ಅಪೂರ್ಣವಾಗಿದ್ರೂ ವಸತಿ ಗೃಹ ಹಸ್ತಾಂತರ?


Team Udayavani, Feb 25, 2017, 12:53 PM IST

mys6.jpg

ನಂಜನಗೂಡು: ಇಲಾಖೆಯ ದಾಖಲೆಯಲ್ಲಿ ಪೂರ್ಣಗೊಂಡು ಐದು ವರ್ಷವಾದರೂ ಇಂದಿಗೂ ಅಪೂರ್ಣವಾಗಿಯೇ ಉಳಿದ ಕಾಮಗಾರಿ ಎಂಬ ಹೆಗ್ಗಳಿಕೆ ತಾಲೂಕಿನ ಏಕೈಕ ಶಿಕ್ಷಕರ ವಸತಿ ಗೃಹಕ್ಕೆ ಸಲ್ಲುತ್ತದೆ. 2011ರಲ್ಲಿ ತಾಲೂಕಿನ ಹುರಾ ಗ್ರಾಮದಲ್ಲಿ ಶಿಕ್ಷಕರ ವಸತಿ ಗೃಹದ ಸಮುಚ್ಚಯದ ಕಾಮಗಾರಿ ಪ್ರಾರಂಭವಾಗಿ 2012ರಲ್ಲಿ ಪೂರ್ಣಗೊಂಡಿದೆ ಎಂದು ಇಲಾಖೆಯ ದಾಖಲಾತಿಗಳಲ್ಲಿ ಹೇಳಲಾಗಿದೆ.

ಆದರೆ ಇಲ್ಲಿ ಅಂದಿನಿಂದಲೂ ಯಾವ ಶಿಕ್ಷಕನೂ ವಾಸವಾಗಿಲ್ಲ. 44.80 ಲಕ್ಷ ರೂ.ಗಳಲ್ಲಿ ನಿರ್ಮಾಣಗೊಂಡ ವಸತಿ ಗೃಹಗಳು ಇಂದಿಗೂ ಖಾಲಿಯಾಗಿಯೇ ಉಳಿದಿವೆ. ಯಾರಿಗೂ ವಸತಿ ಗೃಹಗಳನ್ನು ಮಂಜೂರು ಮಾಡಿಯೇ ಇಲ್ಲ. ಶಿಕ್ಷಣ ಇಲಾಖೆಯ ದಾಖಲೆಗಳ ಪ್ರಕಾರ 8 ಗೃಹಗಳ ವಸತಿ ಸಮುಚ್ಚಯದ ಕಾಮಗಾರಿ 2012ರಲ್ಲೇ ಪೂರ್ಣಗೊಂಡಿದೆ ಶಿಕ್ಷಣ ಇಲಾಖೆಗೆ ಹಸ್ತಾಂತರವೂ ಆಗಿ ಹೋಗಿದೆ. ಇವಲ್ಲವೂ ದಾಖಲೆ ಆದರೆ ಕಾಮಗಾರಿ ಮಾತ್ರ ಇಂದಿಗೂ ಅಪೂರ್ಣ.

ಕಟ್ಟಡದ ಚಾವಣಿ ಮುಚ್ಚಿಲ್ಲ. ಕಿಟಕಿಗಳಿಗೆ ಬಾಗಿಲು ಜೋಡಿಸಿಯೇ ಇಲ್ಲ. ಅಸ್ತವ್ಯಸ್ತವಾದ ಅಡುಗೆ ಮನೆ ಕಾಮಗಾರಿ, ಇಷ್ಟೇ ಅಲ್ಲ. ಮನೆಗಳ ನೆಲ ಹಾಸಿನ ಕಾಮಗಾರಿಯೇ ಮುಗಿದಿಲ್ಲ. ಐದು ವರ್ಷಗಳ ಹಿಂದೆ 2012ರಲ್ಲಿ ನೆಲ ಹಾಸು ಹಾಕಲು ಸಿದ್ಧಪಡಿಸಿದ ಕಾಮಗಾರಿ ಪೂರ್ಣವಾಗದೇ ಟೈಲ್ಸ್‌ ಕಾಣದೇ ಇಂದಿಗೂ ಹಾಗೇಯೇ ಉಳಿದಿದೆ. ಅಡುಗೆ ಮನೆ ಈಗಾಗಲೆ ಸೋರಲಾರಂಭಿಸಿದೆ. ಈ ಅಪೂರ್ಣ ಕಾಮಗಾರಿಯ ಬಿಲ್‌ ಮಾತ್ರ ಪೂರ್ಣವಾಗಿ ಸಂದಾಯವಾಗಿದೆ.

ಇದನ್ನು ನಿರ್ಮಿಸಿದವರು ಬೆಂಗಳೂರಿನ ಸರ್ಕಾರದ ಆಧೀನದ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ. 2011ರಲ್ಲಿ 44.80 ಲಕ್ಷ ರೂ.ಗೆ ಕಾಮಗಾರಿ ಪಡೆದ ನಿಗಮವು ಕೆಲಸ ಪೂರ್ಣವಾಗಿದೆ ಎಂದು ದಾಖಲಿಸಿ 2012ರಲ್ಲೆ ಕಟ್ಟಡದ ಹಸ್ತಾತರ ಮಾಡಿದ್ದಕ್ಕೂ ದಾಖಲೆ ಇಟ್ಟುಕೊಂಡಿದ್ದಾರೆ. ಹಾಗಾಗಿ ಈ ಕಾಮಗಾರಿಯ ಪೂರ್ಣ ಮೊತ್ತ ಸಂದಾಯವಾಗಿದೆ. ಅರೆ ಬರೆ ಕಾಮಗಾರಿಯನ್ನು ಪೂರ್ಣವಾಗಿದೆ ಎಂದು ವಹಿಸಿಕೊಂಡ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ ಇಷ್ಟು ದಿನಗಳಾದರೂ ಈ ಕುರಿತು ಚಕಾರವೆತ್ತಿಲ್ಲ. ಇದಕ್ಕೆ ಕಾರಣವೇನೆಂದು ಮಾತ್ರ ತಿಳಿಯುತ್ತಿಲ್ಲ.

