Shirva: ವಾಟ್ಸಪ್‌ನಲ್ಲಿ ಮೆಸೇಜ್‌ ಮಾಡಿ ಆನ್‌ಲೈನ್‌ ಮೂಲಕ ಹಣ ಪಡೆದು ವಂಚನೆ


Team Udayavani, Nov 10, 2023, 7:38 PM IST

Shirva: ವಾಟ್ಸಪ್‌ನಲ್ಲಿ ಮೆಸೇಜ್‌ ಮಾಡಿ ಆನ್‌ಲೈನ್‌ ಮೂಲಕ ಹಣ ಪಡೆದು ವಂಚನೆ

ಶಿರ್ವ: ಸ್ನೇಹಿತನ ನಂಬರ್‌ ಹ್ಯಾಕ್‌ ಮಾಡಿ ವಾಟ್ಸಪ್‌ ಮೂಲಕ ಮೆಸೇಜ್‌ ಕಳುಹಿಸಿ ಆನ್‌ಲೈನ್‌ ಮೂಲಕ ರೂ. 98,000/- ಹಣ ಪಡೆದು ವಂಚಿಸಿದ ಘಟನೆ ಶಿರ್ವದಲ್ಲಿ ನಡೆದಿದೆ.

ಶಿರ್ವದಲ್ಲಿ ಟ್ಯಾಕ್ಸ್‌ ಕನ್ಸಲ್ಟೆಂಟ್‌ ಕಚೇರಿ ಹೊಂದಿದ್ದ ರಮಾನಂದ ಅವರು ವಿದೇಶದಲ್ಲಿದ್ದ ಸ್ನೇಹಿತ ಕೋಡು ದಿವಾಕರ ಅವರಿಗೆ ತೆರಿಗೆ ವಿಚಾರದಲ್ಲಿ ಸಲಹೆ ನೀಡು ತ್ತಿದ್ದರು. ನ. 8 ರಂದು ರಮಾನಂದ ಅವರು ಸ್ನೇಹಿತ ದಿವಾಕರ್‌ ಅವರಿಗೆ ತೆರಿಗೆ ವಿಚಾರದಲ್ಲಿ ಮೆಸೇಜ್‌ ಮಾಡಿದ್ದು,ಅದಕ್ಕೆ ತಾನು ಮೀಟಿಂಗ್‌ನಲ್ಲಿ ಇದ್ದೇನೆ ಬಳಿಕ ಹೇಳುತ್ತೇನೆ ಎಂದು ಮೆಸೇಜ್‌ ಮಾಡಿದ್ದಾರೆ. ಬಳಿಕ ತನಗೆ ಇಂಡಿಯಾದಲ್ಲಿ ಮೆಡಿಕಲ್‌ ಹೆಲ್ಪ್ಗಾಗಿ ರೂ. 98,000/-ಅವಶ್ಯಕತೆಯಿದ್ದು ನೀಡಿದ ಖಾತೆಗೆ ಹಣ ಕಳುಹಿಸ ಬೇಕು ಎಂದು ಮೆಸೇಜ್‌ ಮಾಡಿದ್ದಾರೆ.

ರಮಾನಂದ ಅವರು ಆ ಖಾತೆಗೆ ಗೂಗಲ್‌ ಪೇ ಮೂಲಕ ಹಣ ಕಳುಹಿಸಲು ಪ್ರಯತ್ನಿಸಿದಾಗ ಅದು ಕನೆಕ್ಟ್ ಆಗದೇ ಇದ್ದು, ವಾಟ್ಸಪ್‌ನಲ್ಲಿ ನೀವು ಕಳುಹಿಸಿದ ಖಾತೆಗೆ ಹಣ ಹೋಗುವುದಿಲ್ಲ ಎಂದು ಮೆಸೇಜ್‌ ಮಾಡಿದಾಗ ಬೇರೊಂದು ಖಾತೆ ನಂಬ್ರ ನೀಡಿದ್ದಾರೆ.

