UV Fusion: ನಾನು ಮತ್ತು ಬದುಕಿನ ಕಿಟಕಿ


Team Udayavani, Nov 26, 2023, 5:33 PM IST

9-uv-fusion

ಬದುಕಿನಲ್ಲಿ ತಿರುವುಗಳು ಸರ್ವೇಸಾಮಾನ್ಯ. ಹಾಗಂತ ಎಲ್ಲವೂ ಒಳ್ಳೆಯ ದಿಕ್ಕಿನಲ್ಲಿ ಅಥವಾ ಒಂದೊಳ್ಳೆ ದಾರಿಯನ್ನು ತೋರುತ್ತವೆ ಅಂದುಕೊಳ್ಳುವುದು ನಮ್ಮ ಮೌಡ್ಯವೇ ಸರಿ. ಹೀಗಿರುವಾಗ ಒಂದು ದಿನ ಬಂದಿರುವ ಸಂದೇಶ ಇಡೀ ಬದುಕಿನ ಯೋಜನೆಯನ್ನು ಬದಲಿಸುತ್ತದೆ. ಹೊಸ ಜಾಗ, ಹಳೇ ಕಟ್ಟಡ, ಹೊಸ ಮುಖಗಳು, ವಿಭಿನ್ನ-ವಿಚಿತ್ರ ಮನಸ್ಥಿತಿಗಳ ಪರಿಚಯ. ಕತ್ತಲೆ ಬದುಕಿಗೆ ಬೆಳಕು ಬಂದಂತೆ ಅನಿಸಿದರೂ ಇಲ್ಲಿ ಹೇಗೆ ಕಾಲ ಕಳೆಯುವುದು ಎನ್ನುವ ಯೋಚನೆ.

ಮೊದಲ ದಿನ ಖುಷಿಯ ಜತೆಗೊಂದಿಷ್ಟು ಅಳುಕು. ಬಂದಾಗಿದೆ ಮುಂಬರುವ ಎಲ್ಲ ಅಡೆತಡೆಗಳನ್ನು ಎದುರಿಸಲೇಬೇಕು ಎನ್ನುವ ಧೃಡ ನಿರ್ಧಾರವು ಒಂದೆಡೆ ಇದೆ. ನಗುಮುಖದ ಮೊದಲ ಪರಿಚಯದ ಜತೆಗೆ ಹೆಜ್ಜೆ ಇಡುತ್ತಾ ಮುಂದೆ ನಡೆದು ಸೇರಬೇಕಾದ ಜಾಗ ಸೇರಿದಾಗ ಕಂಡಿದ್ದು ಆ ಕಿಟಕಿ.

ಬೇರೋಬ್ಬರು ಕುಳಿತಿದ್ದ ಆ ಕಿಟಕಿ ಬದಿ ಜಾಗ ಪ್ರತಿಬಾರಿ ಅತ್ತ ಸೆಳೆಯುತ್ತಿತ್ತು. ಹೋಗಬೇಕು ಎನಿಸಿದಾಗೆಲ್ಲ ಒಂಥರಾ ಅಂಜಿಕೆಯಾದಂತೆ ಹೊಸ ಜಾಗ ಎಂದೂ ಇರಬಹುದು. ಒಬ್ಬೊಬ್ಬರಂತೆ ಎಲ್ಲರ ಪರಿಚಯವಾಗತೊಡಗಿತು. ಅಂತರಗಳ ಸಂಭಾಷಣೆ ಆತ್ಮೀಯತೆಯ ಹೆಚ್ಚಿಸಿತು, ಬದುಕಿನ ಜ್ಯೋತಿ ಬೆಳಗಿದಂತೆ ದಿನಗಳುರುಳಿದವು. ಕಿಟಕಿ ಕಡೆಗೆ ಒಂದೆರಡು ಬಾರಿ ನೆಪವೊಡ್ಡಿ ಹೋಗಿದ್ದು ಖುಷಿ ಕೊಟ್ಟಿತಾದರೂ, ಹಿಂದಿರುಗಿದಾಗೆಲ್ಲ ಏನೋ ಕಳೆದುಕೊಂಡಂತೆ ಅನಿಸತೊಡಗಿತು.

