Ravi Basrur: ಕಲಿತ ಶಾಲೆಗೆ ಕಾಯಕಲ್ಪ ನೀಡಿದ ರವಿ ಬಸ್ರೂರು

ಮುಂದಿನ ಶೈಕ್ಷಣಿಕ ವರ್ಷದಿಂದ ಈ ಬಿ.ಎಂ. ಶಾಲೆ ಹೊಸ ರೂಪ ಪಡೆದಂತಾಗಿದೆ

Team Udayavani, Apr 17, 2024, 12:31 PM IST

Ravi Basrur: ಕಲಿತ ಶಾಲೆಗೆ ಕಾಯಕಲ್ಪ ನೀಡಿದ ರವಿ ಬಸ್ರೂರು

ಬಸ್ರೂರು: ತಾನು ಕಲಿತ ಶಾಲೆ, ಬದುಕು ಕಟ್ಟಿಕೊಡಲು ನೆರವಾದ ಶಾಲೆಯ ಅಭಿವೃದ್ಧಿಗೆ, ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸುವ ಮೂಲಕ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಇತರರಿಗೂ ಮಾದರಿಯಾಗಿದ್ದಾರೆ.

ಬಸ್ರೂರಿನ ಕೇಂದ್ರ ಸ್ಥಾನದಲ್ಲಿ, ಶತಮಾನದ ಇತಿಹಾಸ ಹೊಂದಿರುವ ಬಿ.ಎಮ್‌. ಶಾಲೆಯನ್ನು ರವಿ ಬಸ್ರೂರು ಅವರು ಸುಮಾರು 25 ಲಕ್ಷ ರೂ. ವಿನಿಯೋಗಿಸಿದ್ದು, ಇದರಿಂದ ಶಾಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. 132 ವರ್ಷಗಳ ಹಿಂದೆ 1892 ರ ನ.1 ರಂದು ಎಕ್ಸುಲರಿ ಬಾಸೆಲ್‌ ಮಿಷನ್‌ ಸ್ಕೂಲ್‌ ಅಸೋಸಿಯೇಶನ್‌ನಿಂದ ಬಸ್ರೂರಿನಲ್ಲಿ ಬಿ.ಎಂ. ಶಾಲೆ ಸ್ಥಾಪನೆ ಮಾಡಿದ್ದರು. ಸಹಸ್ರಾರು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಾಕ್ಷಿಯಾದ ಈ ಶಾಲೆಯಲ್ಲಿ ಒಂದರಿಂದ ಏಳನೇ
ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ.

ಸುದೀರ್ಘ‌ ಇತಿಹಾಸವಿದ್ದರೂ ಕಟ್ಟಡ ಶಿಥಿಲಾವಸ್ಥೆಗೆ ತಲುಪಿತ್ತು. ಬಾಗಿಲುಗಳು ಗಟ್ಟಿಯಾಗಿರಲಿಲ್ಲ. ನೆಲ ಕುಳಿ ಬಿದ್ದಿದೆ. ಹೀಗೆ ಕೆಲವು ವರ್ಷಗಳಿಂದ ಹತ್ತಾರು ಸಮಸ್ಯೆಗಳು ಉದ್ಭವವಾಗಿದ್ದವು. ಈ ಹಿನ್ನೆಲೆಯಲ್ಲಿ ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಮುಂಚೂಣಿಯಲ್ಲಿ ನಿಂತವರು, ಇದೇ ಶಾಲೆಯಲ್ಲಿ ಕಲಿತ ರವಿ ಬಸ್ರೂರು ಅವರು.

ಶಾಲೆಗೆ ಸದೃಢ ಗೇಟ್‌, ಕಾಂಪೌಂಡ್‌, ಉತ್ತಮ ಅಡುಗೆ ಮನೆ, ಹೊಸ ಬಾಗಿಲುಗಳು, ಹೊಸ ಕಿಟಕಿಗಳು, ಗೋಡೆಗೆ ರಾಷ್ಟ್ರ ನಾಯಕರ ಭಾವಚಿತ್ರ, ಬಾಲಕರ ಶೌಚಾಲಯ, ಬಾಲಕಿಯರ ಶೌಚಾಲಯ, ಹೊಸ ಭೋಜನಾಲಯ, ಬಾವಿಯಿಂದ ನೇರವಾಗಿ ನೀರು ಶಾಲೆಗೆ ಬರುವ ವ್ಯವಸ್ಥೆ ಹೀಗೆ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕೇವಲ 3 ತಿಂಗಳಲ್ಲಿಯೇ ಈ ಕಾರ್ಯ ಮುಗಿದಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಈ ಬಿ.ಎಂ. ಶಾಲೆ ಹೊಸ ರೂಪ ಪಡೆದಂತಾಗಿದೆ.

ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಒಂದು ಮಿನಿ ಥಿಯೇಟರ್‌ ನಿರ್ಮಿಸುವ ಯೋಚನೆ ರವಿ ಬಸ್ರೂರು ಅವರಿಗಿದೆ. ಶಾಲೆಯೆದುರು ಒಂದು ಉದ್ಯಾನವನವನ್ನು ನಿರ್ಮಿಸುವ ಯೋಚನೆಯೂ ಇದೆ. ಜತೆಗೆ ಇಲ್ಲಿ ಖಾಯಂ ಶಿಕ್ಷಕರಿರುವುದು ಇಬ್ಬರೇ. ಇವರ ಜತೆಗೆ ಉಳಿದಂತೆ ನಾಲ್ವರು ಗೌರವ ಶಿಕ್ಷಕರು ದುಡಿಯುತ್ತಿದ್ದರೂ ಅವರಿಗೆ ನೀಡಲಾಗುತ್ತಿದ್ದ ಸಂಬಳ ಅತಿ ಕಡಿಮೆ ಎನ್ನುವ ಸತ್ಯ ಅರಿತ ರವಿ ಬಸ್ರೂರು ಇದಕ್ಕಾಗಿ ಎಲ್ಲ ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳಿಂದ ತಿಂಗಳಿಗೆ 100 ರೂ. ಹಣ ಸಂಗ್ರಹಿಸುವ ಹೊಸ ಪರಿಕಲ್ಪನೆ ಹಾಕಿಕೊಂಡಿದ್ದಾರೆ. ಇದಕ್ಕಾಗಿ ಒಂದು ಆ್ಯಪ್‌ ಮಾಡಿಕೊಂಡು ಶಾಲೆಯ ಸ್ಥಿತಿಗತಿ ತಿಳಿಯುವ ಯೋಜನೆಯನ್ನೂ ರೂಪಿಸಿದ್ದು, ಇದು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಯಾಗಲಿದೆ.

ತೆಲುಗು ಚಿತ್ರರಂಗದ ನೆರವು
ಶಾಲೆಗೆ ದೂರದ ತೆಲುಗು ಚಿತ್ರರಂಗದಿಂದಲೂ ಸಹಾಯ ಹಸ್ತ ಬಂದಿದೆ. ಅಲ್ಲಿನ ಹಿನ್ನೆಲೆ ಕಲಾವಿದರು ತಿಂಗಳಿಗೆ 100 ರೂ.ಯನ್ನು ಈಗಾಗಲೇ ಕೊಡುತ್ತಿದ್ದು, ಕೆಲವರು 1,000 ರೂ. ಯಂತೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮುಂದಿನ ವರ್ಷದಿಂದ ಮತ್ತಷ್ಟು ಯೋಜನೆಗಳು ಜಾರಿಯಾಗುತ್ತಿದ್ದು, ಶಾಲೆಗೆ ಈಗ ನವ ಚೈತನ್ಯ ಸಿಕ್ಕಂತಾಗಿದೆ.