ರಮಾನಂದ ಅವರಿಗೆ ದಿವಾಕರ ಅವರೊಂದಿಗೆ ಹಿಂದಿನಿಂದಲೂ ವ್ಯವಹಾರ ಇದ್ದುದರಿಂದ ಆಸ್ಪತ್ರೆ ವಿಚಾರವನ್ನು ನಂಬಿ ರೂ.98,000/- ಹಣವನ್ನು ಗೂಗಲ್‌ ಪೇ ಮೂಲಕ ಕಳುಹಿಸಿದ್ದಾರೆ.ಬಳಿಕ ಸ್ವಲ್ಪ ಹೊತ್ತಿನಲ್ಲಿ ಮೊತ್ತ ತಪ್ಪಾಗಿದೆ, ರೂ.5,98,000/- ಹಣ ಕಳುಹಿಸಿ ಎಂದು ಹೇಳಿ ಖಾತೆಯ ವಿವರ ನೀಡಿ ಮತ್ತೆ 5 ಲ.ರೂ. ಕಳುಹಿಸಿ ಎಂದು ಮೆಸೇಜ್‌ ಮಾಡಿದ್ದಾರೆ. ಇದನ್ನು ನೋಡಿದ ರಮಾನಂದ ಅವರು ತನ್ನ ಖಾತೆಯಲ್ಲಿ ಅಷ್ಟು ಹಣ ಇಲ್ಲ ಎಂದು ಮೆಸೇಜ್‌ ಮಾಡಿದ್ದು, ಕರೆ ಮಾಡಿದಾಗ ಕನೆಕ್ಟ್ ಆಗಲಿಲ್ಲ. ತಾನು ಮೀಟಿಂಗ್‌ನಲ್ಲಿ ಇದ್ದೇನೆ ಬಳಿಕ ಕರೆ ಮಾಡುತ್ತೇನೆ ಎಂದ ದಿವಾಕರ್‌ ಮತ್ತೆ ಕಾಲ್‌ ಮಾಡಿರಲಿಲ್ಲ.

ದಿವಾಕರ ಅವರು ಯಾವಾಗಲೂ ರಮಾನಂದ ಅವರಿಗೆ ಕೂಡಲೇವಾಪಾಸು ಮೆಸೇಜ್‌ ಮಾಡುತ್ತಿದ್ದು ಈ ಸಮಯದಲ್ಲಿ ಎಷ್ಟು ಹೊತ್ತಾದರೂ ಮೇಸೇಜ್‌ ಮಾಡದಿದ್ದುದನ್ನು ಕಂಡು ಸಂಶಯಗೊಂಡು ದಿವಾಕರ ಅವರ ಪತ್ನಿಯ ಮೊಬೈಲಿಗೆ ಮೆಸೇಜ್‌ ಮಾಡಿದಾಗ ಅವರ ವಾಟ್ಸಪ್‌ ಹ್ಯಾಕ್‌ ಆದ ವಿಚಾರ ತಿಳಿದು ಬಂದಿದೆ.

ಕೋಡು ದಿವಾಕರ ಅವರ ವಾಟ್ಸಪ್‌ನ್ನು ಯಾರೋ ಹ್ಯಾಕ್‌ ಮಾಡಿ ತಾನೇ ಕೋಡು ದಿವಾಕರ ಎಂದು ನಂಬಿಸಿ ಮೆಸೇಜ್‌ ಮಾಡಿ ಆನ್‌ಲೈನ್‌ ಮೂಲಕ ರೂ. 98,000/- ಹಣ ಪಡೆದು ವಂಚಿಸಿ ಮೋಸ ಮಾಡಿದ್ದಾರೆ ಎಂದು ರಮಾನಂದ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

1-qwewqwqe

IPL;ಪಂಜಾಬ್ ವಿರುದ್ಧ 60 ರನ್ ಗಳ ಗೆಲುವು ಸಾಧಿಸಿದ ಆರ್ ಸಿಬಿ: ಪ್ಲೇ ಆಫ್ ಆಸೆ ಜೀವಂತ

suicide

Heatstroke; ಬಸವಕಲ್ಯಾಣದಲ್ಲಿ ಬಿಸಿಲಿನ ಝಳಕ್ಕೆ ಕಾರ್ಮಿಕ‌ ಸಾವು‌?