ಕಿಟಕಿಯಲ್ಲಿ ಅಂತದ್ದೇನಿರಬಹುದು ಎನ್ನುವ ಕುತೂಹಲ ಇದೀಗ ನಿಮಗೂ ಇರಬಹುದು ಅಲ್ವಾ? ನಾನು ಕಿಟಕಿ ನೋಡಿದಾಗೆಲ್ಲ ಬದುಕಿನಲ್ಲಿ ಕಾಣುವ ಅನೇಕ ಮಜಲುಗಳ ನೆನಪಾಗುವುದು ಹೇಗೆ ಎನ್ನುತ್ತೀರಾ. ಕಣ್ಣಿಗೆ ಎಲ್ಲವೂ ಸುಂದರವಾಗಿ ಕಂಡರೂ ಅದನ್ನು ತಲುಪಲು ಕಿಟಕಿಯಲ್ಲಿ ಕಾಣುವ ಸರಳುಗಳ ಹಾಗೆ ಸರದಿ ನಿಂತಿರುವ ಅಡೆತಡೆಗಳನ್ನು ದಾಟಬೇಕಾಗುತ್ತದೆ. ಹಾಗಾಗಿ ಈ ಕಿಟಕಿಗಳು ಬದುಕಿನ ಮಜಲುಗಳನ್ನು ತೋರ್ಪಡಿಸುತ್ತ ಎಚ್ಚರಿಸುತ್ತವೆ ಎಂದರೆ ತಪ್ಪಿಲ್ಲ.

ದಿನಗಳುರುಳಿ ತಿಂಗಳಾದರೂ ಕಿಟಕಿ ಗೋಜು ಕಡಿಮೆ ಆಗಲೇ ಇಲ್ಲ. ಖಾಲಿಯಾಗಿ ಕಾಣುವ ಜಾಗ ಪದೇ ಪದೇ ಕಾಡತೊಡಗಿತು,ಆಗಿದ್ಹಾಗಲಿ ಎನ್ನುತ್ತಾ ಮಾತಿನ ಮಧ್ಯೆ ನಾನಲ್ಲಿ ಕುಳಿತುಕೊಳ್ಳಬಹುದೆ ಎಂದೆ ಅಷ್ಟೇ, ಸರಿ ಕುಳಿತುಕೊಳ್ಳಿ ಎಂದಾಗ ಖುಷಿಯ ಪರಿವೇ ಇಲ್ಲ. ಸಮಯ ವ್ಯಯಿಸದೆ ಅಲ್ಲಿ ಸೇರಿದೆ. ತಂಪು ತಂಗಾಳಿ ಕೈಬೀಸಿ ಸ್ವಾಗತಿಸಲು ನಿಂತಂತೆ ಭಾಸವಾಯಿತು. ಬಾನಾಡಿಗಳ ಇಂಪು ಕಲರವ ಹಿತವೆನಿಸಿತು.

