Udupi Paryaya 2024:ದಸರಾದಂತೆ ಕಂಗೊಳಿಸಲಿದೆ ಪುತ್ತಿಗೆ ಪರ್ಯಾಯ;ಸೆಲ್ಫಿ ಪ್ರಿಯರಿಗೆ ಹಬ್ಬ!


Team Udayavani, Jan 12, 2024, 4:53 PM IST

Udupi Paryaya 2024:ದಸರಾದಂತೆ ಕಂಗೊಳಿಸಲಿದೆ ಪುತ್ತಿಗೆ ಪರ್ಯಾಯ;ಸೆಲ್ಫಿ ಪ್ರಿಯರಿಗೆ ಹಬ್ಬ!

ಉಡುಪಿ: ಪುತ್ತಿಗೆ ಪರ್ಯಾಯಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ನಗರದ ಅಂದ-ಚೆಂದವೂ ಹೆಚ್ಚಳವಾಗತೊಡಗಿದೆ. ಈಗಾಗಲೇ ರಸ್ತೆ ಸಹಿತ ಒಳಚರಂಡಿ ಕಾಮಗಾರಿಗಳು ಭರದಿಂದ ನಡೆಯುತ್ತಿರುವಂತೆಯೇ ಕಾಪುವಿನಿಂದ ಶ್ರೀಕೃಷ್ಣ ಮಠ ಹಾಗೂ ಉಡುಪಿ ನಗರದ ಸುತ್ತಮುತ್ತಲೂ ವಿದ್ಯುತ್‌ ದೀಪಾಲಂಕಾರ ಹಾಗೂ ಕೇಸರಿ ಬಾವುಟಗಳು ರಾರಾಜಿಸತೊಡಗಿದೆ.

ಪರ್ಯಾಯ ಪೀಠಾರೂಢರಾಗುವ ಸ್ವಾಮೀಜಿ ಯವರು ಮುಂಜಾವ ತೀರ್ಥಸ್ನಾನ ಮಾಡಿ ಬರುವ ಕಾಪುವಿನ ದಂಡತೀರ್ಥದಿಂದ ಕಿನ್ನಿಮೂಲ್ಕಿವರೆಗೆ, ಕರಾವಳಿ ಬೈಪಾಸ್‌ನಿಂದ ಮಣಿಪಾಲದವರೆಗೆ, ಕಲ್ಸಂಕದಿಂದ ಅಂಬಾಗಿಲು ಮಾರ್ಗ ಸಹಿತ ನಗರದ ಒಳರಸ್ತೆಗಳಿಗೂ ಲೈಟಿಂಗ್‌, ಧ್ವಜಗಳ ಅಲಂಕಾರ ಮಾಡಲಾಗಿದೆ.

ಬಣ್ಣಗಳಿಂದ ಕಂಗೊಳಿಸಲಿದೆ ಉಡುಪಿ ಮಂಗಳೂರು ದಸರಾದಲ್ಲಿ ನಗರದ ಲೈಟಿಂಗ್‌ಗೇ ಪ್ರಮುಖ ಆಕರ್ಷಣೆಯಾಗಿದೆ. ಆ ಸೌಭಾಗ್ಯ ಈ ಬಾರಿ ಉಡುಪಿ ಜನತೆಗೂ ಒಲಿದುಬರಲಿದೆ. ಕೃಷ್ಣಾಪುರದ ಗಜಾನನ ಎಲೆಕ್ಟ್ರಿಕಲ್ಸ್‌ ಸಂಸ್ಥೆಯವರಿಗೆ ಇದರ ನಿರ್ವಹಣೆ ನೀಡಲಾಗಿದ್ದು ಈಗಾಗಲೇ ಬಹುತೇಕ ಕಡೆ ಲೈಟಿಂಗ್‌ಗಳನ್ನು ಅಳವಡಿಕೆ ಮಾಡಲಾಗಿದೆ. 9 ವ್ಯಾಟ್‌ ವಾರ್ಮ್ ಲೈಟ್‌ಗಳು, ಮೆಗಾ ಫೋಕಸ್‌ ಲೈಟ್‌ಗಳು, 20ರಿಂದ 25 ಬೃಹತ್‌ ಗಾತ್ರದ ಜನರೇಟ್‌ ಗಳು ಸಹಿತ ವಿವಿಧ ಬಗೆಯ ಆಲಂಕಾರಿಕ ಲೈಟ್‌ ಗಳನ್ನು ಬಳಕೆ ಮಾಡಲಾಗಿದೆ. ಈ ಬಾರಿ ಉಡುಪಿ ನಗರ ಬಣ್ಣ-ಬಣ್ಣಗಳಿಂದ ಕಂಗೊಳಿಸಲಿದೆ ಎನ್ನುತ್ತಾರೆ ಗಜಾನನ ಎಲೆಕ್ಟ್ರಿಕಲ್ಸ್‌ನ ಪ್ರಕಾಶ್‌ ರಾವ್‌.