ಮರುಜೀವ ನೀಡುವ ಕನಸು
ನಾನು ಕಲಿತ ಶಾಲೆಗೆ ಮರು ಜೀವ ನೀಡಬೇಕು ಎನ್ನುವ ಮನಸ್ಸಾಯಿತು. ಪ್ರಸ್ತುತ 86 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಶಾಲೆಯ ಬೆಂಚುಗಳು ಮುರಿದು ಹೋಗಿರುವುದನ್ನು ಕಂಡು ಮೇಜು ಮತ್ತು ಕುರ್ಚಿ ವ್ಯವಸ್ಥೆ ಮಾಡಿದ್ದೇನೆ. ಗೌರವ ಶಿಕ್ಷಕರ ಸಂಬಳ ಹೆಚ್ಚಿಸುವ ಗುರಿಯಿಂದ ಹಳೆ ವಿದ್ಯಾರ್ಥಿಗಳು, ದಾನಿಗಳಿಂದ ತಿಂಗಳಿಗೆ 100 ರೂ.ಯನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಮುಂದೆಯೂ ಕೆಲವು ಯೋಜನೆಯಿದ್ದು, ಮಾಡುವ ಮನಸ್ಸಿದೆ.
*ರವಿ ಬಸ್ರೂರು,
ಚಲನಚಿತ್ರ ಸಂಗೀತ ನಿರ್ದೇಶಕ

ಶಾಲೆಗೆ ಪುನರ್ಜನ್ಮ
ರವಿ ಬಸ್ರೂರು ನಾನು ಕಲಿಸಿದ ಹಳೆ ವಿದ್ಯಾರ್ಥಿ. ಅವರ ಯೋಜನೆಯಿಂದ ಶಾಲೆಗೆ ಮರುಜೀವ ಬಂದಿದೆ. 132 ವರ್ಷಗಳ ಇತಿಹಾಸ ಹೊಂದಿರುವ ಶಾಲೆಗೆ ಸರಕಾರದಿಂದ ಯಾವ ಸೌಲಭ್ಯವೂ ದೊರೆಯುತ್ತಿಲ್ಲ. ಹಳೆ ವಿದ್ಯಾರ್ಥಿಗಳ ಸಹಕಾರ ಅದರಲ್ಲೂ ರವಿ ಬಸ್ರೂರು ಅವರಂತಹ ಹಳೆ ವಿದ್ಯಾರ್ಥಿಯಿಂದ ಶಾಲೆ ಪುನರ್ಜನ್ಮ ಪಡೆದಿದೆ ಎಂದು ಹೇಳಲು
ಸಂತೋಷವಾಗುತ್ತದೆ.
*ಸುವರ್ಣಲತಾ ಎಸ್‌.
ಕೋರ್ನಾಯ, ಶಾಲಾ ಸಂಚಾಲಕಿ

ಟಾಪ್ ನ್ಯೂಸ್

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

1-modi

Varanasi; 25000 ಮಹಿಳೆಯರ ಜತೆ ಸ್ವಕ್ಷೇತ್ರದಲ್ಲಿ ಪಿಎಂ ಸಂವಾದ

ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

MOdi (3)

Odisha ರಾಜ್ಯ ಸರಕಾರವು ಭ್ರಷ್ಟರ ಹಿಡಿತಕ್ಕೆ ಸಿಲುಕಿದೆ: ಪಿಎಂ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌; ಅಧಿಕಾರಿಗಳ ಸಭೆ ಪರಿಹಾರ ಕಾಣದೇ ಮುಂದಕ್ಕೆ

ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌; ಅಧಿಕಾರಿಗಳ ಸಭೆ ಪರಿಹಾರ ಕಾಣದೇ ಮುಂದಕ್ಕೆ

Siddapura ಪುಸಲಾಯಿಸಿ ವಿದ್ಯಾರ್ಥಿನಿ ಅತ್ಯಾಚಾರ: ಪೋಕ್ಸೋ ಪ್ರಕರಣ ದಾಖಲು

Siddapura ಪುಸಲಾಯಿಸಿ ವಿದ್ಯಾರ್ಥಿನಿ ಅತ್ಯಾಚಾರ: ಪೋಕ್ಸೋ ಪ್ರಕರಣ ದಾಖಲು

Byndoor ಟಿ.ಸಿ. ವಿಷಯ: ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

Byndoor ಟಿ.ಸಿ. ವಿಷಯ: ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

Fraud  Case ಟೂರ್‌ ಪ್ಯಾಕೇಜ್‌ ಹೆಸರಿನಲ್ಲಿ ವಂಚನೆ; ದೂರು

Fraud Case ಟೂರ್‌ ಪ್ಯಾಕೇಜ್‌ ಹೆಸರಿನಲ್ಲಿ ವಂಚನೆ; ದೂರು

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.