1-ww-ewq

SSLC Result; ಜ್ಞಾನಸುಧಾ ಕಾರ್ಕಳ ಶೇ. 100 ಫ‌ಲಿತಾಂಶ: ಸಹನಾ ರಾಜ್ಯಕ್ಕೆ ತೃತೀಯ

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

JDS: ಸಂಪುಟದಿಂದ ಡಿಕೆಶಿ ಕೈಬಿಡಿ; ರಾಜ್ಯಪಾಲರಿಗೆ ಜೆಡಿಎಸ್‌ ದೂರು

JDS: ಸಂಪುಟದಿಂದ ಡಿಕೆಶಿ ಕೈಬಿಡಿ; ರಾಜ್ಯಪಾಲರಿಗೆ ಜೆಡಿಎಸ್‌ ದೂರು

Compensation: ಮಳೆ ಆಧಾರಿತ ಬೆಳೆಗಳಿಗೂ ಪರಿಹಾರಧನ; ಸಚಿವ ಕೃಷ್ಣ ಬೈರೇಗೌಡ

Compensation: ಮಳೆ ಆಧಾರಿತ ಬೆಳೆಗಳಿಗೂ ಪರಿಹಾರಧನ; ಸಚಿವ ಕೃಷ್ಣ ಬೈರೇಗೌಡ

ಪೆನ್‌ಡ್ರೈವ್‌ ಪ್ರಕರಣ: ಕಲಾಪ ತಾತ್ಕಾಲಿಕ ಸ್ಥಳಾಂತರಕ್ಕೆ ರಿಜಿಸ್ಟ್ರಾರ್‌ಗೆ ಪತ್ರ

ಪೆನ್‌ಡ್ರೈವ್‌ ಪ್ರಕರಣ: ಕಲಾಪ ತಾತ್ಕಾಲಿಕ ಸ್ಥಳಾಂತರಕ್ಕೆ ರಿಜಿಸ್ಟ್ರಾರ್‌ಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

ಬಡಾನಿಡಿಯೂರು: ಊಟ ಮಾಡುತ್ತಿರುವಾಗಲೇ ವ್ಯಕ್ತಿ ಸಾವು

Missing: ಕನ್ನರ್ಪಾಡಿ; ಮದುವೆಗೆ ಬಂದ ವ್ಯಕ್ತಿ ನಾಪತ್ತೆ

Missing: ಕನ್ನರ್ಪಾಡಿ; ಮದುವೆಗೆ ಬಂದ ವ್ಯಕ್ತಿ ನಾಪತ್ತೆ

Cricket Betting: ಆ್ಯಪ್‌ನಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌; ಪ್ರಕರಣ ದಾಖಲು

Cricket Betting: ಆ್ಯಪ್‌ನಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌; ಪ್ರಕರಣ ದಾಖಲು

4-udupi

Udupi: ನಾಳೆ ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

1-wqeeewqe

SSLC; ರಾಜ್ಯಕ್ಕೆ 5ನೇ ರ್‍ಯಾಂಕ್‌: ಪ್ರತ್ವಿತಾಗೆ IAS ಅಧಿಕಾರಿಯಾಗುವ ಆಸೆ

1-wewqewqe

SSLC; ಆಳ್ವಾಸ್‌ ಮೂಡುಬಿದಿರೆಗೆ ಶೇ. 100 ಫಲಿತಾಂಶ : 51ಮಂದಿಗೆ 600ಕ್ಕೂ ಅಧಿಕ ಅಂಕ

1—–wewqeq

‘Manipal ಜ್ಞಾನಸುಧಾ’ ಪದವಿಪೂರ್ವ ಕಾಲೇಜು: ಅರ್ಹರಿಗೆ ಉಚಿತ ಪ್ರವೇಶ

1-qwewqwqe

IPL;ಪಂಜಾಬ್ ವಿರುದ್ಧ 60 ರನ್ ಗಳ ಗೆಲುವು ಸಾಧಿಸಿದ ಆರ್ ಸಿಬಿ: ಪ್ಲೇ ಆಫ್ ಆಸೆ ಜೀವಂತ

court

Vijayapura: ಪೋಕ್ಸೋ ಆರೋಪಿಗೆ 5 ವರ್ಷ, ಗಾಂಜಾ ಬೆಳದವನಿಗೆ 3 ವರ್ಷ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.