ಕಾಮಗಾರಿಯನ್ನು ಈಗ ಯಾರು ಮುಗಿಸಬೇಕು? ಅರೆ ಬರೆ ಕಾಮಗಾರಿ ಮಾಡಿದ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮವೂ? ಅಥವಾ ಅಪೂರ್ಣ ಕಾಮಗಾರಿ ಪೂರ್ಣವಾಗಿದೆ ಎಂದು ರುಜು ಮಾಡಿದ ಇಲಾಖೆಯ ಅಧಿಕಾರಿಗಳ್ಳೋ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ನನ್ನ ಬಳಿ ಮಾಹಿತಿ ಇಲ್ಲ: ಶಿಕ್ಷಣಾಧಿಕಾರಿ
ನಂಜನಗೂಡಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಮಾತ್ರ ಇಂದಿಗೂ ಕಟ್ಟಡದ ಕುರಿತು ಮಾಹಿತಿಯೇ ಇಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣರನ್ನು ಸಂಪರ್ಕಿಸಿದಾಗ ಮಾಹಿತಿ ಕೊಡಿಸುತ್ತೇನೆ ಎಂದವರು ನಂತರ ಸಂಬಂಧಿಸಿದ ಗುಮಾಸ್ತರು ರಜೆಯಲ್ಲಿದ್ದಾರೆ ಎಂದರು. ನಮಗೆ ಕಟ್ಟಡ ಹಸ್ತಾಂತರವೇ ಆಗಿಲ್ಲ. ತಾನು ಇತ್ತೀಚೆಗೆ ಬಂದವನು. ನನ್ನಲ್ಲಿ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಕಟ್ಟಡದ ಕಾಮಗಾರಿ ಮಾತ್ರ ಇಂದಿಗೂ ಪೂರ್ಣವಾಗಿಲ್ಲ.

ಹಾಗಾಗಿ ನಾವು ವಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ನೆಲಹಾಸಿನ ಟೈಲ್ಸ್‌ ಕಳ್ಳತನವಾಗಿದೆ ಎಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವ್ಯವಸ್ಥಾಪಕ ಗೋಪಾಲಕೃಷ್ಣ, ಕಟ್ಟಡದ ನೆಲ ಹಾಸಿಗೆ ಅಳವಡಿಸಲಾಗಿದ್ದ ಟೈಲ್ಸ್‌ಗಳನ್ನು ಯಾರೋ ಕಿತ್ತುಕೊಂಡು ಹೋಗಿದ್ದಾರೆ ಎಂದರು. ಹಾಗಾದರೆ ಪೊಲೀಸರಿಗೆ ದೂರು ನೀಡಿಲ್ಲವೆ ಎಂದು ಪ್ರಶ್ನಿಸಿದಾಗ ಅಂದು ತಾನಿರಲಿಲ್ಲ ಎಂದು ಹೇಳಿದರು.

* ಶ್ರೀಧರ್‌ ಆರ್‌.ಭಟ್‌

ಟಾಪ್ ನ್ಯೂಸ್

Sagara; ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ

Sagara; ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ

2nd PUC Exam-2 Result Declared; 35.25% students passed

2nd PUC ಪರೀಕ್ಷೆ-2 ಫಲಿತಾಂಶ ಪ್ರಕಟ; ಶೇ. 35.25 ವಿದ್ಯಾರ್ಥಿಗಳು ಉತ್ತೀರ್ಣ

13

Poonam Pandey: ನನ್ನ ಬೆತ್ತಲೆ ವಿಡಿಯೋ ಲೀಕ್‌ ಮಾಡಿದ್ದೇ ನನ್ನ ಮಾಜಿ ಗೆಳೆಯ – ಪೂನಂ ಪಾಂಡೆ

12-hondisi-bareyiri

YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

11

ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸರ್ಕಾರದ ಪರ ಮೃದು ಧೋರಣೆ ಇಲ್ಲ: ಮೃತ್ಯುಂಜಯ ಸ್ವಾಮೀಜಿ

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್‌ ವುಡ್‌ ನಟಿ, ಕಾಂಗ್ರೆಸ್‌ ಮುಖಂಡೆ

10-hunsur

Hunsur: ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಚಾವಣಿ, ಬ್ಯಾರನ್‌ಗೂ ಹಾನಿ

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

2-hunsur

Hunsur: ಹೆದ್ದಾರಿ ಸರ್ವೆ ಕಾರ್ಯ ತಡೆದು ರೈತರ ಆಕ್ರೋಶ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

New Kannada serial: ಕಿರುತೆರೆಯತ್ತ ದಿವ್ಯಾ ಉರುಡುಗ

New Kannada serial: ಕಿರುತೆರೆಯತ್ತ ದಿವ್ಯಾ ಉರುಡುಗ

Sagara; ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ

Sagara; ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ

14

Bank Of Bhagyalakshmi: ಬ್ಯಾಂಕ್‌ನತ್ತ ದೀಕ್ಷಿತ್‌ ಚಿತ್ತ

2nd PUC Exam-2 Result Declared; 35.25% students passed

2nd PUC ಪರೀಕ್ಷೆ-2 ಫಲಿತಾಂಶ ಪ್ರಕಟ; ಶೇ. 35.25 ವಿದ್ಯಾರ್ಥಿಗಳು ಉತ್ತೀರ್ಣ

15-indi

Indi: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.