟಿ ಹೇಳಿದರು.
‘ಗದರ್ 2’ ಅನಿಲ್ ಶರ್ಮಾ ಅವರ 2001 ರ ನಿರ್ದೇಶನದ ‘ಗದರ್: ಏಕ್ ಪ್ರೇಮ್ ಕಥಾ’ದ ಮುಂದುವರಿದ ಭಾಗವಾಗಿದೆ. ‘ಗದರ್ 2’ ಚಿತ್ರದಲ್ಲಿ ಅಮೀಶಾ ಪಟೇಲ್, ಸನ್ನಿ ಡಿಯೋಲ್ ಮತ್ತು ಉತ್ಕರ್ಷ್ ಶರ್ಮಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾ ಆಗಸ್ಟ್ 11 ರಂದು ತೆರೆಗ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cannes 2024 : ಐಶ್ವರ್ಯಾ ರೈ ಹೊಸ ಲುಕ್ಗೆ ನೆಟ್ಟಿಗರ ಪರ, ವಿರೋಧ ಕಮೆಂಟ್
Cannes Film Festival: ಕೇನ್ಸ್ ನಲ್ಲಿ ಪ್ರದರ್ಶನ ಕಾಣಲಿದೆ ಭಾರತದ ಈ 7 ಸಿನಿಮಾಗಳು
ಹೃದಯ ಸಂಬಂಧಿ ಕಾಯಿಲೆ: ಬಿಗ್ ಬಾಸ್ ಖ್ಯಾತಿ, ನಟಿ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲು
Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್ನ ಬಜೆಟ್ಟೇ 835 ಕೋಟಿ ರೂ.
Bollywood: ಜೂನ್ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್ ಭರಾಟೆ
MUST WATCH
ಹೊಸ ಸೇರ್ಪಡೆ
Unemployment; ಭಾರತದ ಯುವಕರಿಗೆ ಕೆಲಸ ಸಿಗಬೇಕಾದರೆ ಮೋದಿ ನಿವೃತ್ತಿಯಾಗಬೇಕು: ರಾಹುಲ್ ಗಾಂಧಿ
IPL 2024; ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ
OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್ಗಳ ಹೆಸರಲ್ಲಿ ಸಂದೇಶ
Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ
Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್?