ಪರಶುರಾಮ ಥೀಮ್ ಪಾರ್ಕ್ಅಕ್ರಮ ತನಿಖೆಗೆ ಆಗ್ರಹ
ಉಳಿದ ಭಾಗ ಇನ್ನೂ ಬೆಂಗಳೂರಿನಲ್ಲಿ ಸಿದ್ಧವಾಗುತ್ತಿದೆ
Team Udayavani, Sep 9, 2023, 10:10 AM IST
ಉಡುಪಿ: ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದ ಮೇಲೆ ನಿರ್ಮಿಸಿರುವ ಪರಶುರಾಮನ ಮೂರ್ತಿಯು ಕಂಚಿನದ್ದು ಎಂಬುದರ ಸತ್ಯಾಸತ್ಯತೆ ತಿಳಿಯಲು ಲೋಹಮಾಪನ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಪರೀಕ್ಷೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು ಆಗ್ರಹಿಸಿದ್ದಾರೆ.
1.58 ಎಕ್ರೆ ಗೋಮಾಳದಲ್ಲಿ ಅಕ್ರಮವಾಗಿ ಪಾರ್ಕ್ ನಿರ್ಮಿಸಲಾಗಿದೆ. ಚುನಾವಣೆ ಉದ್ದೇಶದಿಂದ ಅವಸರದಲ್ಲಿ ಥೀಮ್ ಪಾರ್ಕ್ ಉದ್ಘಾಟಿಸಲಾಗಿದೆ. ಪರಶುರಾಮನ ಕಂಚಿನ ಪ್ರತಿಮೆ ಎಂದಿದ್ದರು. ಅದು ಈಗ ಪೂರ್ಣ ಪ್ರಮಾಣದ ಕಂಚಿನ ಪ್ರತಿಮೆಯಾಗಿಲ್ಲ. ಮೊಣಕಾಲು ತನಕ ಕಂಚಿನದ್ದಾಗಿದ್ದು, ಉಳಿದ ಭಾಗ ಇನ್ನೂ ಬೆಂಗಳೂರಿನಲ್ಲಿ ಸಿದ್ಧವಾಗುತ್ತಿದೆ. ಹೀಗಾಗಿಯೇ ಸಾರ್ವಜನಿಕರಿಗೆ
ಪ್ರವೇಶ ನಿರ್ಬಂಧಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಪಾರ್ಕ್ ಅವ್ಯವಹಾರ ಬಗ್ಗೆ ಸಚಿವರ ಗಮನಕ್ಕೆ ತರಲಾಗಿದ್ದು, ಅವರು ಕಾಮಗಾರಿ ಸ್ಥಗಿತಗೊಳಿಸಲುಜಿಲ್ಲಾಧಿಕಾರಿಗಳಿಗೆ ಸೂಚನೆ
ನೀಡಿದ್ದಾರೆ ಎಂದರು. 14.42 ಕೋಟಿ ರೂ. ವೆಚ್ಚದ ಯೋಜನೆಗೆ ಈಗಾಗಲೇ 6.72 ಕೋಟಿ ರೂ. ಪಾವತಿಯಾಗಿದೆ. ಅವುಗಳ ಪೈಕಿ 2 ಕೋಟಿ ರೂ. ಪಾವತಿಗೆ ಸಂಬಂಧಿಸಿ ಯಾವುದೇ ಮಾಹಿತಿ, ದಾಖಲಾತಿ ಇಲ್ಲ. ಪಾರ್ಕ್ ಉದ್ಘಾಟನೆಗೆ 2.18 ಕೋ.ರೂ. ಖರ್ಚು ಮಾಡಲಾಗಿದ್ದು, 60 ಲ. ರೂ. ಯಾವುದಕ್ಕೆ ಪಾವತಿಸಿದ್ದಾರೆ ಎಂಬ ಬಗ್ಗೆ ಮಾಹಿತಿಯೇ ಇಲ್ಲ ಎಂದು ದೂರಿದರು. ಮುಖಂಡರಾದ ಸದಾಶಿವ ದೇವಾಡಿಗ, ದೀಪಕ್ ಕೋಟ್ಯಾನ್, ಸುಬಿತ್ ಕುಮಾರ್, ಸುಧಾಕರ ಶೆಟ್ಟಿ ಹಾಗೂ ಸುಬೋಧರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಕೃತಿ ವಿಕೋಪ ತಡೆಗೆ ಅಗತ್ಯ ಕ್ರಮ ಕೈಗೊಳ್ಳಿ: ಉಭಯ ಜಿಲ್ಲಾಧಿಕಾರಿಗಳ ಸೂಚನೆ
Siddapura ಮಗನ ಹುಟ್ಟುಹಬ್ಬಕ್ಕೆ ಊರಿಗೆ ಬಂದ ತಂದೆ ಸಿಡಿಲಾಘಾತಕ್ಕೆ ಬಲಿ!
Rain ಕುಂದಾಪುರ, ಬೈಂದೂರು, ಹೆಬ್ರಿ: ಗಾಳಿ-ಮಳೆ ಅಬ್ಬರ; ಅಪಾರ ಹಾನಿ
Malpe Beach: ಸೆ.15ರ ವರೆಗೆ ಪ್ರವಾಸೀ ಬೋಟ್ ಚಟುವಟಿಕೆ ಸ್ಥಗಿತ
“ಉದಯವಾಣಿ’ ವರದಿಗೆ ಸಹೃದಯಿಗಳ ವ್ಯಾಪಕ ಸ್ಪಂದನೆ ; ಧನ್ಯಾ ಕಲಿಕೆಗೆ ದಾನಿಗಳ ನೆರವು