ರಾರಾಜಿಸುತ್ತಿವೆ ಕೇಸರಿ ಬಾವುಟ
ವಿದ್ಯುತ್‌ ಕಂಬಗಳು, ನಗರದ ವೃತ್ತಗಳಿಗೆ ಕೇಸರಿ ಬಾವುಟಗಳ ಮೂಲಕ ಶೃಂಗಾರ ಮಾಡಲಾಗಿದೆ. ಜ. 17 ಹಾಗೂ ಜ.18ಕ್ಕೆ ಪರ್ಯಾಯೋತ್ಸವ ಸಂಭ್ರಮ ನಡೆಯಲಿದ್ದರೂ ನಗರದಲ್ಲಿ ಈಗಲೇ ಹಬ್ಬದ ವಾತಾವರಣ ಉಂಟಾಗಿದೆ. ವಿವಿಧೆಡೆಗಳಿಂದ ಆಗಮಿಸುತ್ತಿರುವ ಭಕ್ತರು ಕೂಡ ನಗರಾಲಂಕಾರಕ್ಕೆ ಮಾರು ಹೋಗಿದ್ದಾರೆ. ಬಸ್‌, ರೈಲು ಹಾಗೂ ಟೂರಿಸ್ಟ್‌ ವಾಹನಗಳ ಮೂಲಕ ದಿನನಿತ್ಯ ಶ್ರೀಕೃಷ್ಣ ಮಠಕ್ಕೆ ಆಗಮಿಸುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ.

ರಥಬೀದಿಯೊಳಗೆ 10 ಲಕ್ಷ + ಬಲ್ಬ್‌ ಗಳು!
ನಗರದ ಹೊರಭಾಗದಂತೆ ರಥಬೀದಿಯೊಳಗೂ ವಿದ್ಯುದ್ದೀಪಗಳು ಕಣ್ಸೆಳೆಯುತ್ತಿವೆ. ಈಗಾಗಲೇ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಕ್ತರನ್ನು ಕೈಬೀಸಿ ಕರೆಯುತ್ತಿರುವ ಶ್ರೀಕೃಷ್ಣ ಮಠ ರಾತ್ರಿ ವೇಳೆ ವಿಭಿನ್ನ ಬೆಳಕಿನ ಚಿತ್ತಾರ ಮತ್ತಷ್ಟು ಪುಳಕ ನೀಡುತ್ತವೆ.

ರಥಬೀದಿ ಒಳಭಾಗ, ಶ್ರೀಕೃಷ್ಣ ಮಠ, ರಾಜಾಂಗಣ, ಪರ್ಯಾಯ ಶ್ರೀ ಪುತ್ತಿಗೆ ಮಠ, ಪೆಂಡಲ್‌ಗ‌ಳು, ಅನಂತೇಶ್ವರ, ಚಂದ್ರಮೌಳೀಶ್ವರ ದೇವಸ್ಥಾನಗಳಿಗೆ ಈಗಾಗಲೇ ಲೈಟಿಂಗ್‌ ಅಲಂಕಾರ ಮಾಡಲಾಗಿದೆ. ಪರ್ಯಾಯೋತ್ಸವದ ದಿನ ಎಲ್ಲ ನಗರಾಲಂಕಾರದ ಲೈಟ್‌ಗಳನ್ನು ಹಾಕಲಾಗಿದ್ದು, ಇನ್ನು ಜ.14ರ ಬಳಿಕ ರಾತ್ರಿ ವೇಳೆ ಲೈಟ್‌ಗಳನ್ನು ಆನ್‌ ಮಾಡಲಾಗುತ್ತದೆ.

ರಥಬೀದಿಯ ಒಳಭಾಗದಲ್ಲಿ 50ರಿಂದ 100ರಷ್ಟು ಆಲಂಕಾರಿಕ ಗೂಡುದೀಪಗಳು, ಬೃಹತ್‌ ಗಾತ್ರದ ಸುಮಾರು 3ರಿಂದ 4 ಸಾವಿರ ಬಲ್ಬ್ಗಳು, ವಿವಿಧ ವಿನ್ಯಾಸದ ಮಿನಿಯೇಚರ್‌ಗಳು, ರಾಕೆಟ್‌ ರೀತಿಯ ಮಿನಿಯೇಚರ್‌ಗಳು ರಥಬೀದಿಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ರಥಬೀದಿಯ ಲೈಟಿಂಗ್‌ ವ್ಯವಸ್ಥೆಯನ್ನು ಉಡುಪಿಯ ಮಂಜುನಾಥ ಎಲೆಕ್ಟ್ರಿಕಲ್ಸ್‌ ಅವರಿಗೆ ನೀಡಲಾಗಿದ್ದು, ಈಗಾಗಲೇ ಬಹುತೇಕ ಎಲ್ಲ ಕಡೆ ಲೈಟಿಂಗ್‌ ವ್ಯವಸ್ಥೆ ಅಳವಡಿಸಲಾಗಿದ್ದು, ಸಣ್ಣಪುಟ್ಟ ಕೆಲಸ ಕಾರ್ಯಗಳಷ್ಟೇ ಬಾಕಿ ಉಳಿದಿದೆ.

