ಕರ್ಣಾಟಕ ಬ್ಯಾಂಕ್ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅನುಷ್ಠಾನ
Team Udayavani, Feb 18, 2017, 3:45 AM IST
ಮಂಗಳೂರು: ಕರ್ಣಾಟಕ ಬ್ಯಾಂಕ್ ವತಿಯಿಂದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಎಂಬ ಯೋಜನೆಯನ್ನು ಫೆ. 16ರಂದು ಅನುಷ್ಠಾನಿಸ ಲಾಯಿತು. ವಯೋವೃದ್ಧರಿಗೆ ಪಿಂಚ ಣಿಯ ಮೂಲಕ ನಿರಂತರ ಆದಾಯದ ಸಾಮಾಜಿಕ ಭದ್ರತೆಯನ್ನು ಒದಗಿಸಲು ಈ ಯೋಜನೆಯನ್ನು ಭಾರತ ಸರಕಾರ ರೂಪಿಸಿದೆ.
ಉದ್ಯೋಗದಲ್ಲಿರುವಾಗಲೇ ಈ ಯೋಜನೆಗೆ ಮೊತ್ತ ತುಂಬುತ್ತಾ; 60 ವರ್ಷ ವಯಸ್ಸಾದಾಗ ಪಿಂಚಣಿ
ಪಡೆಯಬಹುದಾಗಿದೆ. ಇತರ ಪಿಂಚಣಿ ಯೋಜನೆಗಳಿಗೆ ಪಾವತಿಸುತ್ತಿದ್ದರೂ, ಹೂಡಿಕೆದಾರರು ಇಲ್ಲಿ 50 ಸಾವಿರ ರೂ.
ವರೆಗೆ ತೆರಿಗೆ ವಿನಾಯಿತಿ ಪಡೆಯ ಬಹುದು. ಅಸಂಘಟಿತ ವಲಯದ ವೇತನದಾರರಿಗೆ ಕೂಡಾ ಇದು ಅನುಕೂಲಕರವಾಗಿದೆ.
ಈ ಯೋಜನೆಯ ಮೂಲಕ ಜನ ಸಾಮಾನ್ಯರಿಗೆ ವಿಶೇಷ ಸೇವೆ ಸಲ್ಲಿಸುವ ಬಗ್ಗೆ ಸಂತಸವಾಗಿದೆ ಎಂದು ಬ್ಯಾಂಕಿನ
ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ ಭಟ್ ಅವರು ಈ ಸಂದರ್ಭ ದಲ್ಲಿ ಹೇಳಿದರು. ಈಗ ಆಯ್ದ ಶಾಖೆಗಳಲ್ಲಿದು ಲಭ್ಯವಾಗಿದ್ದು, ಹಂತಗಳಲ್ಲಿ ಎಲ್ಲಾ ಶಾಖೆಗಳಲ್ಲಿ ಲಭ್ಯವಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap ಮಂಗಳೂರು: ಕಾರು ಢಿಕ್ಕಿ; ಬೈಕ್ ಸವಾರ ಸಾವು
“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’
Mangaluru University; ಪದವಿ 3 ವರ್ಷಕ್ಕೆ; ಪಠ್ಯಕ್ರಮ ಬದಲಾವಣೆಗೆ ವಿ.ವಿ. ನಿರ್ಧಾರ
Kerala “ವೆಸ್ಟ್ನೈಲ್’ ಜ್ವರದ ಆತಂಕ; ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ
ನೈಋತ್ಯ ಕ್ಷೇತ್ರ; ಬಿಜೆಪಿ- ಜೆಡಿಎಸ್ ಒಮ್ಮತದ ಅಭ್ಯರ್ಥಿಗೆ ಗೆಲುವು: ಡಾ| ಧನಂಜಯ ಸರ್ಜಿ