ಬಾನೆತ್ತರದ ಕಟ್ಟಡ ನೋಡಿದಾಗೆಲ್ಲ ಸಾಧನೆಯ ಮೆಟ್ಟಿಲುಗಳಂತೆ ಕಂಡರೂ, ಎಲ್ಲವೂ ನಾವು ಅಂದುಕೊಂಡಂತೆ ಆಗದು, ಸಾಲು ಸಾಲು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಆಗಿದ್ಹಾಗಲಿ ನನ್ನದೆನ್ನುವುದು ಬಳಿಯೇ ಇರುವಾಗ ಇನ್ನೊಂದರ ಮೇಲೆ ಮೋಹ ಇರಕೂಡದು ಎನ್ನುವ ಹಾಗೆ ಬದುಕಬೇಕು. ಅಂದುಕೊಂಡಿದ್ದು ಸಿಗಬೇಕು ಎಂದರೆ ನಿಸ್ವಾರ್ಥ ಪ್ರಯತ್ನ ಕೂಡ ಮುಖ್ಯವಾಗುತ್ತದೆ. ಸ್ವಾರ್ಥ ಬದುಕು ಕ್ಷಣಿಕ, ಒಡೆದ ಗಾಜಿನಂತೆ ಹೋದಲ್ಲೆಲ್ಲ ಚುಚ್ಚುತ್ತವೆ. ಹಾಗಾಗಿ ಶ್ರಮದ ಬೆಲೆಗೆ ಪ್ರತಿಫ‌ಲ ಖಂಡಿತ. ಬದುಕು ಪಂಜರದಂತೆ ಕಾಣುವ ಕಿಟಕಿಯಂತೆ ಅಲ್ಲಿಂದ ಹೊರಬರುವ ಪ್ರಯತ್ನ ಮಾತ್ರ ನಮ್ಮದಾಗಿರಬೇಕು.

-ವಿಜಿತ ಅಮೀನ್‌

ಬಂಟ್ವಾಳ

ಟಾಪ್ ನ್ಯೂಸ್

1-wqeqeqwe

List ಅಲ್ಲಿ ಹೆಸರಿಲ್ಲದೆ ಮಮತಾ ಬ್ಯಾನರ್ಜಿ ಸಹೋದರನಿಗೆ ಮತ ಹಾಕಲು ಸಾಧ್ಯವಾಗಲಿಲ್ಲ!

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆBandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Parameshwar

CBI ಗೆ ಕೊಡುವ ಅಗತ್ಯವಿಲ್ಲ; ಅಂಜಲಿ ಪ್ರಕರಣ ಕೂಡ ಸಿಐಡಿಗೆ:ಡಾ.ಜಿ.ಪರಮೇಶ್ವರ್

1——-sdasd

Konaje; ಕಂಪೌಂಡ್ ವಾಲ್ ಕುಸಿದು ಹಾಜಬ್ಬರ ಶಾಲೆಯ ವಿದ್ಯಾರ್ಥಿನಿ ಮೃತ್ಯು

Heavy rain ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ: ಜನಜೀವನ ಅಸ್ತವ್ಯಸ್ತ

Heavy rain ಕಾಫಿನಾಡಲ್ಲಿ ಮುಂದುವರಿದ ಗಾಳಿ- ಮಳೆ ಅಬ್ಬರ: ಜನಜೀವನ ಅಸ್ತವ್ಯಸ್ತ

Amit Shah 2

Rahul Gandhi ಜೂನ್ 4 ರ ನಂತರ ‘ಕಾಂಗ್ರೆಸ್ ಧುಂಡೋ ಯಾತ್ರೆ’ ನಡೆಸಬೇಕಾಗುತ್ತದೆ: ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Kind: ಕರುಣೆ ಎಂಬ ಒಡವೆ ತೆಗೆಯದಿರು 

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

7-uv-fusion

Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ

6-uv-fusion

Uv Fusion: ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-wqeqeqwe

List ಅಲ್ಲಿ ಹೆಸರಿಲ್ಲದೆ ಮಮತಾ ಬ್ಯಾನರ್ಜಿ ಸಹೋದರನಿಗೆ ಮತ ಹಾಕಲು ಸಾಧ್ಯವಾಗಲಿಲ್ಲ!

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

1-wqeqwewq

Goa:ಬೋಟ್ ನಲ್ಲಿ ಅಪಾಯಕ್ಕೆ ಸಿಲುಕಿದ್ದ 26 ಪ್ರವಾಸಿಗರ ರಕ್ಷಣೆ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆBandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Parameshwar

CBI ಗೆ ಕೊಡುವ ಅಗತ್ಯವಿಲ್ಲ; ಅಂಜಲಿ ಪ್ರಕರಣ ಕೂಡ ಸಿಐಡಿಗೆ:ಡಾ.ಜಿ.ಪರಮೇಶ್ವರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.