ಸೆಲ್ಫಿ ಪ್ರಿಯರಿಗೆ ಹಬ್ಬ!
ಬಣ್ಣಬಣ್ಣದ ಲೈಟಿಂಗ್‌ಗಳನ್ನು ಕಂಡಾಗ ಫೋಟೋ, ಸೆಲ್ಫಿ ತೆಗೆಸಿಕೊಳ್ಳದವರಿಲ್ಲ. ಅಂತಹವರಿಗೆ ಈ ಬಾರಿಯ ಪರ್ಯಾಯದಲ್ಲಿ
ಮತ್ತಷ್ಟು ಅವಕಾಶ ಸಿಗಲಿದೆ. ರಥಬೀದಿಯೊಳಗೆ ಹೊಕ್ಕಾಗ ಹಾಗೂ ಹೊರಭಾಗದಲ್ಲಿರುವ ಲೈಟಿಂಗ್‌ಗಳಿಗೆ ಮಾರುಹೋಗದವರಿಲ್ಲ. ಜತೆಗೆ ದಂಡತೀರ್ಥದಿಂದ ಕಿನ್ನಿಮೂಲ್ಕಿಯವರೆಗೆ ಲೈಟಿಂಗ್‌ ಅಳವಡಿಕೆ ಮಾಡಿರುವುದು ಈ ಬಾರಿಯ ಪರ್ಯಾಯದ ವಿಶೇಷತೆ. ಒಟ್ಟಿನಲ್ಲಿ ಪರ್ಯಾಯ ಮಹೋತ್ಸವಕ್ಕೆ ಉಡುಪಿ ನಗರ ಸಂಪೂರ್ಣ ಸಜ್ಜುಗೊಂಡಿದ್ದು, ವಿವಿಧ
ವಿಶೇಷತೆಗಳ ಮೂಲಕ ಗಮನಸೆಳೆಯುತ್ತಿದೆ.

ಟಾಪ್ ನ್ಯೂಸ್

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

naksal (2)

Chhattisgarh; ನಿಲ್ಲದ ನಕ್ಸಲ್‌ ಬೇಟೆ: ಓರ್ವನ ಹತ್ಯೆ

prahlad-joshi

Congress ಪಕ್ಷದಿಂದ ಅಂಬೇಡ್ಕರ್‌ಗೆ ಅಗೌರವ: ಸಚಿವ ಜೋಶಿ ಆರೋಪ

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ರಘುನಂದನ ಕಾಮತ್‌ ಪಂಚಭೂತಗಳಲ್ಲಿ ಲೀನ

Naturals Ice Cream; ರಘುನಂದನ ಕಾಮತ್‌ ಪಂಚಭೂತಗಳಲ್ಲಿ ಲೀನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Udupi District ನಾನ್‌ ಸಿಆರ್‌ಝಡ್‌ ಮರಳು ಆಸರೆ; 2.45 ಲಕ್ಷ ಮೆ. ಟನ್‌ ಮರಳು ತೆರವು

Udupi District ನಾನ್‌ ಸಿಆರ್‌ಝಡ್‌ ಮರಳು ಆಸರೆ; 2.45 ಲಕ್ಷ ಮೆ. ಟನ್‌ ಮರಳು ತೆರವು

Kapu ಟಿಪ್ಪರ್‌ಗೆ ಪಿಕಪ್‌ ಢಿಕ್ಕಿ: ಚಾಲಕ ಗಂಭೀರ

Kapu ಟಿಪ್ಪರ್‌ಗೆ ಪಿಕಪ್‌ ಢಿಕ್ಕಿ: ಚಾಲಕ ಗಂಭೀರ

Road mishap ಕುಂಭಾಶಿ: ಕಾರಿಗೆ ಬಸ್‌ ಢಿಕ್ಕಿ; ಜಖಂ

Road mishap ಕುಂಭಾಶಿ: ಕಾರಿಗೆ ಬಸ್‌ ಢಿಕ್ಕಿ; ಜಖಂ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

ec-aa

Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

naksal (2)

Chhattisgarh; ನಿಲ್ಲದ ನಕ್ಸಲ್‌ ಬೇಟೆ: ಓರ್ವನ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.